ಬೆಂಗಳೂರು: ಭಾರತ-ಪಾಕಿಸ್ತಾನ ಗಡಿ ಯಲ್ಲಿ ಉದ್ವಿಗ್ನ ವಾತಾವರಣ ತೀವ್ರ ಗೊಂಡಿದ್ದು, ಪೆಹಲಾಮ್ನಲ್ಲಿ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂದೂರ (Operation Sindoor) ಮೂಲಕ ತಕ್ಕ ಉತ್ತರ ನೀಡಲಾಗಿದೆ.
ಈ ಬೆಳವಣಿಗೆಯಿಂದ ಎರಡು ದೇಶಗಳ ನಡುವೆ ಯುದ್ದದ ಭೀತಿ ಎದುರಾಗಿದೆ. ಈ ಸಂದರ್ಭದಲ್ಲಿ ಕರ್ನಾಟ ಕದಲ್ಲೂ ರಾಜ್ಯ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ಕಾರ್ಯನಿರ್ವ ಹಿಸುತ್ತಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ಕಟ್ಟುನಿಟ್ಟಿನ ಭದ್ರತಾ ಕ್ರಮಗಳು: ನಗರದ ಮಾಸಿಕ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಆಯುಕ್ತ ದಯಾನಂದ್, ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು.
ಗಡಿಯಲ್ಲಿ ಅಗತ್ಯ ಸಾಮಗ್ರಿಗಳ ಶೇಖರಣೆ ನಡೆಯುತ್ತಿದೆ ಎಂಬ ವರದಿಗಳು ಬಂದಿವೆ. ಈ ಕಾರಣಕ್ಕೆ ಎಲ್ಲೆಡೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜನರಲ್ಲಿ ಆತಂಕ ಮೂಡ ದಂತೆ ಪೊಲೀಸರು ಸಾರ್ವ ಜನಿಕರಿಗೆ ಸರಿಯಾದ ಮಾಹಿತಿ ನೀಡಬೇಕು ಮತ್ತು ಸುಳ್ಳು ಸುದ್ದಿ ಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸ ಲಾಗಿದ್ದು, ಬೆಂಗಳೂರಿನಲ್ಲಿ ಡಿಸಿಪಿಗಳು ಮತ್ತು ಎಸಿಪಿಗಳು ನಿಗಾ ವಹಿಸಬೇಕು.
ಕೇಂದ್ರ ಮತ್ತು ರಾಜ್ಯ ಸರಕಾರದ ಸೂಚನೆ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನರಿಗೆ ಮಾಕ್ ಡ್ರಿಲ್ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಪೊಲೀಸರು ಮಾಡಬೇಕು ಎಂದು ದಯಾನಂದ್ ತಿಳಿಸಿದರು.
ಮಾಧ್ಯಮಗಳಿಗೂ ಸಲಹೆ
ಇನ್ನೂ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ಭವಿಸಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳು ಮತ್ತು ಇತರ ಮಾಧ್ಯಮಗಳ ಮೂಲಕ ನಕಲಿ ಸುದ್ದಿ ಹಾಗೂ ತಪ್ಪು ಮಾಹಿತಿಗಳ ಪ್ರಸರಣದ ಸಾಧ್ಯತೆಯು ಹೆಚ್ಚಾಗಿರುತ್ತದೆ.
ಇಂತಹ ಮಾಹಿತಿಗಳು ಸಾರ್ವಜನಿಕರಲ್ಲಿ ವಿನಾ ಕಾರಣ ಆತಂಕ ಮಾಡಬಹುದು ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಶಾಂತಿಗೆ ಗಂಭೀರ ಹಾನಿ ಮಾಡಬಹುದು.
