100 acre terraforma waste unit revived..!

100 ಎಕರೆಯಲ್ಲಿ ಟೆರ್ರಾಫಾರ್ಮ ತ್ಯಾಜ್ಯ ಘಟಕಕ್ಕೆ ಮರು ಜೀವ..!: ದೊಡ್ಡಬಳ್ಳಾಪುರಕ್ಕೆ ಮತ್ತೊಂದು BBMP ಕಸದ ಕಂಟಕ..

ದೊಡ್ಡಬಳ್ಳಾಪುರ (terraforma): ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದ ತೊಂದರೆಗೆ ಒಳಗಾಗಿರುವ ಗ್ರಾಮಗಳಲ್ಲಿ, ಹಲವರ ಪಾಪದ ಕೂಸಾಗಿ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಒಕ್ಕರಿಸಿರುವ ಬಿಬಿಎಂಪಿ ತಾಲೂಕಿನ ಜನರ ಆಶಯದ ವಿರುದ್ಧ ಮತ್ತೊಂದು ಆತಂಕಕಾರಿ ನಿರ್ಣಯ ಕೈಗೊಂಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರ ಟನ್ ತ್ಯಾಜ್ಯ ಸಂಸ್ಕರಣೆಯಾಗುತ್ತಿದ್ದು, ಪ್ರತಿದಿನ ಸುಮಾರು 2,500 ಟನ್ ಮಿಶ್ರತ್ಯಾಜ್ಯ ಭೂಭರ್ತಿಯಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಈ ವಿಚಾರದಲ್ಲಿ ಆಘಾತಕಾರಿಯಾಗಿ 100 ಎಕರೆ ಜಾಗವನ್ನು ದೊಡ್ಡಬಳ್ಳಾಪುರದ ಟೆರ್ರಾಫಾರ್ಮ್ ಬಳಿ ಅಂತಿಮಗೊಳಿಸಲಾಗಿದೆ. ಈಗಾಗಲೇ ಸರ್ಕಾರದ 50 ಎಕರೆ ಭೂಮಿ ಇದ್ದು, ಖಾಸಗಿಯವರಿಂದ ಸುಮಾರು 65 ಎಕರೆ ಖರೀದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಟೆರ್ರಾಫಾರ್ಮಗೆ ಮರು ಜೀವ..!

2006ರಲ್ಲಿ ಈ ಭಾಗದ ರಿಯಲ್‌ ಎಸ್ಟೇಟ್‌ ಏಜನ್ಸಿಗಳು ಪ್ರಥಮ ಬಾರಿಗೆ ಗುಂಡ್ಲಹಳ್ಳಿ ಸಮೀಪ ರೈತರಿಗೆ ಉತ್ತಮ ಬೆಲೆ ಕೊಡಿಸುವ ಮೂಲಕ ಭೂಮಿ ಖರೀದಿಸಿ ಟೆರ್ರಾಫಾರ್ಮ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟರು. ಆದರೆ ಕಸವಿಲೇವಾರಿ ಘಟಕ ದಿನ ಕಳೆದಂತೆ ಈ ಭಾಗದ ಜನರ ಪಾಲಿನ ಮೃತ್ಯು ಕೂಪವಾಗಿ ಕಾಡಲಾರಂಭಿಸಿತ್ತು.

ಇದರ ವಿರುದ್ಧ ಸಿಡಿದೆದ್ದ ಸ್ಥಳೀಯ ಜನ 2014ರಲ್ಲಿ ಟೆರ್ರಾ ಫಾರ್ಮ ಬಂದ್‌ ಮಾಡಿಸುವಲ್ಲಿ ಸಫಲರಾಗಿದ್ದರು.

ಆದರೆ ಈಗ ದೊಡ್ಡಬಳ್ಳಾಪುರಕ್ಕೆ ಮತ್ತೆ ಬಿಬಿಎಂಪಿ ಕಸ ಕಂಟಕ ಎದುರಾಗಿದ್ದು, ತಾಲೂಕಿನ ಜನರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ, ಟೆರ್ರಾಫಾರ್ಮ್ವನ್ನು ಮತ್ತೆ ಆರಂಭಿಸಲು ಬಿಬಿಎಂಪಿ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ.

ಈಗಾಗಲೇ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಗರೇನಹಳ್ಳಿಯ ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದ ತೊಂದರೆಗೆ ಒಳಗಾಗಿರುವ ಗ್ರಾಮಗಳಲ್ಲಿ ಇಲ್ಲಿಯವರೆಗೂ ಹಲವಾರು ಸುತ್ತಿನ ಹೋರಾಟಗಳು ನಡೆದಿವೆ. ಆದರೆ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಭರವಸೆಗಳನ್ನು ನಂಬಿ ಇಲ್ಲಿನ ಜನ ತೊಂದರೆಗಳನ್ನು ಅನುಭವಿಸುವಂತಾಗಿದೆ.

ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಎಲ್ಲಾ ಜನರ ಅಭಿಪ್ರಾಯದಂತೆ ಹೋರಾಟ ರೂಪಿಸುವ ಮೂಲಕ ಇಲ್ಲಿಗೆ ಮತ್ತೆ ಕಸ ಬಾರದಂತೆ ತಡೆಯಲು ಹೋರಾಟ ನಡೆದಿದೆ.

ಗ್ರಾಮಸಭೆಗಳು ನಡೆದು ನಂತರ ಎಲ್ಲಾ ಸಂಘಟನೆಗಳು, ರಾಜಕೀಯ ಪಕ್ಷಗಳನ್ನು ಒಳಗೊಂಡ ಹೋರಾಟ ಸಮಿತಿ ರಚಿಸಿಕೊಂಡು ಮುಂದಿನ ಹೋರಾಟವನ್ನು ವ್ಯವಸ್ಥಿತವಾಗಿ ನಡೆಸಬೇಕೆಂಬ ಹೋರಾಟ ಏಕಾಏಕಿ ತಣ್ಣಗಾಗಿ ಹೋಯಿತು.

ಹಲವರ ಪಾಪದ ಕೂಸಾಗಿ ತಾಲ್ಲೂಕಿಗೆ ಒಕ್ಕರಿಸಿರುವ ಬಿಬಿಎಂಪಿ ಕಸದ ವಿರುದ್ಧ ಮತ್ತೆ ಜನ ಜಾಗೃತಿ ಮೂಡಿಸಿ ಎಲ್ಲರನ್ನು ಒಳಗೊಂಡಂತೆ ಹೋರಾಟ ಮಾಡುವ ತುರ್ತು ಪರಿಸ್ಥಿತಿ ಎದುರಾಗಿದೆ.

ಈಗಾಗಲೇ ಬಿಬಿಎಂಪಿ ಕಸ ವಿಲೇವಾರಿ ಘಟಕದ ಸುತ್ತ ಮುತ್ತಲಿನ ಸಕ್ಕರೆಗೊಳ್ಳಹಳ್ಳಿ, ಭಕ್ತರಹಳ್ಳಿ, ಸಾಸಲು ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಮಗಳಿಂದ ದನ, ಕರು, ಮೇಕೆ, ಕುರಿಗಳಂತಹ ಸಾಕುಪ್ರಾಣಿ, ಹಣ್ಣು, ತರಕಾರಿಗಳನ್ನು ಖರೀದಿ ಮಾಡಲು ಜನ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇದಿಷ್ಟೇ ಅಲ್ಲದೆ ಈ ಗ್ರಾಮಗಳಿಗೆ ಹೆಣ್ಣುಗಳನ್ನು ಕೊಡಲು, ಹೆಣ್ಣುಗಳನ್ನು ಪಡೆಯಲು ಯೋಚಿಸುವಂತಾಗಿದೆ. ಈ ಸ್ಥಿತಿ ಕಸ ವಿಲೇವಾರಿ ಘಟಕದ ಗ್ರಾಮಗಳಿಗೆ ಮಾತ್ರ ಸೀಮಿತ ಎನ್ನುತ್ತ ಕಸ ವಿಲೇವಾರಿ ಘಟಕದಿಂದ ದೂರದ ಗ್ರಾಮಗಳ ಜನರು ಮೈ ಮರೆತು ಸುಮ್ಮನೆ ಕೂರುವಂತಿಲ್ಲ.

ಬಿಬಿಎಂಪಿ ಕಸದಿಂದ ರೋಗ ಭಾದೆಗಳಿಗೆ ತುತ್ತಾದ ಜನ, ಜಾನುವಾರುಗಳಿಂದ ಹರಡುವ ಖಾಯಿಲೆಗಳು ಊಹೆಗೂ ನಿಲುಕುವುದಿಲ್ಲ.

ಈ ಹಿಂದಿನ ಹೋರಾಟಗಳ ಏಳು ಬೀಳು, ಸ್ವಾರ್ಥಗಳನ್ನು ಬದಿಗಿಟ್ಟು ಟೆರ್ರಾಫಾರ್ಮ ಆರಂಭಿಸಲು ಸಿದ್ದತೆ ನಡೆಸಿರುವ ಬಿಬಿಎಂಪಿ ಕಸದ ವಿರುದ್ಧ ತಾಲೂಕಿನ ಜನತೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.

