ದೊಡ್ಡಬಳ್ಳಾಪುರ: ಅನಕ್ಷರಸ್ಥರಿಗೆ ಅಕ್ಷರ ಕಲಿಸುವುದು ಅವರ ಬಾಳಿಗೆ ಬೆಳಕು ನೀಡಿದಂತೆ. ಅಜ್ಞಾನ ಎಂಬ ಅಂಧಕಾರವನ್ನು ಅಳಿಸಿ ಅವರ ಬಾಳಿಗೆ ಶಿಕ್ಷಣವೆಂಬ ಬೆಳಕು ನೀಡಲು ಎಲ್ಲರೂ ಪ್ರಯತ್ನಿಸಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮಜಯರಾಂ ಮನವಿ ಮಾಡಿದರು.

ತಾಲೂಕಿನ ದರ್ಗಾಜೋಗಹಳ್ಳಿಯಲ್ಲಿ ಆಯೋಜಿಸಿದ್ದ 54ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಎಲ್ಲರಿಗೂ ಅತೀ ಅವಶ್ಯಕವಾಗಿ ಬೇಕಾಗಿರುವ ಸಾಧನವಾಗಿದ್ದು ಶಿಕ್ಷಣದಿಂದ ವಂಚಿತರಾದ ಲಕ್ಷಾಂತರ ಜನರಿಗಾಗಿ ಸರ್ಕಾರ ಸಾಕ್ಷರತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ಪ್ರಯೋಜನ ಪಡೆದುಕೊಂಡು ಸುಶಿಕ್ಷಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು.ಶಿಕ್ಷಣ ಮಾನವನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಹಾಗೂ ಸುಸಂಸ್ಕೃತ ನಾಗರೀಕನನ್ನಾಗಿ ರೂಪಿಸುತ್ತದೆ.ಕೇವಲ ಕೆಲಸಕ್ಕಾಗಿ ಓದದೇ ಜ್ಞಾನಾರ್ಜನೆಗಾಗಿ ಓದಿದಾಗ ಪ್ರಪಂಚದ ಅರಿವು ಉಂಟಾಗಿ ಎಲ್ಲಾ ದೇಶಗಳ ಆಚಾರವಿಚಾರ ರೂಢಿಸಂಪ್ರದಾಯಗಳ ಅರಿವಾಗಿ ಸಮಾಜದಲ್ಲಿ ಹೇಗೆ ಬಾಳಬೇಕೆಂಬುದನ್ನು ಕಲಿಸಿಕೊಡುತ್ತದೆ. ಹಾಗಾಗಿ ಶಿಕ್ಷಣದಿಂದ ಯಾರೂ ಕೂಡ ವಂಚಿತರಾಗಬಾರದು ಎಂದು ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, 2011 ರಲ್ಲಿ ಸಾಕ್ಷರತೆ ