
ದೊಡ್ಡಬಳ್ಳಾಪುರ: ತಾಲೂಕಿನ ಸರ್ಕಾರಿ ಕಟ್ಟಡದ ಮೇಲೆ ಕ್ರಿಶ್ಚಿಯನ್ ಮಿಷನರಿ ಕಣ್ಣು ಬಿದ್ದಿದ್ದು, ನಗರದ ಡಾ.ರಾಜ್ ಕುಮಾರ್ ವೃತ್ತದ ಬಳಿ ನಗರದ ಪ್ರಾಥಮಿಕ ಅರೊಗ್ಯ ಕೇಂದ್ರ ವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಕಟ್ಟಡವನ್ನು, ಸೇವೆ ಹೆಸರಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಗೆ ಹಸ್ತಾಂತರಿಸುವ ಷಡ್ಯಂತ್ರ ನಡೆದಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್ ಆರೋಪಿಸಿದ್ದಾರೆ.

ಈ ಕುರಿತು ಹರಿತಲೇಖನಿಗೆ ನೀಡಿರುವ ವಿಶೇಷ ಮಾಹಿತಿಯಲ್ಲಿ, ನಗರದ ಹೃದಯ ಭಾಗದಲ್ಲಿರುವ ಈ ಕಟ್ಟಡ ಹಲವು ದಶಕಗಳಿಂದ ನಗರದಲ್ಲಿ ತಾಯಿ ಮಗು ಆಸ್ಪತ್ರೆ ಸೇವೆ ಸಲ್ಲಿಸುತ್ತಿದ್ದು, ಟಿಬಿ ವೃತ್ತದ ಬಳಿ ನೂತನ ಕಟ್ಟಡ ನಿರ್ಮಾಣವಾದ ಆಸ್ಪತ್ರೆ ಸ್ಥಳಾಂತರಗೊಂಡ ಕಾರಣ ಬಳಿಕ ಖಾಲಿ ಉಳಿದಿತ್ತು. ಈ ವೇಳೆ ಚಿಕಿತ್ಸೆಗೆ ನಗರವಾಸಿಗಳು ನೂತನ ಆಸ್ಪತ್ರೆಗೆ ತೆರಳಲು ಉಂಟಾಗುವ ಅನಾನುಕೂಲವನ್ನು ತಪ್ಪಿಸಲು ಶಾಸಕ ಟಿ.ವೆಂಕಟರಮಣಯ್ಯ ನವರು ಜಿಲ್ಲಾ ಆರೋಗ್ಯ ಇಲಾಖೆಯ ಮೇಲೆ ಒತ್ತಡ ಹೇರಿ ನಗರವಾಸಿಗಳಿಗೆ ಅನುಕೂಲವಾಗುವಂತೆ ಈ ಖಾಲಿ ಕಟ್ಟದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿಸಿದ ಪರಿಣಾಮ ಇದರಲ್ಲಿಯೇ ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿದ್ದು ತಾಲೂಕಿನ ಜನತೆಗೆ ಸೇವೆ ನೀಡುತ್ತಿದೆ.
ಆದರೆ ಕೆಲ ಪ್ರಭಾವಿಗಳು ಷಡ್ಯಂತ್ರ ರೂಪಿಸಿದ್ದು, ಸೇವೆಯ ಹೆಸರಲ್ಲಿ ಕ್ರಿಶ್ಚಿಯನ್ ಮಿಷಿನರಿಗಳಿಗೆ ಈ ಕಟ್ಟಡ ಬಿಟ್ಟು ಕೊಡುವ ಹುನ್ನಾರವನ್ನು ಉನ್ನತ ಮಟ್ಟದ ಅಧಿಕಾರಿಗಳ ಮೂಲಕ ನಡೆಸುತ್ತಿದ್ದಾರೆ. ಈಗಾಗಲೇ ಕ್ರಿಶ್ಚಿಯನ್ ಮಿಷನರಿಗಳು ಸೇವೆಯ ಹೆಸರಲ್ಲಿ ಮತಾಂತರ ಮಾಡುತ್ತಿರುವ ಆರೋಪಗಳು ವ್ಯಾಪಕವಾಗಿವೆ, ಅದರ ಬೆನ್ನಲ್ಲೆ ಈ ರೀತಿಯ ಬೆಳವಣಿಗೆ ದೊಡ್ಡಬಳ್ಳಾಪುರ ತಾಲೂಕಿಗೆ ಆತಂಕಕಾರಿಯಾಗಲಿದೆ ಎಂದು ಆರೋಪಿಸಿದರು.
ಒಂದು ವೇಳೆ ಉತ್ತಮ ಸೇವೆ ದೊರಕಿಸುವ ಉದ್ದೇಶವೆ ಇದ್ದಲ್ಲಿ ಸರ್ಕಾರದ ಅರೆಸಂಸ್ಥೆಗಳಾದ ಜಯದೇವ ಆಸ್ಪತ್ರೆ, ಕಿದ್ವಾಯ್ ಆಸ್ಪತ್ರೆ ತೆರೆಯಲು ಬಿಟ್ಟುಕೊಡಲಿ, ಆದರೆ ಯಾವುದೇ ಕಾರಣಕ್ಕು ಕ್ರಿಶ್ಚಿಯನ್ ಮಿಷಿನರಿಗಳ ಸಂಸ್ಥೆಗೆ ಸರ್ಕಾರಿ ಕಟ್ಟಡವನ್ನು ಬಿಟ್ಟುಕೊಡುವುದನ್ನು ತಾಲೂಕಿನ ಜನತೆ ಸಹಿಸುವುದಿಲ್ಲ.
ಆದಾಗ್ಯೂ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರಿ ಕಟ್ಟಡ ಬಿಟ್ಟುಕೊಡಲು ಮುಂದಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

