Harithalekhani: Ordinary photographer

ಹರಿತಲೇಖನಿ ದಿನಕ್ಕೊಂದು ಕಥೆ: ಸಾಮಾನ್ಯ ಫೋಟೋಗ್ರಾಫರ್..!

Harithalekhani: ನೀವು ಬ್ರಾಂಡನ್ ಸ್ಟಾಂಟನ್ ಬಗ್ಗೆ ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ, ತೀರಾ ಸಾಮಾನ್ಯವೆನಿಸುವ ಕೆಲಸಗಳಿಂದಲೂ ಹೇಗೆ ಜಗತ್ತಿನ ಗಮನವನ್ನು ಸೆಳೆಯಬಹುದು ಎಂಬುದಕ್ಕೆ ಆತನೊಬ್ಬ ನಿದರ್ಶನವಾಗಿ ನನಗೆ ಕಾಣುತ್ತಾನೆ.

ಮೂಲತಃ ಅಮೆರಿಕದ ಅಟ್ಲಾಂಟಾದವನಾದ ಸ್ಟಾಂಟನ್, ಹೆಚ್ಚು ಓದಿದವನಲ್ಲ. ಇತಿಹಾಸ ವಿಷಯದಲ್ಲಿ ಸಾಮಾನ್ಯ ಅಂಕ ಗಳಿಸಿ ಪದವೀಧರನಾದವ. ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡುವಾಗ, ತಂದೆಗೆ ಕಾಡಿ ಬೇಡಿ ಒಂದು ಸಾಮಾನ್ಯ ಕೆಮರಾ ಖರೀದಿಸಿದ. ಎಲ್ಲೆಂದರಲ್ಲಿ ಕಂಡಕಂಡವರ ಫೋಟೋ ತೆಗೆಯುವುದು ಅವನ ಹವ್ಯಾಸ.

ಒಮ್ಮೆ ತಡವಾಗಿ ಬಂದುದಕೆ ಕೋಪಗೊಂಡ ಆತನ ಬಾಸ್, ಸ್ಟಾಂಟನ್ ನನ್ನು ತರಾಟೆಗೆ ತೆಗೆದುಕೊಂಡ. ಅದಕ್ಕೆ ಕಾರಣ ಕೇಳಿದ್ದಕ್ಕೆ, ‘ಆಫೀಸಿನಿಂದ ಬರುವಾಗ ಕೆಲವು ವ್ಯಕ್ತಿಗಳ ಫೋಟೋ ತೆಗೆಯುತ್ತಿದ್ದೆ. ಅದಕ್ಕೆ ತಡವಾಯಿತು’ ಎಂದು ಹೇಳಿದ. ಅಷ್ಟಕ್ಕೇ ವ್ಯಗ್ರನಾದ ಆತನ ಬಾಸ್, ‘ಒಂದೋ ಕೆಲಸ ಮಾಡು, ಇಲ್ಲವೇ ಈ ಕೆಲಸ ಬಿಟ್ಟು ಫೋಟೋ ತೆಗೆ, ಹೋಗು’ ಎಂದು ಬಿಟ್ಟ.

ಸ್ಟಾಂಟನ್ ಎರಡನೇಯದನ್ನೇ ಆಯ್ಕೆ ಮಾಡಿಕೊಂಡ. ಪೂರ್ಣಾವಧಿ ಫೋಟೋಗ್ರಾಫರ್ ಆದ. ಇನ್ನು ಮುಂದೆ ಫೋಟೋ ತೆಗೆಯುವುದನ್ನೇ ಕಾಯಕ ಮಾಡಿಕೊಳ್ಳುತ್ತೇನೆ ಎಂದು ನಿರ್ಧರಿಸಿದ. ನ್ಯೂಯಾರ್ಕ್ ನಗರದ ಹಾದಿಬೀದಿಯಲ್ಲಿ ಹೋಗುವವರ, ಬರುವವರ, ಕುಂತವರ, ಮಲಗಿದವರ.. ಹೀಗೆ ಎಲ್ಲರ ಫೋಟೋಗಳನ್ನು ತೆಗೆದು, ಅವರ ಕಿರು ಸಂದರ್ಶನವನ್ನು ಸಂಗ್ರಹಿಸುತ್ತಾ ಹೋದ. ಈ ರೀತಿ ಸುಮಾರು ಹತ್ತು ಸಾವಿರ ಜನರ ಭಾವಚಿತ್ರ ಫೋಟೋ ತೆಗೆದ, ಸಂದರ್ಶನ ಮಾಡಿದ.

ಅನಂತರ ಸ್ನೇಹಿತರ ಸಹಾಯದಿಂದ ಒಂದು ಫೋಟೋ ಪ್ರದರ್ಶನ ಏರ್ಪಡಿಸಿದ. ಅಲ್ಲಿ ತಾನು ತೆಗೆದ ಹತ್ತು ಸಾವಿರ ಜನರ ಫೋಟೋಗಳನ್ನು ಪ್ರದರ್ಶಿಸಿದ. ಆತನ ಕೃತಿ ಅಪಾರ ಜನಮನ್ನಣೆಗೆ ಪಾತ್ರವಾಯಿತು. ಇದಕ್ಕಾಗಿ Humans of New York ಎಂಬ ಫೇಸ್ ಬುಕ್ ಪೇಜ್ ನ್ನು ತೆರೆದ. ಅದರಿಂದ ಆತನಿಗೆ ಜಾಗತಿಕ ಪ್ರಚಾರ ಲಭಿಸಿತು. ನಂತರ ಅದೇ ಹೆಸರಿನಲ್ಲಿ (Humans of New York) ಪುಸ್ತಕವನ್ನೂ ಪ್ರಕಟಿಸಿದ. ಈ ಪುಸ್ತಕ ಮಾರುಕಟ್ಟೆಗೆ ಬರುವುದಕ್ಕಿಂತ ಮುನ್ನವೇ ಮೂವತ್ತು ಸಾವಿರ ಪ್ರತಿಗಳಿಗೆ ಬೇಡಿಕೆ ಬಂದಿತು. 2013 ರಲ್ಲಿ ‘ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ಸ್’ ಪುಸ್ತಕಗಳ ಪಟ್ಟಿಯಲ್ಲಿ ಈ ಕೃತಿ ಸತತ ಇಪ್ಪತ್ತಾರು ವಾರಗಳ ಕಾಲ ಮೊದಲ ಸ್ಥಾನದಲ್ಲಿತ್ತು.

