Astrology: Likely to be a memorable day

Astrology; ದಿನ ಭವಿಷ್ಯ: ಈ ರಾಶಿಯವರು ಎಲ್ಲಾ ಕಾರ್ಯಗಳಿಗೂ ನಾನು ಎಂದು ಮುಂದೆ ಹೋಗಬೇಡಿ – ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ

Astrology: ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಸಪ್ತಮಿ ಡಿ.6.2025 ಸೋಮವಾರ ಅತ್ಯಂತ ಶ್ರೇಷ್ಠವಾದ ದಿನ. ಶಿವನ ದೇವಾಲಯದಲ್ಲಿ ಪರಮೇಶ್ವರನ ದರ್ಶನವನ್ನು ಮಾಡಿ ಸಾಧ್ಯವಾದರೆ ಅಭಿಷೇಕವನ್ನು ನೋಡಿ ಪ್ರಾರ್ಥನೆಯನ್ನು ಮಾಡಿಕೊಂಡು ಆರತಿ ತೆಗೆದುಕೊಂಡು ಬನ್ನಿ, ಸಾಧ್ಯವಾದರೆ ಬಿಲ್ವಪತ್ರೆಯನ್ನು ಅರ್ಚನಕ್ಕೆ ಕೊಡಿ..ಅತ್ಯಂತ ಶುಭವಾಗುತ್ತದೆ..

ಮೇಷ ರಾಶಿ: ಎಲ್ಲ ಕಾರ್ಯದಲ್ಲೂ ವಿರಸಬೇಡ.ಮ ಎಲ್ಲವನ್ನು ಆಸ್ವಾದಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ, ವಿದ್ಯಾಭ್ಯಾಸದಲ್ಲಿ ಸ್ವಲ್ಪ ಅಡಚಣೆ ಇದ್ದರೂ ಶುಭವಾಗುತ್ತದೆ. ಏಕಾಗ್ರ ಚಿತ್ತವನ್ನು ಪಾಲಿಸಲು ಅಭ್ಯಾಸ ಮಾಡಿಕೊಳ್ಳಿ, ದೃಢವಾದ ನಿರ್ಧಾರದಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ ಮುನ್ನುಗ್ಗಿ ಕಾರ್ಯಗಳನ್ನು ಬಿಡಬೇಡಿ‌. (ಪರಿಹಾರಕ್ಕಾಗಿ ಸ್ಕಂದನ ಪೂಜೆ ಆರಾಧನೆ ಮಾಡಿ ಶುಭವಾಗುತ್ತದೆ)

ವೃಷಭ ರಾಶಿ: ಎಲ್ಲ ಕಾರ್ಯಗಳಲ್ಲೂ ನಿಧಾನವಾದ ಯಶಸ್ಸು, ಜೊತೆಗೆ ಮನಸ್ಸಿನಲ್ಲಿ ನೆಮ್ಮದಿ ಒಳ್ಳೆಯ ನಿರ್ಧಾರ ಮಾಡುತ್ತೀರಿ. ಆದರೆ ಸ್ವಲ್ಪ ನಿಧಾನವಾಗುತ್ತದೆ.‌ ಅಭ್ಯಾಸ ಮಾಡಿ ನಿರಂತರ ಸಾಧನೆಯಿಂದ ಯಶಸ್ಸು ಸಿಗುತ್ತದೆ. (ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಎಣ್ಣೆಯ ದೀಪವನ್ನು ಪೂರ್ವಕ್ಕೆ ತಿರುಗಿಸಿ ಹಚ್ಚಿ ಶುಭವಾಗುತ್ತದೆ)

