ಹರಿತಲೇಖನಿ ದಿನಕ್ಕೊಂದು ಕಥೆ: ಲವ ಕುಶರ ಜನನ

Daily story: Birth of Lava Kusha

Daily story: ಲವ ರಾಮಾಯಣದಲ್ಲಿ ರಾಮನ ಮಗ. ಕುಶನ ಜೊತೆ ಹುಟ್ಟಿದನು. ಇವನು ಸ್ಥಾಪಿಸಿದ ಲವಪುರಿ (ಈಗಿನ ಪಾಕಿಸ್ತಾನದ ಲಾಹೋರ್) ನಗರವು ಲವನ ಹೆಸರಿನಿಂದ ಕರೆಯಲ್ಪಡುತ್ತಿದೆ.

ರಾಮಾಯಣವು ಪವಿತ್ರ ಗ್ರಂಥಗಳಲ್ಲಿ ಒಂದಾಗಿದ್ದು ರಾಮನ ಜೀವನಚರಿತ್ರೆಯನ್ನು ತಿಳಿಸುವ ಒಂದು ದಿವ್ಯವಾದ ಮಹಾಕಾವ್ಯವಾಗಿದೆ.

ರಾಮನು ಅಯೋಧ್ಯೆಯ ರಾಜ ದಶರಥ ಹಾಗೂ ರಾಣಿ‌ ಕೌಸಲ್ಯೆಯ ಅತ್ಯಂತ ಕರ್ತವ್ಯ ನಿಷ್ಠೆಯ ಹಾಗೂ ವಿಧೇಯ ಹಿರಿಯ ಮಗನಾಗಿದ್ದು ತಮ್ಮಂದಿರಾದ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಒಳ್ಳೆಯ ಮಾದರಿಯಾಗಿದ್ದ ಮತ್ತು ರಾವಣನೊಂದಿಗೆ ನಿರ್ಭೀತಿಯಿಂದ ಹೋರಾಡಿ ಜಯಗಳಿಸಿದವನೇ ಈ ಪುರುಷೋತ್ತಮ ಶ್ರೀರಾಮ.

ಇದರ ಜೊತೆಗೆ ಒಬ್ಬ ಆದರ್ಶ ಪತಿಯಾಗಿ ಹಾಗೂ ತಂದೆಯಾಗಿ ಆತನ ಪಾತ್ರವೇನು ಎಂಬುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಸೀತಾ ಅಪಹರಣಕ್ಕೆ ಒಳಗಾದಾಗ ಕೆರಳಿದ ರಾಮನು ಯುದ್ಧಕ್ಕೆ ತಯಾರಾಗುತ್ತಾನೆ. ರಾವಣನನ್ನು ಜಯಿಸಿ ಸೀತೆಯನ್ನು ಕರೆತರುತ್ತಾನೆ ಆದರೆ ಸಮಾಜದ ಕೆಲವು ನಿಂದನೆಯ ಮಾತುಗಳಿಂದ, ಲೋಕಾಪವಾದದಿಂದ ತಲೆತಗ್ಗಿಸುವ ಸಂದರ್ಭವು ರಾಮನಿಗೆ ಎದುರಾಗುತ್ತದೆ.

ಇದರಿಂದ ಸ್ವಲ್ಪ ಕಾಲ ಹೆಂಡತಿಯನ್ನು ತ್ಯಜಿಸುವ ಪ್ರಸಂಗವೂ ಶ್ರೀರಾಮನಿಗೆ ಒದಗಿ ಬರುತ್ತದೆ. ಹೀಗಾಗಿ ಆತನಿಗೆ ತನ್ನ ಪುತ್ರರ ಜನನದ ಬಗೆಗೂ ಮಾಹಿತಿ ಇರಲಿಲ್ಲ.

ಇಕ್ಷ್ವಾಕು ವಂಶವನ್ನು ರಾಜ ಇಕ್ಷ್ವಾಕು ಕಟ್ಟಿದ್ದಾನೆಂದು ರಾಮ ಹೇಳುತ್ತಾನೆ. ಇಕ್ಷ್ವಾಕು ಎಂದರೆ ‘ಕಬ್ಬು’ ಎಂದರ್ಥ. ಈ ವಂಶವನ್ನು ಸೂರ್ಯವಂಶವೆಂದು ಕರೆಯುತ್ತಾರೆ. ಇಕ್ಷ್ವಾಕು ವಿವಸ್ವನನ ಮೊಮ್ಮಗ ಹಾಗೂ ಮನುವಿನ ಮಗ. ಇವರು ಕೋಸಲ ರಾಜ್ಯವನ್ನು ಆಳಿದವರು.

ಪ್ರಸ್ತುತ ಇದನ್ನು ‘ಅವಧಾ’ಎಂದು ಕರೆಯಲಾಗುತ್ತದೆ. ಇದು ಉತ್ತರಪ್ರದೇಶದ ಸರಯೂ ಮತ್ತು ಸಾಕೇತ ಎಂಬ ನದಿಗಳ ತಟದಲ್ಲಿದೆ. ಪ್ರಸ್ತುತ ಅಯೋಧ್ಯೆಯು ಇದರ ರಾಜಧಾನಿಯಾಗಿದೆ.

ಹಿಂದೂ ಧರ್ಮದ ಧರ್ಮಶಾಸ್ತ್ರ ಅಥವಾ ಮನುಸ್ಮೃತಿಯನ್ನು ರಚಿಸಿದವರು ಇಕ್ಷ್ವಾಕು ರಾಜನ ತಂದೆ ಮನು. ಸತ್ಯಯುಗ ಅಥವಾ ಪ್ರಥಮ ಯುಗದ ಆರಂಭದಲ್ಲಿ ಇದೆ ಇಕ್ಷ್ವಾಕು ರಾಜನಾಗಿ ಆಳಿದ್ದನು.

ಒಮ್ಮೆ ರಾಮನು ತನ್ನ ಪತ್ನಿಯಾದ ಸೀತೆಯ ಪಾತಿವ್ರತ್ಯದ ಬಗ್ಗೆ ಲೋಕದ ಅಪವಾದವನ್ನು ಎದುರಿಸುವ ಪ್ರಸಂಗ ಎದುರಾಗುತ್ತದೆ. ಇದರಿಂದ ನೋವುಂಡ ಸೀತೆ ತನ್ನ ಪಾತಿವ್ರತ್ಯವನ್ನು ಪರೀಕ್ಷಿಸಲು ಅಗ್ನಿಪ್ರವೇಶ ಮಾಡಲು ಮುಂದಾಗುತ್ತಾಳೆ.

ಇದನ್ನು ಕೇಳಿದ ರಾಮ ದುಃಖಿತನಾಗುತ್ತಾನೆ. ಆದರೆ ತಾನೊಬ್ಬ ಆದರ್ಶ ರಾಜನೆಂಬುವುದನ್ನು ಸಾಬೀತುಪಡಿಸಲು ಶ್ರೀರಾಮನು ತುಂಬು ಗರ್ಭಿಣಿಯಾದ ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ.

ಕಾಡಿನಲ್ಲಿ ತನಗೊದಗಿದ ದುಸ್ಥಿತಿಗೆ ಶೋಕಿಸುತ್ತಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಯು ತನ್ನ ಆಶ್ರಮಕ್ಕೆ ಕರೆದೊಯ್ದು ಸಂತೈಸುತ್ತಾನೆ. ನಂತರ ಸೀತೆಯು ವಾಲ್ಮೀಕಿಯ ಆಶ್ರಮದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ಅವಳಿ ಗಂಡು ಮಕ್ಕಳಿಗೆ ವಾಲ್ಮೀಕಿಯು ಹರ್ಷದಿಂದ ಲವ ಮತ್ತು ಕುಶ ಎಂದು ನಾಮಕರಣ ಮಾಡುತ್ತಾರೆ. ನಂತರ ಇಬ್ಬರೂ ಮಕ್ಕಳು ಆಶ್ರಮದಲ್ಲಿ ವಾಲ್ಮೀಕಿಯ ಆಶ್ರಯದಲ್ಲಿ ಬೆಳೆಯುತ್ತಾರೆ.

ಅವಳಿ ಮಕ್ಕಳ ಜನನವಾದ ನಂತರ ಮಹರ್ಷಿಯ ಶಿಷ್ಯರು ಮಕ್ಕಳನ್ನು ಪಿಶಾಚಿ ಮತ್ತು ರಾಕ್ಷಸರಿಂದ ರಕ್ಷಿಸಬೇಕಾಗಿದೆ ಎಂಬ ಮಾಹಿತಿಯನ್ನು ನೀಡುತ್ತಾರೆ. ಆದ್ದರಿಂದ ವಾಲ್ಮೀಕಿ ಮಹರ್ಷಿಯು ಒಂದು ಹುಲ್ಲನ್ನು (ಕುಶ) ಎರಡೂ (ಲವ)ಭಾಗಗಳಾಗಿ ಕತ್ತರಿಸಿ ಮಂತ್ರಗಳಿಂದ ಪವಿತ್ರಗೊಳಿಸುತ್ತಾರೆ.

