Daily story: Traitor

ಹರಿತಲೇಖನಿ ದಿನಕ್ಕೊಂದು ಕಥೆ: ದೇಶದ್ರೋಹಿ

Daily story: ಹಿಂದೆ ದೇವಗಿರಿ ಹೆಸರಿನ ರಾಜ್ಯವಿತ್ತು. ರಾಜಾ ರಾಮದೇವನು ಆ ರಾಜ್ಯವನ್ನು ಆಳುತ್ತಿದ್ದನು. ಒಮ್ಮೆ ಅಲ್ಲಾಉದ್ದೀನ ಖಿಲಜಿಯು ದೇವಗಿರಿಯ ಮೇಲೆ ದಾಳಿ ಮಾಡಲು ಬಂದನು ಮತ್ತು ರಾಜನಿಗೆ ತನ್ನ ದೂತರ ಮೂಲಕ ಶರಣಾಗುವಂತೆ ಸಂದೇಶವನ್ನು ಕಳುಹಿಸಿದನು.

ಆ ಸಂದೇಶದಲ್ಲಿ ಅಲ್ಲಾಉದ್ದೀನನು, ರಾಜಾ ರಾಮದೇವನಿಗೆ ಅವನ ಸಂಪೂರ್ಣ ರಾಜ್ಯವನ್ನು ಅಲ್ಲಾಉದ್ದೀನನಿಗೆ ಒಪ್ಪಿಸಿ, ಅವನಿಗೆ ಶರಣಾಗಬೇಕೆಂದು ಬರೆದಿದ್ದನು.

ಈ ಸಂದೇಶವನ್ನು ಕೇಳಿ ರಾಜಾ ರಾಮದೇವನಿಗೆ ಸಹಿಸಲು ಆಗಲಿಲ್ಲ. ತನ್ನ ರಾಜ್ಯದ ಮೇಲೆ ಯಾರೋ ಆಕ್ರಮಣ ಮಾಡಿರುವುದನ್ನು ಅವನು ಹೇಗೆ ತಾನೆ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬಹುದು.

ಅವನು ಬಹಳ ಪರಾಕ್ರಮಿ ರಾಜನಾಗಿದ್ದನು. ಅವನು ಅಲ್ಲಾಉದ್ದೀನನ ಪ್ರಸ್ತಾವನೆ ಒಪ್ಪಿಕೊಳ್ಳಲಿಲ್ಲ. ಇದನ್ನು ಕೇಳಿ ಅಲ್ಲಾಉದ್ದೀನ ಕೋಪಗೊಂಡನು ಮತ್ತು ತನ್ನ ದೊಡ್ಡ ಸೈನ್ಯದೊಂದಿಗೆ ದೇವಗಿರಿಯ ಮೇಲೆ ಆಕ್ರಮಣ ಮಾಡಿದನು.

ದೇವಗಿರಿಯ ಕೋಟೆ ಒಂದು ಅಭೇದ್ಯ ಕೋಟೆಯಾಗಿತ್ತು. ಆ ಕೋಟೆಯನ್ನು ಬಹಳ ಸುಲಭವಾಗಿ ಗೆಲ್ಲಲು ಸಾಧ್ಯವಿರಲಿಲ್ಲ. ಅರ್ಥಾತ್ ಆ ಕೋಟೆಯೊಳಗೆ ಯಾರಿಗೂ ಸುಲಭವಾಗಿ ನುಸುಳಲು ಸಾಧ್ಯವಿರಲಿಲ್ಲ. ಸ್ವಲ್ಪ ದಿನದಲ್ಲಿಯೇ ಇಬ್ಬರೂ ರಾಜರ ನಡುವೆ ಬಹಳ ಭಯಾನಕ ಯುದ್ಧ ನಡೆಯಿತು.

ರಾಜಾ ರಾಮದೇವನ ಸೈನಿಕರು ಯುದ್ಧ ಮಾಡುವುದರಲ್ಲಿ ಬಹಳ ನಿಪುಣರಾಗಿದ್ದರು. ಯುದ್ಧದಲ್ಲಿ ರಾಜಾ ರಾಮದೇವನ ಸೇನೆಯು ಬಹಳ ಪರಾಕ್ರಮವನ್ನು ತೋರಿಸಿತು.

