SSLC Result; Poor performance of Doddaballapur taluk

SSLC ಫಲಿತಾಂಶ; ದೊಡ್ಡಬಳ್ಳಾಪುರ ತಾಲೂಕಿನ ಕಳಪೆ ಸಾಧನೆ‌‌‌.. ಸರ್ಕಾರಿ ಶಾಲೆಗಳ ಫಲಿತಾಂಶ ತೀವ್ರ ಕುಸಿತಕ್ಕೆ ಹೊಣೆ ಯಾರು..?

ದೊಡ್ಡಬಳ್ಳಾಪುರ: ಮೇ 02 ರಂದು 2024-25ನೇ ಸಾಲಿನ ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಆದರೆ ದೊಡ್ಡಬಳ್ಳಾಪುರ ತಾಲೂಕು ಶೇ.70.08 ಫಲಿತಾಂಶ ಪಡೆಯುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಿಗೆ ಹೋಲಿಸಿದರೆ ಕೊನೆ ಸ್ಥಾನಕ್ಕೆ ತಲುಪುವ ಮೂಲಕ ಕಳಪೆ ಸಾಧನೆ ಮಾಡಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 3654 ವಿದ್ಯಾರ್ಥಿಗಳು 2024-25 ನೇ ಸಾಲಿನ ಪರೀಕ್ಷೆಗೆ ಹಾಜರಾಗಿದ್ದು 2561 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 70.08 ರಷ್ಟು ಫಲಿತಾಂಶ ಪಡೆದಿದ್ದಾರೆ.

ಉಳಿದಂತೆ ಮೊದಲ ಸ್ಥಾನವನ್ನು ದೇವನಹಳ್ಳಿ ತಾಲ್ಲೂಕು ಪಡೆದಿದ್ದು, ಇಲ್ಲಿ 3255 ವಿದ್ಯಾರ್ಥಿಗಳು ಹಾಜರಾಗಿದ್ದು 2550 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 78.34 ರಷ್ಟು ಫಲಿತಾಂಶ ಪಡೆದಿದ್ದಾರೆ.

ಎರಡನೇ ಸ್ಥಾನವನ್ನು ನೆಲಮಂಗಲ ತಾಲ್ಲೂಕು ಪಡೆದಿದ್ದು , ಇಲ್ಲಿ 3109 ವಿದ್ಯಾರ್ಥಿಗಳು ಹಾಜರಾಗಿದ್ದು 2300 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 73.97 ರಷ್ಟು ಫಲಿತಾಂಶ ಪಡೆದಿದ್ದಾರೆ.

ಮೂರನೇ ಸ್ಥಾನವನ್ನು ಹೊಸಕೋಟೆ ತಾಲ್ಲೂಕು ಪಡೆದಿದ್ದು, ಇಲ್ಲಿ 3625 ವಿದ್ಯಾರ್ಥಿಗಳು ಹಾಜರಾಗಿದ್ದು 2646 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 72.99 ರಷ್ಟು ಫಲಿತಾಂಶ ಪಡೆದಿದ್ದಾರೆ.

ದೊಡ್ಡಬಳ್ಳಾಪುರಕ್ಕೆ ಕೊನೆ ಸ್ಥಾನ.. ಸರ್ಕಾರಿ ಶಾಲೆಯ ಫಲಿತಾಂಶ ತೀವ್ರ ಕುಸಿತ

ಕಳೆದ ವರ್ಷ 2023-24 ನೇ ಸಾಲಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ದೊಡ್ಡಬಳ್ಳಾಪುರ ತಾಲೂಕು ಈ ವರ್ಷ ಕಳೆಪೆ ಸಾಧನೆ ಮಾಡಿದೆ.. ಅದರಲ್ಲಿಯೂ ಸರ್ಕಾರಿ ಮತ್ತು ಅನುದಾನಿತ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಅತಿ ಹೆಚ್ಚು ಅನುತೀರ್ಣರಾಗಿದ್ದಾರೆ.

ಶಿಕ್ಷಣ ಇಲಾಖೆ ಮಾಹಿತಿ ಅನ್ವಯ ದೊಡ್ಡಬಳ್ಳಾಪುರ ತಾಲೂಕಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಪರೀಕ್ಷೆ ಬರೆದ 2171 ಮಕ್ಕಳ ಪೈಕಿ ಬರೋಬ್ಬರಿ 886 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.

ಇವರಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ 1463 ಮಕ್ಕಳ ಪೈಕಿ 509 ವಿದ್ಯಾರ್ಥಿಗಳು ಅನುತೀರ್ಣರಾಗುವ ಮೂಲಕ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗಕ್ಕೆ ಮಕ್ಕಳನ್ನು ಕಳಿಸುತ್ತಿರುವ ಪೋಷಕರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಹೊಣೆ ಯಾರು..?

SSLC ಫಲಿತಾಂಶದಲ್ಲಿ ಎರಡನೇ ಸ್ಥಾನದಿಂದ ಕೊನೆಯ ಸ್ಥಾನಕ್ಕೆ ದೊಡ್ಡಬಳ್ಳಾಪುರ ತಾಲೂಕು ಕುಸಿಯಲು ಕಾರಣ ಏನು..? ಇದರ ಹೊಣೆ ಯಾರು ಹೊರಬೇಕಾದವರು ಯಾರು..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ (ಕೆಲವೆಡೆ ಶಿಕ್ಷಕರು ಇದ್ದಾಗಿಯೂ ಫಲಿತಾಂಶ ಕುಸಿತ), ಕೆಲ ಶಾಲೆಗಳಲ್ಲಿ ಶಿಕ್ಷಕರ ಬೇಜವಬ್ದಾರಿ, ಗ್ರಾಮೀಣ ಪೋಷಕರು ಅಸಡ್ಡೆಯಿಂದಾಗಿ ಮಕ್ಕಳ ಮಿತಿ ಮೀರಿದ ಮೊಬೈಲ್ ಬಳಕೆ ಈ ರೀತಿಯ ಕಳಪೆ ಫಲಿತಾಂಶಕ್ಕೆ ಕಾರಣ ಎನ್ನಲಾಗುತ್ತಿದೆ.

ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಮಟ್ಟ ತೀವ್ರ ಕುಸಿತ ಈ ರೀತಿ ಫಲಿತಾಂಶಕ್ಕೂ ಕಾರಣ ಎನ್ನಬಹುದು, ಅಗತ್ಯ ಶಿಕ್ಷಕರನ್ನು ನೇಮಿಸದೆ, ಕಡಿಮೆ ಸಂಬಳಕ್ಕೆ ಅತಿಥಿ ಶಿಕ್ಷಕರನ್ನು ಅವಲಂಬಿಸಿದರೆ ಫಲಿತಾಂಶ ಉತ್ತಮವಾಗುವುದಾದರೂ ಹೇಗೆ..?

8ನೇ ತರಗತಿಗೆ ದಾಖಲಾಗುವ ಅನೇಕ ಮಕ್ಕಳಿಗೆ ಕನ್ನಡ, ಇಂಗ್ಲಿಷ್ ಅಕ್ಷರಗಳ ಬಗ್ಗೆ ಅರಿವೇ ಇರುವುದಿಲ್ಲ ಎಂಬುದು ಅನೇಕ ಪ್ರೌಢಶಾಲೆ ಶಿಕ್ಷಕರ ಆರೋಪ, ಹಾಗಾದರೆ ಪ್ರಾಥಮಿಕ ಶಾಲೆಗಳಲ್ಲಿ ದೊರಕುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಪ್ರಶ್ನೆ ಮಾಡಬೇಕಾದವರು ಯಾರು..?

ಇನ್ನೂ ಶಿಕ್ಷಣ ಇಲಾಖೆ ಜವಬ್ದಾರಿ ಹೊರದೆ, ಸೂಕ್ತ ಸಮಯದಲ್ಲಿ ಅಗತ್ಯ ತರಬೇತಿ ಆಯೋಜನೆ ಮಾಡದೇ ಇರುವುದು, ಶಿಕ್ಷಕರ ನೇಮಕ ಮಾಡದೆ ಡೆಪ್ಟೇಷನ್ ಮಾಡಿ ಕೈತೊಳೆದುಕೊಂಡಿರುವುದು, ತಾಲೂಕಿನ ಮಕ್ಕಳಿಗ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಕಾಳಜಿ ತೋರದೆ, ಶಿಕ್ಷಕರ ಕಟ್ಟು ನಿಟ್ಟಿನ ಸೂಚನೆ ನೀಡದೇ ಇರುವುದು ಕೂಡ ಈ ರೀತಿಯ ಕಳಪೆ ಫಲಿತಾಂಶಕ್ಕೆ ಕಾರಣ ಎನ್ನಲಾಗಿದೆ.