ನಂತರ ಒಬ್ಬ ವೃದ್ದ ಹೆಂಗಸಿಗೆ ಹೇಳಿ ಹುಲ್ಲಿನ ಮೇಲಿನ ಭಾಗವನ್ನು ದೊಡ್ಡ ಮಗುವಿಗೂ, ಹುಲ್ಲಿನ ಕೆಳ ಭಾಗವನ್ನು ಸಣ್ಣ ಮಗುವಿನ ದೇಹಕ್ಕೂ ಉಜ್ಜುವಂತೆ ಹೇಳುತ್ತಾನೆ. ಈ ರೀತಿಯ ಪ್ರಕ್ರಿಯೆಯಿಂದಾಗಿ ಸೀತಾ ದೇವಿಯ ಈ ಅವಳಿ ಮಕ್ಕಳಿಗೆ ಲವ ಮತ್ತು ಕುಶ ಎಂಬ ಹೆಸರು ಬರುತ್ತದೆ.

ಲವ ಕುಶರು ಆಶ್ರಮದಲ್ಲಿ ಶ್ರೀರಾಮನ ಪ್ರತಿರೂಪದಂತೆ, ಆತನ ಸಚ್ಛಾರಿತ್ರ್ಯ, ಗುಣ, ನಡತೆಯಂತೆ ಬಾಳುತ್ತಾರೆ. ವಾಲ್ಮೀಕಿ ಮಹರ್ಷಿಯು ಕೂಡಾ ಅವರಿಬ್ಬರನ್ನು ತನ್ನ ಸ್ವಂತ ಮಕ್ಕಳಂತೆ ಜತನದಿಂದ ಬೆಳೆಸುತ್ತಾರೆ. ವಾಲ್ಮೀಕಿಯು ಈ ಮುದ್ದಾದ ಮಕ್ಕಳಿಗೆ ವೇದಗಳನ್ನೂ ಕಲಿಸುತ್ತಾನೆ.

ಲವ ಕುಶರಿಗೆ 12 ವರ್ಷವಾದಾಗ ಸ್ವತಃ ವಾಲ್ಮೀಕಿ ಮಹರ್ಷಿಯೇ ಉಪನಯನವನ್ನು ನೆರವೇರಿಸುತ್ತಾರೆ. ಈ ಮುಖಾಂತರ ಈ ಅವಳಿ ಮಕ್ಕಳಿಗೆ ವೇದಗಳ ಶಾಸ್ತ್ರವನ್ನು ಅಭ್ಯಸಿಸಲು ಮುಂದಾಗುತ್ತಾರೆ. ಇದರ ಜೊತೆಗೆ ಬಿಲ್ಲು ಬಾಣದ ವಿದ್ಯೆಯನ್ನು ಕಲಿಸಲಾಗುತ್ತದೆ.

ಹೀಗಾಗಿ ಲವಕುಶರು ಆಶ್ರಮದಲ್ಲಿ ವೇದ ಪಾರಂಗತರಾಗಿಯೂ, ಬಿಲ್ವಿದ್ಯೆಯಲ್ಲೂ ಮೇಲುಗೈ ಸಾಧಿಸುತ್ತಾರೆ. ನಂತರ ವಾಲ್ಮೀಕಿಯು ತನ್ನ ತಪಸ್ಸಿನ ಅತೀಂದ್ರಿಯ ಶಕ್ತಿಯೊಂದಿಗೆ ಬಾಲಕರಿಗೆ ಕತ್ತಿ ಹಾಗೂ ಗುರಾಣಿಗಳನ್ನು ಒದಗಿಸುತ್ತಾನೆ.

ಒಮ್ಮೆ ವಾಲ್ಮೀಕಿ ಮಹರ್ಷಿಗಳಿಗೆ ಸಮುದ್ರ ದೇವರಾದ ವರುಣನಿಂದ‌ ಕರೆ ಬರುತ್ತದೆ. ಆಗ ವಾಲ್ಮೀಕಿಯು ಲವ ಕುಶವನ್ನು ಕರೆದು ಆಶ್ರಮವನ್ನು ಜತನದಿಂದ ನೋಡಿಕೊಳ್ಳುವಂತೆ ಹೇಳಿ ಹೊರಟು ಹೋಗುತ್ತಾರೆ.

