ಹರಿತಲೇಖನಿ ದಿನಕ್ಕೊಂದು ಕಥೆ: ಯಾರು ಹೆಚ್ಚು..?

ಗುರಪುರದಲ್ಲಿ ಅಂದು ಹಬ್ಬದ ದಿನ. ಮಳೆ-ಬೆಳೆ ಉತ್ತಮವಾಗಿ ಆಗಿದುದ್ದರಿಂದ ಎಲ್ಲಾರ ಮೊಗದಲ್ಲಿ ಸಂತೃಪ್ತಿ ತುಂಬಿತ್ತು. ಊರಿನ ಜನರೆಲ್ಲರೂ ತಮ್ಮ ತಮ್ಮ ಮನೆಗಳನ್ನು ತಳಿರು-ತೋರಣಗಳಿಂದ ಶೃಂಗಾರ ಮಾಡಿದ್ದರು. ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿದ್ದರು. ಬಗೆಬಗೆಯ ವಿಶೇಷ ಅಡುಗೆ ಎಲ್ಲರ ಮನೆಗಳಲ್ಲಿ ತಯಾರಾಗುತ್ತಿತ್ತು. ಘಮಘಮ ಪರಿಮಳ ಎಲ್ಲೆಡೆ ಹರಡಿತ್ತು.

ಇದನ್ನೇಲ್ಲ “ನೀರು ಗಮನಿಸುತ್ತಿತ್ತು. “ಊರಿನ ಸಂಭ್ರಮಕ್ಕೆ ನಾನೇ ಕಾರಣ. ಇದನ್ನು ನನ್ನ ಸ್ನೇಹಿತರಿಗೆ ಈಗಲೇ ಹೇಳಬೇಕು” ಎಂದು ಜಂಬದಿಂದ ಬೀಗಿತು. ಗೆಳೆಯರಾದ ಗಾಳಿ, ಆಹಾರ, ಉಡುಪು ಮತ್ತು ಮನೆಗಳನ್ನು ಕರೆಯಿತು. ಎಲ್ಲವೂ ಊರಿನ ಚಾವಡಿಯಲ್ಲಿ ಸಭೆ ಸೇರಿದವು. “ನೀರು” ಸ್ನೇಹಿತರಿಗೆ ಸ್ವಾಗತ ಕೋರಿ ಮಾತು ಪ್ರಾರಂಭಿಸಿತು.

ನೀರು: ಗೆಳೆಯರೇ, ಇಂದು ನಮ್ಮ ಊರಿನಲ್ಲಿ ಎಲ್ಲೆಡೆ ನೋಡಿದರೂ ಹಬ್ಬದ ಸಡಗರ. ಇದಕ್ಕೆ ಕಾರಣ ಯಾರು ಗೋತ್ತೇ? ಅದು ನಾನೇ!

ಮನೆ: ನೀನಾ! ಹೇಗೆ ಕಾರಣವಾಗುತ್ತಿಯಾ ಮಿತ್ರ?

ನೀರು: ಜೀವಿಗಳು ನೀರು ಕುಡಿಯದಿದ್ದರೆ ಬದುಕಲು ಸಾಧ್ಯವೇ ಇಲ್ಲ. ಮನೆಗಳನ್ನು ಸ್ವಚ್ಛಗೊಳಿಸಲು ನಾನು ಬೇಕು. ಸ್ನಾನ ಮಾಡಲು, ಬಟ್ಟೆ ಹೊಗಿಯಲು, ನಾನಿರಲೇಬೇಕು. ಬಗೆಬಗೆಯ ಅಡುಗೆ ತಯಾರಿಸಲು, ದವಸಧಾನ್ಯ ಬೆಳೆಯಲು ಬೇಕು. ವಿಧ್ಯುತ್ ಉತ್ಪಾದಿಸಲು ನಾನೇ ಬೇಕು. ಈ ಎಲ್ಲಾ ಕಾರಣಗಳಿಂದ ನಾನೇ ಹೆಚ್ಚು. ಇದನ್ನು ನೀವೆಲ್ಲರೂ ಒಪ್ಪಿವಿರಿ ತಾನೇ?

