ಕದನ ವಿರಾಮ: ಸೋಶಿಯಲ್ ಮೀಡಿಯಾದಲ್ಲಿ ಇಂದಿರಾ ಗಾಂಧಿ ಫೋಟೋ, ವಿಡಿಯೋ ವೈರಲ್..!

Ceasefire: Indira Gandhi's photo, video go viral on social media..!

ಬೆಂಗಳೂರು: ಭಾರತೀಯ ಸೇನೆಯ ಅಪರೇಷನ್ ಸಿಂಧೂರ (Operation Sindoora) ದಾಳಿಗೆ ತತ್ತರಿಸಿದ ಪಾಪಿ ಪಾಕಿಸ್ತಾನ, ಮಹಾಪ್ರಭು ರಕ್ಷಿಸಿ.. ಎಂಬಂತೆ ಅಮೇರಿಕಾಗೆ ಮೊರೆಯಿಟ್ಟ ಹಿನ್ನೆಲೆಯಲ್ಲಿ, ದೊಡ್ಡಣ್ಣ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಸುದೀರ್ಘ ಸಂಧಾನ ಸಭೆಯ ನಂತರ ಕದನ ವಿರಾಮ ಘೋಷಣೆಯಾಗಿದೆ.

ಆದರೆ ತನ್ನ ಕುತಂತ್ರಿ ಬುದ್ದಿ ಬಿಡದ ಪಾಕ್ ಸೇನೆ, ಕದನ ವಿರಾಮ ಘೋಷಣೆ ಬಳಿಕವೂ ದಾಳಿ ನಡೆಸಿ ಭಾರತೀಯರ ಕೆರಳಿಸಿದೆ.

ಇದರ ಬೆನ್ನಲ್ಲೇ ಒಂದು ಹೆಸರು ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡಿಂಗ್ ಆಗಿದೆ. ಅದೇ ಇಂದಿರಾ ಗಾಂಧಿ (Indira Gandhi).

ಹೌದು, ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1971ರ ಯುದ್ಧ ನಿರಾಶ್ರಿತರ ಬಿಕ್ಕಟ್ಟು ಆಗಿರಲಿ, ಅಮೆರಿಕದ ಒತ್ತಡವಾಗಲಿ ಪ್ರತಿಯೊಂದರಲ್ಲಿ ಹೆಜ್ಜೆ ಹಿಂದಿಟ್ಟಿರಲಿಲ್ಲ. ಇಂದಿರಾ ಗಾಂಧಿಯವರ ದಿಟ್ಟ ನಿರ್ಧಾರಗಳೇ ಅವರಿಗೆ ಉಕ್ಕಿನ ಮಹಿಳೆ ಎಂದ ಪಟ್ಟ ತಂದು ಕೊಟ್ಟಿದ್ದವು.

1971ರಲ್ಲಿ ಪಾಕಿಸ್ತಾನದ ಪೂರ್ವ ಪ್ರದೇಶ (ಈಗ ಬಾಂಗ್ಲಾದೇಶ) ಬಂಗಾಳಿ ನಾಗರಿಕರ ಮೇಲೆ ಪಾಕಿಸ್ತಾನಿ ಸೇನೆಯು ಭೀಕರ ದೌರ್ಜನ್ಯ ನಡೆಸುತ್ತಿತ್ತು. ಲಕ್ಷಾಂತರ ನಿರಾಶ್ರಿತರು ಸುರಕ್ಷಿತ ನೆಲೆ ಅರಸುತ್ತಾ ಭಾರತಕ್ಕೆ ಬಂದಿದ್ದರು.

ಅದು ದೇಶದ ಆಂತರಿಕ ಭದ್ರತೆ ದೊಡ್ಡ ಮಟ್ಟದ ಒತ್ತಡವನ್ನುಂಟು ಮಾಡಿತ್ತು. ಆದ್ದರಿಂದ ಡಿಸೆಂಬರ್ 3, 1971 ರಂದು ಪಾಕಿಸ್ತಾನ ಭಾರತದ ಮೇಲೆ ವಾಯುದಾಳಿ ನಡೆಸಿತು.

