ಹರಿತಲೇಖನಿ ದಿನಕ್ಕೊಂದು ಕಥೆ: ರಾಮಧಾನ್ಯ

ಒಂದು ಸಲ ಅಕ್ಕಿ ಮತ್ತು ರಾಗಿಗೆ ಜಗಳ ಬಂದಿತು. ಅಕ್ಕಿಯು, ನಾನು ಬೆಳ್ಳಗಿರುವೆ, ನೀನು ತುಂಬಾ ಕಪ್ಪು ಎಂದು ರಾಗಿಗೆ ಹೇಳಿತು. ಅದಕ್ಕೆ ರಾಗಿ ನನ್ನಷ್ಟು ಶಕ್ತಿವಂತ  ಆಹಾರ ನೀನಲ್ಲ. ನಿನಗೆಲ್ಲಿದೆ ಶಕ್ತಿ ಎಂದು ರಾಗಿ ಜೋರಾಗಿ ಕೇಳಿತು.

ಆಗ ಅಕ್ಕಿ ಜಂಬದಿಂದ, “ಹೋಗಾಚೆ ನನ್ನ ಬಿಳಿಯ ಬಣ್ಣದ ಮುಂದೆ ನಿನ್ನ ಶಕ್ತಿ ಯಾವ ಲೆಕ್ಕವೂ ಅಲ್ಲ” ಎಂದು ಮೂತಿ ತಿರುಗಿಸಿ  ಹೇಳಿತು. ನನ್ನನ್ನು ಆಹಾರವಾಗಿ ಸೇವಿಸುವ ರೈತರು ಮಳೆ ಚಳಿ ಬಿಸಿಲಿನಲ್ಲೂ ಶಕ್ತಿವಂತರಾಗಿದ್ದು, ಕೆಲಸಗಳನ್ನು ಮಾಡುತ್ತಾರೆ, ಎಂದು ರಾಗಿ ಹೇಳಿದರೆ, ಅಕ್ಕಿ ಒಪ್ಪಲಿಲ್ಲ ,ರಾಗಿ ಸೋಲಲಿಲ್ಲ, ನಾ ಬಿಡೆ, ನೀ ಕೊಡೆ ಎಂಬಂತೆ ಎರಡರ ಜಗಳವೂ ತಾರಕಕ್ಕೇರಿತ್ತು. 

ಜಗಳ ಬಗೆಹರಿಯದೆ, ಎರಡೂ ಯಾರು ಹೆಚ್ಚು ಎಂದು ಕೇಳಲು ಶ್ರೀರಾಮನ ಆಸ್ಥಾನಕ್ಕೆ  ಬಂದವು. ಆಗ ರಾಮನು  ಕಲಾಪದಲ್ಲಿದ್ದು, ಭಟರನ್ನು ಕರೆದು ಈ ದಿನ ಸಮಯವಿಲ್ಲ ಅಕ್ಕಿ ಮತ್ತು ರಾಗಿಯನ್ನು  ಕೋಣೆಯಲ್ಲಿ ಇಟ್ಟುಬಿಡಿ ಎಂದು ಹೇಳಿದನು. ಸೇವಕರು  ರಾಗಿ ಮತ್ತು ಅಕ್ಕಿಯನ್ನು ಕೋಣೆಯಲ್ಲಿ ಹಾಕಿ ಬೀಗ ಹಾಕಿದರು. ರಾಮನ ಕಾರ್ಯಕಲಾಪ ಆಶಾಡ ಮಾಸದ ಜೋರು ಮಳೆಯಲ್ಲಿ ಮುಗಿಯಿತು. ಅಲ್ಲಿಯ ತನಕವೂ ಅಕ್ಕಿ ಮತ್ತು ರಾಗಿ ಚಳಿ ಮತ್ತು ಥಂಡಿಯಲ್ಲಿ ಕಾಲ ಕಳೆಯಬೇಕಾಯಿತು. 

ಅಂದು  ತೀರ್ಪು ಹೇಳಲು ರಾಮನು ಸಭೆ ಕರೆದನು. ಸೇವಕರಿಗೆ ರಾಗಿ ಮತ್ತು ಅಕ್ಕಿಯನ್ನು ಹೊರಗೆ ಬಿಡಲು ಹೇಳಿದನು. ಸೇವಕರು ಹೋಗಿ ಕೋಣೆ ಬಾಗಿಲು ತೆರೆಯುತ್ತಲೇ ರಾಗಿ ನುಗ್ಗಿ ಓಡಿ ಬಂದಿತು. ನಿಶ್ಯಕ್ತಿಯಾಗಿದ್ದ ಅಕ್ಕಿ ಸಾಗಲಾರದೆ ಬಂದಿತು.