ರಾಮನ ಆಳ್ವಿಕೆಯಲ್ಲಿ ಅಯೋಧ್ಯೆಯು ಪ್ರವರ್ಧಮಾನಕ್ಕೆ ಬಂದಂತಹ ಸಂದರ್ಭ ರಾಮನಿಗೆ ಮುಂದಿನ ಉತ್ತರಾಧಿಕಾರಿ ಯಾರೆಂಬುವುದರ ಬಗ್ಗೆ ಬಹಳ ಚಿಂತೆಯಾಗುತ್ತದೆ ಮತ್ತು ಸೀತಾದೇವಿಯ ನೆನಪು ರಾಮನನ್ನು ಬಿಡದೆ ಕಾಡಲಾರಂಭಿಸಿ ಚಿಂತಾಕ್ರಾಂತನಾಗುತ್ತಾನೆ.

ಹೀಗಿರುವಾಗ ರಾಮ ಅಶ್ವಮೇಧಯಾಗವನ್ನು ಮಾಡುತ್ತಾನೆ. ಯಾಗವನ್ನು ನೆರವೇರಿಸಿದ ನಂತರ ಕುದುರೆಯನ್ನು ರಾಜ್ಯ ಸುತ್ತಲು ಬಿಡುತ್ತಾರೆ. ಆ ಕುದುರೆ ಸುತ್ತಿದ ಊರುಗಳಲ್ಲಾ ರಾಜರ ಅಧೀನಕ್ಕೆ ಬರುತ್ತದೆ. ಯಾರಾದರೂ ಒಂದು ವೇಳೆ ಆ ಕುದುರೆಯನ್ನು ಸೋಲಿಸಿದರೆ ಆ ರಾಜ್ಯ ಅವರಿಗೆ ಸೇರುತ್ತದೆ.

ಹೀಗಾಗಿ ರಾಮನು ಅಶ್ವಮೇಧ ಯಾಗವನ್ನು ಮಾಡಿ ಕುದುರೆಯನ್ನು ಬಿಡುತ್ತಾನೆ. ಆ ಅಶ್ವಮೇಧದ ಕುದುರೆಯು ಬೇರೆ ಬೇರೆ ರಾಜ್ಯಕ್ಕೆ ಕಾಲಿಡುತ್ತದೆ. ಆದರೆ ಎಲ್ಲಾ ರಾಜ್ಯದ ರಾಜರು ರಾಮನಿಗೆ ಗೌರವವನ್ನು ಕೊಟ್ಟು ರಾಮನ ವಂಶಕ್ಕೆ ಸೇರಿಕೊಳ್ಳುತ್ತಾರೆ ಮತ್ತು ಅಶ್ವಮೇಧದ ಕುದುರೆಯು ಅಯೋಧ್ಯೆಗೆ ಹಿಂದಿರುಗುತ್ತದೆ.

ಹಿಂತಿರುಗಿ ಬರುವ ವೇಳೆ ಈ ಕುದುರೆಯು ಮಹರ್ಷಿಯ ಆಶ್ರಮಕ್ಕೆ ಬರುತ್ತದೆ. ಸುತ್ತಲೂ ಸೊಂಪಾದ ಹಸಿರು ಹುಲ್ಲನ್ನು ಕಂಡು ಅದರ ಮೇಲೆ ನಡೆಯಲಾರಂಭಿಸಿತು.

ಆ ವೇಳೆ ಲವನು ಆ ಕುದುರೆಯನ್ನು ನೋಡಿ ಕುದುರೆಯ ಪಕ್ಕ ಬಂದು ಅದರ ಹಣೆಯ ಮೇಲಿರುವ ಚಿನ್ನದ ಫಲಕವನ್ನು ನೋಡುತ್ತಾನೆ. ಅದರ ಮೇಲೆ ಬರೆದಿರುವ ಶಾಸನವನ್ನು ಓದಿ ಕುಪಿತಗೊಳ್ಳುತ್ತಾ‌ನೆ.

ಕೌಸಲ್ಯನ ಮಗ ರಾಮ ಒಬ್ಬನೇ ನಾಯಕನೇ? ಹಾಗಾದರೆ ನಾನು ಸೀತೆಯ ಮಗನಾಗಿ ಏನು ಉಪಯೋಗ..! ಎಂದು ಯೋಚಿಸಿ ಕುದುರೆಯನ್ನು ಮರಕ್ಕೆ ಕಟ್ಟಿ ಹಾಕುತ್ತಾನೆ.

