ಮಣ್ಣಿನ ಭದ್ರತಾ ಕಾಯಿದೆಯನ್ನು ಅಂಗೀಕರಿಸಿದ ಜಾಗತಿಕ ಸಂರಕ್ಷಣಾ ಸಂಸ್ಥೆ IUCN..!

Global conservation organization IUCN adopts Soil Security Act..!

ಚಿಕ್ಕಬಳ್ಳಾಪುರ: ಜಾಗತಿಕ ಸಂರಕ್ಷಣಾ ಸಂಸ್ಥೆಯಾದ ಅಂತರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN) ಮಹತ್ವದ ಐತಿಹಾಸಿಕ ನಿರ್ಣಯದಲ್ಲಿ ಮೋಷನ್ 007 – ಮಣ್ಣಿನ ಭದ್ರತಾ ಕಾಯಿದೆಯನ್ನು (Soil Security Law) ಅಂಗೀಕರಿಸಿದ್ದು, ವಿಶ್ವದ ಮೊದಲ ಮಾದರಿ ಮಣ್ಣಿನ ರಕ್ಷಣಾ ಕಾಯಿದೆಯೆನಿಸಿಕೊಂಡಿದೆ.

ಈ ಪ್ರಸ್ತಾವನೆಯನ್ನು ಮಣ್ಣು ಉಳಿಸಿ (ಈಶ ಔಟ್‌ರೀಚ್) ಅಭಿಯಾನ ಮತ್ತು ಪೇಸ್ ವಿಶ್ವವಿದ್ಯಾಲಯದ ಎಲಿಸಬೆತ್ ಹೌಬ್ ಲಾ ಶಾಲೆಯ ಗ್ಲೋಬಲ್ ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ಲೀಗಲ್ ಸ್ಟಡೀಸ್ (ಅಮೇರಿಕಾ) ಸಹ ಪ್ರಾಯೋಜಿಸಿದ್ದು, ಆಸ್ಟ್ರೇಲಿಯಾದ ಔರೋರಾ ಸಾಯಿಲ್ ಸೆಕ್ಯುರಿಟಿ ಥಿಂಕ್ ಟ್ಯಾಂಕ್ ಸಹ ಪ್ರಮುಖ ಪಾತ್ರವಹಿಸಿದೆ.

007 ನಿರ್ಣಯವು ಮಣ್ಣಿಗೆ ದೊರೆತ ಐತಿಹಾಸಿಕ ಜಯವಾಗಿದ್ದು, ವಿಶ್ವದಾದ್ಯಂತ ಜನರು ಮಣ್ಣಿನ ಪರವಾಗಿ ಶ್ರಮ, ಪ್ರೀತಿ ಮತ್ತು ತ್ಯಾಗದಿಂದ ಮಾಡಿದ ಹೋರಾಟದ ಫಲ. ಮೊಟ್ಟ ಮೊದಲ ಬಾರಿಗೆ ಜಾಗತಿಕ ಸಂರಕ್ಷಣಾ ಸಂಸ್ಥೆಯೊಂದು ಮಣ್ಣಿನ ಭದ್ರತೆಯನ್ನು ಆಹಾರ, ನೀರು, ಜೀವವೈವಿಧ್ಯತೆ ಮತ್ತು ಹವಾಮಾನ ಸ್ಥೈರ್ಯತೆಗೆ ಆಧಾರವೆಂದು ಅಧಿಕೃತವಾಗಿ ಗುರುತಿಸಿದೆ.

ಇದರಿಂದ ವಿಶ್ವದಾದ್ಯಂತ ಇನ್ನಷ್ಟು ಪ್ರಬಲ ಕಾನೂನಾತ್ಮಕ ಮಣ್ಣು ಸಂರಕ್ಷಣಾ ವಿಧಾನಗಳು ರೂಪುಗೊಳ್ಳಲಿವೆ. ಎಂದು ಮಣ್ಣು ಉಳಿಸಿ ಅಭಿಯಾನದ ಮುಖ್ಯ ವಿಜ್ಞಾನ ಮತ್ತು ತಾಂತ್ರಿಕ ಅಧಿಕಾರಿಗಳಾದ ಪ್ರವೀನಾ ಶ್ರೀಧರ್ ಅವರು ಹೇಳಿದರು.

