Daily story; punishment

ಹರಿತಲೇಖನಿ ದಿನಕ್ಕೊಂದು ಕಥೆ: ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ

Daily story; ಕಾಮಿಕ್ಸ್​ಗಳ ಲೋಕದಲ್ಲಿ ವಿಹರಿಸದವರು ಯಾರಿದ್ದಾರೆ ಹೇಳಿ..? ಕಲ್ಪನೆಯ ರೆಕ್ಕೆಗಳಿಗೆ ಜೀವ ತುಂಬಿ ಹಾರಾಡುವ ಈ ಪಾತ್ರಗಳು ನಗು ಉಕ್ಕಿಸುತ್ತವೆ, ಘಟನೆ ಅಥವಾ ರೂಪಕದ ಮೂಲಕ ಸಂದೇಶ ರವಾನಿಸುತ್ತವೆ.

‘ಹಠ ಒಳ್ಳೆಯದಲ್ಲ’, ‘ಸುಳ್ಳು ಹೇಳಿದರೆ ಆಗುವ ಫಜೀತಿ’, ‘ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ’ ಈ ಬಗೆಯ ಸಂದೇಶಗಳನ್ನೆಲ್ಲ ಮಕ್ಕಳಲ್ಲಿ ಕಾಮಿಕ್ಸ್ ಹೀರೋಗಳ ಮೂಲಕ ಬಿತ್ತುತ್ತಿರುವ ಹೊಸ ಜಮಾನಾ ಇದು.

ಕಾಮಿಕ್ಸ್ ಹೀರೋಗಳನ್ನು ಮಕ್ಕಳು ಮಾತ್ರವಲ್ಲ ದೊಡ್ಡವರೂ ಇಷ್ಟಪಡುತ್ತಾರೆ. ಮಕ್ಕಳು ಆಟವಾಡುವಾಗ ಏನಾದರೂ ತೊಂದರೆ ಆದರೆ ‘ಸ್ಪೈಡರ್​ವ್ಯಾನ್ ಅನ್ನು ಕರೆದುಬಿಡ್ತೀನಿ ನೋಡು’ ಅಂತ ಬಾಲಭಾಷೆಯಲ್ಲಿ ಹೇಳುವಾಗ ಅವರ ಭಾವಲೋಕದ ತುಂಬೆಲ್ಲ ಈ ಹೀರೋಗಳು, ಪಾತ್ರಗಳು ಎಷ್ಟು ಗಾಢವಾಗಿ ಕುಳಿತಿವೆ ಎಂಬುದು ಅರಿವಾಗುತ್ತದೆ. ಆದರೆ, ಇಂಥ ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸುವುದು ತಮಾಷೆಯ ಮಾತಲ್ಲ. ಅದಕ್ಕೆ ಅಸಾಧಾರಣ ಸೃಜನಶೀಲತೆ ಬೇಕು.

ಈ ಗುಣವೈಶಿಷ್ಟ್ಯ ಹೊಂದಿದ್ದರಿಂದಲೇ ಸ್ಟಾನ್ ಲೀ (ಮೂಲಹೆಸರು Stanley Martin Liebe) ಸ್ಪೈಡರ್​ವ್ಯಾನ್ ಸೇರಿದಂತೆ ಹಲವು ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸಿದರು.

ತುಂಬು ಜೀವನಪ್ರೀತಿಯ, ಪ್ರತಿ ಕೆಲಸವನ್ನು ಪರಿಪೂರ್ಣತೆಯಿಂದ ಮಾಡುತ್ತಿದ್ದ ಲೇಖಕ, ಸಂಪಾದಕ, ಪ್ರಕಾಶಕ, ಮಾರ್ವೆಲ್ ಕಾಮಿಕ್ಸ್​ನ ಮಾಜಿ ಅಧ್ಯಕ್ಷ ಲೀ 95ನೇ ವಯಸ್ಸಿನಲಿ ್ಲ ಕೊನೆಯುಸಿರೆಳೆದಾಗ (ನ.12), ಕಾಮಿಕ್ಸ್ ಲೋಕ ದೊಡ್ಡ ಆಧಾರವನ್ನೇ ಕಳೆದುಕೊಂಡಿತು.

