Karnataka BJP is in ICU, Amit Shah should know the reality; Yatnal

ಮಾಧ್ಯಮಗಳಿಗೆ ಮಾನ ಮರ್ಯಾದೆ ಇಲ್ವಾ..?; ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ ಎಂಬಂತೆ ಬೇಕಾಬಿಟ್ಟಿ ವರದಿ ಪ್ರಸಾರ ಮಾಡುತ್ತಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಶಿಸ್ತು ಸಮಿತಿಯ ಶೋಕಾಸ್ ನೋಟಿಸ್‌ಗೆ ಉತ್ತರ ಏನು ಕೊಟ್ಟಿದ್ದೀರಿ ಎಂಬ ಸುದ್ದಿವಾಹಿನಿಗಳ ಪ್ರಶ್ನೆಗೆ ಗರಂ ಆದ ಯತ್ನಾಳ್, ನನಗೆ ನೋಟಿಸ್ ಬರುವ ಮುನ್ನವೇ ನಿಮಗೆ ನೋಟಿಸ್ ತಲುಪಿಸಿದ್ದು ವಿಜಯೇಂದ್ರ ಅವನನ್ನೇ ಹೋಗಿ ಕೇಳಿ, ನನ್ನ ಏನ್ ಕೇಳ್ತಿರಿ.

ನನಗೆ ನೋಟಿಸ್ ಬರೋ ಮುಂಚೆ ಖಾಸಗಿ ಸುದ್ದಿ ವಾಹಿನಿಗಳು ವಿಜೃಂಭಿಸಿ ವರದಿ ಮಾಡಿದವು‌, ನನಗೆ ಬಂದಿಲ್ಲ ಬಂದ ನಂತರ ಉತ್ತರ ಕೊಡುವೆ ಎಂದು ಟ್ವಿಟ್ ಮಾಡಿದೆ. ಆದರೆ ನೀವೆ ವರದಿ ಮಾಡ್ತೀರಿ.. ಯತ್ನಾಳ್ ನೋಟಿಸ್ ಗೆ ಕ್ಯಾರೆ ಅನ್ನೋದಿಲ್ಲ, ಇಂತವ್ ಬಹಳ ಬಂದಿದೆ ಅಂತ.. ಇದನ್ನ ನಾ ಎಲ್ ಹೇಳಿದ್ದೀನಿ, ಎಲ್ಲಾದ್ರೂ ಸಾಕ್ಷಿ ಇದೆಯಾ.? ಯಾವ್ ಮಾಧ್ಯಮದವ್ರತ್ರ ಇದೆ ಹೇಳಿ ನೋಡುವ‌.

ನೀವೇ ಸೃಷ್ಟಿ ಮಾಡ್ಕೋತಾ ಇದ್ದೀರಿ, ನಿಮಗೆ ಬೇಕಾಗಿರೋದ್ ವಿಜಯೇಂದ್ರ, ಅವರಪ್ಪ. ಮೀಡಿಯಾದೋರ್ ಏನ್ ಮಾಡುದ್ರು ನನಗೇನು ಆಗೋದಿಲ್ಲ.

ಅಲ್ರಿ ನಿನ್ನೆ ಒಂದ್ ಹೊಡೆದಿದ್ದೀರಿ, ಕ್ಯಾಕರಿಸಿ ಉಗ್ದಿದ್ದಾರೆ ಅಂತ..ಮಾನ ಮರ್ಯಾದೆ ಇದೆಯೇನ್ರಿ ಮಾಧ್ಯಮಗಳಿಗೆ, ಕ್ಯಾಕರಿಸಿ ಉಗ್ದಿರೋದಕ್ಕೆ ಸಾಕ್ಷಿ ಏನ್ ಇದೆ..? ಏನ್ ಉಗುದ್ರು ನನಗೆ ಬರಬೇಕಲ್ವಾ..? ನಿಮ್ಮ ಮೀಡಿಯಾ ದವರಿಗೆ ಮೌಲ್ಯಗಳಿದ್ದರೆ ಬಿಡುಗಡೆ ಮಾಡಿ ಕ್ಯಾಕರಿಸಿ ಉಗ್ದಿರೋದು.

ಸುಮ್ ಸುಮ್ನೆ ನಿಮ್ಮ ಟಿಆರ್‌ಪಿ ಹೆಚ್ಚು ಮಾಡಿಕೊಳ್ಳೋದಕ್ಕೆ, ವಿಜಯೇಂದ್ರ ಅವರಪ್ಪನ ವೈಭವಿಕರ ಮಾಡೋದಕ್ಕೆ, ವಿಜಯೇಂದ್ರ ಅನಿವಾರ್ಯ ಬಿಜೆಪಿ ಅಂತ ಬಿಂಬಿಸೋದಕ್ಕೆ, ಕೆಲವೊಂದು ಮಾಧ್ಯಮಗಳು ವ್ಯವಸ್ಥಿತವಾಗಿ ಮಾಡ್ತಾ ಇರೋದು ನೈತಿಕತೆ ಬಿಟ್ಟು ಈ ಕೆಲಸ ಮಾಡಿ.