ಈ ಐತಿಹಾಸಿಕ ನಿರ್ಣಯದ ಹಿನ್ನೆಲೆಯಲ್ಲಿ ಸದ್ಗುರುಗಳು Xನಲ್ಲಿ “ಇದು ಮಣ್ಣಿನ ಸಮಗ್ರ ಮತ್ತು ಬದ್ಧತೆಯಿಂದ ಕೂಡಿದ ರಕ್ಷಣೆಯ ಅಗತ್ಯತೆಯನ್ನು ಜಾಗತಿಕವಾಗಿ ಗುರುತಿಸುವ ಮಹತ್ವದ ಹೆಜ್ಜೆ. ಈಗ ನಿಜವಾದ ಕೆಲಸ ಆರಂಭವಾಗಲಿದೆ — ಮಣ್ಣಿಗಾಗಿ, ರೈತರಿಗಾಗಿ, ಎಲ್ಲಾ ಜೀವಿಗಳಿಗಾಗಿ ಮತ್ತು ನಮ್ಮ ಭವಿಷ್ಯಕ್ಕಾಗಿ ಎಲ್ಲರೂ ಕೂಡಿಬರೋಣ.”

ಈಶ ಫೌಂಡೇಶನ್ ನ ಪರವಾಗಿ IUCN ಸದಸ್ಯತ್ವಕ್ಕೆ, ಪ್ರಸ್ತಾಪಕರಿಗೆ, ಮಣ್ಣು ಉಳಿಸಿ ಅಭಿಯಾನವನ್ನೊಳಗೊಂಡಂತೆ ಸಹ ಪ್ರಾಯೋಜಕರಿಗೆ ಹಾಗೂ ಅಬುಧಾಬಿಯ ವಿಶ್ವ ಸಂರಕ್ಷಣಾ ಮಹಾಸಭೆಯಲ್ಲಿ ಶ್ರಮಿಸಿದ ಎಲ್ಲ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿದರು.

007ನಿರ್ಣಯದ ಅಂಗೀಕಾರದೊಂದಿಗೆ IUCN ಈಗ ಮಣ್ಣಿನ ಭದ್ರತೆಯ ಕುರಿತು ಅಂತರಾಷ್ಟ್ರೀಯ ಒಪ್ಪಂದ ಅಥವಾ ಕಾನೂನು ಸಾಧನ ರೂಪಿಸಲು ಕಾರ್ಯಸಮಿತಿಯನ್ನು ರಚಿಸಲಿದ್ದು, ಅದರಿಂದ ಮಾದರಿ ಮಣ್ಣಿನ ಭದ್ರತಾ ಕಾಯಿದೆ ರೂಪಗೊಳ್ಳಲಿದೆ. ಇದನ್ನು 90ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಚೌಕಟ್ಟಿನಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು.

ಮಾದರಿ ಮಣ್ಣಿನ ಭದ್ರತಾ ಕಾಯಿದೆ ರಾಷ್ಟ್ರ ಮಟ್ಟದಲ್ಲಿ ಮಣ್ಣಿನ ಸಂರಕ್ಷಣಾ ಕ್ರಮಗಳನ್ನು ಕೃಷಿ, ಹವಾಮಾನ ಮತ್ತು ಪರಿಸರ ನೀತಿಗಳಲ್ಲಿ ಅಳವಡಿಸಿಕೊಳ್ಳಲು ಮಾರ್ಗದರ್ಶಿಯಾಗಲಿದೆ. ರೈತರ ಜೀವನೋಪಾಯವನ್ನು ರಕ್ಷಿಸುವುದರ ಜೊತೆಗೆ ಪರಿಸರದ ಮೂಲಾಧಾರವಾದ ಮಣ್ಣಿನ ಜೀವಶಕ್ತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಸುಭದ್ರಗೊಳಿಸುವುದು ಇದರ ಉದ್ದೇಶವಾಗಿದೆ.

