ದೊಡ್ಡಬಳ್ಳಾಪುರ: ನಗರದ ಚಿಕ್ಕಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವತಿಯಿಂದ ಶ್ರೀ ಧರ್ಮರಾಯಸ್ವಾಮಿ ಆದಿಶಕ್ತ್ಯಾತ್ಮಕ ದ್ರೌಪದಾದೇವಿ ಕರಗ ಮಹೋತ್ಸವವು (Draupadadevi Karaga Mahotsava) ವಿಜೃಂಭಣೆಯಿಂದ ನೆರವೇರಿತು.
ವಿದ್ಯುತ್ ದೀಪಾಲಂಕಾರ ಮಾಡಿದ್ದ, ದೇವಾಲಯದಲ್ಲಿ ವಿಶೇಷ ಅಲಂಕಾರ ಹೋಮ, ಪೂಜಾ ಕಾರ್ಯ್ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಹೊಸಕೋಟೆಯ ಉಪ್ಪಾರಹಳ್ಳಿಯ ಪೂಜಾರಿ ವೈ.ಭೀಮರಾಜ್ ಕರಗ ಹೊತ್ತಿದ್ದರು. ರಾತ್ರಿ 1 ಗಂಟೆ ನಂತರ ನಗರದ ಚಿಕ್ಕಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಿಂದ ಕರಗ ಹೊರಟು ಹಳೇ ಕರಗದ ಗುಡಿ, ಏಳು ಸುತ್ತಿನ ಕೋಟೆ, ನೆಲದಾಂಜನೇಸ್ವಾಮಿ ದೇವಾಲಯ, ಮುತ್ಯಾಲಮ್ಮ ದೇವಾಲಯ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ, ನಗರ ಸಂಚಾರ ನಡೆಸಿತು. ಸಂಜೆ ಮಳೆಯ ಚಿಂಚನವಾರೂ ಕರಗದ ಸಂಚಾರದ ವೇಳೆ ಮಳೆ ಬಿಡುವು ನೀಡಿತ್ತು.
ಕರಗ ಮಹೋತ್ಸವವನ್ನು ಸಹಸ್ರಾರು ಮಂದಿ ವೀಕ್ಷಿಸಿ ಧನ್ಯತೆ ಮೆರೆದರು. ಕರಗಕ್ಕೆ ಭಕ್ತಾದಿಗಳು ಮಲ್ಲಿಗೆ ಹೂ ಹಾಕಿ ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸಿ ನಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ದೊಡ್ಡಬಳ್ಳಾಪುರ ನಗರದ ವಿವಿದೆಡೆಗಳಲ್ಲಿ ತಮಿಳುನಾಡಿನ ಕಲಾವಿದರು ತಯಾರಿಸಿರುವ ವಿವಿಧ ದೇವತೆಗಳ ಆಕರ್ಷಕ ಬೃಹತ್ ವಿದ್ಯುತ್ ದೀಪಾಲಂಕೃತ ಕಟೌಟ್ಗಳು ಕಣ್ಮನ ಸೆಳೆದವು.
ನಗರದ ಹವಾರು ಕಡೆ, ಕರಗವನ್ನು ಸ್ವಾಗತಿಸಲು, ಹೂಗಳ ಅಲಂಕಾರ, ದೀಪಾಲಂಕಾರಗಳ ಮಂಟಪಗಳನ್ನು ಕಟ್ಟಿ , ಕರಗಕ್ಕೆ ಪೂಜೆ ಸಲ್ಲಿಸಿದರು.
ಕರಗ ಮಹೋತ್ಸವದ ಅಂಗವಾಗಿ ನೆಲದಾಂಜನೇಯಸ್ವಾಮಿ, ಧರ್ಮರಾಯಸ್ವಾಮಿ, ಕಾಳಿಕಾಂಬ, ಸ್ವಯಂಭೇಶ್ವರ, ಸಪ್ತಮಾತೃಕ ಮಾರಿಯಮ್ಮ, ಅಭಯ ಚೌಡೇಶ್ವರಿ ಮೊದಲಾದ ದೇವರುಗಳ ಉತ್ಸವಗಳು ನಡೆದವು. ಕರೇನಹಳ್ಳಿಯ ಅಭಯ ಚೌಡೇಶ್ವರಿ ದೇವಾಲಯದಲ್ಲಿ ದೇವಿಗೆ ಕರಗದ ಅಲಂಕಾರ ಮಾಡಲಾಗಿತ್ತು.
ದೇವಾಲಯದಿಂದ ಹೊರಟ ಜ್ಯೋತಿ ಪಲ್ಲಕ್ಕಿ ಉತ್ಸವ ರೋಮಾಂಚನಗೊಳಿಸಿತು.
ದೇವಾಲಯದಲ್ಲಿ ಮೇ 3ರಂದು ವಸಂತೋತ್ಸವ ನಡೆಯಲಿದ್ದು, ಮೇ 5ರವರೆಗೆ ವಿವಿಧ ಪೂಜಾ ಕಾರ್ಯಸಗಳು. ಆರತಿ ಉತ್ಸವಗಳು ನಡೆಯಲಿವೆ.
ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಹೊತ್ತಿ ಉರಿದ ಕಾರು.. ಗೃಹಿಣಿ ಭಸ್ಮ.!

ದೊಡ್ಡಬಳ್ಳಾಪುರ: ಪರಿಚಯದವರಿಗೆ, ಸಂಬಂಧಿಕರಿಗೆ ವಾಹನಗಳನ್ನು ನೀಡುವುದು ಎಷ್ಟು ಅಪಾಯವನ್ನುಂಟು ಮಾಡುತ್ತದೆ ಎಂಬುದಕ್ಕೆ ಇಂದು ದೊಡ್ಡಬಳ್ಳಾಪುರದ ಹೊರವಲಯದಲ್ಲಿರುವ ಜಿಂಕೆಬಚ್ಚಹಳ್ಳಿ ನಿರ್ಜನ ಪ್ರದೇಶದಲ್ಲಿ (Desolate area) ನಡೆದಿರುವ ಘಟನೆ ಸಾಕ್ಷಿಯಾಗಿ ನಿಂತಿದೆ.
ಹೌದು ಪೊಲೀಸ್ ಮೂಲಗಳ ಅನ್ವಯ ಮಾರಸಂದ್ರ ಸುರೇಶ್ ಎನ್ನುವವರ ಕಾರನ್ನು, ಸಂಬಂಧಿ, ಪಕ್ಕದ ಮನೆಯ ರಾಮಾಂಜಿನಿ ಎನ್ನುವವರು ಆರೋಗ್ಯ ಸರಿ ಇಲ್ಲ ಆಸ್ಪತ್ರೆಗೆ ತೆರಳಬೇಕೆಂದು ಪಡೆದು ತಂದಿದ್ದಾರೆ.
ಆದರೆ ಇಂದು ಮಧ್ಯಾಹ್ನ 2.30ರ ವೇಳೆಗೆ ಕಾರು ಮಾಲೀಕ ಸುರೇಶ್ ಅವರಿಗೆ ತಮ್ಮ ಕಾರು ಅಪಘಾತಕ್ಕೀಡಾಗಿರುವ ಕುರಿತು ಜಿಪಿಎಸ್ ಸಂದೇಶ ಬಂದಿದ್ದು, ಸ್ಥಳಕ್ಕೆ ದೌಡಾಯಿಸಿದಾಗ ಕಾರು ಬೆಂಕಿಗೆ ಆಹುತಿಯಾಗಿರುವುದು ಕಂಡುಬಂದಿದೆ.
ಈ ವೇಳೆ ಕಾರಿನಲ್ಲಿ ಅಪರಿಚಿತ ಗೃಹಿಣಿಕೂಡ ಸುಟ್ಟು ಭಸ್ಮವಾಗಿರುವುದು ಕಂಡುಬಂದಿದ್ದು, ಮಾಂಗಲ್ಯ ಮತ್ತು ಕಾಲ್ ಚೈನ್ ಬಿಟ್ಟರೆ ಗುರುತು ಸಿಗದಷ್ಟು ಮಹಿಳೆ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ.
ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಹೊತ್ತಿ ಉರಿದ ಕಾರು.. ಗೃಹಿಣಿ ಭಸ್ಮ..! pic.twitter.com/F49YiXQ3WF
— Harithalekhani (@harithalekhani) May 2, 2026
ಸುರೇಶ್ ಅವರಿಂದ ಕಾರು ತಂದಿದ್ದ ರಾಮಾಂಜಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇಷ್ಟಕ್ಕೂ ರಾಮಾಂಜಿ ಜೊತೆ ಕಾರಿನಲ್ಲಿ ಬಂದಿದ್ದ ಮಹಿಳೆ ಯಾರು..? ಅನಾರೋಗ್ಯ ಎಂದು ಕಾರು ಪಡೆದು, ಮಹಿಳೆಯೊಂದಿಗೆ ನಿರ್ಜನ ಪ್ರದೇಶಕ್ಕೆ ತೆರಳಲು ಕಾರಣವೇನು..? ಎಂಬ ಪ್ರಶ್ನೆಗಳು ಪೊಲೀಸರಿಗೆ ಎದುರಾಗಿದ್ದು, ಪರಾರಿಯಾಗಿದ್ದಾರೆ ಎನ್ನಲಾಗುತ್ತಿರುವ ರಾಮಾಂಜಿನಿ ಪತ್ತೆ ನಂತರ ಉತ್ತರ ದೊರಕಲಿದೆ. ಆದರೆ ಆರೋಗ್ಯ ಸರಿ ಇಲ್ಲ ಎಂದ ಕಾರಣ ಕಾರು ನೀಡಿದ ತಪ್ಪಿಗೆ, ಸುರೇಶ್ ಅವರು ಸಮಸ್ಯೆಗೆ ಸಿಲುಕಿರುವುದು ಮಾತ್ರ ವಿಪರ್ಯಾಸ.
ಇನ್ನೂ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗ, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

