ಸರ್ಕಾರದ ಅನುಮತಿಗಾಗಿ ಕಾದಿರುವ ಗಣೇಶ ಮೂರ್ತಿ ತಯಾರಕರು: ಡಿ.ಶ್ರೀಕಾಂತ

ದೊಡ್ಡಬಳ್ಳಾಪುರ: ಪ್ರತಿವರ್ಷ ಗಣೇಶ ಚತುರ್ಥಿ ಒಂದು ತಿಂಗಳಿರುವಂತೆಯೇ ಗಣೇಶ ಮೂರ್ತಿಗಳ  ತಯಾರಿಕೆ ಕಾರ್ ಬಿರುಸಾಗಿ ಸಾಗುವುದು ಸಾಮಾನ್ಯ. ಆದರೆ ಬಾರಿ ಕೊವಿಡ್19 ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ವಿಸಲಾಗುತ್ತಿರುವ ಲಾಕ್ಡೌನ್ ಹಾಗೂ ಹಬ್ಬ ಉತ್ಸವಗಳಿಗೆ ಬ್ರೇಕ್ ಬಿದ್ದಿರುವುದರಿಂದ, ಸರ್ಕಾರ ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ವಿಗ್ರಹ ತಯಾರಕರು ಎದುರು ನೋಡುತ್ತಿದ್ದಾರೆ.

ಪಾರಂಪರಿಕ ಮಣ್ಣಿನ ಗಣಪ:

ತಾಲೂಕಿನ ಕಂಟನಕುಂಟೆ, ಗುಂಡುಮಗೆರೆ, ಲಘುಮೇನಹಳ್ಳಿಗಳಲ್ಲಿ ಪಾರಂಪರಿಕ ಕುಂಬಾರ ವೃತ್ತಿ ಮಾಡುವ ಮಂದಿ ಗಣೇಶ ವಿಗ್ರಹಗಳ ತಯಾರಿಕೆ ಮಾಡುತ್ತಾರೆ. ಹಿಡಿಯಷ್ಟು ಚಿಕ್ಕ ಗಣಪನಿಂದ ಹಿಡಿದು 5 ಅಡಿ ಎತ್ತರದ ಗಣೇಶ ವಿಗ್ರಹಗಳು ಇಲ್ಲಿ ತಯಾರಾಗುತ್ತವೆ. ನೈಸರ್ಗಿಕ ಬಣ್ಣಗಳಿಂದ ಮೂರ್ತಿಗಳು ಹಾಗೂ ಬಣ್ಣರಹಿತ ಗಣಪನ ಮೂರ್ತಿಗಳೂ ತಯಾರಾಗುತ್ತವೆಗಣೇಶ ಹಬ್ಬ ಒಂದು ತಿಂಗಳಿದ್ದಂತೆ ಸಗಟು ವ್ಯಾಪಾರಿಗಳು ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ಆರಂಭಿಸುತ್ತಾರೆ. ಗಣೇಶನ ವಿಗ್ರಹಗಳಿಗೆ ಮುಂಗಡ ನೀಡಿ, ಇವರಿಂದ ಮಾರಾಟಗಾರರು ಖರೀದಿಸುತ್ತಾರೆ. ಆದರೆ ಇನ್ನೂ ಯಾವುದೇ ವ್ಯಾಪಾರ ಆರಂಭವಾಗಿಲ್ಲ. ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡದಿರುವುದು ಬಹುತೇಕ ಖಚಿತ. ಇನ್ನು ಮನೆಗಳಲ್ಲಿ ಯಾವ ರೀತಿ ಹಬ್ಬ ಆಚರಿಸಬೇಕು ಎನ್ನುವ ಮಾರ್ಗಸೂಚಿ ಪ್ರಕಟವಾಗಿಲ್ಲ. ಹೀಗಾಗಿ ಗಣೇಶ ಮೂರ್ತಿಗಳನ್ನು ಎಷ್ಟು ತಯಾರು ಮಾಡುವುದು ಎನ್ನುವ ಗೊಂದಲದಲ್ಲಿದ್ದಾರೆ.

