ದೊಡ್ಡಬಳ್ಳಾಪುರ, (ಏ.17): ಮದುವೆ ಮಾಡುವ ಹೆಣ್ಣಿಗೆ ಗಂಡು ಹುಡುಕಲು ಯಾವ ರೀತಿ, ಒಳ್ಳೆಯ ಗುಣಗಳನ್ನು ನೋಡುತ್ತೇವೆಯೋ ಹಾಗೆಯೇ ಸಚ್ಛಾರಿತ್ರದ ವ್ಯಕ್ತಿಗಳನ್ನು ನಮ್ಮ ಜನಪ್ರತಿನಿಗಳನ್ನಾಗಿ ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪುರುಷೋತ್ತಮ್ ನಾಮಪತ್ರ ಸಲ್ಲಿಕೆ ವೇಳೆ ನಡೆದ ರೋಡ್ ಶೋ ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾರೇ ಪಕ್ಷದವರಾಗಲಿ, ಕುಟುಂಬಕ್ಕೆ ಆಸ್ತಿ ಮಾಡಿದ್ದಾರಾ, ನಮ್ಮ ನಿಮ್ಮ ತೆರಿಗೆ ಹಣದಿಂದ ಲಂಚ ಪಡೆದಿದ್ದಾರಾ, ಭ್ರಷ್ಟಾಚಾರಿಯಾಗಿದ್ದರಾ, ಪಕ್ಷಾಂತರಿಯೇ ಅವರು ಯೋಗ್ಯರಾಗಿದ್ದರೆಯೇ ಎಂದು ನಾವು ಪ್ರಶ್ನೆ ಮಾಡಬೇಕಿದೆ. ನಮ್ಮ ಜನಪ್ರತಿನಿಧಗಳನ್ನು ಆಯ್ಕೆ ಮಾಡುವಾಗ ಒಳ್ಳೆಯ ಗುಣ ಹಾಗು ನಮ್ಮ ಕಷ್ಟ ಸುಖಗಳಿಗೆ ಸ್ಪಂಧಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಿದೆ. ಅಂತಹ ಗುಣಗಳಿರುವ ಎಎಪಿ ಅಭ್ಯರ್ಥಿ ಪುರುಷೋತ್ತಮ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಪುರುಷೋತ್ತಮ್ ಮಾತನಾಡಿ, ಜನಹಿತ ಮರೆತಿರುವ ಸರ್ಕಾರಗಳಿಂದ ಜನತೆ ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ. ನಾವು ಪ್ರಚಾರ ಮಾಡುವ ವೇಳೆ ಜನತೆ ನಮ್ಮನ್ನ ಬೆಂಬಲಿಸುತ್ತಿದ್ದಾರೆ. ಕೊಟ್ಟ ಭರವಸೆ ಈಡೇರಿಸುವಲ್ಲಿ ಎಎಪಿ ಸದಾ ಮುಂದಿದೆ ಎಂದರು.
ಈ ಸಂದರ್ಭದಲ್ಲಿ ಎಎಪಿ ರಾಜ್ಯ ಕಾರ್ಯದರ್ಶಿ ಟೆನ್ನಿಸ್ ಕೃಷ್ಣ, ರಾಜ್ಯ ನಾಯಕರಾದ ಬಾಲಕೃಷ್ಣ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸಮೀರ್ ಅಸದ್, ಜಿಲ್ಲಾ ಕಾರ್ಯದರ್ಶಿ ಕೆ.ವಿ.ಮುನಿಯಪ್ಪ, ಕಾನೂನು ಸಲಹೆಗಾರ ಐಸಕ್ ಗಿಲ್ಬರ್ಟ್, ತಾಲೂಕು ಅಧ್ಯಕ್ಷ ಜೆ. ಹರೀಶ್, ನಗರ ಉಸ್ತುವಾರಿ ಶಿವಕುಮಾರ್, ಮಹಿಳಾ ಘಟಕ ಅಧ್ಯಕ್ಷರಾದ ಕಮಲಮ್ಮ, ಮುಖಂಡರಾದ ನರೇಂದ್ರ ಮೂರ್ತಿ, ಶೋಯಬ್ ಖಾನ್, ಇಲಿಯಾಸ್, ಫಯಾಜ್, ನರಸಿಂಹಮೂರ್ತಿ, ತಾಲೂಕಿನ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….