ಜ.20 ದಿನ ಭವಿಷ್ಯ| ಈ ರಾಶಿಯವರಿಗಿಂದು ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಸಾಧ್ಯತೆ, ಎಚ್ಚರ – ಎನ್‌ಎಸ್ ಶರ್ಮ

Astrology: Likely to be a memorable day

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಷಷ್ಟಿ ಜನವರಿ.20.2025: ಈ ದಿನ ವಿಶೇಷವಾಗಿ ನಾಗಾರಾಧನೆಯನ್ನು ಮಾಡಿದರೆ, ಪೂರ್ಣ ಫಲ ಉಂಟಾಗುತ್ತದೆ.Astrology

ಮೇಷ ರಾಶಿ: ದೃಢವಾದ ನಿರ್ಧಾರವನ್ನು ಮಾಡಿ, ಎಲ್ಲ ವಿಷಯಗಳಿಂದಲೂ ಧನಾತ್ಮಕವಾದ ಚಿಂತನೆಯನ್ನು ಮಾಡಿಕೊಳ್ಳಿ. ಮಾನಸಿಕ ಕಿರಿಕಿರಿ, ಸ್ವಲ್ಪ ಅಸಮಾಧಾನ, ಆರೋಗ್ಯದಲ್ಲಿ ಚಿಂತೆ, ನಿರ್ಧಾರಗಳು ಅಚಂಚಲ. (ಪರಿಹಾರಕ್ಕಾಗಿ ಶಿವನ ಸ್ತೋತ್ರವನ್ನು ಪಾರಾಯಣ ಮಾಡಿ)

ವೃಷಭ ರಾಶಿ: ಶಿಕ್ಷಣದಲ್ಲಿ ಅಭಿವೃದ್ಧಿ, ಶೈಕ್ಷಣಿಕ ವಿಷಯಗಳಲ್ಲಿ ಜ್ಞಾನಾರ್ಜನೆಗೆ ಉತ್ತಮವಾದ ಮಹತ್ವ. ಅತ್ಯಂತ ಶುಭವಾದ ದಿನ, ಧನಾಗಮ ನಿಧಾನವಾದರೂ ಚೆನ್ನಾಗಿರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಎಲ್ಲಾ ಕಾರ್ಯದಲ್ಲೂ ಶುಭ. (ಪರಿಹಾರಕ್ಕಾಗಿ ನಾರಾಯಣನ ಸ್ಮರಣೆ ಮಾಡಿ)

ಮಿಥುನ ರಾಶಿ: ಒಳ್ಳೆಯ ದಿನ. ಕಾರ್ಯಗಳಲ್ಲಿ ಪ್ರವೃತ್ತಿ ಉಂಟಾಗುತ್ತದೆ, ಧನವನ್ನು ಯಾವ ಕಾರ್ಯಕ್ಕೆ ಮನೆಯೊಗಿಸಬೇಕು ಅದಕ್ಕೆ ಮಾತ್ರ ಖರ್ಚು ಮಾಡಿ, ವಿಪರೀತವಾದ ದುಂದು ಬೆಚ್ಚ ಬೇಡ. ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸಿ. (ಪರಿಹಾರಕ್ಕಾಗಿ ದುರ್ಗಾದೇವಿಯ ಸ್ತೋತ್ರವನ್ನು ಕೇಳಿ)

ಕಟಕ ರಾಶಿ: ನಿಧಾನ ಗತಿಯ ಜಯ, ಸ್ವಲ್ಪ ವಿಳಂಬ, ರೀತಿಯ ಕೆಲಸಗಳು ಆಗುತ್ತವೆ. ಅತಿಯಾದ ಆತುರ ಬೇಡ, ಪ್ರೋತ್ಸಾಹವು ಸ್ವಲ್ಪ ನಿಧಾನ.. ಎಲ್ಲ ರೀತಿಯಲ್ಲೂ ನಿಧಾನ ಗತಿಯಲ್ಲಿ ಅನುಕೂಲವಾಗುತ್ತದೆ, ವಿದ್ಯಾರ್ಥಿಗಳಿಗೆ ಶುಭ. (ಪರಿಹಾರಕ್ಕಾಗಿ ಆಂಜನೇಯ ಸ್ವಾಮಿಯ ಪೂಜೆ ಮಾಡಿ)

