ಕೋಲಾರ: ಪೊಲೀಸ್ ಜೀಪ್ ಬೊಲೆರೋ ವಾಹನ ಗುದ್ದಿದ ಪರಿಣಾಮ (Accident) ದ್ವಿಚಕ್ರ ವಾಹನದ ಸವಾರ ಸಾವನ್ನಪ್ಪಿರುವ ಘಟನೆ ಮುಳಬಾಗಿಲಿನಲ್ಲಿ ನಡೆದಿದೆ.
ಕೆಜಿಎಫ್ ತಾಲ್ಲೂಕಿನ ಬಡಮಾಕನಹಳ್ಳಿಯ ನಿವಾಸಿ ನಾರಾಯಣ ಸ್ವಾಮಿ ಮೃತ ದುರ್ದೈವಿ.
ಕೋಲಾರ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪ್ರಯಾಣಿಸುತ್ತಿದ್ದ ವೇಳೆ ಕಾಂತರಾಜ್ ಸರ್ಕಲ್ ನಲ್ಲಿ ನಾರಾಯಣ ಸ್ವಾಮಿ ಅವರ ಬೈಕ್ ಗೆ ಜೀಪ್ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾರಾಯಣ ಸ್ವಾಮಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಹೆಂಡತಿಯ ಮೂಗು ಸುಂದರವಾಗಿದೆ ಎಂದು ಕಚ್ಚಿ ತಿಂದ ಗಂಡ..!
ಆದರೆ ಚಿಕಿತ್ಸೆ ಫಲಿಸದೆ ನಾರಾಯಣ ಸ್ವಾಮಿ ಮೃತಪಟ್ಟಿದ್ದಾರೆ.
ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.