Daily story: Traitor

ಹರಿತಲೇಖನಿ ದಿನಕ್ಕೊಂದು ಕಥೆ: ದೇಶದ್ರೋಹಿ

Daily story: ಹಿಂದೆ ದೇವಗಿರಿ ಹೆಸರಿನ ರಾಜ್ಯವಿತ್ತು. ರಾಜಾ ರಾಮದೇವನು ಆ ರಾಜ್ಯವನ್ನು ಆಳುತ್ತಿದ್ದನು. ಒಮ್ಮೆ ಅಲ್ಲಾಉದ್ದೀನ ಖಿಲಜಿಯು ದೇವಗಿರಿಯ ಮೇಲೆ ದಾಳಿ ಮಾಡಲು ಬಂದನು ಮತ್ತು ರಾಜನಿಗೆ ತನ್ನ ದೂತರ ಮೂಲಕ ಶರಣಾಗುವಂತೆ ಸಂದೇಶವನ್ನು ಕಳುಹಿಸಿದನು.

ಆ ಸಂದೇಶದಲ್ಲಿ ಅಲ್ಲಾಉದ್ದೀನನು, ರಾಜಾ ರಾಮದೇವನಿಗೆ ಅವನ ಸಂಪೂರ್ಣ ರಾಜ್ಯವನ್ನು ಅಲ್ಲಾಉದ್ದೀನನಿಗೆ ಒಪ್ಪಿಸಿ, ಅವನಿಗೆ ಶರಣಾಗಬೇಕೆಂದು ಬರೆದಿದ್ದನು.

ಈ ಸಂದೇಶವನ್ನು ಕೇಳಿ ರಾಜಾ ರಾಮದೇವನಿಗೆ ಸಹಿಸಲು ಆಗಲಿಲ್ಲ. ತನ್ನ ರಾಜ್ಯದ ಮೇಲೆ ಯಾರೋ ಆಕ್ರಮಣ ಮಾಡಿರುವುದನ್ನು ಅವನು ಹೇಗೆ ತಾನೆ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬಹುದು.

ಅವನು ಬಹಳ ಪರಾಕ್ರಮಿ ರಾಜನಾಗಿದ್ದನು. ಅವನು ಅಲ್ಲಾಉದ್ದೀನನ ಪ್ರಸ್ತಾವನೆ ಒಪ್ಪಿಕೊಳ್ಳಲಿಲ್ಲ. ಇದನ್ನು ಕೇಳಿ ಅಲ್ಲಾಉದ್ದೀನ ಕೋಪಗೊಂಡನು ಮತ್ತು ತನ್ನ ದೊಡ್ಡ ಸೈನ್ಯದೊಂದಿಗೆ ದೇವಗಿರಿಯ ಮೇಲೆ ಆಕ್ರಮಣ ಮಾಡಿದನು.

ದೇವಗಿರಿಯ ಕೋಟೆ ಒಂದು ಅಭೇದ್ಯ ಕೋಟೆಯಾಗಿತ್ತು. ಆ ಕೋಟೆಯನ್ನು ಬಹಳ ಸುಲಭವಾಗಿ ಗೆಲ್ಲಲು ಸಾಧ್ಯವಿರಲಿಲ್ಲ. ಅರ್ಥಾತ್ ಆ ಕೋಟೆಯೊಳಗೆ ಯಾರಿಗೂ ಸುಲಭವಾಗಿ ನುಸುಳಲು ಸಾಧ್ಯವಿರಲಿಲ್ಲ. ಸ್ವಲ್ಪ ದಿನದಲ್ಲಿಯೇ ಇಬ್ಬರೂ ರಾಜರ ನಡುವೆ ಬಹಳ ಭಯಾನಕ ಯುದ್ಧ ನಡೆಯಿತು.