ಆಹಾರ: ನಾನು ಒಪ್ಪುವುದಿಲ್ಲ ಗೆಳೆಯ. ಜೀವಿಗಳು ಒಂದು ಹೊತ್ತು ಆಹಾರ ಸೇವಿಸದಿದ್ದರೆ ಸುಸ್ತಾಗಿ ಬಿದ್ದು ಹೋಗುತ್ತವೆ. ಜೀವಿಗಳ ಬೆಳವಣಿಗೆಗೆ ನಾನು ಬೇಕು. ಅವುಗಳಿಗೆ ಶಕ್ತಿ ಬೇಕಾದರೆ, ರೋಗರುಜಿನಗಳಿಂದ ರಕ್ಷಣೆ ಪಡೆಯಬೇಕಾದರೆ ಪೌಷ್ಠಿಕ ಆಹಾರ ಬೇಕು. ನಾನಿಲ್ಲದಿದ್ದರೇ ಇಂದಿನ ಹಬ್ಬವೇ ನಡೆಯುವುದಿಲ್ಲ; ಗೋತ್ತಾ?

ಮನೆ: ಸ್ನೇಹಿತರೇ, ಜೀವಿಗಳು ಕತ್ತಲಾಗುತ್ತಲೇ ತಮ್ಮ ವಾಸಸ್ಥಾನವಾದ ಮನೆ, ಗೂಡು, ಗುಹೆ, ಪೊಟರೆ, ಬಿಲಗಳಿಗೆ, ಓಡೋಡಿ ಬರುತ್ತವೆ. ನಾನು ಅವುಗಳಿಗೆ ಆಶ್ರಯ ನೀಡುತ್ತೇನೆ. ಮಳೆ, ಗಾಳಿ, ಕಳ್ಳರು, ಶತ್ರುಗಳಿಂದ ರಕ್ಷಣೆ ನೀಡುತ್ತೇನೆ. ಅವುಗಳ ವಂಶಾಭಿವೃದ್ಧಿಗೆ ಬೇಕಾದ ಮೊಟ್ಟೆ ಮತ್ತು ಮರಿಗಳನ್ನು ಜೋಪಾನ ಮಾಡುತ್ತೇನೆ. ಈ ಗುರುಪುರದ ಮನೆಗಳನ್ನೇ ನೋಡಿ! ಇವೆಲ್ಲವನ್ನು ನೋಡಿದರೆ ನಿಮಗೆ ನಾನೇ ಹೆಚ್ಚು ಅನಿಸುವುದಿಲ್ಲವೇ?

ಉಡುಪು: ಅಯ್ಯಾ ಮಿತ್ರರೇ ನಿಮ್ಮ ಮಾತುಗಳನ್ನು ಕೇಳಿ ನನಗೆ ನಗು ಬರುತ್ತದೆ. ಅಂಗಳದಲ್ಲಿ ಆಡುತ್ತಿರುವ ಪುಟ್ಟ ಪುಟ್ಟ ಮಕ್ಕಳನ್ನು ನೋಡಿ, ರೇಷ್ಮೆ ಲಂಗ ರವಿಕೆ ತೊಟ್ಟು ಮೊಗ್ಗಿನ ಜಡೆ, ಕೈತುಂಬಾ ಬಳೆ, ಕಾಲಿಗೆ ಗೆಜ್ಜೆ, ಹಣೆಯಲ್ಲಿ ಬೊಟ್ಟು ಇಟ್ಟುಕೊಂಡು ಮುದ್ದಾಗಿ ಕಾಣುತ್ತಿವೆ. ಊರಿನ ಮನೆ ಮಂದಿಯೆಲ್ಲಾ ತಮಗೊಪ್ಪವ ಉಡುಪುಗಳನ್ನು ಧರಿಸಿ ಹಬ್ಬ ಆಚರಿಸುತ್ತಿದ್ದಾರೆ. ಒಂದು ವೇಳೆ ಇವರಿಗೆ ಉಡುಪು ಇಲ್ಲದೇ ಇರುತ್ತಿದ್ದರೇ? – ಈಗ ಅರ್ಥವಾಯಿತೇ ಇವರೆಲ್ಲರ ಸಂತೋಷಕ್ಕೆ ನಾನೇ ಕಾರಣ?

