ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಜನ ಮೆಚ್ಚಿದ ನಾಯಕರು ಯಾರು ಇಲ್ಲವೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basana Gouda Patila Yatnal) ಹೇಳಿದ್ದಾರೆ.
ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟನೆ ಬಳಿಕ ಇಂದು ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಅವರು, ವಿಜಯೇಂದ್ರ ಒತ್ತಡಕ್ಕೆ ಮಣಿದು ಹೈಕಮಾಂಡ್ ಉಚ್ಚಾಟನೆ ಮಾಡಿದೆ. ಆದರೆ ಇದನ್ನು ಪರಾಮರ್ಶೆ ಮಾಡುವ ಸಾಧ್ಯತೆ ಇದೆ ಎಂದು, ಜಗದೀಶ್ ಶೆಟ್ಟರ್ ಅವರನ್ನು ಉದಾಹರಣೆ ನೀಡಿದರು.
ಯತ್ನಾಳ್ ಉಚ್ಚಾಟನೆ ಮಾಡಬೇಕು.. ವೀರಶೈವ ಲಿಂಗಾಯತ ಸಮುದಾಯ ನಮ್ಮ ಹಿಂದೆ ಇದೆ ಎಂದು ವಿಜಯೇಂದ್ರ ಒತ್ತಡ ತಂದಿದ್ದಾರೆ. ಆದರೆ ಅವರ ಹಿಂದೆ ಮೂರು ಜನ ಸ್ವಾಮಿಗಳು ಬಿಟ್ಟರೆ ನಿಜವಾದ ವೀರಶೈವ ಲಿಂಗಾಯತರು ಯಾರು ಇಲ್ಲ.
ರಾಜ್ಯ ಬಿಜೆಪಿಯಲ್ಲಿ ಜನ ಮೆಚ್ಚಿನ ನಾಯಕ ಯಾರು ಇಲ್ಲ, ಸ್ವಯಂ ಪ್ರೆರಿತವಾಗಿ ಸಾವಿರ ಜನರ ಸೇರಿಸುವ ಶಕ್ತಿ ಯಾರಿಗೂ ಇಲ್ಲ. ಬಾಡಿಗೆ ಜನರ ತರಿಸೋದಲ್ಲ, ಸ್ವಯಂ ಪ್ರೇರಿತವಾಗಿ ಬರಬೇಕು.
ವಿಜಯೇಂದ್ರ ಕುರಿತು ಯಾವುದೇ ಸಂಸದರಿಗೆ ಸಹಮತವಿಲ್ಲ. ರಾಘವೇಂದ್ರ ಬಿಟ್ಟರೆ ಎಲ್ಲರೂ ವಿಜಯೇಂದ್ರನ ಕೆಳಗಿಳಿಸಬೇಕು ಎಂ ಆಸೆ ಉಳ್ಳವರೇ ಆಗಿದ್ದಾರೆ.
ಉಚ್ಚಾಟನೆ ಬಳಿಕವೂ ಯಡಿಯೂರಪ್ಪ ಕುಟುಂಬದ ಕೈಯಿಂದ ಬಿಜೆಪಿಯನ್ನು ಮುಕ್ತ ಮಾಡಿಸುವ ಹೋರಾಟ ಮುಂದುವರೆಯಲಿದೆ. ಅದರಲ್ಲಿ ಯಾವುದೇ ಅನುಮಾನಳಿಲ್ಲ.
ನನ್ನ ಉಚ್ಚಾಟನೆ ಬಳಿಕ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕರು ಮೆಸೇಜ್ ಮಾಡಿ ಧೈರ್ಯ ಹೇಳುತ್ತಿದ್ದಾರೆ. ಅನಂತ್ ಕುಮಾರ್, ಈಶ್ವರಪ್ಪ, ಸಿಟಿ ರವಿ ಪ್ರತಾಪ್ ಸಿಂಹರಂತಹ ಹಿಂದುತ್ವ ಪರ ಹೋರಾಟಗಾರರಿಗೆ ಆಗುತ್ತಿರುವ ಅನ್ಯಾಯಕ್ಕೆ ಜನರಲ್ಲಿ ಬೇಸರವಿದೆ..
ರಮೇಶ್ ಜಾರಕ್ಕಿಹೊಳಿ, ಮಧು ಬಂಗಾರ ಮುಂತಾದವರು ಮರು ಪರಿಶೀಲನೆಗೆ ಮನವಿ ಮಾಡುತ್ತೇವೆ ಎಂದಿದ್ದಾರೆ ನೋಡೋಣ ಎಂದರು
ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡುವಿರಾ ಎಂಬ ಪ್ರಶ್ನೆಗೆ, ಮುಗೀತು ಅಲ್ಲೇನು ಕೆಲಸ ಇಲ್ಲ ಗಡ್ಕರಿ ಅವರು ನಮ್ಮ ಕಾರ್ಖಾನೆಗೆ ಭೇಟಿ ನೀಡಬೇಕಿತ್ತು. ಆದರೆ ವಿಜಯೇಂದ್ರ ಪತ್ರ ನೀಡಿ ಬರಬಾರದು ಎಂದಿದ್ದಾರೆ.
ಮತ್ತೆ ನಾ ಗೌರವಯುತವಾಗಿ ಬಿಜೆಪಿ ಬರ್ತಿನಿ, ವಿಥ್ ಪವರ್ ಬರ್ತೀನಿ ಎಷ್ಟು ಹಾರಾಡ್ತಿರೋ ಹಾರಾಡಿ ಎಂದು ವಿಜಯೇಂದ್ರ ಬಣಕ್ಕೆ ಎಚ್ಚರಿಕೆ ನೀಡಿದರು.