ಮಿಥುನ ರಾಶಿ: ಯೋಚಿಸಿ ಹೆಜ್ಜೆಯನ್ನಡಬೇಕು, ಯಾವುದೂ ಸಹ ನಮ್ಮ ನಿಯಂತ್ರಣದಲ್ಲಿ ಇಲ್ಲ ಎಂಬುವ ಭಾವನೆಯನ್ನು ಕಮ್ಮಿ ಮಾಡಿಕೊಳ್ಳಿ. ಯಾವುದೇ ಸಮಸ್ಯೆ ಇಲ್ಲ ನಿರ್ಧಾರ ವಚನವಾಗಿದೆ, ಮುಂದುವರೆಸಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ವೆಂಕಟೇಶನ ದೇವಾಲಯದಲ್ಲಿ ಪೂಜೆಯನ್ನು ಮಾಡಿಸಿ)

ಕಟಕ ರಾಶಿ: ಅಗತ್ಯಕ್ಕಿಂತ ಹೆಚ್ಚು ಮಾತು ನಿಮ್ಮ ವ್ಯವಧಾನವನ್ನು ಕೆಡಿಸುತ್ತದೆ. ಸೋಂಬೇರಿತನವನ್ನು ನಿಧಾನವಾಗಿ ದೂರ ತಳ್ಳಬೇಕು. ಚಿಂತಿತ ಕಾರ್ಯದಲ್ಲಿ ಯಶಸ್ಸನ್ನು ಹೊಂದಬೇಕು, ದೃಢವಾಗಿ ಅಸ್ತಿತ್ವವನ್ನು ಕಾಪಾಡಿಕೊಳ್ಳಬೇಕು. ವಿದ್ಯಾಭ್ಯಾಸದಲ್ಲಿ ಸ್ವಲ್ಪ ನಿಧಾನ, ಹಣದ ವಿಷಯಗಳಲ್ಲಿ ಸ್ವಲ್ಪ ಎಚ್ಚರ. (ಪರಿಹಾರಕ್ಕಾಗಿ ಗುರುಗಳ ಸ್ಮರಣೆಯನ್ನು ಮಾಡಿ)

ಸಿಂಹ ರಾಶಿ: ಅನಾವಶ್ಯಕವಾಗಿ ಚಿಂತಿಸಬೇಡಿ. ಆರೋಗ್ಯದ ಗುಟ್ಟು ನಿಮ್ಮ ಕೈಯಲ್ಲೇ ಇದೆ, ಚಿಂತೆ ಮಾಡಿದರೆ ಯಾವುದು ಶಾಂತವಾಗುವುದಿಲ್ಲ. ಮಕ್ಕಳಿಗೆ ಸ್ವಲ್ಪ ಆಲಸ್ಯ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಮ್ಮನವರಿಗೆ ಮಲ್ಲಿಗೆಯ ಹೂವಿನಿಂದ ಪೂಜೆ ಮಾಡಿಸಿ)

ಕನ್ಯಾ ರಾಶಿ: ಸಾವಧಾನವಾಗಿರಿ.. ಏನೇ ಬಂದರೂ ಸ್ವಲ್ಪ ದಿನ ಮನಸ್ಸನ್ನು ತಳಮಳಗೊಳಿಸಿ ನಂತರ ದೂರ ಸರಿಯುತ್ತದೆ ಎಂಬ ಭಾವನೆ ಇರಲಿ. ಅತಿಯಾದ ಅಂಜಿಕೆ ಬೇಡ, ಅತಿಯಾದ ನೋವನ್ನು ಪಡಬೇಡಿ. ಒಳ್ಳೆಯದಾಗುತ್ತದೆ, ಚಿಂತಿಸಬೇಡಿ. (ಪರಿಹಾರಕ್ಕಾಗಿ ಮನೆಯಲ್ಲಿ ಗಣಪತಿ ಹೋಮವನ್ನು ಮಾಡಿಸಿಕೊಳ್ಳಿ)