ಶಿಸ್ತು ಸಮಿತಿ ಕ್ಯಾಕರಿಸಿ ಉಗ್ದಿದೆ ಅಂತ ಸುದ್ದಿ ಮಾಡ್ತೀರಿ, ಬಾಯಿಗ್ ಬಂದಾಗ್ ಮಾಡ್ತಿರಿ, ಇವತ್ ಪೇಪರಲ್ಲೂ ಬಂದಿದೆ, ನಿಮಗೆ ವಿಜಯೇಂದ್ರ, ವಿಜಯೇಂದ್ರ ಆಗೋಗಿದೆ ಎಂದು ಹರಿಹಾಯ್ದರು.

ಈ ವೇಳೆ ಸುದ್ದಿಗಾರರು ಎಲ್ಲಾ ಮಾಧ್ಯಮಗಳ ಬಗ್ಗೆ ಮಾತಾಡಬೇಡಿ, ಆ ರೀತಿ ಮಾಡಿರುವ ಮಾಧ್ಯಮದ ಬಗ್ಗೆ ಮಾತ್ರ ಮಾತಾಡಿ ಎಂದಿದಕ್ಕೆ, ಯಾರ್ ಮಾಡಿದ್ದಾನೋ ಅವನಿಗೆ ಆಗುತ್ತೆ ಬಿಡಿ, ಅವನಿಗೆ ಗೊತ್ತಿರುತ್ತೆ.

ಯಾವ ಮಾಧ್ಯಮಕ್ಕೆ ಯತ್ನಾಳ್ ಬಗ್ಗೆ ಅಭಿಮಾನ ಇಲ್ವೋ ಬಿಟ್ ಬಿಡಿ, ವಿಜಯೇಂದ್ರನ ಮನೆ ಮುಂದೆ ಭಜನೆ ಮಾಡ್ಕೊಂಡ್ ಕೂತ್ಕೊಳಿ.

ಅಲ್ಲಾ ರೀ ನನಗೆ ಹೈಕಮಾಂಡ್ ನೋಡಿಸ್ ಕೊಟ್ಟಿರುವ ಬಗ್ಗೆ ಅವನಿಗೆ ಹೇಗೆ ಗೊತ್ತಾಯ್ತು ರೀ? ಯಾರು ಈ ವಿಜಯೇಂದ್ರ ಎಂದು ಕುಟುಕಿದರು.

ಶೋಕಾಸ್‌ ನೋಟಿಸ್‌ ಪ್ರತಿ ಮೀಡಿಯಾಗಳಿಗೆ ಯಾರು ಕೊಟ್ಟವರು? ವಿಜಯೇಂದ್ರ ತಾನೇ? ಆ ನೋಟಿಸ್ ಗೆ ಉತ್ತರ ಕೊಟ್ಟಿದ್ದೀನೋ, ಇಲ್ಲವೋ ಅಂತಾ ಅವನ ಬಳಿಯೇ ಕೇಳಿಕೊಳ್ಳಿ ನನಗೆ ಮೇಲ್ ಗೆ ನೋಟಿಸ್‌ ಬರುವ ಮುನ್ನವೇ ಬಹಿರಂಗ ಆಗುತ್ತೆ ಎಂದರೆ ಏನರ್ಥ?

ನನಗೆ ನೋಟಿಸ್‌ ಕೊಟ್ಟಿದ್ದಾರೆ ಅಂದರೆ, ನೋಟೀಸ್‌ಗೆ ಉತ್ತರನೂ ಅವನೇ ಕೊಟ್ಟಿರಬೇಕಲ್ವಾ? ಅದನ್ನು ರಿಲೀಸ್ ಮಾಡಿದ್ದೇ ವಿಜಯೇಂದ್ರ ಎಂದು ಕೆಂಡಾಮಂಡಲರಾದರು.

ಸೋಷಿಯಲ್‌ ಮೀಡಿಯಾದಲ್ಲಿ ಬೇಕಾಬಿಟ್ಟಿ ಮಾತನಾಡಿಸುವುದು. ನಮ್ಮ ಉತ್ತರ ಕರ್ನಾಟಕ ನಮ್ಮ ಭಾಷೆ ಉಪಯೋಗ ಮಾಡಿದರೆ ವಿಜಯೇಂದ್ರ ಅಲ್ಲ ಅವರ ಅಪ್ಪನೂ ಏನೂ ಮಾಡೋಕಾಗಲ್ಲ ಎಂದು ಗುಡುಗಿದರು.

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ (Dandupalya gang) ಚಿಕ್ಕ ಹನುಮಂತಪ್ಪ (ಅಲಿಯಾಸ್ ಕೆ.ಕೃಷ್ಣಪ್ಪ) ಎಂಬಾತನನ್ನು ಆಂಧ್ರಪ್ರದೇಶದ ಮದನಪಳ್ಳೆ ಗ್ರಾಮದಲ್ಲಿ ಬಂಧಿಸಲಾಗಿದೆ.

[ccc_my_favorite_select_button post_id="118778"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!