ಹರಿತಲೇಖನಿ ದಿನಕ್ಕೊಂದು ಕಥೆ: ಹಣ ಮತ್ತು ಗುಣ| Daily story

Daily story: ಇಬ್ಬರು ಗೆಳೆಯರಿದ್ದರು. ಅವರ ಕೆಲಸ ಒಳ್ಳೆಯ ಸುಂದರವಾದ `ಮಡಕೆಗಳನ್ನು ಮಾಡುವುದು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಳ್ಳೆಯ ಕುಂಬಾರರು ಎಂದು ಹೆಸರು ಮಾಡಿದ್ದರು. ಮಡಕೆಗಳನ್ನು ಮಾರಿ ತಮ್ಮ ಜೀವನ ಸಾಗಿಸುತ್ತಿದ್ದರು.

ಒಂದು ಸಂತೆಯಲ್ಲಿ ಮಡಕೆ ಮಾರುತ್ತಿರುವಾಗ ಆ ಹಳ್ಳಿಯ ಜಮೀನುದಾರ ‘ನನ್ನ ಮನಸ್ಸಿಗೆ ಸುಂದರವಾಗಿ ಕಾಣುವಂತೆ ಯಾರು ಒಳ್ಳೆಯ ಮಡಕೆಗಳನ್ನು ಮಾಡಿಕೊಂಡು ಬರುತ್ತಾರೋ ಅವರಿಗೆ ನಿಮ್ಮ ತೂಕದಷ್ಟು ಹಣವನ್ನು ಕೊಡುತ್ತೇನೆ’ ಎಂದು ಹೇಳಿ ಹೋದನು.

ಗೆಳೆಯರಿಬ್ಬರು ಬಡವರು. ಆದರೆ, ಒಬ್ಬ ಹಿರಿಯ ಮಡಕೆ ಮಾಡುವಲ್ಲಿ ಕಿರಿಯನಿಗಿಂತ ಸ್ವಲ್ಪ ನುರಿತವನಾಗಿದ್ದ. ಒಳ್ಳೆಯ ಸುಂದರವಾದ ಮಡಕೆಗಳನ್ನು ಮಾಡುತ್ತಿದ್ದ, ಆದರೆ ಕಿರಿಯವನು ಸುಂದರವಾಗಿ ಮಾಡುತ್ತಿದ್ದರೂ ಅವನು ಮಾಡಿದ ಮಡಕೆಯ ಮೇಲೆ ಸುಂದರವಾದ ವಿನ್ಯಾಸ ಇರಲಿಲ್ಲ. ಇದರಿಂದ ತನಗೆ ಆ ಬಹುಮಾನದ ಹಣ ತಪ್ಪುತ್ತದೆ. ತನ್ನ ಗೆಳೆಯನಿಗೆ ಸಿಗುತ್ತದೆ ಎಂದು ದುರಾಸೆಯನ್ನು ವ್ಯಕ್ತಪಡಿಸಿದ.

‘ಹೇಗಾದರೂ ಮಾಡಿ ಗೆಳೆಯನ ಮಡಕೆಯಲ್ಲಿ ಒಂದು ರಂಧ್ರವನ್ನು ಕೊರೆದು ಬಿಟ್ಟರೆ ಆ ಜಮೀನುದಾರ ನನಗೆ ಹಣವನ್ನು ಕೊಡುತ್ತಾನೆ’ ಎಂದು ಕಿರಿಯವ ಯೋಚಿಸಿದ. ಅಂದು ಮಧ್ಯರಾತ್ರಿ ರಂಧ್ರ ಕೊರೆಯಲು ಎದ್ದ. ಗೆಳೆಯ ತಯಾರು ಮಾಡಿದ ಸುಂದರವಾದ ಮಡಕೆಯನ್ನು ನೋಡಿದಾಗ ಮನಸ್ಸು ಬರಲಿಲ್ಲ. ಆದರೆ ಹಣದ ಆಸೆಯಿಂದ ಮಡಕೆಯನ್ನು ಎತ್ತಿ ಕೊಂಡಾಗ ಆಶ್ಚರ್ಯವಾಯಿತು ಕಿರಿಯ ಕುಂಬಾರನಿಗೆ, ಅಲ್ಲಿದ್ದ ಪ್ರತಿಯೊಂದು ಮಡಕೆಯಲ್ಲೂ ಮೊದಲೇ ರಂಧ್ರವಿತ್ತು.