ಸಿಂಹ ರಾಶಿ: ಅತಿಯಾದ ಆತ್ಮವಿಶ್ವಾಸ ಇದರಿಂದ ತೊಡಕುಂಟಾಗಬಹುದು. ಎಚ್ಚರಿಕೆ, ವಿದೇಶ ಪ್ರಯಾಣದ ಯೋಗ. ಕೆಲವು ಕಾರ್ಯಗಳಲ್ಲಿ ಅನವಶ್ಯಕ ತಿರುಗಾಟ, ವಾಹನ ಸುಖ, ದೈವ ಬಲ.
(ಪರಿಹಾರಕ್ಕಾಗಿ ಮಹಾವಿಷ್ಣು ಸಹಸ್ರನಾಮ ಹೇಳಿ)

ಕನ್ಯಾ ರಾಶಿ: ದೀರ್ಘವಾದ ಚಿಂತನೆ, ಆಲೋಚನೆ, ಮನಸ್ಸಿಗೆ ಕಿರಿಕಿರಿ.. ಒಳ್ಳೆಯ ಭಾವನೆ ಇದ್ದರೂ ಭಗವಂತನಲ್ಲಿ ಪ್ರಾರ್ಥನೆ ಇರಬೇಕು. ನಿರಂತರವಾಗಿ ಒಳ್ಳೆಯವರ ಸಂಪರ್ಕದಲ್ಲಿ ಇರಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆ ಮಾಡಿ)

ತುಲಾ ರಾಶಿ: ಯಾವುದೇ ವಿಚಾರವನ್ನು ಆಲೋಚನೆ ಮಾಡಿ ಒಪ್ಪಿಕೊಳ್ಳಿ ಶುಭವಾಗುತ್ತದೆ, ಸುಮ್ಮನೆ ಅನಾವಶ್ಯಕ ತೀರ್ಮಾನಗಳು ಬೇಡ. ವ್ಯಾಪಾರ ವ್ಯವಹಾರಗಳಲ್ಲಿ ವೃದ್ಧಿ, ಸ್ವಲ್ಪ ತಿರುಗಾಟ, ಕೋಪ ಬೇಡ, ಎಚ್ಚರಿಕೆಯಿಂದ ಮಾತನಾಡಿ. (ಪರಿಹಾರಕ್ಕಾಗಿ ಹಾಸರಸ್ವತಿಯ ಪ್ರಾರ್ಥನೆ ಮಾಡಿ)

ವೃಶ್ಚಿಕ ರಾಶಿ: ಆರೋಗ್ಯದಲ್ಲಿ ಚೇತರಿಕೆ, ಆಕಸ್ಮಿಕ ಘಟನೆಯಿಂದ ಲಾಭ, ಅತ್ಯುನ್ನತ ಅಧಿಕಾರದ ಹುದ್ದೆ. ತಂದೆ-ತಾಯಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಸ್ಮರಣೆ ಮಾಡಿ)

ಧನಸ್ಸು ರಾಶಿ: ಸದಾಕಾಲ ಯೋಚಿಸುತ್ತೀರಿ, ಇದರಿಂದ ಫಲವಿಲ್ಲ. ಯೋಚನೆಗೆ ನೀವು ಕಾರಣರಲ್ಲ, ಮಾಡಿದ ಕೆಲಸವೂ ಒಂದು ಕಾಲದಲ್ಲಿ ವಿಪರೀತವಾಗಿದೆ, ಅದರಿಂದ ಈ ಚಿಂತನೆಗಳು ನಿಮ್ಮಲ್ಲಿ ಸೇರಿ ಹೋಗಿವೆ. ವಿದ್ಯಾರ್ಥಿಗಳಿಗೆ ಶುಭ, ಲಕ್ಷ್ಯ ಕೊಟ್ಟು ಓದಬೇಕು. (ಪರಿಹಾರಕ್ಕಾಗಿ ಗಣಪತಿಯ ಸ್ಮರಣೆ ಮಾಡಿ)

