
ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಒನ್ ನೇಷನ್, ಒನ್ ಎಲೆಕ್ಷನ್ ವಿಚಾರಕ್ಕೆ ಕಾಂಗ್ರೆಸ್ ಶಾಸಕರು ವಿಧಾನಸಭೆ ಕಲಾಪದ ವೇಳೆ ಗಲಾಟೆ, ಗದ್ದಲ ಉಂಟು ಮಾಡಿದರು.ಈ ವೇಳೆ ಅಶಿಸ್ತಿನಿಂದ ನಡೆದುಕೊಂಡ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಅವರನ್ನು ಮಾ.12ರ ವರೆಗೆ ಅಮಾನತು ಮಾಡಿ ನಿರ್ಣಯ ಕೈಗೊಳ್ಳಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒನ್ ನೇಷನ್, ಒನ್ ಎಲೆಕ್ಷನ್ ವಿಚಾರದ ಕುರಿತು ಪ್ರಸ್ತಾಪಿಸಿದರು. ಇದಕ್ಕೆ ಕಾಂಗ್ರೆಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟಿಸುತ್ತಿದ್ದಾಗ ಶಾಸಕ ಸಂಗಮೇಶ್, ಶರ್ಟ್ ಬಿಚ್ಚಿ ಪ್ರತಿಭಟನೆಗೆ ಮುಂದಾದರು. ಈ ವೇಳೆ ಸ್ಪೀಕರ್ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಾಲಪವನ್ನು 15 ನಿಮಿಷಗಳ ಕಾಲ ಮುಂದೂಡಿದರು.
ಕಲಾಪ ಪುನಃ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಒನ್ ನೇಷನ್, ಒನ್ ಎಲೆಕ್ಷನ್ ವಿಚಾರದ ಚರ್ಚೆ ಬೇಡವೆಂದು ಘೋಷಣೆಯ ನಡುವೆಯೇ, ಸಭಾಪತಿ ಸದನದಲ್ಲಿ ಅಗೌರವ, ಅಶಿಸ್ತಿನಿಂದ ನಡೆದರೆ ನಾನು ಸಹಿಸಲ್ಲ ಎಂದು ಸಂಗಮೇಶ್ ಹೆಸರಿಸಿ,ಉಳಿದ ಸದಸ್ಯರಿಗೆ ಎಚ್ಚರಿಕೆಯನ್ನು ನೀಡಿದರು. ನಂತರ ಅಶಿಸ್ತಿನ ಕುರಿತು ಸಂಗಮೇಶ್ ಕಲಾಪಕ್ಕೆ ಬರದಂತೆ ತಡೆಯುವ ಪ್ರಸ್ತಾವವನ್ನ ಸಚಿವ ಬೊಮ್ಮಾಯಿ ಮಂಡಿಸಿದರು.
ನಂತರ ತಕ್ಷಣದಿಂದ ಜಾರಿಗೆ ಬತುವಂತೆ ಮಾರ್ಚ್ 12ರವರೆಗೆ ಸಂಗಮೇಶ್ ಸದನದಿಂದ ಹೊರಕ್ಕೆ ಹಾಕುವ ನಿರ್ಣಯವನ್ನ ಕೈಗೊಳ್ಳಲಾಯಿತು.
ಆ ಮೂಲಕ 9 ದಿನಗಳ ಕಾಲ ಸಂಗಮೇಶ್ರನ್ನ ಸದನದಿಂದ ಅಮಾನತು ಮಾಡುವ ನಿರ್ಧಾರವನ್ನ ಸ್ಪೀಕರ್ ಕಾಗೇರಿ ಕೈಗೊಂಡು, ಸದನವನ್ನು ಮಧ್ಯಾಹ್ನ 3ಗಂಟೆಯ ವರೆಗೆ ಮತ್ತೆ ಮುಂದೂಡಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