ಭಾರತೀಯ ಸೇನೆ ಕೇವಲ 13 ದಿನಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿತು. 93,000 ಪಾಕಿಸ್ತಾನಿ ಸೈನಿಕರು ಶರಣಾದರು. ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್‌ವರೆಗೆ ನುಗ್ಗಿತ್ತು.

ಖುದ್ದು ಪ್ರಧಾನಿ ಇಂದಿರಾ ಯುದ್ಧ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದರು. ಆ ಯುದ್ಧದ ಪರಿಣಾಮವಾಗಿ, ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಅಂಥದ್ದೇ ನಿರ್ಧಾರಕ್ಕೆ ಬರಬೇಕು ಎಂದು ನೆಟ್ಟಿಗರ ಒತ್ತಾಯವಾಗಿದೆ.

ಹಿಂದುತ್ವವಾದಿಗಳಿಗೂ ಬೇಸರ

ಮತ್ತೊಂದೆಡೆ ನಿನ್ನೆಯ ಅನಿರೀಕ್ಷಿತ ಘಟನೆ ದೇಶ ಪ್ರೇಮಿಗಳು, ಹಿಂದುತ್ವವಾದಿಗಳು ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರಲ್ಲಿಯೂ ತಡೆಯಲಾಗದ ಅಸಹನೆ ಕಾರಣವಾಗಿದೆ.

ಕೈಗೆ ಬಂದ ಅವಕಾಶವನ್ನು ಕೇಂದ್ರ ಸರ್ಕಾರ ಕೈ ಚೆಲ್ಲಿಬಿಟ್ಟಿದೆ, ಪಾಕಿಸ್ತಾನ ಎಂಬ ಹಾವಿನ ಕುತ್ತಿಗೆಯ ಮೇಲೆಯ ಭಾರತೀಯ ಸೇನೆ ಕಾಲಿಟ್ಟು ನಿಂತಿತ್ತು. ಆದರೆ ಏಕಾಏಕಿ ಅಮೇರಿಕಾದ ಮುಂದೆ ಬಾಗಿ ನಿಲ್ಲುವಂತಾಯಿತೆ ಎಂಬ ಆಕ್ಷೇಪದ ಮಾತುಗಳು ಕೇಳಿಬರುತ್ತಿದೆ‌.

ಈ ಆಕ್ರೋಶವನ್ನು ತಣಿಸಲು, ಬಿಜೆಪಿ ಬೆಂಬಲಿಗರು ಸಂದೇಶವನ್ನು ಹರಿಬಿಟ್ಟಿದ್ದಾರೆ.

ಆ ಸಂದೇಶ ಇದಾಗಿದೆ: ನಿನ್ನೆ ಕದನ ವಿರಾಮ ಘೋಷಣೆ ಬೆನ್ನಲ್ಲೆ ನಿರಾಸೆಯ, ಹತಾಶೆಯ ಮತ್ತು ಸರ್ಕಾರದ ವಿಫಲತೆ ಬಿಂಬಿಸುವ ಪೊಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ಸರಿಯಲ್ಲ. ಇದು ಕೃಷ್ಣ ತಂತ್ರ. ಜಗತ್ತಿನ ಎದುರು ಪಾಕಿಸ್ತಾನ ವನ್ನು ನಿಶಸ್ತ್ರವಾಗಿಸಿದ, ಬೆತ್ತಲಾಗಿಸಿದ ರಾಜತಾಂತ್ರಿಕ ಅಂರ್ತಗತ ಪ್ರತಿ ತಂತ್ರ.

ಆಂತರಿಕ ದೇಶದ್ರೋಹಿಗಳ ಮುಖವಾಡ ಕಳಚುವ ತಂತ್ರ. ಚೀನಾವನ್ನು ಏಕಾಂಗಿ ಯಾಗಿಸಿದ ತಂತ್ರ. ಕಾರಣ ಇಂತಹ ಸುದ್ದಿ ಕಳಿಸಿದವರಿಗೆ ತಕ್ಷಣ ಡೀಲಿಟ್ ಮಾಡಲು ಹೇಳಿ, ನೀವೂ ಸಹ ಯಾರಿಗೂ ಕಳಿಸಬೇಡಿ.

