ದೊಡ್ಡಬಳ್ಳಾಪುರ, (Doddaballapura): ಸೇವೆಯಲ್ಲಿದ್ದಾಗಲೇ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪಿಎಸ್ಐ ಜಗದೀಶ್ ಅವರ ಜನ್ಮದಿನಾಚಣೆಯನ್ನು ಪಿಎಸ್ಐ ಜಗದೀಶ್ ಸೇವಾ ಟ್ರಸ್ಟ್ ವತಿಯಿಂದ ಇಂದು ಆಚರಣೆ ಮಾಡಲಾಯಿತು.
ಈ ವೇಳೆ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳಾದ ಎಎಸ್ಐ ರಂಗಸ್ವಾಮಿ, ಪ್ರಸನ್ನ ಕುಮಾರ್, ಪುಟ್ಟಸ್ವಾಮಯ್ಯ, ನಾಗರಾಜ್, ಲಕ್ಷ್ಮೀ ದಳವಾಯಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇನ್ಸ್ಪೆಕ್ಟರ್ಗಳಾದ ಅಮರೇಶ್ ಗೌಡ, ಸಾಧಿಕ್ ಪಾಷ, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್, ನಗರ ಠಾಣೆ ಎಸ್.ಐ ಕೃಷ್ಣಪ್ಪ, ಜಗದೀಶ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ರಾಜಘಟ್ಟ ರವಿ, ಪ್ರಧಾನ ಕಾರ್ಯದರ್ಶಿ ರೈಲ್ವೆ ಸ್ಟೇಷನ್ ಮಲ್ಲೇಶ್, ಉಪಾಧ್ಯಕ್ಷ ಪರಮೇಶ್,
ಹಮಾಮ್ ಚಂದ್ರು, ಶ್ರೀ ನಗರ ಮನು, ನವೀನ್ ಕ್ಷತ್ರಿಯ, ಮೋಹನ್ ಮತ್ತಿತರರಿದ್ದರು.