ದೊಡ್ಡಬಳ್ಳಾಪುರ: ವಿದ್ಯುತ್ ಶಾಕ್ (Current shock) ಪರಿಣಾಮ ಇಬ್ಬರು ಸಾವನಪ್ಪಿ, ಓರ್ವ ಮಹಿಳೆ ಗಾಯಗೊಂಡಿರುವ ಘಟನೆ ತಾಲೂಕಿನ ತೂಬಗೆರೆ ಹೋಬಳಿಯ ಕಾರನಾಳದಲ್ಲಿ ಸಂಭವಿಸಿದೆ.
ಮೃತರನ್ನು 43 ವರ್ಷದ ಸಂಜಯ್, 50 ವರ್ಷದ ಲಲಿತಮ್ಮ ಎಂದು ಗುರುತಿಸಲಾಗಿದ್ದು, 45 ವರ್ಷದ ಲಕ್ಷ್ಮಮ್ಮ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿಲಾಗಿದೆ.
ವಿದ್ಯುತ್ ಕಂಬದಿಂದ ಮನೆಗೆ ಎಳೆದಿದ್ದ ವಿದ್ಯುತ್ ತಂತಿ ಕೆಳಗೆ ಲಲಿತಮ್ಮ ಒಣಗಾಕಿದ್ದ ಬಟ್ಟೆಯನ್ನು ತೆಗೆದುಕೊಳ್ಳಲು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿದೆ. ಇದನ್ನು ನೋಡಿ ಸಂಜಯ್ ಕಾಪಾಡಲು ಹೋದಾಗ ಅವರಿಗೂ ವಿದ್ಯುತ್ ಸ್ಪರ್ಶಿಸಿದೆ. ವಿಪರ್ಯಾಸವೆಂದರೆ ಈ ಇಬ್ಬರನ್ನು ಕಾಪಾಡಲು ಲಕ್ಷ್ಮಮ್ಮ ಮುಂದಾಗಿದ್ದಾಗ ಮೂವರಿಗೆ ವಿದ್ಯುತ್ ಪ್ರವಹಿಸಿ, ಲಲಿತಮ್ಮ, ಸಂಜಯ್ ಸಾವನಪ್ಪಿದ್ದರೆ, ಲಕ್ಷ್ಮಮ್ಮ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನೂ ಈ ಕುರಿತಂತೆ ಬೆಸ್ಕಾಂ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬಂದಿದ್ದು, ವಸತಿ ನಿಲಯಗಳ ಬಳಿ, ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬುದಾಗಿದೆ.