ಬೆಂಗಳೂರು; ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಷಿಯೇಶನ್, ಬೈಸೇಲ್ ಇನ್ಟ್ರಾಕ್ಷನ್ಸ್ ಪ್ರವೈಟ್ ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಹಕರು ಸಹಯೋಗದಲ್ಲಿ ‘ಪೋಟೋ ಟುಡೇ’ (Photo TODAY) ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಇದೇ ಜೂನ್ 27, 28 ಹಾಗೂ 29ರಂದು ಮೂರು ದಿನಗಳ ಕಾಲ ಅರಮನೇ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಷಿಯೇಶನ್ ಅಧ್ಯಕ್ಷ ಬೆಂಜಮಿನ್ ಭಾಸ್ಕರ್ ತಿಳಿಸಿದರು.
ನಗರದ ಪ್ರೆಸ್ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೋಟೋ ಟುಡೇ’ (Photo TODAY) ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರಲಾಗಿದೆ.
2000ನೇ ಇಸವಿಂದ ಹಲವಾರು ಮಾನವೀಯ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಸಂಸ್ಥೆಯೂ 200ಕ್ಕೂ ಹೆಚ್ಚು ವಸ್ತು ಪ್ರದರ್ಶನಗಳನ್ನು ಕಂಡಿದೆ, ಪ್ರವಾಹ, ಕೋವಿಡ್ ಸೇರಿದಂತೆ ಕೆಲವು ವಿಶೇಷ ಸಂದರ್ಭಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ, ಅಲ್ಲದೇ ತನ್ನ 25 ವರ್ಷ ಪೂರ್ಣಗೊಳಿಸುತ್ತಿದೆ ಎಂದರು.
ಕಾರ್ಯದರ್ಶಿ ಜಗದೀಶ್ ಮಾತನಾಡಿ, ಜೂ. 27ರ ಬೆಳ್ಳಿಗೆ 11.30ಕ್ಕೆ ನಡೆಯಲಿರುವ ‘ಪೋಟೋ ಟುಡೇ’ (Photo TODAY) ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ಲಾಡ್ ಅವರು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಛಾಯಾಚಿತ್ರ ಮತ್ತು ವಿಡಿಯೋಗ್ರಫಿಯಲ್ಲಿ ಹಾಗೂ ಪತ್ರಿಕಾ ಸೇವೆಯನ್ನು ಗುರುತಿಸಿ ಕರ್ನಾಟಕ “ಛಾಯಾರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.
ಕ್ಯಾಮರಾ, ಅಲ್ಬಮ್ ಸಾಫ್ಟ್ವೇರ್, ಪ್ರಿಂಟರ್, ಪ್ರೇಮ್, ಲ್ಯಾಮಿನೆಕನ್ ಸೇರಿದಂತೆ ಛಾಯಾಗ್ರಹಣ ಕ್ಷೇತ್ರದ ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ 200ಕ್ಕೂ ಹೆಚ್ಚು ಕಂಪನಿಗಳು ತಮ್ಮ ವ್ಯಾಪಾರ ವೈವಾಟುಗಳನ್ನು ಮಾಡುವುದರ ಜೊತೆಗೆ 5,000ಕ್ಕೂ ಹೆಚ್ಚು ಛಾಯಾಗ್ರಹಣ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ನಡೆಸಲಿದೆ.
ಈ ವಸ್ತು ಪ್ರದರ್ಶನದಲ್ಲಿ ರಾಜ್ಯದಾದ್ಯಂತ ಜಿಲ್ಲಾ, ಹಾಗೂ ತಾಲೂಕು ಮಟ್ಟದ ಛಾಯಾಗ್ರಹರ ಸಂಘ ಸಂಸ್ಥೆಗಳು ಈ ಪ್ರದರ್ಶನವನ್ನು ಬೆಂಬಲಿಸಿವೆ.
ಜಾಗೃತಿಕ ಮಟ್ಟದಲ್ಲಿ ತಂತ್ರಜ್ಞಾನದ ಬೆಳವಣಿಗಾಗಿ ಶ್ರಮಿಸುತ್ತಿರುವ ಹಲವಾರು ಕಂಪನಿಗಳು ಛಾಯಾಗ್ರಾಹಕರಿಗೆ ತಲುಪಿಸುವಲ್ಲಿ ಸವಾಲನ್ನು ಸ್ವಿಕರಿಸಿದಂತೆ ಇದೆ, ಅಲ್ಲದೇ ಛಾಯಾಗ್ರಾಹಕರು ಎಲ್ಲಾ ಮಾಹಿತಿಯನ್ನು ಪಡೆಯುವುದು ಕಷ್ಟವಾಗಿದ್ದ ಕಾಲದಲ್ಲಿ ”ಪೋಟೋ ಟುಡೇ” ವಸ್ತು ಪ್ರದರ್ಶನವನ್ನು ಕಳೆದ 25 ವರ್ಷಗಳಿಂದ ವಿದೇಶ ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ ಪ್ರದರ್ಶನ ಏರ್ಪಡಿಸುತ್ತ ಛಾಯಾಗ್ರಾಹಕರಿಗೆ ಹಾಗೂ ಕಂಪನಿಗಳ ಮಧ್ಯ ಸೇತುವೆಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ತಿಳಿಸಿದ್ದಾರೆ.