ದೊಡ್ಡಬಳ್ಳಾಪುರ: ಪರಿಚಯದವರ, ಸಂಬಂಧಿಕರ ಮಾತನ್ನು ನಂಬಿ, ವಾಹನಗಳನ್ನು ನೀಡುವುದು ಎಷ್ಟು ಸಮಸ್ಯೆ ತಂದೊಡ್ಡುತ್ತದೆ ಎಂಬುದಕ್ಕೆ, ಇಂದು ಮಧ್ಯಾಹ್ನ ದೊಡ್ಡಬಳ್ಳಾಪುರದ ಹೊರವಲಯದಲ್ಲಿರುವ ಜಿಂಕೆಬಚ್ಚಹಳ್ಳಿ ನಿರ್ಜನ ಪ್ರದೇಶದಲ್ಲಿ (Desolate area) ನಡೆದಿರುವ ಘಟನೆ ಸಾಕ್ಷಿಯಾಗಿ ನಿಂತಿದೆ.
ಹೌದು ಪೊಲೀಸ್ ಮೂಲಗಳ ಅನ್ವಯ ಮಾರಸಂದ್ರ ಸುರೇಶ್ ಎನ್ನುವವರ ಕಾರನ್ನು, ಸಂಬಂಧಿ, ಪಕ್ಕದ ಮನೆಯ ರಾಮಾಂಜಿನಿ ಎನ್ನುವವರು ಆರೋಗ್ಯ ಸರಿ ಇಲ್ಲ, ಆಸ್ಪತ್ರೆಗೆ ತೆರಳಬೇಕೆಂದು ಪಡೆದು ತಂದಿದ್ದಾರೆ.
ಆದರೆ ಇಂದು ಮಧ್ಯಾಹ್ನ 2.30ರ ವೇಳೆಗೆ ಕಾರು ಮಾಲೀಕ ಸುರೇಶ್ ಅವರಿಗೆ ತಮ್ಮ ಕಾರು ಅಪಘಾತಕ್ಕೀಡಾಗಿರುವ ಕುರಿತು ಜಿಪಿಎಸ್ ಸಂದೇಶ ಬಂದಿದ್ದು, ಸ್ಥಳಕ್ಕೆ ದೌಡಾಯಿಸಿದಾಗ ಕಾರು ಬೆಂಕಿಗೆ ಆಹುತಿಯಾಗಿರುವುದು ಕಂಡುಬಂದಿದೆ.
ಆಘಾತಕಾರಿಯಾಗಿ ಕಾರಿನಲ್ಲಿ ಅಪರಿಚಿತ ಗೃಹಿಣಿ ಕೂಡ ಸುಟ್ಟು ಭಸ್ಮವಾಗಿರುವುದು ಕಂಡುಬಂದಿದ್ದು, ಮಾಂಗಲ್ಯ ಮತ್ತು ಕಾಲ್ ಚೈನ್ ಬಿಟ್ಟರೆ ಗುರುತು ಸಿಗದಷ್ಟು ಮಹಿಳೆ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ.
ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಹೊತ್ತಿ ಉರಿದ ಕಾರು.. ಗೃಹಿಣಿ ಭಸ್ಮ..! pic.twitter.com/F49YiXQ3WF
— Harithalekhani (@harithalekhani) May 2, 2026
ಸುರೇಶ್ ಅವರಿಂದ ಕಾರು ತಂದಿದ್ದ ರಾಮಾಂಜಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇಷ್ಟಕ್ಕೂ ರಾಮಾಂಜಿ ಜೊತೆ ಕಾರಿನಲ್ಲಿ ಬಂದಿದ್ದ ಮಹಿಳೆ ಯಾರು..? ಅನಾರೋಗ್ಯ ಎಂದು ಕಾರು ಪಡೆದು, ಮಹಿಳೆಯೊಂದಿಗೆ ನಿರ್ಜನ ಪ್ರದೇಶಕ್ಕೆ ತೆರಳಲು ಕಾರಣವೇನು..? ಎಂಬ ಪ್ರಶ್ನೆಗಳು ಪೊಲೀಸರಿಗೆ ಎದುರಾಗಿದ್ದು, ಪರಾರಿಯಾಗಿದ್ದಾರೆ ಎನ್ನಲಾಗುತ್ತಿರುವ ರಾಮಾಂಜಿನಿ ಪತ್ತೆ ನಂತರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ. ಆದರೆ ಆರೋಗ್ಯ ಸರಿ ಇಲ್ಲ ಎಂದ ಕಾರಣ ಕಾರು ನೀಡಿದ ತಪ್ಪಿಗೆ, ಸುರೇಶ್ ಅವರು ಸಮಸ್ಯೆಗೆ ಸಿಲುಕಿರುವುದು ಮಾತ್ರ ವಿಪರ್ಯಾಸ.
ಇನ್ನೂ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗ, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ: ಇಂದಿನಿಂದ ವಿವಿಧೆಡೆ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ಬೆಸ್ಕಾಂ ವತಿಯಿಂದ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಮೇ.2 ರಿಂದ ಮೇ.8ರವರೆಗೆ ದೊಡ್ಡಬಳ್ಳಾಪುರ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ (Power outages) ಉಂಟಾಗಲಿದೆ.
ವಿವಿಧ 11 ಕೆವಿ ಫೀಡರ್ಗಳಲ್ಲಿ ತುರ್ತು ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗು-ತ್ತಿದೆ. ಇದರಿಂದ ಪ್ರತಿದಿನ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿನಯ್ಕುಮಾರ್ ತಿಳಿಸಿದ್ದಾರೆ.
ವ್ಯತ್ಯಯ ಆಗುವ ಪ್ರದೇಶಗಳು: ಮೇ.2 ರಂದು ವರದನಹಳ್ಳಿ, ಟಾಫೆ, ಎಳ್ಳುಪುರ ಪ್ರದೇಶ. ಮೇ.3 ರಂದು ರೈಲ್ವೆ ಸ್ಟೇಷನ್, ಜೀನ್ಸ್ ನಿಟ್, ನಗರ ಪ್ರದೇಶ. ಮೇ.4 ರಂದು ಟೆಲಿಫೋನ್ ಎಕ್ಸ್ಜೇಂಜ್, ಬಿರ್ಲಾ ಸೂಪರ್, ಕರೇನಹಳ್ಳಿ, ಮೇ 5 ನಂದಿ ಮೊರಿ, ಬೀಡಿಕರೆ. ಮೇ.6 ರಂದು ವಾಸವಿ, ಅಪಾರೆಲ್ ಪಾರ್ಕ್, ಏಕಾಶಿಪುರ. ಮೇ.7 ರೈಲ್ವೆ ಸ್ಟೇಷನ್ ಸುತ್ತಮುತ್ತ. ಮೇ.8 ಜಾಲಿಗೆ, ಏಕಾಶಿಪುರ ಸುತ್ತಮುತ್ತ ಪ್ರದೇಶಗಳು.