ಪ್ರತಿವರ್ಷ ಎಂದಿನಂತೆ ತಯಾರಿಸುವಷ್ಟು ಗಣೇಶ ಮೂರ್ತಿಗಳನ್ನು ತಯಾರಿಸಿದ್ದೇವೆ. ಆದರೆ 2.5 ಅಡಿಗಿಂತ ಎತ್ತರದ ಮೂರ್ತಿಗಳನ್ನು ಹೊಸದಾಗಿ ತಯಾರು ಮಾಡಿಲ್ಲ. ಹಿಂದಿನ ವರ್ಷದ ದೊಡ್ಡ ಮೂರ್ತಿಗಳು ಸಹ ಇವೆ. ಪ್ರತಿವರ್ಷ ಇಷ್ಟೊತ್ತಿಗಾಗಲೇ ಮಾರಾಟಗಾರರು ಮುಂಗಡ ನೀಡಿ ಖರೀದಿಸುತ್ತಿದ್ದರು. ಈಗ ಕರೊನಾ ಕಾರಣವೊಡ್ಡಿ ಯಾರೂ ಮುಂದೆ ಬಂದಿಲ್ಲ. ವರಲಕ್ಷ್ಮೀ ಹಬ್ಬದ ನಂತರ ಮುಂದೇನು ಎನ್ನುವ ನಿರ್ಧಾರ ಮಾಡುತ್ತೇವೆ. ಈಗಾಗಲೇ ಕುಂಬಾರ ಕಸುಬು ಸಂಕಷ್ಟದಲ್ಲಿದೆ. ಕರೊನಾ ಲಾಕ್ಡೌನ್ನಿಂದಾಗಿ, ಮಡಿಕೆ, ಕುಂಡಗಳು, ಸೇರಿದಂತೆ ಮಣ್ಣಿನ ಉತ್ಪನ್ನಗಳು ಸಹ ಮಾರಾಟವಾಗಿಲ್ಲ. ಸರ್ಕಾರ ಸಾರ್ವಜನಿಕ ಉತ್ಸವಕ್ಕೆ ಅನುಮತಿ ನೀಡದಿದ್ದರೂ ಕನಿಷ್ಟ ಮನೆಗಳಲ್ಲಿ ಗಣೇಶ ಮೂರ್ತಿ ಕೂಡಿಸಲು ಅನುಮತಿ ನೀಡಿ, ಮೂರ್ತಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ರಾಜ್ಯ ಕುಂಬಾರ ಸಂಘದಿಂದ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದ್ದು, ಈವೆರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕರಾದ ಕಂಟನಕುಂಟೆಯ ಶಿವಾನಂದ್.

 ಮನೆಗಳಲ್ಲಾದರೂ ಗಣಪತಿ ಮೂರ್ತಿ
ಇಡಲು ಅವಕಾಶ
ನೀಡಿ

ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ಇತರೆ ಸಮುದಾಯಗಳಿಗೆ ಬಿಡುಗಡೆ ಆದಂತೆ ಕುಂಬಾರ ಸಮುದಾಯಕ್ಕೆ ನೆರವು ಬಂದಿಲ್ಲ.ಗಣಪತಿ ಮೂರ್ತಿಗಳನ್ನು ಇಡಲು ಅವಕಾಶ ನೀಡದಿದ್ದರೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ.ಹೀಗಾಗಿ ಕನಿಷ್ಠ ಮನೆಗಳಲ್ಲಾದರೂ ಇಡಲು ಅವಕಾಶ ನೀಡಬೇಕು ವೆಂಕಟಾಚಲಯ್ಯ, ಕುಂಬಾರರ
ಸಂಘದ ಬೆಂಗಳೂರು
ಗ್ರಾಮಾಂತರ ಜಿಧ್ಯಕ್ಷ.

