ಬೆಂಗಳೂರು: ಗಣನೀಯ ಸೇವೆ ಸಲ್ಲಿಸಿದ 18 ಪೊಲೀಸ್ (Police) ಅಧಿಕಾರಿಗಳು, ಸಿಬ್ಬಂದಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡುವ ರಾಷ್ಟ್ರಪತಿ ಪದಕ (President’s Medal) ಲಭಿಸಿದೆ.
ಲೋಕಾಯುಕ್ತ ಬೆಂಗ ಳೂರು ಕೇಂದ್ರದಲ್ಲಿ ಎಸ್ಪಿಯಾಗಿರುವ ಎಸ್.ಬದ್ರಿನಾಥ್ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದೆ. ಹಲವಾರು ಕ್ಲಿಷ್ಟಕರ ಪ್ರಕರಣಗಳಲ್ಲಿ ಅತ್ಯು ತಮ ಸಾಧನೆ ಮಾಡಿದ್ದಕ್ಕಾಗಿ ರಾಷ್ಟ್ರಪತಿ ಗಳಿಂದ ಪ್ರಶಂಸೆ ವ್ಯಕ್ತಪಡಿಸಿ ವಿಶಿಷ್ಟ ಸೇವಾ ಪದಕ ನೀಡಲಾಗುತ್ತಿದೆ.
ರಾಜ್ಯ ಗುಪ್ತಚರ ಐಜಿಪಿ ಡಾ.ಚಂದ್ರಗುಪ್ತ, ಎಐಜಿಪಿ (ಅಪರಾಧ ಮುಖ್ಯಾಧಿಕಾರಿ) ಕಲಾ ಕೃಷ್ಣಮೂರ್ತಿ, ಕೆಎಸ್ಆರ್ಪಿ 9ನೇ ಬೆಟಾಲಿಯನ್ ಕಮಾಂಡರ್ ಡಾ. ರಾಮಕೃಷ್ಣ ಮುದ್ದಿಪೈ, ಗುಪ್ತಚರ ವಿಭಾಗ ಎಸ್ಪಿ ಕಲೀಮನಿ ಮಹದೇವಪ್ಪ ಶಾಂತರಾಜು, ಪದವಿ ಎಸ್ಪಿ ಎನ್. ವೆಂಕಟೇಶ ನಾರಾಯಣ, ಮಹದೇವಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಿ.ಪ್ರವೀಣ್ ಬಾಬು ಗುರುಸಿದ್ದಯ್ಯ, ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್.
ಬೆಸ್ಕಾಂ ಜಾಗೃತದಳ ಇನ್ಸ್ ಪೆಕ್ಟರ್ ಎಡ್ರಿನ್ ಪ್ರದೀಪ್ ಸ್ಯಾಮನ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ನಂದಗುಡಿ ಪೊಲೀಸ್ ಠಾಣೆ ಇನ್ ಪೆಕ್ಟರ್ ಶಾಂತರಾಮ.
ಮಂಗಳೂರು ಸಿಸಿಬಿ ಎಎಸ್ಐ ಸುಜನ ಶೆಟ್ಟಿ, ಬೆಂಗಳೂರು ಎಸ್ ಸಿಆರ್ಬಿ ಪಿಎಸ್ಐ ಝಾನ್ಸಿರಾಣಿ ಡಿಪಿಓ ಗದಗ ಜಿಲ್ಲೆ, ಎಎಸ್ಐ ಎಸ್.ಬದ್ರಿನಾಥ್ ಗುರುರಾಜ ಮಹಾದೇವಪ್ಪ ಬುದ್ದಿಲ್, ಬೆಂಗಳೂರು ಕೆಎಸ್ಆರ್ಪಿ 4ನೇ ಬೆಟಾಲಿಯನ್ ಹೆಡ್ ಕಾನ್ಸ್ಟೇಬಲ್ ಎಂ.ಜೆ. ರಾಜೇಶ್.
ಕೊಪ್ಪಳ ಗಣಕಯಂತ್ರ ವಿಭಾಗ ಡಿಪಿಓ ಹೆಡ್ ಕಾನ್ಸ್ಟೇಬಲ್ ಶಮುದ್ದೀನ್, ಬೆಂಗಳೂರು ನಗರ ಗುಪ್ತಚರ ಹೆಡ್ಗಾನ್, ಸ್ಟೇಬಲ್ ವೈ.ಶಂಕರ್, ಕಲಬುರಗಿ ನಗರ ಪೊಲೀಸ್ ಆಯುಕ್ತರ ಕಚೇರಿಯ ಹೆಡ್ಾನ್ ಸ್ಟೇಬಲ್ ಅಲಂಕಾರ್ ರಾಕೇಶ್ ರವಿನಾ ಸಿದ್ದಪ್ಪ, ಗುಪ್ತಚರ ವಿಭಾಗ ಸಿವಿಲ್ ಹೆಡ್ಗಾನ್ ಸ್ಟೇಬಲ್ ಎಲ್.ರವಿ ಅವರಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಸೇವಾ ಪದಕ ಲಭಿಸಿದೆ. (ಸಾಂದರ್ಭಿಕ ಚಿತ್ರ)