ರಾಜ್ಯಕ್ಕೆ ಟಾಪರ್ಗಳಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಖಾಸಗಿ ಶಾಲೆಯ ವಿದ್ಯಾರ್ಥಿನಿ ಹೆಸರು ಬಂದಿರುವುದನ್ನೇ ಸಾಧನೆ ಎಂಬಂತೆ ಬಿಂಬಿಸುವ ವ್ಯವಸ್ಥೆ, ಉಳಿದ 886 ಮಕ್ಕಳು ಅನುತೀರ್ಣ ಆಗಿರುವುದಕ್ಕೆ ಕಾರಣ ಏನು..? ಎಂಬುದು ಚರ್ಚೆಯಾಗದೆ ಉಳಿದಿರುವುದು ವಿಪರ್ಯಾಸ.

ಕೆಲ ಶಾಲೆಗಳಲ್ಲಿ ಅನೇಕ ಮಕ್ಕಳು ಎಲ್ಲಾ ಸಬ್ಜೆಕ್ಟ್ ಗಳಲ್ಲಿಯೂ ಅನುತ್ತೀರ್ಣರಾಗಿದ್ದಾರೆ. ಇದಕ್ಕೆ ಹೊಣೆ ಹೊರಬೇಕಾದವರು ಯಾರು..? ಫಲಿತಾಂಶ ಬಂದು 6 ದಿನ ಕಳೆದರು ಮುಖ್ಯ ಶಿಕ್ಷಕರ ಸಭೆ ಕರೆದು, ಲೋಪ ಎಲ್ಲಾಗಿದೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಸಭೆಯೇ ನಡೆದಿಲ್ಲ ಎನ್ನಲಾಗುತ್ತಿದೆ. ಈ ರೀತಿ ಆದರ ಸರ್ಕಾರಿ ಶಾಲೆಗಳ ಬಗ್ಗೆ ಭರವಸೆ ಉಳಿಯುವುದಾದರೂ ಹೇಗೆ..? ಎಂಬ ಪ್ರಶ್ನೆ ದೊಡ್ಡಬಳ್ಳಾಪುರ ತಾಲೂಕಿನ ಜನರದ್ದಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ರಾಜಕೀಯ

ಕಾಂಗ್ರೆಸ್‌ ರಾಜ್ಯ ಸರ್ಕಾರದ ಆಡಳಿತಕ್ಕೆ ದಿವಾಳಿ ಆಫ್‌ ಮಾಡಲ್‌ ಕರ್ನಾಟಕ ಎಂಬ ಬಿರುದು ನೀಡಿದ್ದೇವೆ: ಆರ್‌.ಅಶೋಕ

ಕಾಂಗ್ರೆಸ್‌ ರಾಜ್ಯ ಸರ್ಕಾರದ ಆಡಳಿತಕ್ಕೆ ದಿವಾಳಿ ಆಫ್‌ ಮಾಡಲ್‌ ಕರ್ನಾಟಕ ಎಂಬ ಬಿರುದು

ಕಾಂಗ್ರೆಸ್‌ ನಾಯಕರು ಜನರ ಸಾವಿನ ಮೇಲೆ ಸಾಧನೆಯ ಸಮಾವೇಶ ನಡೆಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R Ashoka) ಆಕ್ರೋಶ ವ್ಯಕ್ತಪಡಿಸಿದರು.

[ccc_my_favorite_select_button post_id="107616"]
ಬೆಂಗಳೂರಲ್ಲಿ ಮಳೆ‌ ನೀರಿನಿಂದ ಅವಾಂತರ: ರಾಜ್ಯ ಸರಕಾರದ ಮೋಜು ಎಂದು ಬಿವೈ ವಿಜಯೇಂದ್ರ ಆಕ್ಷೇಪ

ಬೆಂಗಳೂರಲ್ಲಿ ಮಳೆ‌ ನೀರಿನಿಂದ ಅವಾಂತರ: ರಾಜ್ಯ ಸರಕಾರದ ಮೋಜು ಎಂದು ಬಿವೈ ವಿಜಯೇಂದ್ರ

ರಾಜ್ಯ ಸರಕಾರವು ಬೆಂಗಳೂರಿನಲ್ಲಿ ಮಳೆಗಾಲಕ್ಕೆ ಸಂಬಂಧಿಸಿದ ಪೂರ್ವಭಾವಿ ಕೆಲಸ ಮಾಡಿಸುವುದನ್ನು ಬಿಟ್ಟು ಮೋಜು ಮಾಡುತ್ತಿದೆ: ಬಿ.ವೈ.ವಿಜಯೇಂದ್ರ (BY Vijayendra)