ತುಲಾ ರಾಶಿ: ಒಳ್ಳೆಯ ಮಾತುಗಳು ನಿಮ್ಮನ್ನು ಅತ್ಯಂತ ಎತ್ತರಕ್ಕೆ ಏರಿಸುತ್ತದೆ. ನಿರ್ಧಾರ ಮಾಡಿ. ಆದರೆ ಬಂಧು ಮಿತ್ರರ ಜೊತೆ ಎಚ್ಚರಿಕೆ, ಮನೆಯಲ್ಲಿ ನೆಮ್ಮದಿಯ ವಾತಾವರಣ ಸ್ವಲ್ಪ ದಿನದ ಮಟ್ಟಿಗೆ ಇಲ್ಲ ವಾಗುತ್ತದೆ. ಹೊರಗಡೆ ಭೋಜನವನ್ನು ಕಮ್ಮಿ ಮಾಡಿ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ದುರ್ಗಾ ಸಪ್ತಶ್ಲೋಕಿಯನ್ನು ಪಾರಾಯಣ ಮಾಡಿ)

ವೃಶ್ಚಿಕ ರಾಶಿ: ಆಚರಣೆಗಳು ಮತ್ತು ಕೆಲಸಗಳು ಎರಡು ಸಹ ಅತ್ಯಂತ ಉನ್ನತ ಮಟ್ಟದ್ದಾಗಿದೆ, ಇದರಿಂದ ಕೆಲವರು ನಿಮ್ಮ ಮೇಲೆ ದೃಷ್ಟಿಯನ್ನು ಹಾಕುತ್ತಾರೆ. ಹಾಗಾಗಿ ದೃಷ್ಟಿ ನಿವಾರಿಸಿಕೊಳ್ಳಿ, ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಾಣುತ್ತದೆ, ಮಾತನ್ನು ಸರಿ ಮಾಡಿಕೊಳ್ಳಬೇಕು. ನಿರ್ಧಾರ ಮಾಡಿ ಆದರೆ ಎಲ್ಲರಿಗೂ ಹೇಳಿಕೊಳ್ಳಬೇಡಿ ಪರಿಹಾರಕ್ಕಾಗಿ. (ಮಹಾಗಣಪತಿಯ ದೇವಸ್ಥಾನದಲ್ಲಿ ಗರಿಕೆಯ ಪೂಜೆಯನ್ನು ಮಾಡಿಸಿ)

ಧನಸ್ಸು ರಾಶಿ: ಮನಸ್ಸಿನಲ್ಲಿ ವಿದ್ಯೆಯ ಲಾಭ ಅತ್ಯಧಿಕವಾಗಿ ಅನುಕೂಲವಾಗಿದೆ ಎಂಬ ಭಾವನೆ ಮತ್ತು ಸ್ವಲ್ಪ ಅಲಂಕಾರ, ಇದನ್ನು ನಿವಾರಿಸಿಕೊಳ್ಳಿ, ಇಲ್ಲವಾದರೆ ದೊಡ್ಡ ತೊಂದರೆಗೆ ಸೇರಿಕೊಳ್ಳುತ್ತೀರಾ.. ಬಂಧು ಮಿತ್ರರ ಜೊತೆ ಒಡನಾಟ ಹಿತವಾಗಿರಲಿ ಮತ್ತು ಮಿತವಾಗಿರಲಿ, ಎಚ್ಚರಿಕೆ ಬಹಳ ಅಗತ್ಯ. (ಪರಿಹಾರಕ್ಕಾಗಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)

ಮಕರ ರಾಶಿ: ಧನದ ವಿಚಾರಕ್ಕಾಗಿ ಮನೆಯಲ್ಲಿ ಮನಸ್ತಾಪ ಬೇಡ, ಆರೋಗ್ಯಕ್ಕಾಗಿ ಧನ್ವಂತರಿ ನಾಮ ಜಪವನ್ನು ಮಾಡಿಕೊಳ್ಳಿ. ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನೆಡೆ, ಎಲ್ಲ ಕಾರ್ಯದಲ್ಲೂ ಅನುಕೂಲ, ಸ್ವಲ್ಪಮಟ್ಟಿನ ಪ್ರಗತಿ. (ಪರಿಹಾರಕ್ಕಾಗಿ ದುರ್ಗಾದೇವಿಗೆ ಕೆಂಪು ಹೂಗಳಿಂದ ಪೂಜೆ ಮಾಡಿ)

