Chief Minister, is it possible for you to clear the encroachment of that politician's Rajkaluve?; Nikhil Kumaraswamy

ಮುಖ್ಯಮಂತ್ರಿಗಳೇ ನಿಮ್ಮ ಕೈಲಿ ಆ ರಾಜಕಾರಣಿ ರಾಜಕಾಲುವೆ ಒತ್ತುವರಿ ತೆರುವು ಮಾಡೋಕಾಗುತ್ತಾ?; ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ದೊಡ್ಡ ಮಟ್ಟದ ಕಮರ್ಷಿಯಲ್ ಪ್ರಾಪರ್ಟಿ ಪ್ರಭಾವಿ ರಾಜಕಾರಣಿಗಾಗಿ ರಾಜಕಾಲುವೆ ಒತ್ತುವರಿ ಆಗಿದೆ. ರಾಜಕೀಯ ನಾಯಕರು ರಾಜಕಾಲುವೆ ನುಂಗಿ ಹಾಕುವ ಕೆಲಸ ‌ಮಾಡ್ತಿದ್ದಾರೆ. ಒಂದು ದಿನ ಟ್ಯಾಕ್ಸ್ ಕಟ್ಟೋದು ತಡ ಆದ್ರೆ ಜನರ ಕುತ್ತಿಗೆ ಮೇಲೆ ಕುಳಿತುಕೊಳ್ತೀರಾ. ಆದರೆ ಅದಕ್ಕೆ ‌ಪೂರಕವಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಜೆಡಿಎಸ್ ಯಾವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ( Nikhil Kumaraswamy) ಸರ್ಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣಿಗಾಗಿ ರಾಜಕಾಲುವೆ ಒತ್ತುವರಿ ಆಗಿದೆ ಆರೋಪ

ನಿನ್ನೆ ಸಿಎಂ, ಡಿಸಿಎಂ ಪ್ರವಾಸ ಮಾಡಿದ್ರು. ಸಿಎಂ ಅವರು ರಾಜಕಾಲುವೆ ಒತ್ತುವರಿ ಆಗಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿ ಬಿಲ್ಡಿಂಗ್ ಕಟ್ಟಿದ್ದಾರೆ. ಅವರನ್ನ ತೆರವು ಮಾಡೋಕೆ ಅಗುತ್ತಾ ಸಿಎಂ ಅವರೇ.? ಬಲಿಷ್ಠರಿಂದ ಒತ್ತುವರಿ ಆಗಿದೆ. ತೆರವು ಮಾಡೋಕೆ‌ ಸಾಧ್ಯನಾ? ಎಂದು ವಾಗ್ದಾಳಿ ನಡೆಸಿದರು.

ರಾಜಕಾಲುವೆ ‌ಒತ್ತುವರಿಯೇ ಜಾಸ್ತಿ ಆಗಿದೆ

ನಾವು ಹೋದ ಕ್ಷೇತ್ರದಲ್ಲಿ ಅಲ್ಲಿನ ಶಾಸಕರು 4-5 ಬಾರಿ ಗೆದ್ದಿರೋರು. ಮಂತ್ರಿ ಆಗಿರುವವರು ಇದ್ದರು.ವಿಪರ್ಯಾಸ ಅಂದರೆ ಅವರ ಸ್ವಂತ ಕ್ಷೇತ್ರದಲ್ಲಿ ಅವ್ಯವಸ್ಥೆ ಆಗಿದೆ. ನಾವು ಹೋದ ಕಡೆ ಜನ ಮಧ್ಯಮ ವರ್ಗದ ಜನರು.ಕಷ್ಟಪಟ್ಟು ಜೀವನ ಮಾಡ್ತಿದ್ದಾರೆ. ರಾಜಕಾಲುವೆ, ಕೆರೆ ಕಟ್ಟೆಗಳು ಬಗ್ಗೆ ಚರ್ಚೆ ಆಗಬೇಕು. ರಾಜಕಾಲುವೆ ‌ಒತ್ತುವರಿಯೇ ಜಾಸ್ತಿ ಆಗಿದೆ.

