ಬೆಂಗಳೂರು: ಮೂರ್ಖರು ಯಾರಿದ್ದೀರಿ ಎಂದು ಕೇಳಿದರೆ ನಾವಿದ್ದೇವೆ ಎನ್ನುತ್ತಾರೆ ಕರ್ನಾಟಕ ಬಿಜೆಪಿಯ ನಾಯಕರು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಟ್ವಿಟ್ ಮಾಡಿ, ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನವನ್ನು ಮರಳಿಸಿಲ್ಲ, ನಿವೇಶನ ಇನ್ನೂ ಮಂಜೂರಾಗದಿರುವಾಗ ಮರಳಿಸಲು ಹೇಗೆ ಸಾಧ್ಯ. ಸಿಎ ನಿವೇಶನಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಹಿಂಪಡೆಯಲಾಗಿದೆ.
ನಿವೇಶನ ಮಂಜೂರಾತಿಗೆ ಅರ್ಹವಾದ ಸಂಸ್ಥೆಗಳಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಆಯ್ಕೆ ಆಗಿತ್ತು ಅಷ್ಟೇ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಮೂರ್ಖರು ಯಾರಿದ್ದೀರಿ ಎಂದು ಕೇಳಿದರೆ ನಾವಿದ್ದೇವೆ ಎನ್ನುತ್ತಾರೆ @BJP4Karnataka ನಾಯಕರು!
— Karnataka Congress (@INCKarnataka) October 14, 2024
ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನವನ್ನು ಮರಳಿಸಿಲ್ಲ, ನಿವೇಶನ ಇನ್ನೂ ಮಂಜೂರಾಗದಿರುವಾಗ ಮರಳಿಸಲು ಹೇಗೆ ಸಾಧ್ಯ.
ಸಿಎ ನಿವೇಶನಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಹಿಂಪಡೆಯಲಾಗಿದೆ.
ನಿವೇಶನ ಮಂಜೂರಾತಿಗೆ ಅರ್ಹವಾದ ಸಂಸ್ಥೆಗಳಲ್ಲಿ ಸಿದ್ದಾರ್ಥ…
ಬಿವೈ ವಿಜಯೇಂದ್ರ ಅವರೇ, ನಿಮ್ಮ ಪ್ರೇರಣಾ ಟ್ರಸ್ಟ್ ಗೆ ಅಕ್ರಮವಾಗಿ ಮಂಜೂರು ಮಾಡಿಕೊಂಡಿದ್ದ ಭೂಮಿಯನ್ನು ಹಿಂದಿರುಗಿಸುವ ನೈತಿಕತೆ ತೋರಿಸುವಿರಾ? ಎಂದು ಪ್ರಶ್ನಿರುವ ಕಾಂಗ್ರೆಸ್.
ಶಾಲೆ ನಿರ್ಮಿಸುತ್ತೇನೆ ಎಂದು ಅಕ್ರಮವಾಗಿ ಸೈಟ್ ಪಡೆದು ಬಿರಿಯಾನಿ ಹೋಟೆಲ್ ನಿರ್ಮಿಸಿರುವ ಚಲವಾದಿ ನಾರಾಯಣಸ್ವಾಮಿಯವರು ಸೈಟ್ ಹಿಂದಿರುಗಿಸುವ ನೈತಿಕತೆ ತೋರಿಸುವರೇ? ಎಂದು ಸವಾಲು ಎಸೆದಿದೆ.