Astrology: Likely to be a memorable day

ಜ.24 ದಿನ ಭವಿಷ್ಯ: ಈ ರಾಶಿಯವರ ಕೆಲವು ಕಾರ್ಯಗಳು ನಷ್ಟವಾಗುವ ಸಾಧ್ಯತೆ ಎಚ್ಚರ – ಎನ್ಎಸ್ ಶರ್ಮ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಕ್ಷ ದಶಮಿ: ಜ.24.2025 ಶುಕ್ರವಾರ ವಿಶೇಷವಾಗಿ ಮಹಾ ಲಕ್ಷ್ಮಿ ಪೂಜೆಯನ್ನು ಮಾಡಿ ಬಿಲ್ವಪತ್ರೆಯಿಂದ ಅರ್ಚಿಸಿದರೆ ಎಲ್ಲ ಕಾರ್ಯವು ಅನುಕೂಲವಾಗುತ್ತದೆ.

ಮೇಷ ರಾಶಿ: ಎಲ್ಲ ಕಾರ್ಯದಲ್ಲೂ ಆಸಕ್ತಿ, ವಿಶೇಷವಾದ ಆನಂದವನ್ನು ಅನುಭವಿಸುವಿರಿ. ಸ್ವಲ್ಪ ಮಾತು ಜಾಸ್ತಿ, ರೋಗ ಭಯ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ವಿದ್ಯಾಭ್ಯಾಸದ ಕೊರತೆ, ಆಲಸ್ಯ. (ಪರಿಹಾರಕ್ಕಾಗಿ ಅಮ್ಮನವರ ಪೂಜೆ ಆರಾಧನೆ ಮಾಡಿ)

ವೃಷಭ ರಾಶಿ: ಶುಭ ಸಂಗತಿಯನ್ನು ಕೇಳುವಿರಿ. ಆರೋಗ್ಯ ಉತ್ತಮ, ಚಂಚಲವಾದ ಮನಸ್ಸು, ಕೋಪದಿಂದ ಸಂತಾನ ಸಮಸ್ಯೆ.. ವ್ಯವಹಾರದಲ್ಲಿ ಚಿಂತೆ. ಉದ್ಯೋಗದಲ್ಲಿ ಕಷ್ಟ ಆರ್ಥಿಕ ಹಾನಿ. (ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಅಭಿಷೇಕ ಪೂಜೆ ಮಾಡಿಸಿ)

ಮಿಥುನ ರಾಶಿ: ಮನಸ್ಸಿನಲ್ಲಿ ನಾನಾ ಚಿಂತೆ, ರಾಗ ದ್ವೇಷಗಳ ಸಮದರ್ಶನ, ಯಾವುದರಲ್ಲೂ ದೃಢವಾದ ನಿರ್ಧಾರವಿಲ್ಲ, ವಿದ್ಯೆಗಿಂತ ಬುದ್ದಿವಂತಿಕೆಯಲ್ಲಿ ಯತ್ನ, ಕಾರ್ಯದ ಅನುಕೂಲ, ವಿದ್ಯಾಭ್ಯಾಸಕ್ಕೆ ಹಿನ್ನೆಡೆ. (ಪರಿಹಾರಕ್ಕಾಗಿ ಗುರುಗಳ ಸ್ಮರಣೆಯನ್ನು ಮಾಡಿ)

ಕಟಕ ರಾಶಿ: ಚಿಂತೆಗಳ ಉತ್ತುಂಗಕ್ಕೆ ಏರಿದ್ದೀರಾ, ಇದರ ಜೊತೆಗೆ ಕೋಪ ಬೇರೆ. ಸೋದರ ಸೋದರಿಯರ ಭಾಂದವ್ಯದಲ್ಲಿ ಒಡಕು, ಕಣ್ಣಿನ, ಹೃದಯದ ಆರೋಗ್ಯಕ್ಕೆ ತೊಂದರೆ.. ಸ್ವಲ್ಪ ಎಚ್ಚರಿಕೆ ಇರಲಿ. ವಿದ್ಯಾನುಕೂಲ ಶುಭವಾಗಿದೆ. (ಪರಿಹಾರಕ್ಕಾಗಿ ಆದಿತ್ಯ ಹೃದಯದ ಪಾರಾಯಣ ಮಾಡಿ ಅಥವಾ ಕೇಳಿಸಿಕೊಳ್ಳಿ)