ಈ ಕಾರಣದಿಂದ ಅಲ್ಲಾಉದ್ದೀನನ ಸೇನೆಯ ಬಹಳಷ್ಟು ಸೈನಿಕರು ಸತ್ತರು. ಅಲ್ಲಾಉದ್ದೀನನಿಗೆ ಬೇರೆ ಯಾವುದೇ ದಾರಿ ಕಾಣದೇ ಅವನು ತನ್ನ ದೇಶಕ್ಕೆ ಮರಳಿ ಹೋದನು. ಅಲ್ಲಾಉದ್ದೀನನ ಮೇಲೆ ವಿಜಯವನ್ನು ಸಾಧಿಸಿರುವ ಖುಷಿಯಲ್ಲಿ ದೇವಗಿರಿಯಲ್ಲಿ ಬಹಳ ದೊಡ್ಡ ವಿಜಯೋತ್ಸವವನ್ನು ಆಚರಿಸಲಾಯಿತು.

ರಾಜಾ ರಾಮದೇವನ ಸೇನೆಯಲ್ಲಿ ಒಬ್ಬ ಪರಾಕ್ರಮಿ ಸೈನಿಕನಿದ್ದನು. ಅವನು ಮಾತೃಭೂಮಿಯ ರಕ್ಷಣೆಗಾಗಿ ಈ ಯುದ್ಧದಲ್ಲಿ ಅಲ್ಲಾಉದ್ದೀನನ ಸೇನೆಯೊಂದಿಗೆ ಹೋರಾಡುತ್ತ ತನ್ನ ಪ್ರಾಣವನ್ನು ಅರ್ಪಿಸಿದ್ದನು.

ಈ ವೀರ ಯೋಧನ ಮರಣದ ಬಳಿಕ ಅವನ ಮಗಳು ಒಬ್ಬಂಟಿಯಾದಳು. ಅವಳ ಹೆಸರು ವೀರಮತಿಯಾಗಿತ್ತು. ಅವಳನ್ನು ರಾಜಾ ರಾಮದೇವನು ತನ್ನ ಮಗಳಂತೆಯೇ ನೋಡಿಕೊಂಡನು. ವೀರಮತಿ ಮದುವೆಯ ವಯಸ್ಸಿನವಳಾದಾಗ ರಾಜನು ಕೃಷ್ಣರಾವ ಹೆಸರಿನ ಒಬ್ಬ ಯುವಕನೊಂದಿಗೆ ಅವಳ ವಿವಾಹವನ್ನು ನಿಶ್ಚಯಿಸಿದನು.

ಕೃಷ್ಣರಾವ್ ಅತ್ಯಂತ ಸ್ವಾರ್ಥಿ ಮತ್ತು ಲೋಭಿಯಾಗಿದ್ದನು. ಅವನು ಏನು ಮಾಡಿದನು ಗೊತ್ತೇ? ಅಲ್ಲಾಉದ್ದೀನ ರಾಜಾ ರಾಮದೇವನೊಂದಿಗೆ ಸೋತು ಮರಳಿ ತನ್ನ ದೇಶಕ್ಕೆ ಹೋಗುತ್ತಿರುವಾಗ ಇದೇ ಕೃಷ್ಣರಾವ ಅವನನ್ನು ಭೇಟಿಯಾಗಿ, ‘ನೀವು ನನ್ನ ಒಂದು ಷರತ್ತನ್ನು ಒಪ್ಪಿಕೊಂಡರೆ, ನಾನು ನಿಮಗೆ ದೇವಗಿರಿಯನ್ನು ಗೆಲ್ಲುವ ರಹಸ್ಯವನ್ನು ಹೇಳುತ್ತೇನೆ, ಮತ್ತು ರಾಜಾ ರಾಮದೇವನ ಸೇನೆ, ಅವನ ಶಕ್ತಿಯ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ’ ಎಂದು ಹೇಳಿದನು.

ಅವನ ಷರತ್ತು ಏನೆಂದರೆ, ‘ನೀವು ದೇವಗಿರಿಯನ್ನು ಗೆದ್ದು, ನನ್ನನ್ನು ಅದರ ರಾಜನನ್ನಾಗಿ ಮಾಡಬೇಕು’ ಎಂದು ಆಗಿತ್ತು.