ರಾಗಿ ಕಾಳುಗಳು ಚುರುಕಾಗಿದ್ದು ಬುಡುಬುಡನೆ ಉರುಳುತುರುಳುತಾ ಓಡೋಡಿ ಬಂದು, ಶ್ರೀರಾಮನ ಪದತಲದಲ್ಲಿ ಶಿರಬಾಗಿ ಭಕ್ತಿಯಿಂದ ಬೆಚ್ಚಗೆ ಕುಳಿತವು. ಮಳೆ ಥಂಡಿಯಿಂದಾಗಿ ಅಕ್ಕಿ ಮುಗ್ಗಲಾಗಿ, ಮಾಲುಗಟ್ಟಿ  ಅದರ ಬಣ್ಣವೆಲ್ಲ ಬೂದಿ ಬಳಿದಂತೆ ಮಾಸಿತ್ತು. ಮೈಯಲ್ಲಿ ಶಕ್ತಿ ಇಲ್ಲದೆ ನಡೆಯಲು ಸಾಗದೆ, ಕಳೆಗುಂದಿದ  ಮುಖದಿಂದ, ತೊಡರುಗಾಲು ಹಾಕುತ್ತಾ ಸೊಟ್ಟ್ ಸೊಟ್ಟಗೆ, ವಾಲಾಡುತ್ತ ಬರುತ್ತಿದ್ದವು. 

ಸಿಂಹಾಸನದಲ್ಲಿ ಕುಳಿತು, ಕಲಾಪ ನಡೆಸುತ್ತಿದ್ದ  ರಾಮನು, ಅಕಸ್ಮಾತ್  ಕೆಳಗೆ ನೋಡಿದನು. “ನಗುನಗುತ್ತಾ ಕುಳಿತಿದ್ದ ರಾಗಿಯನ್ನು  ಕಂಡನು. ರಾಮನಿಗೆ ಖುಷಿಯಾಯಿತು.”ನಿಮಗೆ ಏನು ಬೇಕು? ಒಂದು ವರವನ್ನು ಕೊಡುತ್ತೇನೆ ಕೇಳಿರಿ ಎಂದನು.

ರಾಗಿ ಕಾಳುಗಳು, ” ನಿನ್ನ ನಾಮ ವಿನಹ, ನಮಗೆ ಬೇರೆ ಯಾವ ವರವೂ  ಬೇಡ” ಎಂದವು. ರಾಮನು ಸಂತೋಷಗೊಂಡು, ಇಂದಿನಿಂದ ನೀವು ‘ರಾಮಧಾನ್ಯ’ ವಾಗಿ ಪ್ರಸಿದ್ಧಿಯಾಗಿರಿ, ಎಂದು ರಾಗಿಗೆ ಹರಸಿದನು.  ಅಂದಿನಿಂದ ರಾಗಿ ‘ರಾಮಧಾನ್ಯ’ ವಾಗಿ ಪ್ರಸಿದ್ಧಿ ಹೊಂದಿತು. ಬಡವರಿಗೆ ಹಸಿವು ತಣಿಸಿತು. ಶ್ರೀಮಂತರಿಗೆ ಪಥ್ಯದ ಆಹಾರವಾಯಿತು. ರೈತರಿಗೆ ಮಿತ್ರನಾಗಿ ಆಪ್ತ ಬಂಧು ವಾಯಿತು. 

“ರಾಗಿ ತಂದಿರಾ ಭಿಕ್ಷಕೆ ರಾಗಿ ತಂದೀರಾ, ಯೋಗ್ಯರಾಗಿ ,ಭೋಗ್ಯರಾಗಿ ಭಾಗ್ಯವಂತರಾಗಿ ನೀವು, ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ.”

ಅನ್ನದಾನವ ಮಾಡುವರಾಗಿ, ಅನ್ನಛತ್ರವನಿಟ್ಟವರಾಗಿ,

ಅನ್ಯ ವಾರ್ತೆಯ ಬಿಟ್ಟವರಾಗಿ, ಅನುದಿನ ಭಾಜನೆಯ ಮಾಡುವವರಾಗಿ.

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ!

ಸಿರಿರಮಣನ ಸದಾ ಸ್ಪರ್ಧಿಸುವುದಾಗಿ, ಗುರುತಿಗೆ ಬಾಹೋರಂಥವರಾಗಿ,

ಕರೆ ಕರೆ ಸಂಸಾರವ ನೀಗುವರಾಗಿ, ಪುರಂದರ ವಿಠಲನ ಸೇವಿಪರಾಗಿ,

ರಾಗಿ ತಂದಿರಾ ಭಿಕ್ಷಕೆ ರಾಗಿ ತಂದೀರಾ!”

ಸಂಗ್ರಹ ವರದಿ; ಗಣೇಶ್, ಎಸ್., ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!