ರಾಜಾ ರಾಮದೇವನ ಸೈನಿಕರು ಯುದ್ಧ ಮಾಡುವುದರಲ್ಲಿ ಬಹಳ ನಿಪುಣರಾಗಿದ್ದರು. ಯುದ್ಧದಲ್ಲಿ ರಾಜಾ ರಾಮದೇವನ ಸೇನೆಯು ಬಹಳ ಪರಾಕ್ರಮವನ್ನು ತೋರಿಸಿತು.

ಈ ಕಾರಣದಿಂದ ಅಲ್ಲಾಉದ್ದೀನನ ಸೇನೆಯ ಬಹಳಷ್ಟು ಸೈನಿಕರು ಸತ್ತರು. ಅಲ್ಲಾಉದ್ದೀನನಿಗೆ ಬೇರೆ ಯಾವುದೇ ದಾರಿ ಕಾಣದೇ ಅವನು ತನ್ನ ದೇಶಕ್ಕೆ ಮರಳಿ ಹೋದನು. ಅಲ್ಲಾಉದ್ದೀನನ ಮೇಲೆ ವಿಜಯವನ್ನು ಸಾಧಿಸಿರುವ ಖುಷಿಯಲ್ಲಿ ದೇವಗಿರಿಯಲ್ಲಿ ಬಹಳ ದೊಡ್ಡ ವಿಜಯೋತ್ಸವವನ್ನು ಆಚರಿಸಲಾಯಿತು.

ರಾಜಾ ರಾಮದೇವನ ಸೇನೆಯಲ್ಲಿ ಒಬ್ಬ ಪರಾಕ್ರಮಿ ಸೈನಿಕನಿದ್ದನು. ಅವನು ಮಾತೃಭೂಮಿಯ ರಕ್ಷಣೆಗಾಗಿ ಈ ಯುದ್ಧದಲ್ಲಿ ಅಲ್ಲಾಉದ್ದೀನನ ಸೇನೆಯೊಂದಿಗೆ ಹೋರಾಡುತ್ತ ತನ್ನ ಪ್ರಾಣವನ್ನು ಅರ್ಪಿಸಿದ್ದನು.

ಈ ವೀರ ಯೋಧನ ಮರಣದ ಬಳಿಕ ಅವನ ಮಗಳು ಒಬ್ಬಂಟಿಯಾದಳು. ಅವಳ ಹೆಸರು ವೀರಮತಿಯಾಗಿತ್ತು. ಅವಳನ್ನು ರಾಜಾ ರಾಮದೇವನು ತನ್ನ ಮಗಳಂತೆಯೇ ನೋಡಿಕೊಂಡನು. ವೀರಮತಿ ಮದುವೆಯ ವಯಸ್ಸಿನವಳಾದಾಗ ರಾಜನು ಕೃಷ್ಣರಾವ ಹೆಸರಿನ ಒಬ್ಬ ಯುವಕನೊಂದಿಗೆ ಅವಳ ವಿವಾಹವನ್ನು ನಿಶ್ಚಯಿಸಿದನು.

ಕೃಷ್ಣರಾವ್ ಅತ್ಯಂತ ಸ್ವಾರ್ಥಿ ಮತ್ತು ಲೋಭಿಯಾಗಿದ್ದನು. ಅವನು ಏನು ಮಾಡಿದನು ಗೊತ್ತೇ? ಅಲ್ಲಾಉದ್ದೀನ ರಾಜಾ ರಾಮದೇವನೊಂದಿಗೆ ಸೋತು ಮರಳಿ ತನ್ನ ದೇಶಕ್ಕೆ ಹೋಗುತ್ತಿರುವಾಗ ಇದೇ ಕೃಷ್ಣರಾವ ಅವನನ್ನು ಭೇಟಿಯಾಗಿ, ‘ನೀವು ನನ್ನ ಒಂದು ಷರತ್ತನ್ನು ಒಪ್ಪಿಕೊಂಡರೆ, ನಾನು ನಿಮಗೆ ದೇವಗಿರಿಯನ್ನು ಗೆಲ್ಲುವ ರಹಸ್ಯವನ್ನು ಹೇಳುತ್ತೇನೆ, ಮತ್ತು ರಾಜಾ ರಾಮದೇವನ ಸೇನೆ, ಅವನ ಶಕ್ತಿಯ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ’ ಎಂದು ಹೇಳಿದನು.

