ಬೆಂಗಳೂರು: ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟುವ ಉದ್ದೇಶ ಹಾಗೂ ಜೆಡಿಎಸ್ನತ್ತ ಯುವಕರನ್ನು ಸೆಳೆಯುವ ಉದ್ದೇಶ ದೊಂದಿಗೆ ರಾಜ್ಯ ಜೆಡಿಎಸ್ (JDS) ಇದೀಗ ಸದಸ್ಯತ್ವ ಅಭಿಯಾನ ವನ್ನು ಆರಂಭಿ ಸಿದ್ದು, ಈ ಬಾರಿ ಮಿಸ್ ಕಾಲ್ ಮೂಲಕ ಸದಸ್ಯತ್ವ ನೊಂದಣಿ ಮಾಡಲು ಉದ್ದೇಶಿಸಿದೆ.
ಜೆಡಿಎಸ್ ಯುವ ಘಟಕದ ವತಿಯಿಂದ ‘ಜನರೊಂದಿಗೆ ಜನತಾದಳ’ ಎನ್ನುವ ಹೆಸರಲ್ಲಿ ಅಭಿಯಾನವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಕಾರ್ಯ ಕ್ರಮ ಜೂ.13ರಂದೇ ನಡೆಯ ಬೇಕಿತ್ತು. ಆದರೆ ಏರ್ ಇಂಡಿಯಾ ವಿಮಾನ ದುರಂತ ದಿಂದಾಗಿ ಕಾರ್ಯಕ್ರ ಮವನ್ನು ಮುಂದೂಡಲಾಗಿತ್ತು. ಆದರೀಗ ಭಾನುವಾರ ಈ ಅಭಿಯಾನಕ್ಕೆ ಚಾಲನೆ ನೀಡಲು ತೀರ್ಮಾನಿಸಲಾಗಿದೆ.
ಸದಸ್ಯತ್ವ ನೊಂದಣಿಗೆ ಚಾಲನೆ ನೀಡುವ ಜತೆಜತೆಗೆ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಸೋಮವಾರದಿಂದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಈ ಪ್ರವಾಸದಲ್ಲಿ ಪಕ್ಷದ ಎರಡನೇ ಹಾಗೂ ಮೂರನೇ ಹಂತದ ನಾಯಕರೊಂದಿಗೆ ಚರ್ಚಿಸಿ, ಸ್ಥಳೀಯ ಸಮಸ್ಯೆ, ಸಂಘಟನೆಗೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಭಾನುವಾರ ಬೆಳಗ್ಗೆ ಬೆಂಗಳೂರಿನ ಜೆ.ಪಿ. ಭವನದಲ್ಲಿ ಕಿರು ಸಮಾವೇಶ ನಡೆಯಲಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ನಾಯಕರಾದ ಸುರೇಶ್ ಬಾಬು, ಭೋಜೇಗೌಡ, ಸಂಸದ ಮಲ್ಲೇಶ್ ಬಾಬು ಸಹಿತ ಪಕ್ಷದ ಶಾಸಕರು ಹಾಗೂ ಇನ್ನಿತರ ಮುಖಂ ಡರು ಪಾಲ್ಗೊಳ್ಳಲಿದ್ದಾರೆ.
ಇದಾದ ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಎರಡು ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ತಾಲೂಕು ಮಟ್ಟದಿಂದ ಪಕ್ಷದ ಸಂಘಟನೆಗೆ ಒತ್ತು ನೀಡುವ ಸಾಧ್ಯತೆಯಿದೆ.
ಭವಿಷ್ಯದಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆಯೂ ನಡೆಯಬೇಕಿದ್ದು, ಅದಕ್ಕೂ ಮುನ್ನ ನಿಖಿಲ್ ಕುಮಾರ ಸ್ವಾಮಿ ನೇತೃತ್ವದಲ್ಲಿ ರಾಜ್ಯ ಪ್ರವಾಸ ನಡೆಯಲಿದೆ. ಇದಕ್ಕೆ ಪೂರಕವಾಗಿ ಸಂಘಟನೆಯನ್ನು ಹಿಗ್ಗಿಸಲು ಡಿಜಿಟಲ್ ವೇದಿಕೆಗಳನ್ನು ಬಳಸಿ ಕೊಳ್ಳಲೂ ಪಕ್ಷ ಮುಂದಾಗಿದೆ.