ದೊಡ್ಡಬಳ್ಳಾಪುರ: ತಾಲೂಕಿನ ಬನವತಿ (Banavati) ಗ್ರಾಮದಲ್ಲಿ ನಿನ್ನೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ (Dr. B.R. Ambedkar) ಅವರ 135 ನೇ ಜಯಂತಿ ಹಾಗೂ ಬಾಬು ಜಗಜೀವನ್ ರಾಮ್ (Babu Jagjivan Ram) ಅವರ 119ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿ ( ಕೆಂಪು ಸೇನೆ ) ತಾಲೂಕು ಅಧ್ಯಕ್ಷರಾದ ರಾಮದಾಸ್ ವಹಿಸಿದ್ದರು. ಉದ್ಘಾಟನೆಯನ್ನು ದೊಮ್ಮಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲರಾದ ಅಡಿವಪ್ಪ.ಏನ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ದಲಿತ ಸಂಘರ್ಷ ಸಮಿತಿ ( ಕೆಂಪು ಸೇನೆ ) ಸಾಸಲು ಹೋಬಳಿ ಅಧ್ಯಕ್ಷರು ಮಂಜುನಾಥ್, ರಾಜ್ಯ ಉಪಾಧ್ಯಕ್ಷರಾದ ಗುರುಸ್ವಾಮಿ, ಮೊಹಮ್ಮದ್ ಆಲಿ ಭಾಗವಹಿಸಿದ್ದರು.
ದಲಿತ ಸಂಘರ್ಷ ಸಮಿತಿ ( ಕೆಂಪು ಸೇನೆ ) ಪದಾಧಿಕಾರಿಗಳಾದ ಶ್ರೀನಿವಾಸ್ ಬಿಜಿ, ಸುರೇಶ್, ನರಸಿಂಹರಾಜು ಬಿಎಂ ಮುನಿರಾಜು, ಸತ್ಯನಾರಾಯಣ, ಮಧುಸೂದನ್, ಗುಂಡಣ್ಣ, ನರಸಿಂಹಮೂರ್ತಿ, ನರಸರಾಜು ಬಿಕೆ, ಯಲ್ಲಪ್ಪ ಮತ್ತಿತರರಿದ್ದರು.