ಸಿಂಹ ರಾಶಿ; ಧೈರ್ಯವಿಲ್ಲ, ಮುನ್ನುಗುವುದಕ್ಕೆ ಸಾಹಸ, ಕೆಲಸ ಕಾರ್ಯದಲ್ಲಿ ಪ್ರಗತಿ.. ಕೋಪದಿಂದ ಮಿತ್ರರು ಬಂಧುಗಳು ಸ್ವಲ್ಪ ದೂರವಾಗುತ್ತಾರೆ. ಯಾರಾದರೂ ಮಾಟ ಮಂತ್ರ ಮಾಡಿಸಿದ್ದಾರೆ ಎಂಬ ಭಯ ಆತಂಕ. (ಪರಿಹಾರಕ್ಕಾಗಿ ಆಂಜನೇಯ ರಕ್ಷಾ ಸ್ತೋತ್ರವನ್ನು ಓದಿ)

ಕನ್ಯಾ ರಾಶಿ: ಮಾನಸಿಕ ವೇದನೆ, ಮನಸ್ಸಿನಲ್ಲಿ ಹೇಳಲಾಗದ ದುಃಖ, ತನ್ನ ಮೇಲೆ ತನಗೆ ಕೋಪ. ಕೆಲಸ ಕಾರ್ಯಗಳಲ್ಲಿ ಅಡಚಣೆ, ಸ್ವಲ್ಪ ದುಃಖ, ಅಹಂಕಾರದಿಂದ ಕೆಲವು ಕಾರ್ಯಗಳು ನಷ್ಟವಾಗುತ್ತವೆ ಎಚ್ಚರಿಕೆ. (ಪರಿಹಾರಕ್ಕಾಗಿ ದುರ್ಗಾ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಮಾಡಿಸಿ)

ತುಲಾ ರಾಶಿ: ಪಿತೃ ದೋಷ, ಕೆಲವು ಕಾರ್ಯಗಳ ಅಭಿವೃದ್ಧಿ, ಚಿಕ್ಕಪುಟ್ಟ ಆರೋಗ್ಯ ಸಮಸ್ಯೆ. ಆದರೆ ಬಾಧೆ ಮಾತ್ರ ವಿಪರೀತ, ದುಡ್ಡೆಲ್ಲವೂ ವ್ಯರ್ಥವಾಗಿ ಖರ್ಚಾಗುತ್ತದೆ ಎಂಬ ಭಯ. ಈ ಭಯದಿಂದ ದುಃಖ. (ಪರಿಹಾರಕ್ಕಾಗಿ ನವ ನಾಗ ಸ್ತೋತ್ರ ಪಾರಾಯಣ ಮಾಡಿ)

ವೃಶ್ಚಿಕ ರಾಶಿ: ದಾಂಪತ್ಯ, ಸುಖ ಪುಣ್ಯವು ಸ್ವಲ್ಪ ವಿರಳ, ಅಜ್ಞಾನ, ಸ್ವಲ್ಪ ಅಧಿಕವಾದರಿಂದ ಕಾರ್ಯಗಳು ನೀವು ಅಂದುಕೊಂಡಂತೆ ಆಗುವುದಿಲ್ಲ ಭಯ ಆತಂಕ. (ಅನುಕೂಲಕ್ಕಾಗಿ ಪರಿಹಾರಕ್ಕಾಗಿ ಅಮರವರ ಪೂಜೆಯನ್ನು ಮಾಡಿ)