ಲೈಬರ್​ನ ಯಹೂದಿ ಪರಿವಾರದಲ್ಲಿ 1922ರ ಡಿ.28ರಂದು ಜನಿಸಿದ ಸ್ಟಾನ್​ಲೀ, 1939ರಲ್ಲಿ ವೃತ್ತಿಜೀವನ ಆರಂಭಿಸಿದರು. 1961ರಲ್ಲಿ ಮಾರ್ವೆಲ್ ಕಾಮಿಕ್ಸ್ ಸಂಸ್ಥೆಗೆ ಸೇರ್ಪಡೆಗೊಂಡರು.

ಇಲ್ಲಿ ಅವರು ಸ್ಟೈಡರ್​ವ್ಯಾನ್, ಐರನ್ ಮೆನ್, ಡೇರ್ ಡೆವಿಲ್, ಎಕ್ಸ್-ಮೆನ್, ದ ಫೆಂಟಾಸ್ಟಿಕ್ ಫೋರ್ ಮತ್ತು ದಿ ಅವೆಂಜರ್ಸ್ ಎಂಬ ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸಿ, ಮಾರ್ವೆಲ್ ಕಾಮಿಕ್ಸ್ ಸಂಸ್ಥೆಗೆ ಅಪಾರ ಮನ್ನಣೆ ತಂದುಕೊಟ್ಟರು.

ಅಸಾಧಾರಣ ಶಕ್ತಿಯ ಪಾತ್ರಗಳಿಗೆ ಲೇಖನಿ ಮೂಲಕ ಜೀವತುಂಬಿದ ಲೀ, ಆ ಪಾತ್ರಗಳ ಮುಖೇನವೇ ಜನಮನ್ನಣೆ ಗಳಿಸಿದರು. ಈ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡೇ ಹಲವು ಸಿನಿಮಾಗಳು ಬಂದವು.

ಅಪಾರ ಕಲ್ಪನಾಶಕ್ತಿಯ, ಹೊಸದನ್ನು ಮತ್ತು ವಿಭಿನ್ನವಾದದ್ದನ್ನು ಯೋಚಿಸಿ ಅದನ್ನು ಬರಹರೂಪಕ್ಕೆ ಇಳಿಸುತ್ತಿದ್ದ ಇವರಿಗೆ ಭಾರತ ಸೇರಿದಂತೆ ಜಗತ್ತಿನ ಹಲವಾರು ದೇಶಗಳಲ್ಲಿ ಪ್ರಶಂಸಕರು, ಅಭಿಮಾನಿಗಳು ಇದ್ದಾರೆ. 2002ರಲ್ಲಿ ‘ಸ್ಟೈಡರ್​ವ್ಯಾನ್’ ಚಿತ್ರ ತೆರೆಗೆ ಬಂತು, 2004ರಲ್ಲಿ ಇದರ ರಿಮೇಕ್ ಬಿಡುಗಡೆ ಆಯಿತು. ಈ ಚಿತ್ರಗಳು ಒಟ್ಟು 1.6 ಬಿಲಿಯನ್ ಡಾಲರ್ ಆದಾಯ ಗಳಿಸಿದವು.

ಸಂಬಂಧಿಕರ ‘ಟೈಮ್ಲಿ’ ಕಂಪನಿಯಲ್ಲಿ ಮೊದಲಿಗೆ ಕೆಲಸಕ್ಕೆ ಸೇರಿದ ಲೀ ಸೃಜನಶೀಲತೆ, ತೀಕ್ಷ್ಣ ಬುದ್ಧಿಮತ್ತೆ ಮತ್ತು ಕಲ್ಪನಾಶಕ್ತಿಯಿಂದ ಆರಂಭದಲ್ಲೇ ಗಮನ ಸೆಳೆದರು. ಹಾಗಾಗಿ, ಅವರಿಗೆ ಕಾಮಿಕ್ಸ್ ವಿಭಾಗದ ಜವಾಬ್ದಾರಿ ನೀಡಲಾಯಿತಲ್ಲದೆ 18ನೇ ವಯಸ್ಸಿನಲ್ಲೇ ಕಾಮಿಕ್ಸ್ ಪ್ರಕಾಶನದ ಸಂಪಾದಕ ಹುದ್ದೆಯೇರಿದರು.