ರಾಜಕೀಯ

ಧರ್ಮಸ್ಥಳ ಕ್ಷೇತ್ರ ರಾಜಕೀಯ ವಸ್ತುವಲ್ಲ; ಪ್ರತಿಪಕ್ಷಗಳ ಮೇಲೆ ಹರಿಹಾಯ್ದ ಡಿ.ಕೆ. ಸುರೇಶ್

ಧರ್ಮಸ್ಥಳ ಕ್ಷೇತ್ರ ರಾಜಕೀಯ ವಸ್ತುವಲ್ಲ; ಪ್ರತಿಪಕ್ಷಗಳ ಮೇಲೆ ಹರಿಹಾಯ್ದ ಡಿ.ಕೆ. ಸುರೇಶ್

“ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವಂತಹ ಬಿಜೆಪಿ- ಜೆಡಿಎಸ್ ಪಕ್ಷಗಳ ರಾಜಕೀಯ ಒಳಒಪ್ಪಂದವನ್ನು ಕಾಂಗ್ರೆಸ್ ಸರ್ಕಾರ ನಿಷ್ಪಕ್ಷಪಾತ ಎಸ್ಐಟಿ ತನಿಖೆ ಮೂಲಕ ವಿಫಲಗೊಳಿಸಿದೆ: ಡಿ.ಕೆ. ಸುರೇಶ್ (D.K. Suresh)

[ccc_my_favorite_select_button post_id="113464"]
ಧರ್ಮಸ್ಥಳ ಪ್ರಕರಣ: ಧರ್ಮ ರಕ್ಷಾ ಜಾಥಾಗೆ ಕೆ.ಎಸ್.ಈಶ್ವರಪ್ಪ ಚಾಲನೆ

ಧರ್ಮಸ್ಥಳ ಪ್ರಕರಣ: ಧರ್ಮ ರಕ್ಷಾ ಜಾಥಾಗೆ ಕೆ.ಎಸ್.ಈಶ್ವರಪ್ಪ ಚಾಲನೆ

ರಾಷ್ಟ್ರಭಕ್ತರ ಬಳಗದಿಂದ 224 ಕಾರುಗಳು ಹಾಗೂ 5 ಟಿ.ಟಿ ವಾಹನದ ಮೂಲಕ ಧರ್ಮಸ್ಥಳಕ್ಕೆ (Dharmasthala) ಧರ್ಮ ರಕ್ಷಾ ಜಾಥಾಗೆ ಮಾಜಿ ಉಪ ಮುಖ್ಯಮಂತ್ರಿ ಕೆ‌.ಎಸ್.ಈಶ್ವರಪ್ಪ (K.S. Eshwarappa) ಚಾಲನೆ

[ccc_my_favorite_select_button post_id="113436"]
7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ತಮ್ಮ 2 ದಿನಗಳ ಚೀನಾ ಭೇಟಿಯನ್ನು ಮುಗಿಸಿ ದೇಶಕ್ಕೆ ಮರಳಿದ್ದಾರೆ. ಇದನ್ನು ಅವರು 'ಉತ್ಪಾದಕ' ಭೇಟಿ ಎಂದು ಬಣ್ಣಿಸಿದ್ದಾರೆ.

[ccc_my_favorite_select_button post_id="113432"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರ: R.L.ಜಾಲಪ್ಪ ಕಾಲೇಜಿನಲ್ಲಿ ಮೇಜರ್ ಧ್ಯಾನ್‌ ಚಂದ್ ಜನ್ಮದಿನಾಚರಣೆ

ದೊಡ್ಡಬಳ್ಳಾಪುರ: R.L.ಜಾಲಪ್ಪ ಕಾಲೇಜಿನಲ್ಲಿ ಮೇಜರ್ ಧ್ಯಾನ್‌ ಚಂದ್ ಜನ್ಮದಿನಾಚರಣೆ

ಹಾಕಿ ದಂತಕಥೆ ಮೇಜರ್ ಧ್ಯಾನ್‌ ಚಂದ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನಗರದ ಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ (R.L. Jalappa Technical College) ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.

[ccc_my_favorite_select_button post_id="113312"]
ಅಪ್ರಾಪ್ತೆ ಜತೆ ಗ್ರಾಮಪಂಚಾಯಿತಿ ಅಧ್ಯಕ್ಷ ಮದುವೆ..!

ಅಪ್ರಾಪ್ತೆ ಜತೆ ಗ್ರಾಮಪಂಚಾಯಿತಿ ಅಧ್ಯಕ್ಷ ಮದುವೆ..!

ಅಪ್ರಾಪ್ತ ಬಾಲಕಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ (Gram Panchayat President) ವಿವಾಹವಾಗಿರುವ ಘಟನೆ ಜಿಲ್ಲೆಯ

[ccc_my_favorite_select_button post_id="113387"]
ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಸ್ಕೂಟರ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಸ್ಕೂಟರ್ ಸವಾರ ದುರ್ಮರಣ

ಸ್ಕೂಟರ್‌ ಸವಾರನ ಮೇಲೆ ಲಾರಿಯ ಚಕ್ರ ಹರಿದು (Accident), ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದಲ್ಲಿರುವ ಪಾಲನಜೋಗಿಹಳ್ಳಿ ಬಳಿ ನಡೆದಿದೆ.

[ccc_my_favorite_select_button post_id="113368"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!