ತದನಂತರ ಕುದುರೆಯನ್ನು ಮರಕ್ಕೆ ಕಟ್ಟಿದುದನ್ನು ಕಂಡು ಅಲ್ಲಿಗೆ ಸೈನಿಕರು ಆಗಮಿಸಿ ಬರುತ್ತಾರೆ. ತಮ್ಮ ಅಶ್ವಮೇಧದ ಕುದುರೆಯನ್ನು ಮರಕ್ಕೆ ಕಟ್ಟಿಹಾಕಿದುದನ್ನು ಕಂಡು ಸಿಟ್ಟಿಗೇಳುತ್ತಾರೆ ಮತ್ತು ಕುದುರೆಯನ್ನು ಕಟ್ಟಿದ ಲವನೆಡೆಗೆ ನೋಡಿ ಕುದುರೆಯನ್ನು ಬಿಚ್ಚುವಂತೆ ಆದೇಶಿಸುತ್ತಾರೆ. ಆದರೆ ಲವ ಕುದುರೆಯನ್ನು ಬಿಚ್ಚಲು ನಿರಾಕರಿಸುತ್ತಾನೆ.

ಸೈನಿಕ ಬಂದು ಕುದುರೆಯನ್ನು ಬಿಚ್ಚಿದಾಗ ಸಿಟ್ಟಿಗೆದ್ದ ಲವ ಆತನೆಡೆಗೆ ಬಾಣ ಹೂಡುತ್ತಾನೆ. ಇದರಿಂದ ಕುಪಿತಗೊಂಡ ಸೈನಿಕರು ಪ್ರತಿದಾಳಿ ಮಾಡುತ್ತಾರೆ. ಕೊನೆಗೆ ಶತ್ರುಘ್ನನ ದಾಳಿಯಿಂದ ಲವನು ಗಾಯಗೊಳ್ಳುತ್ತಾನೆ. ಆದರೂ ಲವನು ಶತ್ರುಘ್ನನನ್ನು ಗಾಯಗೊಳಿಸಿ ರಥವನ್ನು ಅಯೋಧ್ಯೆಗೆ ಕಳುಹಿಸುತ್ತಾನೆ.

ಸುದ್ದಿ ತಿಳಿದ ಕುಶನು ರಥವನ್ನು ಹಿಂಬಾಲಿಸಿ ಮತ್ತೆ ಯುದ್ದಕ್ಕೆ ಇಳಿಯುತ್ತಾನೆ. ಈ ವಿಚಾರವು ಶ್ರೀರಾಮನಿಗೆ ತಲುಪುತ್ತದೆ. ಶತ್ರುಘ್ನನು ಇಬ್ಬರು ಬಾಲಕರಿಂದ ಗಾಯಗೊಂಡಿದ್ದಾನೆ ಎಂಬ ವಿಚಾರ ಕೇಳಿ ತತ್ತರಿಸಿ ಹೋಗುತ್ತಾನೆ. ನಂತರ ಸಹಾಯಕ್ಕಾಗಿ ಲಕ್ಷ್ಮಣನನ್ನು ಕಳುಹಿಸುತ್ತಾನೆ. ಲಕ್ಷ್ಮಣನೊಂದಿಗೆ ಕಾದಾಡಿದ ಕುಶನು ಲಕ್ಷ್ಮಣನನ್ನು ಸೋಲಿಸುತ್ತಾನೆ.

ಆ ವೇಳೆ ಜನರು ಸೀತಾದೇವಿಯನ್ನು ಅನ್ಯಾಯವಾಗಿ ಕಾಡಿಗೆ ಕಳುಹಿಸಿದ ಪರಿಣಾಮ ಇದು ಶಾಪವೇ ಆಗಿರಬಹುದು ಎಂದು ಮತ್ತೆ ತಮ್ಮೊಳಗೆ ತಾವು ಮಾತನಾಡಿಕೊಳ್ಳುತ್ತಾರೆ.

