ಹರಿತಲೇಖನಿ ದಿನಕ್ಕೊಂದು ಕಥೆ: ಶ್ರೇಷ್ಠ ಭಾರತೀಯ ಸಂಸ್ಕೃತಿ

Daily story: Great Indian culture

Daily story: ಕಳೆದ ಅನೇಕ ವರ್ಷಗಳಿಂದ ಅಭ್ಯಾಸಕ್ರಮದಲ್ಲಿ ಇತಿಹಾಸದ ಪುಸ್ತಕದಿಂದ ಹಿಂದುಸ್ಥಾನದ ಸತ್ಯ ಇತಿಹಾಸವನ್ನು ಹೇಳುವುದಿಲ್ಲ.

ಇದರ ಪರಿಣಾಮವೆಂದರೆ ವಿದ್ಯಾರ್ಥಿಗೆ ‘ನಮ್ಮ ಸಂಸ್ಕೃತಿಯಲ್ಲಿ’ ನಮ್ಮ ಇತಿಹಾಸದಲ್ಲಿ ಯಾರೂ ಪರಾಕ್ರಮಿಗಳಿರಲಿಲ್ಲ, ಯಾರೂ ಜ್ಞಾನಿಯಿರಲಿಲ್ಲ’, ಎಂದೆನಿಸುತ್ತದೆ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಾತ್ರ ಜ್ಞಾನವಿದೆ. ನಮ್ಮ ದೇಶದಲ್ಲಿ ಜ್ಞಾನದ ಕೊರತೆಯಿದೆಯೆಂಬ ಸಂಸ್ಕಾರವನ್ನು ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ಬಿಂಬಿಸಲಾಗುತ್ತದೆ.

ನಮ್ಮ ಉಜ್ವಲ ಪರಂಪರೆಯ ಪರಿಚಯ ಅವನಿಗೆ ಅಗುವುದಿಲ್ಲ. ಸ್ವಾಭಾವಿಕವಾಗಿಯೇ ಅವನ ಮನಸ್ಸಿನಲ್ಲಿ ಸ್ವರಾಷ್ಟ್ರಕ್ಕಿಂತ ಇತರ ರಾಷ್ಟ್ರಗಳ ಆಕರ್ಷಣೆಯು ವೃದ್ಧಿಯಾಗುತ್ತದೆ.

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುವಾಗ ನಾವು ಸ್ವಧರ್ಮ ಮತ್ತು ಸಂಸ್ಕೃತಿಗೆ ದ್ರೋಹ ಮಾಡುತ್ತಿದ್ದೇವೆಯೆಂಬ ಅರಿವು ಅವನಿಗಿರುವುದಿಲ್ಲ. ಅದರ ಪರಿಣಾಮವಾಗಿ ಇಂದಿನ ಪೀಳಿಗೆಯು ಸಂಸ್ಕಾರಗಳನ್ನು ಕಳೆದುಕೊಂಡಿದೆ.

ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಗೊಳಿಸುವ ಸಾಮರ್ಥ್ಯವು ಹಿಂದೂ ಧರ್ಮಗ್ರಂಥಗಳಲ್ಲಿದೆ! ಮೊದಲು ದೀಪ ಹಚ್ಚುವ ಸಂದರ್ಭದಲ್ಲಿ ‘ಶುಭಂಕರೋತಿ’ ಹೇಳಲಾಗುತ್ತಿತ್ತು.

ಈಗ ಮಕ್ಕಳು ದೂರದರ್ಶನದ ಮುಂದೆ ಕುಳಿತು ‘ಕಾರ್ಟೂನು’ ಅಥವಾ ಇತರ ಮಾಲಿಕೆಗಳನ್ನು ನೋಡುತ್ತಾರೆ. ದೇಶಭಕ್ತ ಕ್ರಾಂತಿಕಾರರ ಕಾರ್ಯದ ಪರಿಚಯ ಸಹ ಮಕ್ಕಳಿಗೆ ಮಾಡಿಕೊಡಲಾಗುವುದಿಲ್ಲ.