ಎಲ್ಲಾ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಸಂಪಾದಕರು ಮತ್ತು ವಿಷಯ ಸೃಷ್ಟಿಕರ್ತರು ಪರಿಶೀಲನೆ ಇಲ್ಲದ ವರದಿಗಳು, ಚಿತ್ರಗಳು ಅಥವಾ ವಿಡಿಯೋಗಳನ್ನು ಬಳಸಿ ವರದಿ ಮಾಡುವಾಗ ಅತ್ಯಂತ ಜವಾಬ್ದಾರಿಯುತ ಮತ್ತು ಎಚ್ಚರಿಕೆಯಿಂದ ಕೆಳಕಂಡ ಮಾರ್ಗಸೂಚಿಗಳನ್ನು ಪಾಲಿಸುವಂತೆ ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
1) ಸಂಪೂರ್ಣವಾಗಿ ಪರಿಶೀಲಿಸಿ: ಯಾವುದೇ ಮಾಹಿತಿ ನಂಬಲಾರ್ಹವಲ್ಲದ ಮೂಲಗಳಿಂದ ಮಾಹಿತಿ ಬಂದಿದ್ದರೆ ಅಥವಾ ದೃಢಪಡಿಸದಿದ್ದರೆ ಅದನ್ನು ಪ್ರಕಟಿಸಬೇಡಿ.
2) ನಂಬಲಾರ್ಹ ತತ್ವಪಾಲನಾ ಸಾಧನಗಳನ್ನು ಉಪಯೋಗಿಸಿ: (Official Fact Check Tools): PIB ಪ್ಯಾಕ್ಟ್ ಚೆಕ್ , Alt News, BOOM, Factly, Snopes & AFP Fact Check ಮುಂತಾದ ಅಧಿಕೃತ ತಾಣಗಳನ್ನು ಪರಿಶೀಲನೆಗಾಗಿ ಉಪಯೋಗಿಸಿ. ಮಾಹಿತಿಗಳ ನೈಜತೆಯನ್ನು ಖಚಿತ ಪಡಿಸಿಕೊಳ್ಳಿ.
3) ಸಂವೇದನಾಶೀಲ ಮತ್ತು ಉಪ್ಪೇಕ್ಷಣೀಯ ಅಥವಾ ಭಯ ಹುಟ್ಟಿಸುವ ಶೈಲಿ ತಪ್ಪಿಸಿ: ಪೋಸ್ಟ್ ಅಥವಾ ವರದಿಗಳನ್ನು ನಯಗೊಳಿಸಿ ಅಥವಾ ಉತ್ಕೃಷ್ಟಗೊಳಿಸಿ, ಭಯ ಉಂಟು ಮಾಡಬೇಡಿ.
4) ತಪ್ಪು ಮಾಹಿತಿ ನೀಡಿದ್ದರೆ ತಕ್ಷಣ ಸರಿಪಡಿಸಿ: ಅಜಾಗರೂಕತೆಯಿಂದ ತಪ್ಪು ಮಾಹಿತಿ ಹಂಚಲಾಗಿದ್ದರೆ, ಕೂಡಲೇ ತಪ್ಪು ಸರಿಪಡಿಸಿ ಮತ್ತು ತಪ್ಪಿನ ಬಗ್ಗೆ ಸ್ಪಷ್ಟನೆ ನೀಡಲು ಕ್ರಮ ಕೈಗೊಳ್ಳಿ.
5) ಕಾನೂನು ಹಾಗೂ ನೈತಿಕ ಮೌಲ್ಯಗಳನ್ನು ಪಾಲಿಸಿ: ಸಮುದಾಯ ಅಥವಾ ಅಂತಾರಾಷ್ಟ್ರೀಯ ವಿಷಯಗಳ ವರದಿಯಲ್ಲಿ ಪತ್ರಿಕೋದ್ಯಮದ ಮೌಲ್ಯ, ನೈತಿಕತೆ ಮತ್ತು ನಿಷ್ಪಕ್ಷಪಾತ ಮಾರ್ಗವನ್ನು ಕಾಯ್ದುಕೊಳ್ಳಿ.
ಈ ಸಂದರ್ಭದಲ್ಲಿ ಮಾಧ್ಯಮಗಳು ನಂಬಿಕೆಗೆ ಮತ್ತು ಜವಾಬ್ದಾರಿಗೆ ನಿಲುಕುವ ಆಧಾರಸ್ಥಂಬಗಳಾಗಬೇಕು. ದೃಢಪಡಿಸದ ಮಾಹಿತಿಗಳು ರಾಷ್ಟ್ರದ ಶಾಂತಿ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಾಗದಂತೆ ನಾವು ಎಚ್ಚರಿಕೆಯಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.