ಧನಸ್ಸು ರಾಶಿ: ಕಾರ್ಯಗಳಲ್ಲಿ ಯಶಸ್ವಿ. ಆದರೆ ಮನಸ್ಸಿನಲ್ಲಿ ಸ್ವಲ್ಪ ಚಿಂತೆ, ತಾಯಿಯ ಸಂಬಂಧ ಕಡೆಯಿಂದ ಭಯ, ಆರೋಗ್ಯ ವೃದ್ಧಿ, ಅಪಘಾತ ವಾಗುವ ಸಂಭವ. ಕೆಲಸಗಳಿಂದ ಕಾರ್ಯಗಳಿಂದ ಅಥವಾ ವ್ಯವಹಾರದಿಂದ ವಿಮುಖ. (ಪರಿಹಾರಕ್ಕಾಗಿ ಗಣಪತಿಯ ಆರಾಧನೆಯನ್ನು ಮಾಡಿ)

ಮಕರ ರಾಶಿ: ಕೋಪ, ಉದ್ವೇಗ, ಆತಂಕ, ಭಯ, ಸ್ವತಂತ್ರವಾದ ಮಾತುಗಳು, ಆದರೂ ಸ್ವಲ್ಪ ಸ್ವಾಭಿಮಾನ, ಧನಾಗಮ ಕುಂಟಿತ, ಬಂಧು ಮಿತ್ರರ ಬೇಟಿ ಶುಭವಾಗಲಿ. (ಪರಿಹಾರಕ್ಕಾಗಿ ವನದುರ್ಗಾದೇವಿಗೆ ಬೆಲ್ಲದ ಆರತಿಯನ್ನು ಮಾಡಿ)

ಕುಂಭ ರಾಶಿ: ಒಳ್ಳೆಯ ಸಂದೇಶ, ಎಲ್ಲಾ ಕಾರ್ಯಗಳ ಆರಂಭದಲ್ಲಿ ಸ್ವಲ್ಪ ಉತ್ಸಾಹ. ಒಂಟಿತನ ಇದರಿಂದ ಸ್ವಲ್ಪ ಕಷ್ಟನಷ್ಟಗಳ ಪರಿಸ್ಥಿತಿ, ಎದುರಿಸಬೇಕಾಗುತ್ತದೆ. (ಪರಿಹಾರಕ್ಕಾಗಿ ಶಿವನ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಿ)

ಮೀನ ರಾಶಿ: ದೃಢವಾದ ಮನಸ್ಸು, ನಿರ್ಧಾರಕ್ಕೆ ಸ್ವಲ್ಪ ಅಡೆತಡೆ, ಎಚ್ಚರಿಕೆಯ ಮಾತುಗಳಿಂದ ಮನಸ್ಸಿನ ಸಂದೇಹ ನಿವಾರಣೆ.. ಆರೋಗ್ಯ, ಸ್ವಲ್ಪ ಚಿಂತೆ, ವಿದ್ಯಾರ್ಥಿಗಳಿಗೆ ಸ್ವಲ್ಪ ಕಾರ್ಯಾನುಕೂಲ. (ಪರಿಹಾರಕ್ಕಾಗಿ ಸಕ್ಕರಾಯಪಟ್ಟಣದ ಅವಧೂತರ ಸ್ಮರಣೆ ಮಾಡಿ)

ರಾಹುಕಾಲ: 10-30AM ರಿಂದ 12-00PM
ಗುಳಿಕಕಾಲ: 7-30AM ರಿಂದ 9-00 AM
ಯಮಗಂಡಕಾಲ: 3-00PMರಿಂದ 4-30P

ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್ ಕಿಡಿ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್

"ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ (D.K. Shivakumar) ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ... R. Ashoka

[ccc_my_favorite_select_button post_id="113127"]
RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ಡಿ.ಕೆ.ಶಿವಕುಮಾರ್ (D.K. Shivakumar) ತಿರುಗೇಟು ನೀಡಿದರು.

[ccc_my_favorite_select_button post_id="113124"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

17 ವರ್ಷದ ಬಾಲಕನ ಶವ ಆಘಾತಕಾರಿ ಸ್ಥಿತಿಯಲ್ಲಿ (shocking condition) ಪತ್ತೆಯಾಗಿರುವ ಘಟನೆ ನಗರದ ಕರೇನಹಳ್ಳಿಯ ಟೆಂಟ್ ಹಿಂಭಾಗದ ಗುಟ್ಟೆಯಲ್ಲಿ ಪತ್ತೆಯಾಗಿದೆ.

[ccc_my_favorite_select_button post_id="113099"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!