ದೊಡ್ಡಬಳ್ಳಾಪುರ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದ (PLD Bank) ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಮುಖಂಡರು ಅಭಿನಂದನೆ ಸಲ್ಲಿಸಲಾಯಿತು.
ಅಧ್ಯಕ್ಷರಾಗಿ ಆಯ್ಕೆಯಾದ ರಾಜಘಟ್ಟ ಶಿವಣ್ಣ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಎಲ್.ಕೆ.ರಾಮಚಂದ್ರ ಬಾಬು (ಮಿಲ್ಕ್ ಬಾಬು) ಅವರನ್ನ ಕರವೇ ಮುಖಂಡರು ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಹೆಚ್ಚಿನ ಜವಬ್ದಾರಿಯಿದ್ದು, ತಮ್ಮ ಅವಧಿಯಲ್ಲಿ ರೈತರಿಗೆ ಅನೂಕೂಲ ಕಲ್ಲಿಸುವುದರ ಜೊತೆಗೆ, ಬ್ಯಾಂಕ್ನ್ನು ಉತ್ತಮ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ಎ.ನರಸಿಂಹಯ್ಯ, ವಕೀಲರಾದ ಸೊಣ್ಣಮಾರನಹಳ್ಳಿ ಮುನಿರಾಜು, ಮೆಳೆಕೋಟೆ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್, ಮುಖಂಡರಾದ ಜಗನ್ನಾಥ್, ಫಯಾಜ್, ಮೋಹನ್, ನವೀನ್ ಕ್ಷತ್ರಿಯ, ಸೊಣ್ಣಪ್ಪನಹಳ್ಳಿ ಮಂಜು, ಆನಂದ್(ಬಿಡ್ಡ), ಯಶವಂತ್ ಆರಾಧ್ಯ ಇದ್ದರು.