ಕುಂಭ ರಾಶಿ: ಎಲ್ಲಾ ಕಾರ್ಯಗಳಿಗೂ ನಾನು ಎಂದು ಮುಂದೆ ಹೋಗಬೇಡಿ, ಎಲ್ಲದರಲ್ಲೂ ಸಿಕ್ಕಿಹಾಕಿಕೊಳ್ಳುತ್ತೀರಾ.. ಎಚ್ಚರಿಕೆಯಿಂದ ಹೆಜ್ಜೆ ಇಡಿ. ವಿದ್ಯಾಭ್ಯಾಸದಲ್ಲಿ ಸ್ವಲ್ಪ ತೊಂದರೆ. ಸೋಂಬೇರಿಗಳಾಗಬೇಡಿ, ಜಾಗೃತರಾಗಿರಿ, ಅವಶ್ಯಕತೆಗಿಂತ ಹೆಚ್ಚು ಮಾತನಾಡಬೇಡಿ, ಪ್ರಸನ್ನ ಚಿತ್ತರಾಗಿರಿ, ನಗುನಗುತ ಇರಿ. (ಪರಿಹಾರಕ್ಕಾಗಿ ರಾಮ ಮಂತ್ರವನ್ನು ಜಪಿಸಿ)

ಮೀನ ರಾಶಿ: ಎಲ್ಲ ಕಾರ್ಯದಲ್ಲೂ ಪ್ರಗತಿ, ಧರ್ಮ ಮತ್ತು ದೇವರ ಕಾರ್ಯದಲ್ಲಿ ಹೆಚ್ಚು ಉತ್ಸಾಹ, ಪ್ರಜ್ಞೆಯಿಂದ ಕೆಲಸಗಳನ್ನು ಮಾಡುತ್ತೀರಿ, ದೃಢವಾದ ನಿರ್ಧಾರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಆರೋಗ್ಯವಾಗಿದ್ದೀರಿ, ಚೆನ್ನಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಗಮನವಹಿಸುತ್ತೀರಿ, ದೃಢವಾದ ನಿರ್ಧಾರ ದಿಂದ ಎಲ್ಲವನ್ನು ಸಾಧಿಸುತ್ತೀರಿ. (ಪರಿಹಾರಕ್ಕಾಗಿ ಕೃಷ್ಣನಿಗೆ ಪಾರಿಜಾತ ಹೂಗಳಿಂದ ಪೂಜೆ ಮಾಡಿ)

ರಾಹುಕಾಲ 9-00AM ರಿಂದ 10-30AM
ಗುಳಿಕಕಾಲ: 1-30 PM ರಿಂದ 3-00 PM
ಯಮಗಂಡಕಾಲ: 10-30AM ರಿಂದ 12-00PM

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಅಬಕಾರಿ ಹಗರಣದ ಬಗ್ಗೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಏನೂ ಮಾತನಾಡಿಲ್ಲ. ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ವಿರೋಧ ಪಕ್ಷದ ವೈಫಲ್ಯದ ಲಾಭಆಡಳಿತ ಪಕ್ಷಕ್ಕೆ ಸಿಕ್ಕಿದೆ ಎಂದು ಶಾಸಕ ಬಸನಗೌಡ

[ccc_my_favorite_select_button post_id="119407"]
ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು

[ccc_my_favorite_select_button post_id="119304"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರೇಮಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ (Crime) ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

[ccc_my_favorite_select_button post_id="119241"]
ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಸಂಭವಿಸಿದ ಕೆಎಸ್ ಆರ್ ಟಿಸಿ ಬಸ್​​ (KSRTC Bus) ಮತ್ತು ಇಂಡಿಕ ಕಾರಿನ (Indica Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ದೊಡ್ಡಬಳ್ಳಾಪುರದ ಐವರು ಯುವಕರು

[ccc_my_favorite_select_button post_id="119422"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!