ದೊಡ್ಡಬಳ್ಳಾಪುರ: ಮಂಥನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಹಿಂದುತ್ವ ವರ್ತಮಾನದ ಸಂದರ್ಭದಲ್ಲಿ ಹಿಂದುತ್ವ ಪುಸ್ತಕ (Hindutva Book )ಬಿಡುಗಡೆ ಕಾರ್ಯಕ್ರಮ ನಗರದ ಭಗತ್ ಸಿಂಗ್ ಕ್ರೀಡಾಂಗಣದ ಸಮೀಪದ ಶಿವಗಂಗಾ ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ವಕೀಲರು ಹಾಗೂ ವಿಶ್ವ ಸಂವಾದ ಕೇಂದ್ರದ ವಿಶ್ವಸ್ಥರಾದ ಕ್ಷಮಾ ನರಗುಂದ ಮತ್ತು ಕೀರ್ತಿ ಅಂಡ್ ಕೊ ಮಾಲಿಕರಾದ ಮುನೇಶ್ ಹಿಂದುತ್ವ ಕೃತಿಯನ್ನು ಬಿಡುಗಡೆ ಮಾಡಿದರು.
ಕ್ಷಮಾ ನರಗುಂದ ಮಾತನಾಡಿ, ಹಿಂದುತ್ವದ ವಿಚಾರ ಕುರಿತ ದೃಷ್ಟಿಕೋನ ವಿಶಾಲವಾಗಿದೆ. ಕರ್ಮ, ಸಿದ್ದಾಂತ, ಮೋಕ್ಷ ಮಾರ್ಗದ ಬಗ್ಗೆ ನಮ್ಮ ಸನಾತನ ಧರ್ಮದಲ್ಲಿ ಉಲ್ಲೇಖಗಳಿವೆ. ಮುಖ್ಯವಾಗಿ ಸಂವಿಧಾನದಲ್ಲಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಬ್ರಾತೃತ್ವದ ವಿಚಾರವನ್ನು ಸನಾತನ ಧರ್ಮ ಗ್ರಂಥದಿಂದಲೇ ತೆಗೆದುಕೊಳ್ಳಲಾಗಿದೆ. ಇದರ ಮಹತ್ವ ಅರಿತು ನಮ್ಮ ಧರ್ಮ ಸಂಸ್ಕೃತಿ ರಕ್ಷಣೆಗಾಗಿ ನಾವು ಕಟಿಬದ್ದರಾಬೇಕು ಎಂದರು.
ಪುಸ್ತಕದಲ್ಲಿ ಫೆಬ್ರವರಿಯಲ್ಲಿ ನಡೆದ ಲೋಕಮಥ್ ವಿನ ಮೋಹನ ಜೀ ಭಾಗವತ್ರ ಬೌದಿಕ್ ನ ಸಾರಾಂಶ ಸುರೇಶ್ ಸೋನಿ ಹಾಗೂ ಅರುಣ್ ಜೀ ಅವರು ಬರೆದ ಹಿಂದೂತ್ವದ ಲೇಖನಗಳಲ್ಲಿನ ಅಂಶಗಳನ್ನು ಸತ್ಯನಾರಾಯಣ, ನಾಗರಾಜು ಅವರು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಂಥನದ ಕಾರ್ಯಕರ್ತರಾದ ನಾಗರಾಜ್, ಜಗದೀಶ್, ಪ್ರದೀಪ್, ಕೆ.ಸಿ.ವೆಂಕಟೇಶ್, ಭಾಸ್ಕರ್, ಸ.ರಮೇಶ್, ಸಾಹಿಲ್ ಸುರಾಣ ಇದ್ದರು.