ಕೆ.ಎಂ.ಸಂತೋಷ್, ಆರೂಢಿ (ದೊಡ್ಡಬಳ್ಳಾಪುರ); ಖಾಸಗಿ ವಾಹಿನಿ ಕಲ್ಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ಸಿಸನ್ 12 (Bigg Boss) ಅಂತಿಮ ಹಂತಕ್ಕೆ ಬಂದು ನಿಂತಿದೆ. ಆದರೆ ಅಚ್ಚರಿಯ ಬೆಳವಣಿಗೆ ವೀಕ್ಷಕರಲ್ಲಿ ಅಸಹನೆ, ಅನುಮಾನಕ್ಕೆ ಕಾರಣವಾಗುತ್ತಿದೆ.
ಏಕೆಂದರೆ ಮೊದಲದಿಂದಲೂ ಬಿಗ್ಬಾಸ್ನಲ್ಲಿ ಏಕಚಕ್ರಾಧಿಪತ್ಯ ಸಾಧಿಸಿ, ವೀಕ್ಷಕರ ಮನರಂಜಿಸುತ್ತಿರುವ ಗಿಲ್ಲಿ ನಟನ ವಿರುದ್ಧ ಫಿನಾಲೆ ಅಂತಿಮ ದಿನಗಳಲ್ಲಿ ನಕಾರಾತ್ಮಕ ಪ್ರೋಮೋಗಳು, ಸಾಮಾಜಿಕ ಜಾಲತಾಣದಲ್ಲಿ ಪೇಯ್ಡ್ ಪೇಜ್ಗಳ ನಕಾರಾತ್ಮಕ ಸಂದೇಶಗಳು ವ್ಯಾಪಕವಾಗಿದೆ ಎಂಬ ಆಕ್ರೋಶ ಅಭಿಮಾನಿಗಳದ್ದು,
ಈ ಕುರಿತಂತೆ ಬಿಗ್ಬಾಸ್ ಸೀಸನ್ 11 ರ ಸ್ಪರ್ಧಿ ರಜತ್ ಬುಜ್ಜಿ ಕೂಡ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಅರ್ಥವೇ ಆಗುತ್ತಿಲ್ಲ ಲೆಕ್ಕಾಚಾರ ಗಿಲ್ಲಿ ಯಾಕೆ ಮೌನವಾದ, ಕೊನೆಯ ಕ್ಷಣದಲ್ಲಿ ಯಾಕೆ ಅವನಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲ.
ವ್ಯಕ್ತಿತ್ವದಲ್ಲಿ ಅಶ್ವಿನಿ, ಧ್ರುವ ಅವರಿಗೆ ಕಿಚ್ಚನ ಚಪ್ಪಾಳೆ ಚಿಂತೆ ಇಲ್ಲ. ಆದರೆ ಮತ್ತೊಬ್ಬ ಅರುಣ್ ಸಾಗರ್ ಮಾಡುವ ಕುತಂತ್ರಗಳು ನಡೆಯುತ್ತಾ ಇದೆ ಎಂದು ತಿಳಿದು ಬಂದಿದೆ ಆದರೆ ಒಂದು ಸತ್ಯ ಗಿಲ್ಲಿ ಒಬ್ಬ ಅದ್ಭುತ ಕಲಾವಿದ.
ನಿಜವಾದ ವಿನ್ನರ್ ಗಿಲ್ಲಿ ಮಾತ್ರ ಗೆದ್ದು ಬಾ ಗೆಳೆಯ ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನೂ ಮತ್ತೋರ್ವ ನೆಟ್ಟಿಗ ಬಸವರಾಜ್ ಗುಬ್ಬಿ ಎನ್ನುವವರು, ಅಶ್ವಿನಿಗೌಡ ಅವರ ಬೆಂಬಲಿಗರು ಸಹಚರರು, ಅವರ ಕಾರ್ಯಕರ್ತರು ಮೈ ಕೊಡವಿ ಮೆಲೆದ್ದಿದಾರೆ..!. ಅಶ್ವಿನಿ ಗೌಡ ಅವರನ್ನು ಗೆಲ್ಲಿಸಲೇ ಬೇಕು ಎಂದು ದುಡ್ಡನ್ನು ನೀರಿನಂತೆ ಚೆಲ್ಲಿ PR ಗಳನ್ನು ಖರೀದಿಸಿ ಅಶ್ವಿನಿಗೌಡ ಅವರನ್ನು ಹೈಲೈಟ್ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಶ್ವಿನಿ ಗೌಡ ಅವರನ್ನು ಗೆಲ್ಲಿಸಲೇಬೇಕು ಎಂದು ಹಠತೊಟ್ಟಿದ್ದಾರೆ..!
ಅದರಂತೆಯೇ ಕಲರ್ಸ್ ಚಾನಲ್ ನವರು ಗಿಲ್ಲಿಯನ್ನು ತೋರಿಸದೆ ಕೇವಲ ಅಶ್ವಿನಿಯವರನ್ನೆ ಹೈಲೈಟ್ ಮಾಡಿ ಪ್ರೊಮೋ ಬಿಡುತ್ತಿದ್ದಾರೆ ಎಲ್ಲವೂ ಡೀಲ್ ಆಗಿರುವ ಸಾದ್ಯತೆಗಳು ಜಾಸ್ತಿ ಕಾಣುತ್ತಿವೆ..