ಅವನ ಷರತ್ತು ಏನೆಂದರೆ, ‘ನೀವು ದೇವಗಿರಿಯನ್ನು ಗೆದ್ದು, ನನ್ನನ್ನು ಅದರ ರಾಜನನ್ನಾಗಿ ಮಾಡಬೇಕು’ ಎಂದು ಆಗಿತ್ತು.

ಅಲ್ಲಾಉದ್ದೀನ ವಿಚಾರ ಮಾಡಿ, ಕೃಷ್ಣರಾವ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಅಲ್ಲಾಉದ್ದೀನನು ಒಪ್ಪಿಗೆ ಸೂಚಿಸಿದ ಬಳಿಕ ಕೃಷ್ಣರಾವ್ ಅವನಿಗೆ ಕೋಟೆಯ ಎಲ್ಲ ರಹಸ್ಯಗಳನ್ನು ಹೇಳಿದನು. ಅದರ ಬಳಿಕ ಅಲ್ಲಾಉದ್ದೀನನು ದೇವಗಿರಿಯ ಮೇಲೆ ಮತ್ತೊಮ್ಮೆ ದಂಡೆತ್ತಿ ಬಂದನು.

ಈ ಸಮಾಚಾರ ತಿಳಿಯುತ್ತಲೇ ರಾಜಾ ರಾಮದೇವನು ಎಲ್ಲ ವೀರ ಸರದಾರರ ಸಭೆಯನ್ನು ಕರೆದನು. ಸಭೆಯಲ್ಲಿ ರಾಜನು ‘ಸೋತ ಶತ್ರುವು ಎಂದಿಗೂ ಇಷ್ಟು ಬೇಗ ಮರಳಿ ಬರುವುದಿಲ್ಲ. ಹಾಗಿರುವಾಗ ಇವನು ಹೇಗೆ ಬಂದನು? ಇದರರ್ಥವೇನೆಂದರೆ ನಮ್ಮಲ್ಲಿಯೇ ಯಾರೋ ಅಲ್ಲಾಉದ್ದೀನನೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ. ಆದರೆ ಚಿಂತಿಸಬಾರದು, ನಾವು ಅವನನ್ನು ಮತ್ತೆ ಸೋಲಿಸೋಣ’ ಎಂದು ಹುರಿದುಂಬಿಸಿದನು.

ಇದನ್ನು ಕೇಳಿ ಎಲ್ಲರೂ ತಮ್ಮ ತಮ್ಮ ತಲವಾರನ್ನು ಎತ್ತಿ ಮತ್ತು ‘ಈ ಹೋರಾಟದಲ್ಲಿ ನಾವು ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತೇವೆ ಮತ್ತು ದೇವಗಿರಿಯನ್ನು ರಕ್ಷಿಸುತ್ತೇವೆ’ ಎಂದು ಪಣತೊಟ್ಟರು.

ಅದೇ ಸಭೆಯಲ್ಲಿ ಕೃಷ್ಣರಾವ್ ಕೂಡ ಇದ್ದನು ಮತ್ತು ಅವನು ಸುಮ್ಮನೆ ಕುಳಿತುಕೊಂಡು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದನು. ಇದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಎಲ್ಲರೂ ಅವನನ್ನು ಸುಮ್ಮನೆ ಕುಳಿತಿರುವ ಕಾರಣವನ್ನು ಕೇಳಿದರು.