ಇವರ ಮಾತುಗಳನ್ನು ಕೇಳಿಸಿಕೊಂಡ ಗಾಳಿಯು ಹುಸಿನಗೆ ಬೀರುತ್ತಾ,

ಅಣ್ಣಂದಿರೇ, ನಿಮ್ಮ ಮಾತು ಸತ್ಯ. ಜೀವಿಗಳು ಈ ಭೂಮಿಯ ಮೇಲೆ ಬದುಕಲು ಸುಖ ಸಂತೋಷದಿಂದಿರಲು ನೀವೆಲ್ಲರೂ ಬೇಕೆ ಬೇಕು. ಆದರೆ, ಜೀವಿಗಳು ಉಸಿರಾಡಲು ಗಾಳಿ ಇಲ್ಲದಿದ್ದರೇ ಏನು ಗತಿ ಹೇಳಿ? ಗಿಡಮರಗಳು ಬದುಕುತ್ತವೆಯೇ? ಜೀವಿಗಳ ಉಸಿರಾಟ ಅರೆಕ್ಷಣ ನಿಂತರೆ ಏನಾಗುತ್ತದೆ..? ನಾವೆಲ್ಲರೂ ನಮ್ಮ ನಮ್ಮ ಪಾಲಿನ ಕರ್ತವ್ಯ ಮಾಡುತ್ತಿದ್ದೇವೆ. ಈ ಜಗತ್ತಿನ ಪ್ರತಿಯೊಂದು ವಸ್ತು, ಜೀವಿಗಳಲ್ಲಿ ಪರಸ್ಪರ ವ್ಯತ್ಯಾಸವಿದೆ. ಆದರೆ, ಅದರ ಎಲ್ಲವೂ ಸಮಾನ.

ನೀರು, ಆಹಾರ, ಮನೆ, ಉಡುಪು ಮತ್ತು ಗಾಳಿಯ ಮಾತುಗಳನ್ನು ಸನಿಹದಲ್ಲೇ ಕುಳಿತಿದ್ದ “ವಿದ್ಯೆ” ಒಪ್ಪಿಕೊಂಡು ತಲೆದೂಗಿತು. ಸ್ನೇಹಿತರ ಮಾತುಗಳನ್ನು ತನ್ನ ಒಂದು ಮಾತನ್ನು ಸೇರಿಸಿತು.

ವಿದ್ಯೆ: ಗೆಳೆಯರೇ, “ತುಂಬಿದ ಕೂಡ ತುಳುಕುವುದಿಲ್ಲ” ಎಂಬ ಮಾತನ್ನು ನೀವೆಲ್ಲ ಕೇಳಿದ್ದೀರಲ್ಲ. ಅಂತೆಯೇ ಎಲ್ಲರೂ ವಿದ್ಯಾವಂತರಾಗಬೇಕು. ಆಗ ನಮ್ಮ ಬಾಯಿಂದ ಯಾವುದೇ ಅಹಂಕಾರದ ಮಾತುಗಳು ತುಳುಕಲಾರವು. ಆದ್ದರಿಂದ ನಾನು ಹೇಳುವುದು ಒಂದೆ: ಎಲ್ಲರೂ ವಿದ್ಯಾವಂತರಾಗೋಣ. ಸಮಾನತೆಯಿಂದ ಬದುಕೋಣ.

ಎಲ್ಲರೂ “ಹೌದು, ಹೌದು” ಎಂದು ಹೇಳುತ್ತಾ ಕೈಕೈ ಹಿಡಿದುಕೊಂಡು ಹಬ್ಬದ ಸಡಗರದಲ್ಲಿ ಪಾಲುಗೊಂಡವು.

ಸಂಗ್ರಹ: 3ನೇ ತರಗತಿ ಪುಸ್ತಕ

ರಾಜಕೀಯ

ನನ್ನ ಆಯಸ್ಸನ್ನು ಭಗವಂತ ನನ್ನ ತಂದೆಗೆ ಧಾರೆ ಎರಿಬೇಕು; ನಿಖಿಲ್‌ ಕುಮಾರಸ್ವಾಮಿ

ನನ್ನ ಆಯಸ್ಸನ್ನು ಭಗವಂತ ನನ್ನ ತಂದೆಗೆ ಧಾರೆ ಎರಿಬೇಕು; ನಿಖಿಲ್‌ ಕುಮಾರಸ್ವಾಮಿ

ಕುಮಾರಣ್ಣ ಆರೋಗ್ಯ ಸರಿ ಇಲ್ಲ ಅಂತ ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ, ಅವರ ತಂದೆ ತಾಯಿ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ: ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="113069"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!