ಅಲ್ಲಾಉದ್ದೀನ ವಿಚಾರ ಮಾಡಿ, ಕೃಷ್ಣರಾವ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಅಲ್ಲಾಉದ್ದೀನನು ಒಪ್ಪಿಗೆ ಸೂಚಿಸಿದ ಬಳಿಕ ಕೃಷ್ಣರಾವ್ ಅವನಿಗೆ ಕೋಟೆಯ ಎಲ್ಲ ರಹಸ್ಯಗಳನ್ನು ಹೇಳಿದನು. ಅದರ ಬಳಿಕ ಅಲ್ಲಾಉದ್ದೀನನು ದೇವಗಿರಿಯ ಮೇಲೆ ಮತ್ತೊಮ್ಮೆ ದಂಡೆತ್ತಿ ಬಂದನು.

ಈ ಸಮಾಚಾರ ತಿಳಿಯುತ್ತಲೇ ರಾಜಾ ರಾಮದೇವನು ಎಲ್ಲ ವೀರ ಸರದಾರರ ಸಭೆಯನ್ನು ಕರೆದನು. ಸಭೆಯಲ್ಲಿ ರಾಜನು ‘ಸೋತ ಶತ್ರುವು ಎಂದಿಗೂ ಇಷ್ಟು ಬೇಗ ಮರಳಿ ಬರುವುದಿಲ್ಲ. ಹಾಗಿರುವಾಗ ಇವನು ಹೇಗೆ ಬಂದನು? ಇದರರ್ಥವೇನೆಂದರೆ ನಮ್ಮಲ್ಲಿಯೇ ಯಾರೋ ಅಲ್ಲಾಉದ್ದೀನನೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ. ಆದರೆ ಚಿಂತಿಸಬಾರದು, ನಾವು ಅವನನ್ನು ಮತ್ತೆ ಸೋಲಿಸೋಣ’ ಎಂದು ಹುರಿದುಂಬಿಸಿದನು.

ಇದನ್ನು ಕೇಳಿ ಎಲ್ಲರೂ ತಮ್ಮ ತಮ್ಮ ತಲವಾರನ್ನು ಎತ್ತಿ ಮತ್ತು ‘ಈ ಹೋರಾಟದಲ್ಲಿ ನಾವು ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತೇವೆ ಮತ್ತು ದೇವಗಿರಿಯನ್ನು ರಕ್ಷಿಸುತ್ತೇವೆ’ ಎಂದು ಪಣತೊಟ್ಟರು.

ಅದೇ ಸಭೆಯಲ್ಲಿ ಕೃಷ್ಣರಾವ್ ಕೂಡ ಇದ್ದನು ಮತ್ತು ಅವನು ಸುಮ್ಮನೆ ಕುಳಿತುಕೊಂಡು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದನು. ಇದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಎಲ್ಲರೂ ಅವನನ್ನು ಸುಮ್ಮನೆ ಕುಳಿತಿರುವ ಕಾರಣವನ್ನು ಕೇಳಿದರು.

ಕೃಷ್ಣರಾವ್‌ನು ಈ ರೀತಿ ಸುಮ್ಮನೆ ಕುಳಿತಿರುವುದನ್ನು ನೋಡಿ ವೀರಮತಿಗೆ ಬಹಳ ಕೋಪ ಬಂತು ಮತ್ತು ಅವಳು ಹುಲಿಯಂತೆ ಅವನ ಮೇಲೆ ಎರಗಿದಳು. ಅವಳು ‘ಇವನೇ ನಮ್ಮ ದೇಶದ ದ್ರೋಹಿಯಾಗಿದ್ದಾನೆ’ ಎಂದು ಹೇಳಿ ಮಿಂಚಿನ ಗತಿಯಲ್ಲಿ ತನ್ನ ಸೊಂಟಕ್ಕೆ ಕಟ್ಟಿದ ತಲವಾರನ್ನು ತೆಗೆದಳು ಮತ್ತು ಕೃಷ್ಣರಾವ್‌ನ ಎದೆಯನ್ನು ತಿವಿದಳು.