ಇದೇ ಸಂಸ್ಥೆ ಮುಂದೆ ‘ಮಾರ್ವೆಲ್ ಕಾಮಿಕ್ಸ್’ ಆಗಿ ರೂಪಾಂತರಗೊಂಡಿತು. 1961ರಲ್ಲಿ ಅವರು ರಚಿಸಿದ “The fantastic Four’ ಕಾಮಿಕ್ಸ್ ಮನ್ನಣೆ ಪಡೆದುಕೊಂಡು, ಬಳಿಕ ಸಿನಿಮಾ ಆಗಿ ತೆರೆಗೆ ಬಂತು.

ಮಕ್ಕಳನ್ನು ಬಹುವಾಗಿ ಸೆಳೆಯುವ, ಅಸಾಧಾರಣ ಶಕ್ತಿಯ ಪಾತ್ರದ ಮುಖೇನ ಸಮಸ್ಯೆಗಳನ್ನು ಪರಿಹರಿಸಿ ಸುಖಾಂತ್ಯಗೊಳಿಸುವ ಪಾತ್ರಗಳನ್ನು ಬರವಣಿಗೆ ಮೂಲಕ ರೂಪಿಸತೊಡಗಿದರು ಲೀ. ‘ಸ್ಪೈಡರ್​ವ್ಯಾನ್’ ಮತ್ತು ‘ಎಕ್ಸ್-ಮ್ಯಾನ್’ ಪಾತ್ರಗಳಂತೂ ಮನೆಮಾತಾದವು. ‘ಬ್ಲಾ್ಯಕ್ ಪ್ಯಾಂಥರ್’, ‘ಕ್ಯಾಪ್ಟನ್ ಅಮೆರಿಕ’, ‘ಡಾಕ್ಟರ್ ಸ್ಟೈಂಜ್’ ಪಾತ್ರಗಳು ಕೂಡ ಗಮನ ಸೆಳೆದವು.

ಇತ್ತೀಚಿನ ವರ್ಷಗಳಲ್ಲಿ ಸ್ಟಾನ್ ಅವರಿಗೆ ಭಾರತದ ನಂಟು ಲಭಿಸಿತು. 2013ರಲ್ಲಿ ಶರದ್ ದೇವರಂಜನ್ ಮತ್ತು ಗೌತಮ್ ಚೋಪ್ರಾ , ಸ್ಟಾನ್ ಲೀ ಅವರ ಜತೆ ಸೇರಿ ಭಾರತದ ಸೂಪರ್​ಹೀರೋ ಪಾತ್ರ ರೂಪಿಸಿ ‘ಚಕ್ರ’ ಎಂಬ ಸಿನಿಮಾ ಮಾಡಿದರು.

ಸಂಪೂರ್ಣ ಆನಿಮೆಷನ್ ಸಿನಿಮಾ ಆದ ಇದನ್ನು ಕಾರ್ಟೂನ್ ನೆಟ್​ವರ್ಕ್​ನಲ್ಲಿ ಲಾಂಚ್ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಲೀ ‘ಗ್ರಾಫಿಕ್ ಇಂಡಿಯಾ’ ಸಂಸ್ಥೆ ಜತೆ ಸೇರಿ ಕೆಲಸ ಮಾಡಿದ್ದರು. ಮಕ್ಕಳಲ್ಲಿನ ಉತ್ಸಾಹವನ್ನು ತಣಿಸಲು ಹಾರರ್ ಲೋಕದ ಪಾತ್ರಗಳನ್ನೂ ಸೃಷ್ಟಿಸಿದರು.