ಕೃಷ್ಣರಾವ್‌ನು ಈ ರೀತಿ ಸುಮ್ಮನೆ ಕುಳಿತಿರುವುದನ್ನು ನೋಡಿ ವೀರಮತಿಗೆ ಬಹಳ ಕೋಪ ಬಂತು ಮತ್ತು ಅವಳು ಹುಲಿಯಂತೆ ಅವನ ಮೇಲೆ ಎರಗಿದಳು. ಅವಳು ‘ಇವನೇ ನಮ್ಮ ದೇಶದ ದ್ರೋಹಿಯಾಗಿದ್ದಾನೆ’ ಎಂದು ಹೇಳಿ ಮಿಂಚಿನ ಗತಿಯಲ್ಲಿ ತನ್ನ ಸೊಂಟಕ್ಕೆ ಕಟ್ಟಿದ ತಲವಾರನ್ನು ತೆಗೆದಳು ಮತ್ತು ಕೃಷ್ಣರಾವ್‌ನ ಎದೆಯನ್ನು ತಿವಿದಳು.

ವೀರಮತಿಗೆ ಕೃಷ್ಣರಾವ್‌ನ ಪ್ರಾಮಾಣಿಕತೆಯ ಬಗ್ಗೆ ಮೊದಲೇ ಸಂದೇಹವಿತ್ತು. ಆದ್ದರಿಂದ ವೀರಮತಿಯು ಅವನ ಮೇಲೆ ಒಂದು ಕಣ್ಣಿಟ್ಟಿದ್ದಳು. ಯಾವಾಗ ವೀರಮತಿಗೆ ಅವನು ಅಲ್ಲಾಉದ್ದೀನನೊಂದಿಗೆ ಸೇರಿಕೊಂಡಿರುವ ವಿಷಯ ತಿಳಿಯಿತೋ, ಆಗದಿಂದ ಅವಳು ಕೋಪದಿಂದ ಕುದಿಯುತ್ತಿದ್ದಳು. ಅವನ ಪಾಪದ ಶಿಕ್ಷೆಯನ್ನು ನೀಡಲೇ ಬೇಕಾಗಿತ್ತು. ಅವಕಾಶ ದೊರೆಯುತ್ತಲೇ ಅವಳು ಶಿಕ್ಷಿಸಿದಳು.

ಸಾಯುವಾಗ ಕೃಷ್ಣರಾವ್ ‘ನಾನು ನಿನ್ನ ಪತಿಯಾಗಿದ್ದರೂ ನನ್ನನ್ನೇಕೆ ಕೊಂದೆ’ ಎಂದು ಕೇಳಿದನು. ಆಗ ವೀರಮತಿಯು ‘ನನ್ನ ವಿವಾಹ ನಿಮ್ಮೊಂದಿಗೆ ಆಗುವುದರಲ್ಲಿತ್ತು ಹಾಗೂ ನಾನು ನಿಮ್ಮನ್ನು ನನ್ನ ಪತಿಯೆಂದು ಒಪ್ಪಿಕೊಂಡಿದ್ದೆನು. ಆದರೆ ನಿಮ್ಮಂತಹ ದೇಶದ್ರೋಹಿಯನ್ನು ಕೊಂದು ನಾನು ನನ್ನ ರಾಷ್ಟ್ರ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಈಗ ನಾನು ಪತ್ನಿಯ ಧರ್ಮವನ್ನು ಪಾಲಿಸುತ್ತೇನೆ’ ಎಂದು ಹೇಳಿ ಅವಳು ತಲವಾರನ್ನು ತಿರುಗಿಸಿ ಮತ್ತು ತನ್ನ ಹೊಟ್ಟೆಯನ್ನೇ ತಿವಿದು ಮರುಕ್ಷಣವೇ ಪ್ರಾಣ ತ್ಯಜಿಸಿ ಕೃಷ್ಣರಾವ್‌ನ ಶವದ ಪಕ್ಕದಲ್ಲಿ ಬಿದ್ದಳು.

ವೀರಮತಿಯ ಮನಸ್ಸಿನಲ್ಲಿ ಎಷ್ಟು ರಾಷ್ಟ್ರಪ್ರೇಮವಿತ್ತು! ಅವಳು ತಾನು ಮದುವೆಯಾದ ಪತಿ ದೇಶದ್ರೋಹಿಯಾಗಿದ್ದಾನೆ ಎಂದು ಗಮನಕ್ಕೆ ಬರುತ್ತಲೇ ಅವಳು ತನ್ನ ಸ್ವಂತ ವಿಚಾರವನ್ನು ಮಾಡಲಿಲ್ಲ.