ಅದೇ ವರ್ಷ ಪ್ರತಿಷ್ಠಿತ ‘ಟೈಮ್ಸ್’ ಮ್ಯಾಗಜಿನ್, “30 Under 30 People Changing The World” ಸರಣಿಯಲ್ಲಿ ಸ್ಟಾಂಟನ್ ನನ್ನೂ ಸೇರಿಸಿತು. ಇದರಿಂದ ಆತನಿಗೆ ಮತ್ತು ಅವನ ಕೃತಿಗೆ ಮತ್ತಷ್ಟು ಮಾನ್ಯತೆ ಸಿಕ್ಕಿತು. ಅದೇ ವರ್ಷ ವಿಶ್ವಸಂಸ್ಥೆ ಸ್ಟಾಂಟನ್ ನನ್ನು ಐವತ್ತು ದಿನಗಳ ಮಟ್ಟಿಗೆ ಮಧ್ಯ ಪ್ರಾಚ್ಯದ ಹತ್ತು ದೇಶಗಳಿಗೆ ಫೋಟೋ ತೆಗೆಯಲೆಂದೇ ಕಳುಹಿಸಿಕೊಟ್ಟಿತು. ಈ ಪ್ರವಾಸದಲ್ಲಿ ಕೊನೆಯಲ್ಲಿ, ತಾನು ಸಂಗ್ರಹಿಸಿದ 23 ಲಕ್ಷ ಡಾಲರ್ ಗಳನ್ನು ಆತ ಪಾಕಿಸ್ತಾನದ ಜೀತದಾಳುಗಳ ಕ್ಷೇಮಾಭಿವೃದ್ಧಿಗೆ ದಾನವಾಗಿ ನೀಡಿದ.

2015 ರಲ್ಲಿ ಸ್ಟಾಂಟನ್ ಗೆ ಒಂದು ಅಚ್ಚರಿ ಕಾದಿತ್ತು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ತಮ್ಮನ್ನು ಸಂದರ್ಶಿಸಿ, ಫೋಟೋ ತೆಗೆಯುವಂತೆ ಓವಲ್ ಆಫೀಸಿಗೆ ಸ್ಟಾಂಟನ್ ನನ್ನು ಆಮಂತ್ರಿಸಿದ್ದರು..

ಇಂದು ಸ್ಟಾಂಟನ್ ಕೆಮರಾ ಹಿಡಿದರೆ ಯಾರಾದರೂ ಪೋಸು ಕೊಡುತ್ತಾರೆ, ಜೋಳಿಗೆ ಹಿಡಿದರೆ ಕೈ ತುಂಬಾ ಹಣ ಕೊಡುತ್ತಾರೆ. ಆತ ಅದನ್ನು ಒಳ್ಳೆಯ ಉದ್ದೇಶಗಳಿಗೆ ದಾನ ಮಾಡುತ್ತಾನೆ. ಒಬ್ಬ ಸಾಮಾನ್ಯ ಬೀದಿ ಫೋಟೋಗ್ರಾಫರ್ ಇಂದು ‘ಏಕ ವ್ಯಕ್ತಿ ಪರೋಪಕಾರಿ’ಯಾಗಿದ್ದಾನೆ. ಈತನನ್ನು Emperor Of Empathy (ಪರಾನುಭೂತಿಯ ಚಕ್ರವರ್ತಿ) ಎಂದು ಮಾಧ್ಯಮಗಳು ಸಂಬೋಧಿಸುತ್ತವೆ.

ಅಗಾಧ ಸಾಧನೆ ಮಾಡಲು ಅಸಾಮಾನ್ಯ ಕೆಲಸಗಳನ್ನೇ ಮಾಡಬೇಕಿಲ್ಲ.

ಕೃಪೆ: ಖ್ಯಾತ ಸಂಪಾದಕರಾದ ವಿಶ್ವೇಶ್ವರ ಭಟ್, ‘ಫೇಸ್‌ಬುಕ್‌ ಪೇಜ್ ಪುಟ’

ರಾಜಕೀಯ

2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದಾರೆ: ಆರ್‌.ಅಶೋಕ

2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದಾರೆ: ಆರ್‌.ಅಶೋಕ

2 ಕೋಟಿ ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದಿದ್ದು, ಅಪರಾಧಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ; ಆರ್. ಅಶೋಕ (R.AShoka)

[ccc_my_favorite_select_button post_id="118528"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಗಾಳಿಪಟ ಹಾರಿಸುವ ಮಾಂಜಾ ದಾರ (Maanja thread) ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ.

[ccc_my_favorite_select_button post_id="118471"]
ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ಇಂದು ಸಂಭವಿಸಿದ ಎರಡು ಪ್ರತ್ಯೇಕ ಕಾರುಗಳ ಅಪಘಾತದಲ್ಲಿ (Accident) ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

[ccc_my_favorite_select_button post_id="118357"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!