ಒಂದೋ ‘ಪಾಸಿಟಿವ್’ ಪಾತ್ರ ಇಲ್ಲವೆ ಸಂಪೂರ್ಣ ‘ನೆಗೆಟಿವ್’ ಪಾತ್ರಗಳನ್ನು ಸೃಷ್ಟಿಸುತ್ತಿದ್ದ ಇವರು ಈ ಮಧ್ಯದ ಪಾತ್ರಗಳ ಗೋಜಿಗೆ ಹೋಗುತ್ತಿರಲಿಲ್ಲ.

ಆರಂಭದಲ್ಲಿ ತಮ್ಮದೇ ಬರವಣಿಗೆ ಮತ್ತು ಸೃಷ್ಟಿಸಿದ ಪಾತ್ರದಿಂದ ತಾವೇ ಒಮ್ಮೆ ಗಾಬರಿಗೊಂಡು ಆ ಲೇಖನಕ್ಕೆ ಮೂಲಹೆಸರನ್ನು (ಸ್ಟಾನ್ ಲೀ ಮಾರ್ಟಿನ್ ಲಿಬೆ) ನೀಡದೆ ಸ್ಟಾನ್ ಲೀ ಎಂದಷ್ಟೇ ಬರೆದುಕೊಂಡರು.

ಕಾಲಕ್ರಮೇಣ ಇದೇ ಹೆಸರು ಖ್ಯಾತವಾಗಿದ್ದರಿಂದ ಅದನ್ನೇ ಅಧಿಕೃತವಾಗಿಸಿ ಅದಕ್ಕೆ ಕಾನೂನಿನ ಮಾನ್ಯತೆಯನ್ನೂ ಪಡೆದುಕೊಂಡರು.

40ನೇ ವಯಸ್ಸಿನಲ್ಲಿ ‘ಕಾಮಿಕ್ಸ್ ಲೋಕಕ್ಕೆ ನಾನು ತುಂಬ ವೃದ್ಧನಾಗಿಬಿಟ್ಟೆ’ ಎಂಬ ಭಾವ ಲೀ ಅವರಲ್ಲಿ ಆವರಿಸಿಕೊಂಡಾಗ, ಅವರಲ್ಲಿ ಸ್ಪೂರ್ತಿ ತುಂಬಿ ಕಾಲದ ಅಗತ್ಯ ಮತ್ತು ನೀವು ಪ್ರೀತಿಸುವ ಪಾತ್ರಗಳನ್ನು ಸೃಷ್ಟಿಸಿ ಎಂದು ಹುರಿದುಂಬಿಸಿದವರು ಬ್ರಿಟಿಷ್ ಮೂಲದ ಪತ್ನಿ ಜೋನ್. (ಈ ದಂಪತಿಗೆ ಇಬ್ಬರು ಮಕ್ಕಳು) 2001ರಲ್ಲಿ POW! Entertainment ಕಂಪನಿಯನ್ನು ಕಟ್ಟಿ, ಕೆಲ ಧಾರಾವಾಹಿ, ಕಿರುಚಿತ್ರಗಳನ್ನು ನಿರ್ವಿುಸಿದರು.

ಗ್ರಾಫಿಕ್ ನಾವೆಲ್​ಗಾಗಿಯೂ ಅವರು ಕೆಲಸ ಮಾಡಿದರು. 2012ರಲ್ಲಿ ‘ರೋಮಿಯೋ-ಜೂಲಿಯೆಟ್’ನ ಸಹಲೇಖಕರಾಗಿದ್ದರು. ಈ ಕೃತಿಯನ್ನು ‘ನ್ಯೂಯಾರ್ಕ್ ಟೈಮ್್ಸ’ ಪತ್ರಿಕೆ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ನಮೂದಿಸಿತ್ತು.