ಸಿಎಂ, ಡಿಸಿಎಂ ‌ಕಾಟಾಚಾರದ ಭೇಟಿ

ಡಿಸಿಎಂ ಅವರು ಲಘುವಾಗಿ ಮಾತಾಡಿದ್ದಾರೆ. ಮಳೆ ಬಂದರೆ ಏನು ತೊಂದರೆ ಅಂತ ಕೇಳ್ತಾರೆ. ಡಿಸಿಎಂ ಅವರ ಏರಿಯಾ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಏರಿಯಾ?‌ ಇಲ್ಲಿ ಬದುಕೋರು ಬಡವರು. ಹೊಸಪೇಟೆಯಲ್ಲಿ 2 ವರ್ಷ ಸಾಧನಾ ಸಮಾವೇಶ ಮಾಡ್ತಿದ್ದಾರೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ನಿನ್ನೆ ಸಿಎಂ, ಡಿಸಿಎಂ ‌ಕಾಟಾಚಾರದ ಭೇಟಿ ಕೊಟ್ಟಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು

ಕಳೆದ 4-5 ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಅವಾಂತರ ಜಾಸ್ತಿ ಆಗಿದೆ‌. ಒಂದೇ ಒಂದು ಮಳೆಗೆ ಬೆಂಗಳೂರು ಯುರೋಪ್ ವೆನಿಸ್ ಸಿಟಿ ತರಹ ಬೆಂಗಳೂರು ಆಗಿದೆ. ಬೆಂಗಳೂರು-ವೆನಿಸ್ ದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ ಎಂದುಅವರು ವ್ಯಂಗ್ಯವಾಡಿದರು.

ಮಳೆಯಿಂದ ಹಾನಿಗೊಳಗದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮ ಗಳ ಜತೆ ಮಾತನಾಡಿದರು ಅವರು, ಇಂದು ಬೆಂಗಳೂರುಮಳೆ ಹಾನಿ ಪ್ರದೇಶಗಳಿಗೆ ಪ್ರವಾಸ ಮಾಡಿದ್ರಿ, ಸ್ಥಳೀಯ ಜನರ ಸಮಸ್ಯೆ ಕೇಳಿದ್ದೇವೆ. ಜನರು ತಮ್ಮ ನೋವು ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ದೊಡ್ಡ ಅವ್ಯವಸ್ಥೆ ಆಗಿದೆ. ಬೆಂಗಳೂರು ನಗರ ರಾಜ್ಯದ ಜಿಡಿಪಿಗೆ ಜಾಸ್ತಿ ಕೊಡುಗೆ ಕೊಡ್ತಿದೆ. ಬೆಂಗಳೂರಿನಿಂದ ಜಾಸ್ತಿ ತೆರಿಗೆ ಬರ್ತಿದೆ. ಆದರೆ ಬೆಂಗಳೂರಿಗೆ ಮೂಲಭೂತ ಸೌಕರ್ಯಗಳೇ ಇಲ್ಲ ಎಂದು ಅವರು ಕಿಡಿಕಾರಿದರು.

ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಮಹಾ ಮಳೆ ಸಾಕಷ್ಟು ಹಾನಿಯನ್ನು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಹಾಗೂ ಮುಖಂಡರನ್ನೊಳಗೊಂಡ ತಂಡ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿ, ಸಂಕಷ್ಟಕ್ಕೊಳಗಾದ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿದ್ದೇವೆ ಇದನ್ನ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.

ಜಯನಗರ, ಸಿಲ್ಕ್ ಬೋರ್ಡ್, ಮಹದೇವಪುರ ಪಣತ್ತೊರು ರೈಲ್ವೆ ಅಂಡರ್ ಪಾಸ್, ಹೆಣ್ಣೂರು ಸಾಯಿ ಬಡಾವಣೆ, ಸಾಯಿ ಲೇಔಟ್, ಸರ್ವಜ್ಞ ನಗರ ಸೇರಿದಂತೆ ಮಳೆ ಹಾನಿ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಮಳೆ ಬಂದಾಗ ಆಗೋ ಸಮಸ್ಯೆ ಒಂದು ವಾರದ ಚರ್ಚೆ ಆಗಿರಬಾರದು