ಅಷ್ಟರಲ್ಲಿ ಗೆಳೆಯನಾದ ಹಿರಿಯ ಕುಂಬಾರ ಎದುರಿಗೆ ಬಂದ. ‘ನಾಳೆ ನಿನ್ನ ಮಡಕೆಗಳನ್ನು ತೆಗೆದುಕೊಂಡು ಹೋಗು. ನನ್ನ ಮಡಕೆಯಲ್ಲಿ ಲೋಪವಿದೆ ಎಂದು ನಾನೇ ಹೇಳುತ್ತೇನೆ. ಆಗ ಬಹುಮಾನದ ಹಣವೆಲ್ಲ ನಿನಗೆ ಸಿಗುತ್ತದೆ. ಎಲ್ಲ ಹಣ ನೀನೆ ತೆಗೆದುಕೋ ನನಗೆ ಹಣ ಬೇಡ. ದುಡಿಯಲು ಶಕ್ತಿ ಇದೆ. ಸುಂದರವಾದ ಮಡಕೆಗಳನ್ನು ಮಾಡಲು, ಯೋಚಿಸಲು ಯುಕ್ತಿ ಇದೆ. ಅಷ್ಟು ಸಾಕು ನನಗೆ. ಈಗ ಮಲಗು. ಮುಂಜಾನೆ ಬೇಗ ಜಮೀನುದಾರನ ಮನೆಗೆ ಹೋಗಬೇಕು’ ಎಂದ.

ಕಿರಿಯ ಕುಂಬಾರನಿಗೆ ತನ್ನ ತಪ್ಪಿನ ಅರಿವಾಯಿತು. ‘ಕ್ಷಮಿಸು ಗೆಳೆಯ, ಹಣದ ವ್ಯಾಮೋಹದಿಂದ ನಾನು ದುರ್ಬುದ್ದಿಯವನಾದೆ. ಹಣಕ್ಕಿಂತ ಮೀಗಿಲಾದದ್ದು ಗುಣ. ಆ ಗುಣ ನಿನ್ನಲ್ಲಿ ಇದೆ. ಶಕ್ತಿಯ ಜೊತೆ ಯುಕ್ತಿಯೊಂದಿದ್ದರೆ ನಾನು ಶ್ರೀಮಂತನಾಗಬಹುದು. ಏನು ಬೇಕಾದರೂ ಸಾಧಿಸಬಹುದು ಎಂದು ನೀನು ನನಗೆ ಹೇಳಿಕೊಟ್ಟೆ’ ಎಂದು ತನ್ನ ಗೆಳೆಯನ ಕ್ಷಮೆ ಕೇಳಿದನು.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ವಿಶ್ವ ಕರ್ಮ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಸಂಸದ ಡಾ.ಕೆ ಸುಧಾಕರ್

ವಿಶ್ವ ಕರ್ಮ ಯೋಜನೆಯ ಸದುಪಯೋಗ ಪಡೆದುಕೊಳ್ಳಿ: ಸಂಸದ ಡಾ.ಕೆ ಸುಧಾಕರ್

ಬೆಂ.ಗ್ರಾ ಜಿಲ್ಲೆಯ ಸಾಂಪ್ರದಾಯಿಕ ಅರ್ಹ ಕುಶಲಕರ್ಮಿಗಳು, ಎಲ್ಲ ಅರ್ಹ ಕುಶಲಕರ್ಮಿಗಳು, ಆಸಕ್ತ ಯುವಕ ಯುವತಿಯರು ಪ್ರಧಾನಿ ಮಂತ್ರಿ ವಿಶ್ವ ಕರ್ಮ ಯೋಜನೆಯ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಸದರಾದ ಡಾ.ಕೆ ಸುಧಾಕರ್

[ccc_my_favorite_select_button post_id="115398"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ (Accident) ಉಂಟಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ

[ccc_my_favorite_select_button post_id="115379"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!