ದೇಶದೊಳಗಿನ ಗೋಮುಖ ವ್ಯಾಘ್ರಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಚಾಡಿ ಆಲಿಸುವ ಹಿತ್ತಾಳೆ ಕಿವಿ ತಮ್ಮದಾಗದಿರಲಿ. ತಾವು ಅವರಿಗೆ ಸಹಕಾರ ನೀಡಬೇಡಿ. ಒಂದೇ ಸಲಕ್ಕೆ ನಿರಾಸೆಯ ಮಾತು ಬೇಡ. ಕಾಲುಕೆದರಿ ಜಗಳ ತೆಗೆಯುವ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸುವ ಭೂಮಿಕೆ ಸಿದ್ಧಪಡಿಸುತ್ತಿರುವ ಕೇಂದ್ರ ಸರ್ಕಾರ ಮತ್ತು ಸೈನ್ಯದ ಮನೋಬಲ ಹೆಚ್ಚಿಸಲು ಕನಿಷ್ಠ ದಿನದಲ್ಲಿ ಒಂದು ನಿಮಿಷ ಮನಸಾರೆ ಪ್ರಾರ್ಥಿಸಿ.

ಯುದ್ಧದ ಏರಿಳಿತಗಳಿಂದ ವಿಚಲಿತರಾಗದೇ ಅಂತಿಮ ಜಯ ನಮ್ಮದು ಎಂಬ ವಿಶ್ವಾಸ ದಿಂದ ಮುನ್ನಡೆಯೋಣ. ಚರೈವೇತಿ ಚರೈವೇತಿ. ಭಾರತದ ಗಡಿರಕ್ಷಣೆ ಮಾಡುತ್ತಿರುವ ಸೈನಿಕರಿಗೆ, ಅವರ ಪರಿವಾರದವರಿಗೆ ಮತ್ತು ಅವರನ್ನು ಬೆಂಬಲಿಸಿ ಕಾರ್ಯನಿರತಗಿರುವ ಪ್ರತಿ ವ್ಯಕ್ತಿಗೂ ಕೃತಜ್ಞತೆಗಳು. ಶುಭಾಶಯಗಳು.

ರಾಜಕೀಯ

2019ರ ಸೋಲು ಸ್ಮರಿಸಿ ನಿಖಿಲ್ ಕುಮಾರಸ್ವಾಮಿ ಭಾವುಕ

2019ರ ಸೋಲು ಸ್ಮರಿಸಿ ನಿಖಿಲ್ ಕುಮಾರಸ್ವಾಮಿ ಭಾವುಕ

"ನನ್ನ ರಾಜಕೀಯ ಪ್ರವೇಶ ಮಂಡ್ಯ ಜಿಲ್ಲೆಯಿಂದಲೇ ಆಗಿದೆ. ನಾವು ಮಂಡ್ಯದಲ್ಲಿ ಹುಟ್ಟದಿದ್ದರೂ ಈ ಜಿಲ್ಲೆಯ ಋಣ ನಮ್ಮ ಮೇಲಿದೆ. ಯಾವುದೇ ಊರಿಗೆ ಹೋದರೂ ಜನ ತೋರಿಸುವ ಪ್ರೀತಿ ಮರೆಯಲಾಗದು" ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ

[ccc_my_favorite_select_button post_id="121871"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಬಕ್ರೀದ್; ಅಕ್ರಮ ಗೋವು ಸಾಗಣೆ / ಹತ್ಯೆ ಮಾಡಿದರೆ ಜೈಲು.. ಜಿಲ್ಲಾಧಿಕಾರಿ ವಾರ್ನಿಂಗ್

ಗೋವುಗಳ ಅಕ್ರಮ ಸಾಗಣೆ ಅಥವಾ ಹತ್ಯೆ (illegal cow transport/slaughter) ಮಾಡಿದಲ್ಲಿ ಏಳು ವರ್ಷ ಜೈಲು, ಹಾಗೂ ರೂ 10 ಲಕ್ಷ ಗಳ ವರೆಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

[ccc_my_favorite_select_button post_id="121833"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]