ಸಾಯಿ ಲೇಔಟ್ ನಲ್ಲಿ 10 ವರ್ಷಗಳಿಂದ ನಿರಂತರ ಸಮಸ್ಯೆ ಆಗ್ತಿದೆ. ಜನರು ಮನೆಗಳನ್ನೇ ಖಾಲಿ ಮಾಡಿದ್ದಾರೆ. ಮನುಷ್ಯರು ವಾಸ ಮಾಡೋಕೆ ಆಗಲ್ಲ ಅಲ್ಲಿ. ಮಳೆಯಿಂದ ಕಾಯಿಲೆಗೆ ತುತ್ತಾಗುವ ಭೀತಿ ಇದೆ. ಸಿಎಂ ಅವರು ಬರ್ತಾರೆ ಅಂತ ತರಾತುರಿಯಲ್ಲಿ ಅಧಿಕಾರಿಗಳು ನಿನ್ನೆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಜನರಿಗೆ ನಾನು ಮನವಿ ಮಾಡ್ತೀನಿ ಮಳೆ ಬಂದಾಗ ಆಗೋ ಸಮಸ್ಯೆ ಒಂದು ವಾರದ ಚರ್ಚೆ ಆಗಿರಬಾರದು. ಜೆಡಿಎಸ್ ಪಕ್ಷ ನಿಮ್ಮ ಜೊತೆ ಇದೆ. ಒಂದು ತಂಡ ಕಟ್ಟಿಕೊಂಡು ಸಿಎಂ, ಡಿಸಿಎಂ ಅವರಿಗೆ ಮನವಿ ಕೊಡೋಣ ಎಂದು ಅವರು ಧೈರ್ಯ ತುಂಬಿದರು.

ಬೆಂಗಳೂರಿಗೆ ದೇವೇಗೌಡರ ಕೊಡುಗೆ ಅಪಾರ

ಜೆಡಿಎಸ್ ಪಕ್ಷ ಅಂದರೆ ಗ್ರಾಮೀಣ ಭಾಗದ ಪಕ್ಷ ಅಂತ ಬಿಂಬಿಸಲಾಗಿದೆ. ಆದರೆ‌ ದೇವೇಗೌಡರು ಎಂಜಿನಿಯರ್ ಆಗಿ ಬೆಂಗಳೂರು ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರಿಗೆ ದೇವೇಗೌಡರ ಕೊಡುಗೆ ಅಪಾರ ಇದೆ. ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು. ಕುಮಾರಸ್ವಾಮಿ ಅವರ ಕೊಡುಗೆಯೂ ಬೆಂಗಳೂರಿಗೆ ದೊಡ್ಡ ಕೊಡುಗೆ ಇದೆ. 14 ತಿಂಗಳು ಸಿಎಂ ಆಗಿದ್ದಾಗ ಅನೇಕ ಅಭಿವೃದ್ಧಿ ‌ಕೆಲಸ ಕುಮಾರಸ್ವಾಮಿ ಅವರು ಮಾಡಿದ್ದಾರೆ ಎಂದರು.

ಗ್ರೇಟರ್ ಬೆಂಗಳೂರು, ದುಡ್ಡು ಹೊಡೆಯೋ ಯೋಜನೆ

ಬೆಂಗಳೂರು ಅಭಿವೃದ್ಧಿಗೆ ನಮ್ಮ ಸಹಕಾರ ಇದೆ. ಜೆಡಿಎಸ್ ಗೆ ಇದ್ದ ಕಡಿಮೆ ಸಮಯದಲ್ಲಿ ಅನೇಕ ಅಭಿವೃದ್ಧಿ ‌ಕೆಲಸ ಬೆಂಗಳೂರಿಗೆ ಮಾಡಿದ್ದಾರೆ. ಈಗ ಮೂಲಭೂತ ಸೌಕರ್ಯಗಳ ಕುಸಿದು ಹೋಗಿದೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು. ಈಗ ಗ್ರೇಟರ್ ಬೆಂಗಳೂರು ಅಂತ ಹೊರಟಿದ್ದಾರೆ. ದುಡ್ಡು ಹೊಡೆಯೋಕೆ ಯೋಜನೆ ಅಷ್ಟೆ. GBA ಹಣ ಹೊಡೆಯೋಕೆ ಅಷ್ಟೇ ಎಂದು ಅವರು ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹೆಸರು ಬದಲಾವಣೆ ಆದ ಕೂಡಲೇ ಅಭಿವೃದ್ಧಿ ಆಗಲ್ಲ