[ccc_my_favorite_select_button post_id="107498"]
ಆಪರೇಷನ್ ಸಿಂಧೂರ: ಪಾಕ್‌ಗೆ ಕೇಂದ್ರ ಸರ್ಕಾರದಿಂದಲೇ ಮಾಹಿತಿ: ಜೈಶಂಕ‌ರ್ Video ಪೋಸ್ಟ್ ಮಾಡಿದ ರಾಹುಲ್‌ ಗಾಂಧಿ

ಆಪರೇಷನ್ ಸಿಂಧೂರ: ಪಾಕ್‌ಗೆ ಕೇಂದ್ರ ಸರ್ಕಾರದಿಂದಲೇ ಮಾಹಿತಿ: ಜೈಶಂಕ‌ರ್ Video ಪೋಸ್ಟ್ ಮಾಡಿದ

ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಗುರಿಯಾಗಿಸಿ ನಡೆಸಿದ 'ಆಪರೇಷನ್ ಸಿಂಧೂರ' (Operation Sindoora) ದಾಳಿ ಕುರಿತು ಕೇಂದ್ರ ಸರ್ಕಾರ ಮುಂಚಿತವಾಗಿಯೆ ಪಾಕಿಸ್ತಾನಕ್ಕೆ ಮಾಹಿತಿ

[ccc_my_favorite_select_button post_id="107328"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕುಟುಂಬದೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ಗೌತಮ್ ಗಂಭೀರ್

ಕುಟುಂಬದೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ಗೌತಮ್ ಗಂಭೀರ್

ಭಾರತದ ಕ್ರಿಕೆಟ್ ತಂಡದ ತರಬೇತುದಾರ ಗೌತಮ್ ಗಂಭೀರ್ (Gautam Gambhir) ಅವರು ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

[ccc_my_favorite_select_button post_id="107331"]
ಸುಳ್ಳು ಸುದ್ದಿ ಪ್ರಸಾರದ ಆರೋಪ: ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ FIR..!

ಸುಳ್ಳು ಸುದ್ದಿ ಪ್ರಸಾರದ ಆರೋಪ: ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ವಿರುದ್ಧ FIR..!

ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಹರಡಲು, ದುರುದ್ದೇಶಪೂರಿತ ಕ್ರಿಮಿನಲ್ ಪಿತೂರಿಯ ಆರೋದಡಿಯಲ್ಲಿ ಪತ್ರಕರ್ತ ಅರ್ನಾಬ್ (Arnab Goswami) ಗೋಸ್ವಾಮಿ ವಿರುದ್ಧ

[ccc_my_favorite_select_button post_id="107623"]
ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ.. 6 ಮಂದಿ ದುರ್ಮರಣ

ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ.. 6 ಮಂದಿ ದುರ್ಮರಣ

ಇಂದು (ಮೇ.21) ಬೆಳ್ಳಂಬೆಳಗ್ಗೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ (Accident) ಜವರಾಯ ಅಟ್ಟಹಾಸ ಮೆರೆದಿದ್ದಾನೆ.

[ccc_my_favorite_select_button post_id="107558"]

ಆರೋಗ್ಯ

ಸಿನಿಮಾ

ಮುಸ್ಸಂಜೆ ಮಾತು ಸಿನಿಮಾಗೆ 17 ವರ್ಷ: ನಟ ಸುದೀಪ್ ಹೇಳಿದ್ದು ಇಷ್ಟು| Video ನೋಡಿ

ಮುಸ್ಸಂಜೆ ಮಾತು ಸಿನಿಮಾಗೆ 17 ವರ್ಷ: ನಟ ಸುದೀಪ್ ಹೇಳಿದ್ದು ಇಷ್ಟು| Video

ಕಿಚ್ಚ ಸುದೀಪ್ (Sudeep) ಮತ್ತು ರಮ್ಯ (Ramya )ಅಭಿನಯದ ಯಶಸ್ವಿ ಚಿತ್ರ ಮುಸ್ಸಂಜೆ ಮಾತು (Mussanje Mathu) ಸಿನಿಮಾ ಬಿಡುಗಡೆಯಾಗಿ ಇಂದಿಗೆ 17 ವರ್ಷ.

[ccc_my_favorite_select_button post_id="107204"]
error: Content is protected !!