2016ರಲ್ಲಿ ಅವರು ‘ಕಾಮಿಕ್ ಕಾನ್’ ಶೃಂಗದಲ್ಲಿ ನೀಡಿದ ಉಪನ್ಯಾಸ ‘ಗಾಡ್ ವೋಕ್’ ಭಾರಿ ಪ್ರಸಿದ್ಧಿ ಪಡೆಯಿತಲ್ಲದೆ, 2017ರಲ್ಲಿ ‘ಇಂಡಿಪೆಂಡೆಂಟ್ ಪಬ್ಲಿಷರ್ ಬುಕ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

2017ರ ಬಳಿಕ ವಯೋಸಹಜ ಸಮಸ್ಯೆಯಿಂದ ಅವರ ದೃಷ್ಟಿ ಮಂದವಾಯಿತು. ಆದರೂ, ದಿನನಿತ್ಯದ ಚಟುವಟಿಕೆಯಲ್ಲಿ ಲವಲವಿಕೆಯಿಂದಲೇ ತೊಡಗುತ್ತಿದ್ದರು.

2016ರಲ್ಲಿ ಲೀ ‘ರೇಡಿಯೋ ಟೈಮ್್ಸ’ ಜತೆಗೆ ಮಾತನಾಡುತ್ತ ಸ್ವಾರಸ್ಯಕರ ಸಂಗತಿ ಹಂಚಿಕೊಂಡಿದ್ದರು- ‘ನಾನು ಯಾವುದಾದರೂ ಕಾಮಿಕ್ಸ್ ಬುಕ್ ಸಮ್ಮೇಳನಕ್ಕೆ ಹೋದಾಗ ಓದುಗರು ಕೇಳುವ ಪ್ರಶ್ನೆ ‘ಎಲ್ಲರ ದೊಡ್ಡ ಶಕ್ತಿ ಯಾವುದು?’ ಎಂದು.

ಮತ್ತು ನಾನು ಯಾವಾಗಲು ಹೇಳುತ್ತ ಬಂದಿದ್ದೇನೆ, ಅದೃಷ್ಟ ದೊಡ್ಡ ಶಕ್ತಿ ಎಂದು. ಏಕೆಂದರೆ, ನಿಮ್ಮ ಬಳಿ ಒಳ್ಳೆಯ ಅದೃಷ್ಟ ಇದ್ದರೆ ಎಲ್ಲವೂ ನೀವು ಅಂದುಕೊಂಡಂತೆ ನಡೆಯುತ್ತದೆ’.

ಇದೇ ಸಂದೇಶಗಳನ್ನು ಪಾತ್ರಗಳಲ್ಲೂ ತುಂಬಿ ಕಾಮಿಕ್ಸ್ ಲೋಕವನ್ನು ದಶಕಗಳ ಕಾಲ ಆಳಿದ ಸ್ಟಾನ್ ಲೀ ‘ಒಳ್ಳೆಯ ಅದೃಷ್ಟ’ದೊಂದಿಗೆ ಮತ್ತೆ ಹುಟ್ಟಿಬರಲಿ, ಅವರ ಕಲ್ಪನಾಪ್ರಪಂಚ ನಮ್ಮನ್ನೆಲ್ಲ ಬೆರಗಾಗಿಸಲಿ.

ಕೃಪೆ: ರವೀಂದ್ರ ದೇಶ್ ಮುಖ್ (ಸಾಮಾಜಿಕ ಜಾಲತಾಣ)

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ (Dandupalya gang) ಚಿಕ್ಕ ಹನುಮಂತಪ್ಪ (ಅಲಿಯಾಸ್ ಕೆ.ಕೃಷ್ಣಪ್ಪ) ಎಂಬಾತನನ್ನು ಆಂಧ್ರಪ್ರದೇಶದ ಮದನಪಳ್ಳೆ ಗ್ರಾಮದಲ್ಲಿ ಬಂಧಿಸಲಾಗಿದೆ.

[ccc_my_favorite_select_button post_id="118778"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!