ರಾಮನಗರ ಹೆಸರು ಬೆಂಗಳೂರು ದಕ್ಷಿಣ ಅಂತ ಬದಲಾವಣೆ ವಿಚಾರಕ್ಕೆ ಮಾತನಾಡಿದ ಅವರು ಜಿಲ್ಲೆಯ ಹೆಸರು ಬದಲಾವಣೆ ಮಾಡಿದ ಕೂಡಲೇ ಜಿಲ್ಲೆ ಅಭಿವೃದ್ಧಿ ಆಗೊಲ್ಲ. ರಾಜಕೀಯ ಲಾಭಯಕ್ಕೆ ಹೆಸರು ಬದಲಾವಣೆ ಮಾಡೋಕೆ ಹೊರಟಿದ್ದಾರೆ.

ಬಿಡದಿಯಲ್ಲಿ ಟೌನ್ ಶಿಫ್ ಮಾಡೋಕೆ ಹೊರಟಿದ್ದಾರೆ. ರೈತರು ಅದಕ್ಕೆ ವಿರೋಧ ಮಾಡಿದ್ದಾರೆ. ರೈತರ ಜೊತೆ ಈ ಸರ್ಕಾರ ಚರ್ಚೆ ಮಾಡಿಲ್ಲ. ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ED ದಾಳಿ ವಿಚಾರಕ್ಕೆ ಮಾತನಾಡಿದ ಅವರು ಐಟಿ- ಇಡಿ ಸ್ವಾತಂತ್ರ್ಯ ಸಂಸ್ಥೆಗಳು. ಅವರಿಗೆ ಬರೋ ಮಾಹಿತಿ ಮೇಲೆ ದಾಳಿ ಮಾಡಿರುತ್ತಾರೆ. ದಾಖಲಾತಿ ಆಧಾರದಲ್ಲಿ ಮಾಹಿತಿ ಮೇಲೆ ದಾಳಿ ಮಾಡಿರುತ್ತದೆ‌. ಅವರು ಯಾವ ರೀತಿ ತನಿಖೆ ಮಾಡ್ತಾರೆ ನೋಡೋಣ. ತನಿಖೆಯಲ್ಲಿ ಎಲ್ಲಾ ವಿಷಯ ಗೊತ್ತಾಗಲಿದೆ ಎಂದರು.

ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್‌ ಬಾಬು ಸಿ.ಬಿ. ಅವರು, ಶಾಸಕರಾದ ಸಿ.ಎನ್‌. ಬಾಲಕೃಷ್ಣ ಅವರು, ಶ್ರೀ ಜಿ.ಡಿ. ಹರೀಶ್‌ ಗೌಡ, ಸ್ವರೂಪ್ ಪ್ರಕಾಶ್ ಅವರು, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ. ಶರವಣ, ಮಾಜಿ ವಿಧಾನ ಪರಿಷತ್‌ ಸದಸ್ಯರಾದ ತಿಪ್ಪೇಸ್ವಾಮಿ ಅವರು ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಜತೆಯಲ್ಲಿದ್ದರು.

ರಾಜಕೀಯ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ

[ccc_my_favorite_select_button post_id="109998"]
ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ ಹೆಚ್.ಕೆ.ಪಾಟೀಲ್ ತಿರುಗೇಟು

ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ

ಈಗ ಅಕ್ರಮ ಗಣಿಗಾರಿಕೆ ಪತ್ರದ ಮಾತಾಡುವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿಷೇಕ ಮಾಡಿಕೊಂಡು ಕುಳಿತಿದ್ರಾ; ಸಚಿವ ಹೆಚ್.ಕೆ.ಪಾಟೀಲ್ (H.K.Patil)

[ccc_my_favorite_select_button post_id="109884"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

HD ಕ್ಯಾಮೆರಾಗಳೊಂದಿಗೆ ದಂಪತಿಗಳು ಲೈವ್ ಬೆತ್ತಲೆ ವಿಡಿಯೋ (Live nude video) ವ್ಯವಹಾರ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

[ccc_my_favorite_select_button post_id="109995"]
ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದೆ; ಜಿಲ್ಲಾಧಿಕಾರಿ ಎ.ಬಿ ಬಸವರಾಜು (Deputy Commissioner A.B. Basavaraju)

[ccc_my_favorite_select_button post_id="109939"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]