ಬೆಂಗಳೂರು: ಮಂಗಳೂರಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಸುಹಾಸ್ ಶೆಟ್ಟಿಯನ್ನು ಅನೇಕ TV ಮತ್ತು ಮುದ್ರಣ ಮಾಧ್ಯಮಗಳು ಹಿಂದೂ ಕಾರ್ಯಕರ್ತ ಎಂದು ವರದಿ ಮಾಡುತ್ತಿವೆ. ಸುಹಾಸ್ ಶೆಟ್ಟಿ ಹಿಂದೂ ಪರ ಸಂಘಟನೆಯ ಅಥವ ಹಿಂದುತ್ವವಾದ ಕಾರ್ಯಕರ್ತನೆ ಹೊರತು ಹಿಂದೂ ಕಾರ್ಯಕರ್ತನಲ್ಲ. ಅವನು ಒಬ್ಬ ರೌಡಿ ಶೀಟರ್ ಮತ್ತು ಕೊಲೆ ಆರೋಪಿ ಎಂದು ಸಚಿವ ದಿನೇಶ್ ಗುಂಡೂ ರಾವ್ (Dinesh GunduRao) ಹೇಳಿದ್ದಾರೆ.
ಈ ಕುರಿತು ಟ್ಚಿಟ್ ಮಾಡಿರುವ ಅವರು, ಹಿಂದೂ ಒಂದು ಧರ್ಮ, ಅದು ಒಂದು ಸಂಘಟನೆ ಅಥವ ಸಂಸ್ಥೆ ಅಲ್ಲಾ. ನಾನು ಹಿಂದೂ, ಸುಹಾಸ್ ಕೂಡ ಹಿಂದೂ. ನಾವಿಬ್ಬರೂ ಹಿಂದೂ ಧರ್ಮದ ಸಿದ್ದಾಂತವನ್ನು ನಂಬಿರುವ ಅನುಯಾಯಿಗಳೆ ಹೊರತು ಕಾರ್ಯಕರ್ತರಾಗಲು ಸಾಧ್ಯವಿಲ್ಲ.
ದುಷ್ಕರ್ಮಿಗಳಿಂದ ಹತ್ಯೆಯಾದ #SuhasShetty ಯನ್ನು ಅನೇಕ TV ಮತ್ತು ಮುದ್ರಣ ಮಾಧ್ಯಮಗಳು ಹಿಂದೂ ಕಾರ್ಯಕರ್ತ ಎಂದು ವರದಿ ಮಾಡುತ್ತಿವೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 4, 2025
ಸುಹಾಸ್ ಶೆಟ್ಟಿ ಹಿಂದೂ ಪರ ಸಂಘಟನೆಯ ಅಥವ ಹಿಂದುತ್ವವಾದ ಕಾರ್ಯಕರ್ತನೆ ಹೊರತು ಹಿಂದೂ ಕಾರ್ಯಕರ್ತನಲ್ಲ. ಅವನು ಒಬ್ಬ ರೌಡಿ ಶೀಟರ್ ಮತ್ತು ಕೊಲೆ ಆರೋಪಿ.
ಹಿಂದೂ ಒಂದು ಧರ್ಮ, ಅದು ಒಂದು ಸಂಘಟನೆ ಅಥವ…
ಹಿಂದೂ ಪರ ಸಂಘಟನೆಯ ಕಾರ್ಯಕರ್ತನನ್ನು ಮಾಧ್ಯಮಗಳು ಹಿಂದೂ ಕಾರ್ಯಕರ್ತ ಎನ್ನುವುದು ಸಮಂಜಸವಲ್ಲ ಎಂಬುದು ನನ್ನ ಭಾವನೆ. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿದಂತೆ. ಹಾಗಾಗಿ ಮಾಧ್ಯಮಗಳು ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಬೇಕೆಂದು ಮನವಿ ಮಾಡುತ್ತೇನೆ ಎಂದವರು ಹೇಳಿದ್ದಾರೆ.