ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಮಂಗಳವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 36 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು,ಸೋಂಕಿತರಿಬ್ಬರು ತೀವ್ರ ಉಸಿರಾಟದ ತೊಂದರೆ ಸಾವನಪ್ಪಿದ್ದಾರೆ.

ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಮಂಗಳವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 25 ಪುರುಷರು ಹಾಗೂ 11 ಮಹಿಳೆಯರು ಸೇರಿ 36 ಜನರಿಗೆ ಸೋಂಕು ದೃಡಪಟ್ಟಿದ್ದು,27 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ. ಸೋಂಕಿಗೆ ಒಳಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ವನ್ನಿಗರಪೇಟೆಯ 66 ವರ್ಷದ ಪುರುಷ ಹಾಗೂ ದೊಡ್ಡಬಳ್ಳಾಪುರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಮೇಶ್ವರ ಬಡಾವಣೆಯ 56ವರ್ಷದ ಪುರುಷ ಸಾವನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಉಳಿದಂತೆ ಬ್ರಾಹ್ಮಣರ ಬೀದಿ 4, ಶಾಂತಿ ನಗರದ ಏಳನೆ ರಸ್ತೆ, ಕುಚ್ಚಪ್ಪನಪೇಟೆ 3, ತಾಲೂಕು ಕಚೇರಿ ರಸ್ತೆ, ದರ್ಗಾಜೋಗಹಳ್ಳಿಯಲ್ಲಿ ತಲಾ 2, ಕರೇನಹಳ್ಳಿ, ಮುತ್ತೂರಿನ ಏಳನೇ ರಸ್ತೆ, ಮುತ್ಯಾಲಮ್ಮ ದೇವಸ್ಥಾನದ ರಸ್ತೆ, ಚಿಕ್ಕತುಮಕೂರು, ಎಳ್ಳುಪುರ, ಸಂಜಯನಗರ, ಶಾಂತಿನಗರ, ಗಂಗಾಧರಪುರ, ರೋಜಿಪುರ, ಇಸ್ಲಾಂಪುರ, ಮುತ್ತೂರು, ರೈಲ್ವೆ ಸ್ಟೇಷನ್, ಚೈತನ್ಯನಗರ, ಖಾಸ್ ಬಾಗಿಲು, ಕೊಂಗಾಡಿಯಪ್ಪ ಪ್ರೌಢಶಾಲೆ ಹಿಂಭಾಗ, ಹರ್ಷ ಆಸ್ಪತ್ರೆ, ದೊಡ್ಡಬಳ್ಳಾಪುರ ನಗರ, ಏಕಾಶಿಪುರ, ಕತ್ತಿಹೊಸಹಳ್ಳಿ, ವಟ್ಟಪ್ಪನಪಾಳ್ಯ, ದೇವರಾಜನಗರ ಹಾಗೂ ವೀರಭದ್ರನ ಪಾಳ್ಯದಲ್ಲಿ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1430 ಮಂದಿಗೆ ಸೋಂಕು ತಗುಲಿದ್ದು, 921 ಮಂದಿ ಗುಣಮುಖರಾಗಿದ್ದರೆ 48 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 405 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