ವೀರಮತಿಗೆ ಕೃಷ್ಣರಾವ್‌ನ ಪ್ರಾಮಾಣಿಕತೆಯ ಬಗ್ಗೆ ಮೊದಲೇ ಸಂದೇಹವಿತ್ತು. ಆದ್ದರಿಂದ ವೀರಮತಿಯು ಅವನ ಮೇಲೆ ಒಂದು ಕಣ್ಣಿಟ್ಟಿದ್ದಳು. ಯಾವಾಗ ವೀರಮತಿಗೆ ಅವನು ಅಲ್ಲಾಉದ್ದೀನನೊಂದಿಗೆ ಸೇರಿಕೊಂಡಿರುವ ವಿಷಯ ತಿಳಿಯಿತೋ, ಆಗದಿಂದ ಅವಳು ಕೋಪದಿಂದ ಕುದಿಯುತ್ತಿದ್ದಳು. ಅವನ ಪಾಪದ ಶಿಕ್ಷೆಯನ್ನು ನೀಡಲೇ ಬೇಕಾಗಿತ್ತು. ಅವಕಾಶ ದೊರೆಯುತ್ತಲೇ ಅವಳು ಶಿಕ್ಷಿಸಿದಳು.

ಸಾಯುವಾಗ ಕೃಷ್ಣರಾವ್ ‘ನಾನು ನಿನ್ನ ಪತಿಯಾಗಿದ್ದರೂ ನನ್ನನ್ನೇಕೆ ಕೊಂದೆ’ ಎಂದು ಕೇಳಿದನು. ಆಗ ವೀರಮತಿಯು ‘ನನ್ನ ವಿವಾಹ ನಿಮ್ಮೊಂದಿಗೆ ಆಗುವುದರಲ್ಲಿತ್ತು ಹಾಗೂ ನಾನು ನಿಮ್ಮನ್ನು ನನ್ನ ಪತಿಯೆಂದು ಒಪ್ಪಿಕೊಂಡಿದ್ದೆನು. ಆದರೆ ನಿಮ್ಮಂತಹ ದೇಶದ್ರೋಹಿಯನ್ನು ಕೊಂದು ನಾನು ನನ್ನ ರಾಷ್ಟ್ರ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಈಗ ನಾನು ಪತ್ನಿಯ ಧರ್ಮವನ್ನು ಪಾಲಿಸುತ್ತೇನೆ’ ಎಂದು ಹೇಳಿ ಅವಳು ತಲವಾರನ್ನು ತಿರುಗಿಸಿ ಮತ್ತು ತನ್ನ ಹೊಟ್ಟೆಯನ್ನೇ ತಿವಿದು ಮರುಕ್ಷಣವೇ ಪ್ರಾಣ ತ್ಯಜಿಸಿ ಕೃಷ್ಣರಾವ್‌ನ ಶವದ ಪಕ್ಕದಲ್ಲಿ ಬಿದ್ದಳು.

ವೀರಮತಿಯ ಮನಸ್ಸಿನಲ್ಲಿ ಎಷ್ಟು ರಾಷ್ಟ್ರಪ್ರೇಮವಿತ್ತು! ಅವಳು ತಾನು ಮದುವೆಯಾದ ಪತಿ ದೇಶದ್ರೋಹಿಯಾಗಿದ್ದಾನೆ ಎಂದು ಗಮನಕ್ಕೆ ಬರುತ್ತಲೇ ಅವಳು ತನ್ನ ಸ್ವಂತ ವಿಚಾರವನ್ನು ಮಾಡಲಿಲ್ಲ.

ದೇಶದ್ರೋಹಿಯನ್ನು ಕೊಂದು ಅವನನ್ನು ಶಿಕ್ಷಿಸಿದಳು. ಇದರರ್ಥವೇನೆಂದರೆ, ವೀರಮತಿಗೆ ಅವಳ ಸ್ವಾರ್ಥಕ್ಕಿಂತ ದೇಶದ ರಕ್ಷಣೆಯು ಹೆಚ್ಚು ಮಹತ್ವಪೂರ್ಣವಾಗಿತ್ತು. ಪತಿಗೆ ಶಿಕ್ಷೆ ನೀಡುವುದರೊಂದಿಗೆ ಅವಳು ಪತ್ನಿಯ ಧರ್ಮವನ್ನು ಪಾಲಿಸಿದಳು ಮತ್ತು ತನ್ನ ಪ್ರಾಣವನ್ನೂ ತ್ಯಜಿಸಿದಳು.

ಕೃಪೆ: ಹಿಂದು ಜಾಗೃತಿ.

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!