ಸುತ್ತಮುತ್ತ ನಡೆಯುವ ಅನೇಕ ವ್ಯವಹಾರಗಳು (ಆಗುಹೋಗುಗಳು), ವಿಷಯಗಳು ವಿದ್ಯಾರ್ಥಿಗಳಿಗೆ ವೈಚಾರಿಕ, ಬೌದ್ಧಿಕ ಮತ್ತು ಮಾನಸಿಕ ದೃಷ್ಟಿಯಲ್ಲಿ ವಿಚಲಿತಗೊಳಿಸುತ್ತಿವೆ.

ಇಂದಿನ ಜೀವ ಹಿಂಡುವ ಸ್ಪರ್ಧಾತ್ಮಕ ವಾತಾವರಣದಲ್ಲಿ ಮಕ್ಕಳಲ್ಲಿ ಭಾವನಿಕವಾಗಿ ಉಸಿರುಗಟ್ಟುತ್ತಿದೆ. ಬೌದ್ಧಿಕದೃಷ್ಟಿಯಿಂದ ಸಾಮಾನ್ಯವಾಗಿರುವ ವಿದ್ಯಾರ್ಥಿಯು ನಿರಾಶೆಯೆಂಬ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಅದರಿಂದ ಹೊರಗೆ ಬರಲು ಅವನಿಗೆ ಮಾರ್ಗ ದೊರೆಯುವುದಿಲ್ಲ. ಹಾಗಾಗಿ ಅವನು ಆತ್ಮಹತ್ಯೆಯ ಮಾರ್ಗವನ್ನು ಸ್ವೀಕರಿಸುತ್ತಾನೆ.

ನಮ್ಮ ಸಂಸ್ಕೃತಿಯು ಧ್ಯೇಯನಿಷ್ಟೆ, ಮತ್ತು ಜೀವನನಿಷ್ಟೆಯನ್ನು ಕಲಿಸುತ್ತದೆ. ಆದುದರಿಂದ ನಿರಾಶೆಯು ಮನುಷ್ಯನ ಹತ್ತಿರ ಸುಳಿಯುವುದಿಲ್ಲ. ಗೀತೆಯಲ್ಲಿನ ಜ್ಞಾನವು ‘ಜೀವನ ಹೇಗೆ ಜೀವಿಸಬೇಕು’, ಎಂಬುದನ್ನು ಕಲಿಸುತ್ತದೆ.

ರಾಮಾಯಣ ಮತ್ತು ಮಹಾಭಾರತ ಇವುಗಳಲ್ಲಿನ ಕಥೆಗಳು ಹೇಗೆ ವರ್ತಿಸಬೇಕು ಹಾಗೂ ಹೇಗೆ ವರ್ತಿಸಬಾರದು ಎಂಬ ಎರಡೂ ವಿಷಯಗಳನ್ನು ಹೇಳುತ್ತದೆ.

ನೈತಿಕತೆ, ಜೀವನ ಮೌಲ್ಯ ಹಾಗೂ ‘ನಾನು ಯಾರ ದೃಷ್ಟಿಯಲ್ಲಿಯೂ ಕೀಳ್ಮಟ್ಟಕ್ಕಿಳಿಯ ಬಾರದು’, ಎಂಬ ವಸ್ತವಸ್ಥಿತಿಯ ಪಾಠ ಕಲಿಸುವ ಆದರ್ಶವು ವಿದ್ಯಾರ್ಥಿಗಳ ಮುಂದಿಲ್ಲ.

ಶಿಕ್ಷಣತಜ್ಞರು ಇಂತಹ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟು ವಿದ್ಯಾರ್ಥಿಗಳಿಗೆ ಬೌದ್ಧಿಕ, ವೈಚಾರಿಕ, ಭಾವನಿಕ ಹಾಗೂ ಮಾನಸಿಕ ದೃಷ್ಟಿಯಲ್ಲಿ ಸುದೃಢಗೊಳಿಸುವ ದೃಷ್ಟಿಯಿಂದ ಅಭ್ಯಾಸಕ್ರಮಗಳನ್ನು ಆಯೋಜಿಸಬೇಕು.