ಇದನ್ನು ಗಮನಿಸಿದ ಶ್ರೀರಾಮನು ಮತ್ತೆ ಭಯಗೊಳ್ಳುತ್ತಾನೆ.ತದನಂತರ ಭರತ, ಹನುಮಂತ, ಜಾಂಬಾವಂತರೂ ಲವಕುಶರೊಂದಿಗೆ ಕಾದಾಡಿ ಸೋಲುತ್ತಾರೆ. ವಾಲ್ಮೀಕಿಯ ಬಾಣ ವಿದ್ಯೆ ಹಾಗೂ ರಾಮನ ಆದರ್ಶಗಳನ್ನು ಮೈಗೂಡಿಸಿಕೊಂಡ ಲವಕುಶರು ಬಹಳ ಧೈರ್ಯಶಾಲಿಗಳಾಗಿ ಸೆಣಸಾಡುತ್ತಾರೆ.

ವಾಲ್ಮೀಕಿ ಮಹರ್ಷಿ ಆಶ್ರಮದಲ್ಲಿ ಯುದ್ದ ನಡೆಯುತ್ತಿರುವ ವಿಚಾರ ಕೇಳಿ ವಾಲ್ಮೀಕಿಯು ಓಡೋಡಿ ಬಂದು ಪ್ರಜ್ಞೆ ತಪ್ಪಿ ಬಿದ್ದವರನ್ನು ಉಪಚರಿಸುತ್ತಾರೆ.

ನಂತರ ವಾಲ್ಮೀಕಿಯು “ಅಯ್ಯಾ… ರಾಜನೇ ನೀನು ಹೃದಯವಂತ. ಕಷ್ಟದಲ್ಲಿರುವವರನ್ನು ರಕ್ಷಿಸುವವನು. ಆದರೆ ದಯವಿಟ್ಟು ಕೋಪಗೊಳ್ಳಬೇಡಿ ಈ ಎರಡೂ ಮಕ್ಕಳು ನಿನ್ನ ಸುಪುತ್ರರು. ಇವರು ನಿಮ್ಮ ಪತ್ನಿ ಸೀತಾದೇವಿಗೆ ಜನಿಸಿದವರು.

ನಾನು ಆಶ್ರಮದಲ್ಲಿ ಇಲ್ಲದ ವೇಳೆ ಈ ಅರಿಯದ ಕಂದಮ್ಮಗಳು ಒಂದು ದೊಡ್ಡ ತಪ್ಪಿಗೆ ಕೈ ಹಾಕಿದ್ದಾರೆ. ಅವರನ್ನು ದಯವಿಟ್ಟು ಕ್ಷಮಿಸಿ” ಎನ್ನುತ್ತಾನೆ.

ನಂತರ ವಾಲ್ಮೀಕಿಯು ಲವಕುಶರನ್ನು ಸಮಾಧಾನಿಸಿ ಆಶ್ರಮಕ್ಕೆ ಕಳುಹಿಸುತ್ತಾನೆ. ನಂತರ ಒಂದು ವೀಣೆಯನ್ನು ತರಿಸಿ ರಾಮಾಯಣವನ್ನು ಹಾಡಲು ಹೇಳುತ್ತಾನೆ.

ಇದರಿಂದ ಸಂತೋಷಗೊಂಡ ರಾಮನು ತನ್ನಿಬ್ಬರು ಮಕ್ಕಳನ್ನು ಅರಮನೆಗ ಕರೆದೊಯ್ಯಲು ನಿರ್ಧರಿಸುತ್ತಾನೆ ಮತ್ತು ಸೀತಾದೇವಿಯಲ್ಲಿ ಕ್ಷಮೆಯನ್ನು ಕೇಳಿ ತನ್ನೊಂದಿಗೆ ಬರುವಂತೆ ಸೂಚಿಸುತ್ತಾನೆ.

ಆಗ ಸೀತೆಯು ” ತನ್ನ ಮಕ್ಕಳು ಅವರ ತಂದೆಯೊಂದಿಗೆ ಕ್ಷೇಮವಾಗಿರುವುದನ್ನು ನೋಡಲು ಬಯಸುತ್ತೇನೆ ಎನ್ನುತ್ತಾಳೆ,ನಾನು ನನ್ನ ತಾಯ್ನಾಡಿಗೆ ಮರಳಲು ಬಯಸುತ್ತೇನೆ” ಎನ್ನುತ್ತಾಳೆ.

