ಕಾನ್ಪುರ, (ಜ.08): ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯುವ ದಿನದಂದೇ (ಜ.22) ತಮಗೆ ಹೆರಿಗೆ ಮಾಡಿಸಬೇಕೆಂದು ವೈದ್ಯರಿಗೆ ಗರ್ಭಿಣಿಯರು ದುಂಬಾಲು ಬೀಳುತ್ತಿರುವ ಕುತೂಹಲಕರ ಪ್ರಸಂಗಳು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿವೆ.
‘ಕಾನುರದ ಗಾಯತ್ರಿ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಆಸ್ಪತ್ರೆಯಲ್ಲಿ ಜ.22ರಂದೇ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವಂತೆ ನಮಗೆ 12ರಿಂದ 14 ಕೋರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಒಂದೇ ದಿನ 35 ಸಿಸೇರಿಯನ್ ಹೆರಿಗೆ ಮಾಡಿಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆಸ್ಪತ್ರೆಯ ರೋಗ ಹೆರಿಗೆ ತಜ್ಞೆ ಡಾ.ಸೀಮಾ ದ್ವಿವೇದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜ.22ರಂದು ರಾಮಮಂದಿರ ಲೋಕಾರ್ಪಣೆ ನಡೆಯಲಿದ್ದು, ಅಂದೇ ತಮ್ಮ ಗರ್ಭದಲ್ಲಿ ಮಗು ಜನಿಸುವುದು ಶುಭಕರ ಮತ್ತು ಶ್ರೇಷ್ಠ ಎಂದು ಭಾವಿಸಿರುವ ಸ್ತ್ರೀಯರು ಈ ರೀತಿ ದುಂಬಾಲು ಬಿದ್ದಿದ್ದಾರೆ.
ಅಂದು ಜನಿಸಿದ ಮಗುವು ಜೀವನದಲ್ಲಿ ಶ್ರೀರಾಮನ ರೀತಿಯಲ್ಲೇ ಸಹನೆ, ಪ್ರೀತಿ ಮತ್ತು ಮಾನವೀಯ ಗುಣಗಳನ್ನು ಹೊಂದುತ್ತವೆ ಎಂದು ಮಹಿಳೆಯರು ಭಾವಿಸಿದ್ದಾರೆ. ಹೀಗಾಗಿ ಅಂದೇ ಸಿಸೇರಿಯನ್ ಮಾಡಿಸಿಕೊಳ್ಳಲು ಮುಗಿಬಿದ್ದಿದ್ದಾರೆ ಎಂದು ಡಾ.ದ್ವಿವೇದಿ ಹೇಳಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….