ಮಕರ ರಾಶಿ: ಅತಿಯಾದ ಆಲೋಚನೆ, ದೊಡ್ಡದಾದ ನಿರ್ಧಾರವಿಲ್ಲ. ಚಂಚಲವಾದ ಮನಸ್ಥಿತಿ, ಭಗವಂತನ ದರ್ಶನದಿಂದ ಅನುಕೂಲವಾಗುತ್ತಿಲ್ಲ ಎಂಬ ಚಿಂತನೆ, ಅತಿಯಾದ ಕೊರತೆ ಕಾಣುತ್ತಿದೆ. (ಪರಿಹಾರಕ್ಕಾಗಿ ಆಂಜನೇಯ ಸ್ಮರಣೆ ಮಾಡಿ)

ಕುಂಭ ರಾಶಿ: ಒಳ್ಳೆಯ ದಿನಗಳು ಬಂದಿವೆ.. ಮಾಡಬೇಕಾದ ಕೆಲಸವೂ ಸಾಕಷ್ಟಿದೆ. ನಿಧಾನವಾಗಿ ಎಲ್ಲಾ ಕಾರ್ಯಗಳನ್ನು ತೂಗಿಸಿ ಅನುಕೂಲವಾಗುತ್ತದೆ, ಅತಿಯಾದ ಆಲೋಚನೆ ಬೇಡ, ಉತ್ಸಾಹಿಗಳಾಗಿರಿ. (ಪರಿಹಾರಕ್ಕಾಗಿ ಶನೇಶ್ಚರ ಮಂತ್ರವನ್ನು ಜಪ ಮಾಡಿ)

ಮೀನ ರಾಶಿ: ಶ್ರೇಷ್ಠವಾದ ದಿನ ಬಂದು ಮಿತ್ರರಲ್ಲಿ ಸಂತೋಷ, ಪ್ರಯಾಣ ಸುಖ, ಆತ್ಮವಿಶ್ವಾಸ, ಪೂರ್ಣವಾದ ಆರೋಗ್ಯ.. ಭಗವಂತನ ಅನುಗ್ರಹ, ಕೊರತೆ ಇಲ್ಲದ ವಿದ್ಯೆ, ಸರ್ಕಾರಿ ಸೌಲಭ್ಯ ಭಾಗ್ಯ ಎಲ್ಲವೂ ವೃದ್ಧಿಯಾಗುತ್ತದೆ. (ಪರಿಹಾರಕ್ಕಾಗಿ ಷಣ್ಮುಗನ ಸ್ಮರಣೆ ಮಾಡಿ)

ರಾಹುಕಾಲ: 7-30AM ರಿಂದ 9-00AM
ಗುಳಿಕಕಾಲ: 6-00AM ರಿಂದ 7-30 AM
ಯಮಗಂಡಕಾಲ: 1-30PMರಿಂದ 3-00PM

ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572.

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ (Monsoon deficit) ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಸೂಚಿಸಿದರು.

[ccc_my_favorite_select_button post_id="121032"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತದಲ್ಲಿ (Accident) ವಿಜಯನಗರ-ಕೊಪ್ಪಳ ಜಿಲ್ಲಾ ಡಿಸಿಆರ್‌ಇ ಪೊಲೀಸ್‌ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಡಬನಕಟ್ಟೆ ಬಳಿ ಸಂಭವಿಸಿದೆ.

[ccc_my_favorite_select_button post_id="121017"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!