ರಾಜಕೀಯ

ದೊಡ್ಡಬಳ್ಳಾಪುರದಲ್ಲಿ ಬೃಹತ್ ಶ್ರೀರಾಮ ಶೋಭಾಯಾತ್ರೆ: ಪೂರ್ವಭಾವಿಯಾಗಿ ಅಬ್ಬರದ ಬೈಕ್ ರ‍್ಯಾಲಿ

ದೊಡ್ಡಬಳ್ಳಾಪುರದಲ್ಲಿ ಬೃಹತ್ ಶ್ರೀರಾಮ ಶೋಭಾಯಾತ್ರೆ: ಪೂರ್ವಭಾವಿಯಾಗಿ ಅಬ್ಬರದ ಬೈಕ್ ರ‍್ಯಾಲಿ

ವಿಶ್ವ ಹಿಂದೂ ಪರಿಷದ್ ಬಜರಂಗದ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಬೃಹತ್ ಶ್ರೀರಾಮ ಶೋಭಾಯಾತ್ರೆ (Sri Rama Sobhayatre) ಹಿನ್ನಲೆಯಲ್ಲಿ ಮೊದಲ ದಿನ ಪೂರ್ವಭಾವಿಯಾಗಿ ಬೈಕ್ ರ‍್ಯಾಲಿ ನಡೆಸುವ ಮೂಲಕ ಶೋಭಾ ಯಾತ್ರೆಯ

[ccc_my_favorite_select_button post_id="120514"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

ಐಪಿಎಲ್‌ (IPL) ಅತ್ಯಂತ ಜನಪ್ರಿಯ ಫ್ರಾಂಚೈಸಿ ಆರ್‌ಸಿಬಿಯನ್ನು (RCB) ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟೈಮ್ಸ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟವು ಖರೀದಿಸಿದೆ.

[ccc_my_favorite_select_button post_id="120461"]
47 ವಿವಿಧ ಪ್ರಕರಣ: 111 ಕೆಜಿ ಗಾಂಜಾ ನಾಶ..!

47 ವಿವಿಧ ಪ್ರಕರಣ: 111 ಕೆಜಿ ಗಾಂಜಾ ನಾಶ..!

ಅಬಕಾರಿ ಇಲಾಖಾ ವತಿಯಿಂದ ವಿವಿಧ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 111.355 ಕೆ.ಜಿ ಗಾಂಜಾವನ್ನು (Ganja) ಬೆಂಗಳೂರು ಗ್ರಾಮಾಂತರ ವಿಭಾಗದ ಅಬಕಾರಿ ಜಂಟಿ ಆಯುಕ್ತರ (ಜಾ&ತ) ಅಧ್ಯಕ್ಷತೆಯಲ್ಲಿ ಸೆಂಚುರಿ ರೀಫೈನರೀಸ್ ಪ್ರೈ.ಲಿಮಿಟೆಡ್, ಫ್ಲ್ಯಾಟ್ ನಂ.17A & B, KIADB ಇಂಡಸ್ಟ್ರಿಯಲ್ ಏರಿಯಾ, ಹೊಸಕೋಟೆ ಯಲ್ಲಿ

[ccc_my_favorite_select_button post_id="120501"]
ದೊಡ್ಡಬಳ್ಳಾಪುರ: ಅಪಘಾತ.. ತಮ್ಮನ ಮನೆಗೆ ಬರುತ್ತಿದ್ದ ಮಹಿಳೆ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ತಮ್ಮನ ಮನೆಗೆ ಬರುತ್ತಿದ್ದ ಮಹಿಳೆ ದುರ್ಮರಣ

ಶ್ರೀರಾಮನವಮಿ ಹಬ್ಬಕ್ಕೆಂದು ತಮ್ಮನ ಮನೆಗೆ ಬರುತ್ತಿದ್ದ ಮಹಿಳೆಗೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಹಮಾಮ್ ಗೇಟ್ ಬಳಿ ಗುರುವಾರ ರಾತ್ರಿ ನಡೆದಿದೆ.

[ccc_my_favorite_select_button post_id="120487"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!