ದೊಡ್ಡಬಳ್ಳಾಪುರ; ತಾಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲ ಸದಸ್ಯೆ ಕಲಾವತಿ ಕೃಷ್ಣಮೂರ್ತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ದೊಡ್ಡಬೆಳವಂಗಲ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಚುನಾವಣೆ ಅಧಿಕಾರಿ ಬಿಇಒ ಸೈಯೀದಾ ಆನೀಸ್, ಸಹಾಯಕ ಚುನಾವಣೆ ಅಧಿಕಾರಿ ಪಿಡಿಒ ಆದರ್ಶ್ ಕುಮಾರ್ ಸಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
18 ಮಂದಿ ಸದಸ್ಯತ್ವ ಬಲದ ದೊಡ್ಡಬೆಳವಂಗಲ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಕಲಾವತಿ ಕೃಷ್ಣಮೂರ್ತಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಇವರನ್ನು ಹೊರತುಪಡಿಸಿ ಮತ್ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಕಲಾವತಿ ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣೆ ಪ್ರಕ್ರಿಯೆಯಲ್ಲಿ 13 ಮಂದಿ ಗ್ರಾಮಪಂಚಾಯಿತಿ ಸದಸ್ಯರು ಹಾಜರಾಗಿದ್ದು, 05 ಮಂದಿ ಗೈರಾಗಿದ್ದರು.
ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷರನ್ನು ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ಕರ್ನಾಟ ಕೊಳಚೆ ನಿರ್ಮಲ ಮಂಡಳಿ ನಿರ್ದೇಶಕ ವಿನಯ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಮಕೃಷ್ಣಯ್ಯ, ದಯಾನಂದ್, ಅರಸೇಗೌಡ, ಶಿವಕುಮಾರ್, ಪ್ರಕಾಶ್, ತೋಪಯ್ಯ, ಗಂಗಾಧರ್, ವಿಎಸ್ಎಸ್ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ರಾಜಗೋಪಾಲ್, ಉಪಾಧ್ಯಕ್ಷ ರಾಮಣ್ಣ, ಸದಸ್ಯರಾದ ಪುಷ್ಪಲತಾ, ಶಾಂತಮ್ಮ, ರಮೇಶ್, ಮುಬಾರಕ್ ಬೇಗಂ, ಅನುರಾ ಮತ್ತಿತರರು ಶುಭಕೋರಿದರು.