ನಂತರ ತಾನು ತನ್ನ ಮೇಲಿರುವ ಕಳಂಕದಿಂದ ದೂರವಾಗಲು ಸೀತೆಯು ಭೂದೇವಿಯಲ್ಲಿ ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು ಎನ್ನುತ್ತಾಳೆ. ಎಲ್ಲರೂ ನೋಡುತ್ತಿದ್ದಂತೆಯೇ ಸೀತೆಯು ತಾಯಿಯಾದ ಭೂದೇವಿಯನ್ನು ಅಪ್ಪಿಕೊಂಡು ಭೂಮಿಯೊಳಗೆ ಹೋಗುತ್ತಿದ್ದಂತೆ ಭೂಮಿ ಮುಚ್ಚಿಕೊಳ್ಳುತ್ತದೆ.

ಸೀತೆಯು ಭೂಗರ್ಭವನ್ನು ಸೇರಿದ ನಂತರ ರಾಮ ಅಯೋಧ್ಯೆಯನ್ನು 11000 ವರ್ಷಗಳವರೆಗೆ ಆಳುತ್ತಾನೆ (ಅಂದರೆ ಆತನ ಸಂಪೂರ್ಣ ಅಧಿಕಾರದ ಅವಧಿಯವರೆಗೆ) ಆತನ ನಿರ್ನಾಮದ ಸಮಯ ಹತ್ತಿರವಾಗುತ್ತಿದ್ದಂತೆ ಆತ ವಿಷ್ಣು ಸ್ವರೂಪವನ್ನು ತಾಳುತ್ತಾನೆ. ನಂತರ ಈ ಜಗತ್ತನ್ನು ತೊರೆದು ವೈಕುಂಠದಲ್ಲಿ ಭಗವತಿ ಲಕ್ಷ್ಮಿಯೊಂದಿಗೆ ಸರಯೂ ನದಿಯಲ್ಲಿ ಮುಳುಗುತ್ತಾನೆ.

ಲವ ಮತ್ತು ಕುಶರು ಉತ್ತರಕ್ಕೆ ಹೊರಟು ಅಲ್ಲಿ ಎರಡು ನಗರಗಳನ್ನುಕಂಡುಕೊಳ್ಳುತ್ತಾರೆ ಲಾಹೋರ್ (ಲವ ಈ ನಗರವನ್ನು ಕಂಡುಕೊಂಡಿದ್ದ ರಿಂದ ಈ ಹೆಸರು ಬಂತು) ಕಸೂರ್ ( ಕುಶ ಈ ನಗರವನ್ನು ಕಂಡುಕೊಂಡಿದ್ದರಿಂದ ಈ ಹೆಸರು ಬಂತು)ಲಾಹೋರ್ ಈಗಿನ ಪಾಕಿಸ್ತಾನದ ಒಂದು ಭಾಗ.

ಪಾಕಿಸ್ತಾನದ ಲಾಹೋರ್ ನ ಶಾಹಿ ಕಿಲಾದದ ಒಳಗೆ ಲವನಿಗೆ ಸಂಬಂಧಿಸಿದ ಒಂದು ದೇವಾಲಯವಿದೆ.

ಅವಳಿ ಮಕ್ಕಳಲ್ಲಿ ಒಬ್ಬನಾದ ಕುಶನು ನಾಗ ರಾಜಕುಮಾರಿ ಕುಮುದತ್ತಿಳ ಸಹೋದರಿಯನ್ನು ವಿವಾಹವಾಗುತ್ತಾನೆ. ಜೊತೆಗೆ ದಕ್ಷಿಣದ ಮೇಲೆ ತನ್ನ ಹಿಡಿತವನ್ನು ಆತ ಸಾಧಿಸುತ್ತಾನೆ.

ಅದು ಈಗಿನ ಛತ್ತಿಸ್ಗಡ್ ಆಗಿದೆ. ಸೂರ್ಯವಂಶದ ರಜಪೂತ ವಂಶಸ್ತರು ಅಪಘಾನಿಸ್ತಾನ, ರಾಜಸ್ಥಾನ ಮತ್ತು ಪಾಕಿಸ್ತಾನದಲ್ಲಿ ಚದುರಿ ಹೋಗಿದ್ದಾರೆ. ಅವರು ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಚದುರಿಹೋದ ರಾಜಪುತ ಸೂರ್ಯವಂಶಸ್ಥರಾಗಿದ್ದರು.