2025ರ ಜನವರಿಯಿಂದಲೇ ಮಣ್ಣು ಉಳಿಸಿ ಅಭಿಯಾನ ಮತ್ತು ಅದರ ಸಹಭಾಗಿಗಳು ಫ್ರಾನ್ಸ್, ಜರ್ಮನಿ, ಜಪಾನ್, ಮತ್ತು ಕೆನಡಾ ಸೇರಿದಂತೆ ಅನೇಕ ಸರ್ಕಾರಗಳ ಪ್ರತಿನಿಧಿಗಳೊಂದಿಗೆ ಅನೇಕ ಚರ್ಚೆ ಮತ್ತು ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡು, ಸಮಗ್ರ ಕಾನೂನಾತ್ಮಕ ಮಣ್ಣು ಸಂರಕ್ಷಣೆಯ ಅಗತ್ಯತೆ ಕುರಿತು ಜಾಗತಿಕ ಜಾಗೃತಿ ಅಭಿಯಾನಗಳನ್ನು ಆಯೋಜಿಸಿದ್ದರು.

ಅಬುಧಾಬಿಯಲ್ಲಿ ನಡೆದ ಇತ್ತೀಚಿನ IUCN ಮಹಾಸಭೆಯಲ್ಲಿ, ಮಣ್ಣು ಉಳಿಸಿ ಅಭಿಯಾನದ ಸ್ವಯಂಸೇವಕರು ಮತ್ತು ಸಹಭಾಗಿಗಳು ಮಣ್ಣಿನ ಭದ್ರತಾ ಕಾಯ್ದೆಯ ಪ್ರಸ್ತಾವನೆಗಾಗಿ ಅವಿಶ್ರಾಂತ ಅಭಿಯಾನ ನಡೆಸಿದರು. 87.1% ಸರ್ಕಾರಿ ಸದಸ್ಯರು, 95.45% ಎನ್‌ಜಿಒ ಮತ್ತು ಆದಿವಾಸಿ ಗುಂಪುಗಳು ಇದರ ಪರವಾಗಿ ಮತಹಾಕಿದ ಪರಿಣಾಮವಾಗಿ IUCN ಸದಸ್ಯರು ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಿದರು.

ರಾಜಕೀಯ

ಯಡಿಯೂರಪ್ಪರ 5 ದಶಕಗಳ ರಾಜಕೀಯ ಪಯಣ: 26ಕ್ಕೆ ಅಭಿಮಾನೋತ್ಸವದ ಭೂಮಿಪೂಜೆ

ಯಡಿಯೂರಪ್ಪರ 5 ದಶಕಗಳ ರಾಜಕೀಯ ಪಯಣ: 26ಕ್ಕೆ ಅಭಿಮಾನೋತ್ಸವದ ಭೂಮಿಪೂಜೆ

ರಾಜ್ಯ ಬಿಜೆಪಿಯ ಹಿರಿಯ ಮುತ್ಸದ್ದಿ ಬಿ.ಎಸ್. ಯಡಿಯೂರಪ್ಪ (B.S. Yediyurappa) ಅವರ ಅಭಿಮಾನೋತ್ಸವ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಪ್ರಿಲ್ 26ರಂದು ಬೆಳಿಗ್ಗೆ 10 ಗಂಟೆಗೆ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಕಾರ್ಯಕ್ರಮದ ಸ್ಥಳಗಳಲ್ಲಿ ಪೆಂಡಾಲ್, ಸ್ಟೇಜ್ ಮುಂತಾದ

[ccc_my_favorite_select_button post_id="121304"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಸುಳ್ಳು ವಿಡಿಯೋ ಪೋಸ್ಟ್.. ನಟ ದುನಿಯಾ ವಿಜಯ್‌, ಭಾಸ್ಕರ್ ರಾವ್ಗೆ ಸಂಕಷ್ಟ..!

ಝಾಂಬಿ ಡ್ರಗ್ಸ್ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯ ವಿಡಿಯೊ ಶೇರ್ ಮಾಡಿದ್ದ ನಟ ದುನಿಯಾ ವಿಜಯ್‌ಗೆ (Duniya Vijay) ಸಂಕಷ್ಟ ಎದುರಾಗಿದೆ.

[ccc_my_favorite_select_button post_id="121217"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!