ಇತ್ತಿಚೆಗೆ ಎರಡು ವಾರಗಳಲ್ಲಿ ಹೊಸ ಮುಖವಾಡ ಧರಿಸಿ ಆಡುತ್ತಿರುವ ಅಶ್ವಿನಿ ಗೌಡ ಅವರ ಹಳೆಯ ಮುಖವಾಡವನ್ನು ವೀಕ್ಷಕರು ಮರೆತಿಲ್ಲ. ಊಸರವಳ್ಳಿಯ ಆಟ ಗೋಸುಂಬೆಯ ಅವಕಾಶವಾದಿತನ ಯಾರೂ ಮರೆತಿಲ್ಲ.
ಮೊದಲನೇ ವಾರದಿಂದಲೂ ಈವರೆಗೆ ವೀಕ್ಷಕರಿಗೆ ಮನರಂಜನೆಯ ರಸದೂಟವನ್ನು ಉಣಬಡಿಸಿದ ಗಿಲ್ಲಿನಟನ ಆಟವನ್ನು ಮರೆಯುವದುಂಟೆ. ಗಿಲ್ಲಿಗೆ ವೋಟ್ ಮಾಡಿ ಬಡ ರೈತನ ಮಕ್ಕಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನೂ ಸಾಮಾಜಿಕ ಜಾಲತಾಣ ಫೇಸ್ಬುಕ್ನ ಗಿಲ್ಲಿ ನಟ ಎಂಬ ಖಾತೆಯಲ್ಲಿ, 90 ದಿನ ಅನಾಚಾರ ಮಾಡಿ 10 ದಿನ ಉಪಚಾರ ಮಾಡಿದಂತೆ ನಾಟಕ ಮಾಡ್ದೋರಿಗೆ ಈ ವಾರ ಕಿಚ್ಚನ ಚಪ್ಪಾಳೆ.
ಕರ್ನಾಟಕದ ಜನ Unexpected – Expected
ಹಾಗೂ Season 12 ಅಲ್ಲಿ TRP, Overall ಕಾಂಟ್ರೂಬ್ಯೂಷನ್ ಆಧಾರದಲ್ಲಿ ಈ ಸೀಸನ್ ಕಿಚ್ಚನ ಚಪ್ಪಾಳೆ ಧೃವಂತ್ಗೆ ಅಂತೆ.
ಹಾಗಾದ್ರೆ ಇಷ್ಟು ದಿನ ಗಿಲ್ಲಿ ಆಡಿದ ಆಟಕ್ಕೆ ಬೆಲೆ ಇಲ್ವಾ.? ಗಿಲ್ಲಿ ಕೊಡುಗೆ ಏನು ಇಲ್ವಾ .?
ಬಹುತೇಕ ನಾವು ಈ ಸೀಸನ್ ಪ್ರೋಮೋ ನೋಡಿದ್ದು.
ಗಿಲ್ಲಿ- ಅಶ್ವಿನಿ
ಗಿಲ್ಲಿ – ಕಾವ್ಯ
ಗಿಲ್ಲಿ – ರಕ್ಷಿತಾ
ಗಿಲ್ಲಿ – ಧೃವಂತ್
ಗಿಲ್ಲಿ – ರಘು
ಗಿಲ್ಲಿ – ರಾಷಿಕಾ
ಗಿಲ್ಲಿ – ಬೇರೆ ಬೇರೆ ಕಂಟೆಸ್ಟೆಂಗಳು
ಈ ಸೀಸನ್ Overall Performance ಆಧಾರದಲ್ಲಿ ಧೃವಂತ್ಗೆ ಸಿಕ್ಕಿದ್ದು ಎಷ್ಟರ ಮಟ್ಟಿಗೆ ಸರಿ.. ? ಎಂದು ಪ್ರಶ್ನೆ ಮಾಡಲಾಗಿದೆ.
ಅಲ್ಲದೆ ಬಿಗ್ಬಾಸ್ ಸೀಸನ್ 12 ಅಂತಿಮ ಹಂತಕ್ಕೆ ಬಂದಂತೆ ಗಿಲ್ಲಿ ನಟನ ಬೇಕೆಂದೆ ನಕಾರಾತ್ಮಕವಾಗಿ ಚಿತ್ರಿಸಲಾಗುತ್ತಿದೆ. ಆ ಮೂಲಕ ಆತನ ಸೋಲಿಸುವ ಷಡ್ಯಂತ್ರ ನಡೆಯುತ್ತಿದೆ. ಒಂದು ವೇಳೆ ಗಿಲ್ಲಿ ಗೆಲ್ಲಲಿಲ್ಲ ಎಂದರೆ ಇದು, ಪೂರ್ವ ನಿಯೋಜಿತ ಫೇಕ್ ಶೋ ಎಂಬಂತಾಗಲಿದೆ ಮಿಮ್ಸ್ಗಳು ಹರಿದಾಡುತ್ತಿವೆ.

ಅಲ್ಲದೆ ಅಶ್ವಿನಿ ಗೌಡ, ಧ್ರುವಂತ್ ಮೋಸದಿಂದ ಟಾಸ್ಕ್ ಗೆದ್ರಾ? ಸಾಕ್ಷಿ ತೋರಿದ ನೆಟ್ಟಿಗರು! ಎಂಬಂತೆ ಖಾಸಗಿ ಸುದ್ದಿವಾಹಿನಿಗಳಲ್ಲಿ ವರದಿಯಾಗುತ್ತಿದು, ಇದು ಬಿಗ್ ಬಾಸ್ಗೆ ಕಾಣಲಿಲ್ಲವೇ..? ಎಂಬ ಪ್ರಶ್ನೆ ಕೇಳಿಬಂದಿದೆ.