ಅಂತಿಮವಾಗಿ ಅವರು ರೋಹ್ತಾಸ್‌ನಲ್ಲಿ ನೆಲೆಸಿದರು. ಪಾಟಲಿಪುತ್ರದ ನಂದ ವಂಶದ ಕೊನೆಯ ರಾಜ ಪದವನಂದ ಹಾಗೂ ಆತನ ನೇರ ವಂಶಸ್ಥನಾದ ಪರೀಕ್ಷಿತ (ಅರ್ಜುನನ ಮೊಮ್ಮಗ), ಕುಶ ಇವರೆಲ್ಲರೂ ಸೂರ್ಯ ವಂಶದವರು.

ಶ್ರೀರಾಮನಂತೆ ಆತನ ಮಕ್ಕಳಾದ ಲವ ಮತ್ತು ಕುಶರೆಂಬ ಇಬ್ಬರು ದಿಗ್ಗಜರಿಂದ ಆಳಲ್ಪಟ್ಟ ಸೂರ್ಯವಂಶ ಮಹೋನ್ನತಿಯನ್ನು ಸಾಧಿಸಿದರೂ ಅನಂತರ ಸೂರ್ಯವಂಶದಲ್ಲಿ ಅಂತಹ ಮಹಾತ್ಮರು ಆಳ್ವಿಕೆ ನಡೆಸಿದ ಬಗೆಗೆ ಮಾಹಿತಿಗಳಿಲ್ಲ.

ಅಲ್ಲದೆ ಕೆಲವು ಪುರಾಣಗಳು, ಮಹಾಭಾರತದ ಅಭಿಮನ್ಯುವಿನಿಂದ ಕೊಲ್ಲಲ್ಪಟ್ಟ ಕುಶನಿಂದ ಹಿಡಿದು ಬೃಹಂದ್ಬಲನವರೆಗೆ ವಂಶಾವಳಿಯ ಪಟ್ಟಿಯನ್ನು ನೀಡುತ್ತದೆ. ಈ ಪಟ್ಟಿಯನ್ನು ರಘುವಂಶದಿಂದ ಅಗ್ನಿವರ್ಣದವರೆಗೆ ದೃಢೀಕರಿಸಲಾಗಿದೆ.

ಹಾಗೆಯೇ ಪುರಾಣಗಳು ಬೃಹಂದಳನಿಂದ ಹಿಡಿದು ಕೊನೆಯ ರಾಜನಾದ ಸುಮಿತ್ರನವರೆಗೆ ರಾಜರುಗಳ ಪಟ್ಟಿಯನ್ನು ಕೂಡ ನೀಡುತ್ತದೆ. ಆದರೆ ಈ ಪಟ್ಟಿಯಲ್ಲಿ ಶಕ್ಯ, ಸಿದ್ಧಾರ್ಥ ಮತ್ತು ರಾಹುಲರನ್ನು ಸಂಜಯ, ಪ್ರಸೇನಜಿತನ ನಡುವೆ ವೈಯಕ್ತಿಕವಾಗಿ ಗುರುತಿಸಲ್ಪಡುತ್ತದೆ.

ಅಯೋಧ್ಯೆಯ ಇನ್ನೋರ್ವ ರಾಜ ಅಹಿನಾ ನಾಗನು ಒಬ್ಬ ಒಳ್ಳೆಯ ರಾಜನಾಗಿದ್ದು ಭವ್ಯಆಳ್ವಿಕೆಯನ್ನು ನಡೆಸುತ್ತಿದ್ದನು ಎಂಬ ಉಲ್ಲೇಖವು ಪಾಲಿ ಮೂಲಗಳಿಂದ ತಿಳಿಯುತ್ತದೆ.ಮತ್ತು ಅಹಿನಾ ನಾಗ ಎಂಬ ರಾಜನ‌ ಆಡಳಿತದ ಬಗ್ಗೆ ಬುದ್ದನ ಸಾಹಿತ್ಯದಲ್ಲೂ ಕೂಡಾ ಕಂಡುಬಂದಿದೆ‌ ಎಂದು ಮೂಲಗಳು ತಿಳಿಸಿವೆ.

ಬುದ್ಧನ ತಂದೆ ಶುದ್ಧೋದನ. ಬುದ್ಧ ಸಿಂಹಾಸನವನ್ನು ತ್ಯಜಿಸಿ ನಂತರ ಅವನ ಮಗ ರಾಹುಲನಿಂದ ಅವನ‌ ವಂಶಾವಳಿ ಮುಂದುವರಿಯಿತು ಎಂದು ಭವಿಷ್ಯ ಪುರಾಣವು ಹೇಳುತ್ತದೆ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಹೆಸರು ಲಭ್ಯವಿಲ್ಲ)

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="120965"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]