ದೇಶದ್ರೋಹಿಯನ್ನು ಕೊಂದು ಅವನನ್ನು ಶಿಕ್ಷಿಸಿದಳು. ಇದರರ್ಥವೇನೆಂದರೆ, ವೀರಮತಿಗೆ ಅವಳ ಸ್ವಾರ್ಥಕ್ಕಿಂತ ದೇಶದ ರಕ್ಷಣೆಯು ಹೆಚ್ಚು ಮಹತ್ವಪೂರ್ಣವಾಗಿತ್ತು. ಪತಿಗೆ ಶಿಕ್ಷೆ ನೀಡುವುದರೊಂದಿಗೆ ಅವಳು ಪತ್ನಿಯ ಧರ್ಮವನ್ನು ಪಾಲಿಸಿದಳು ಮತ್ತು ತನ್ನ ಪ್ರಾಣವನ್ನೂ ತ್ಯಜಿಸಿದಳು.

ಕೃಪೆ: ಹಿಂದು ಜಾಗೃತಿ.

ರಾಜಕೀಯ

ಕಸ ಗುಡಿಸುವ ಮಷಿನ್‌ ಬಾಡಿಗೆ 613 ಕೋಟಿ ಖರ್ಚು, ಬಾಡಿಗೆ ಬದಲು ಖರೀದಿಗೆ 1.3-3ಕೋಟಿ: ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ಕಸ ಗುಡಿಸುವ ಮಷಿನ್‌ ಬಾಡಿಗೆ 613 ಕೋಟಿ ಖರ್ಚು, ಬಾಡಿಗೆ ಬದಲು ಖರೀದಿಗೆ

ರಾಜ್ಯ ಸರ್ಕಾರದ ಕ್ಯಾಬಿನೆಟ್ ನಲ್ಲಿ 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷದವರೆಗೂ ಬಾಡಿಗೆ ಆಧಾರದ ಮೇಲೆ ಪಡೆಯಲು ಒಪ್ಪಿಗೆ ನೀಡಿದೆ.ಬಾಡಿಗೆ ನೆಪದಲ್ಲಿ ಕಮೀಷನ್ ಗೋಲ್ ಮಾಲ್ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="116356"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ: ದೊಡ್ಡಬಳ್ಳಾಪುರ ಬಾಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ..!

ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ (Shuttle Badminton Tournament) ಅಂಡರ್ 17 ಬಾಲಕರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ಬಾಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

[ccc_my_favorite_select_button post_id="116353"]
ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಪತ್ನಿಗೆ ವಿಡಿಯೊ ಕಾಲ್ ಮಾಡಿ ಪತಿ ಆತ್ಮಹತ್ಯೆ

ಜೈಲು ಪಾಲಾಗಿದ್ದ ಯುವಕ ಜಾಮೀನಿನಲ್ಲಿ ಹೊರಗೆ ಬಂದ ಎರಡು ವಾರಗಳ ನಂತರ ಪತ್ನಿಗೆ ಲೈವ್ ವಿಡಿಯೊ ಮಾಡಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ (Suicide) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

[ccc_my_favorite_select_button post_id="116294"]
ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ದೊಡ್ಡಬಳ್ಳಾಪುರ; ಭೀಕರ ಅಪಘಾತ.. ಎಂಬಿಎ ವಿದ್ಯಾರ್ಥಿ ದುರ್ಮರಣ

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಫಘಾತಕ್ಕೆ (Accident) ಒಳಗಾಗಿ ದೊಡ್ಡಬಳ್ಳಾಪುರ ನಗರದ ನಿವಾಸಿ, ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ ಘಟನೆ ನಾರನಹಳ್ಳಿ ಬಳಿ ಸಂಭವಿಸಿದೆ.

[ccc_my_favorite_select_button post_id="116301"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!