
ದೊಡ್ಡಬಳ್ಳಾಪುರ: ಕರೊನಾ ಸೋಂಕು ಗ್ರಾಮಕ್ಕೆ ಬಾರದಿರಲೆಂದು ಹರಕೆ ಹೊತ್ತಿದ್ದ ಗ್ರಾಮಸ್ಥರು, ಶಿವರಾತ್ರಿ ಹಬ್ಬದ ಅಂಗವಾಗಿ ಅರತಿ ಕಾರ್ಯಕ್ರಮವನ್ನು ಆಯೋಜಿಸಿ ಹರಕೆ ತೀರಿಸಿರುವ ವಿಶೇಷ ಕಾರ್ಯಕ್ರಮ ತಾಲೂಕಿನ ಆರೂಢಿ ಗ್ರಾಮದಲ್ಲಿ ನಡೆದಿದೆ.

ಪ್ರಪಂಚದಾಧ್ಯಂತ ಕೋವಿಡ್-19 ಸೋಂಕಿನಿಂದ ಹಲವು ಸಾವು ಸಂಭವಿಸಿದೆ, ಕೋವಿಡ್-19 ನಿಯಂತ್ರಣಕ್ಕಾಗಿ ಭಾರತ ಸೇರಿದಂತೆ ಹಲವು ದೇಶಗಳು ಲಾಕ್ ಡೌನ್ ಹೇರಲಾಗಿತ್ತಲ್ಲದೆ, ಎರಡನೇ ಅಲೆ ಆತಂಕ ಜನತೆಯನ್ನು ಕಾಡುತ್ತಿದೆ. ಇದೆಲ್ಲದರ ನಡುವೆ ಭಾರತೀಯ ವಿಜ್ಞಾನಿಗಳು ಕೋವಿಡ್-19 ಸೋಂಕಿಗೆ ಲಸಿಕೆ ಕಂಡು ಹಿಡಿದು ಜನರ ಆತಂಕ ದೂರಾಗಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಯ ನಡುವೆ, ಕೋವಿಡ್-19 ಸೋಂಕು ಗ್ರಾಮಕ್ಕೆ ಹರಡದಂತೆ ಆರೂಢಿ ಗ್ರಾಮಸ್ಥರು ಲಾಕ್ಡೌನ್ ಸಂಧರ್ಭದಲ್ಲಿ ಗ್ರಾಮ ದೇವತೆ ಶ್ರೀ ವಡಸಲಮ್ಮ ದೇವಿಗೆ ಹರಕೆ ಹೊತ್ತಿದ್ದರು. ಆ ವೇಳೆ ಅಲ್ಲೊಂದು ಇಲ್ಲೋಂದು ಪ್ರಕರಣ ಹೊರತು ಪಡಿಸಿದರೆ, ಗ್ರಾಮಕ್ಕೆ ಸೋಂಕು ಕಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಿವರಾತ್ರಿ ಅಂಗವಾಗಿ ಇಂದು ಆರತಿ ಕಾರ್ಯಕ್ರಮ ಏರ್ಪಡಿಸಿ ಹರಕೆ ತೀರಿಸಿದರು.
ಆರತಿ ಕಾರ್ಯಕ್ರಮ ಹಾಗೂ ಶಿವರಾತ್ರಿ ಒಂದೇ ದಿನ ನಡೆದ ಕಾರಣ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಕಂಡುಬಂತು. ಶ್ರೀ ವಡಸಲಮ್ಮ ದೇವಿಯ ಮೆರವಣಿಗೆ ಮೂರ್ತಿಯನ್ನು ಗ್ರಾಮಕ್ಕೆ ತಂದು ಕೂರಿಸಿ, ಪೂಜೆ ಸಲ್ಲಿಸಿದ ನಂತರ ಟ್ರಾಕ್ಟರ್ ನಲ್ಲಿ ದೇವರ ಮೆರವಣಿಗೆ ಆರಂಭವಾಯಿತು. ಆರತಿ ಹೊತ್ತ ಮಹಿಳೆಯರು ದೇವರ ಮೂರ್ತಿಯನ್ನು ಹಿಂಬಾಲಿಸಿ ದೇವಾಲಯಕ್ಕೆ ತೆರಳಿ ಆರತಿ ಬೆಳಗುವ ಮೂಲಕ ಹರಕೆ ತೀರಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