ಮನಸ್ಸಿಗೆ ಒತ್ತಡ ಹಾಕದೆ ಜ್ಞಾನ ಸಂಪಾದಿಸಬಹುದು ಎಂಬ ವಿಷಯ ಇಂದು ಎಲ್ಲರು ಮರೆತ್ತಿದ್ದಾರೆ. ಶಾಸನ ಸಹ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿ ತಮ್ಮ ಮಕ್ಕಳಿಗೆ ನಿಜ ಇತಿಹಾಸವನ್ನು ಹೇಳುವ ಧೈರ್ಯ ತೋರಿಸಬೇಕು .

ವಿದ್ಯಾರ್ಥಿಗಳಿಗೆ ಕಲಿಸುವ ಅಧ್ಯಾಪಕವರ್ಗವು ಜ್ಞಾನಪಿಪಾಸು ಆಗಿರಬೇಕು. ಕೌಶಲ್ಯಪೂರ್ಣವಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಅಧಿಕಾರ ಅವನಲ್ಲಿರಬೇಕು.

‘ಜ್ಞಾನ ಸಂಪಾದನೆ ಮಾಡಿದಾಗ’ ತಂತಾನೇ ಗುಣ ಸಿಗುತ್ತದೆಯೆಂಬ’, ವಿಶ್ವಾಸವನ್ನು ವಿದ್ಯಾರ್ಥಿಯ ಮನಸ್ಸಿನಲ್ಲಿ ನಿರ್ಮಾಣ ಮಾಡಬೇಕು.

ನಮ್ಮ ವಿದ್ಯಾರ್ಥಿ ದೀಪ ಸ್ತಂಭದಂತಿರಬೇಕು, ಬಿರುಗಾಳಿ ಸಂಕಟದಲ್ಲಿ ನಿಶ್ಚಲವಾಗಿ, ಧೃಡವಾಗಿ ಮತ್ತು ಅಪರಾಜಿತ ಯೋದ್ಧನ ಹಾಗೆ ಕಾಲೂರಿ ನಿಲ್ಲುವವನು ಹಾಗೂ ನಮ್ಮ ಇತರ ಬಾಂಧವರಿಗೆ ಮಾರ್ಗದರ್ಶನ ಮಾಡುವವನಾಗಿರಬೇಕು.

ಇಂತಹ ಶಿಕ್ಷಣಪದ್ಧತಿ ಕೇವಲ ರಾಷ್ಟ್ರದಲ್ಲಿ ಮಾತ್ರವಲ್ಲ, ಸಂಪೂರ್ಣ ಮಾನವ ಜಾತಿಯ ಉದ್ಧಾರ ಮಾಡುವುದೆಂಬುದರಲ್ಲಿ ಸಂಶಯವಿಲ್ಲ.

ಕೃಪೆ: ಹಿಂದೂ ಜಾಗೃತಿ.

ರಾಜಕೀಯ

ಲೋಕಸಭೆ: ಕಾಂಗ್ರೆಸ್, ಡಿಎಂಕೆ ಮೇಲೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಲೋಕಸಭೆ: ಕಾಂಗ್ರೆಸ್, ಡಿಎಂಕೆ ಮೇಲೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಲೋಕಸಭೆ ಮತ್ತು ವಿಧಾಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇರಿಸಿರುವ ಹೆಜ್ಜೆ ಐತಿಹಾಸಿಕ ಎಂದು ಬಣ್ಣಿಸಿದ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy); ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ

[ccc_my_favorite_select_button post_id="121061"]
5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ (Monsoon deficit) ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಸೂಚಿಸಿದರು.

[ccc_my_favorite_select_button post_id="121032"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತದಲ್ಲಿ (Accident) ವಿಜಯನಗರ-ಕೊಪ್ಪಳ ಜಿಲ್ಲಾ ಡಿಸಿಆರ್‌ಇ ಪೊಲೀಸ್‌ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಡಬನಕಟ್ಟೆ ಬಳಿ ಸಂಭವಿಸಿದೆ.

[ccc_my_favorite_select_button post_id="121017"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!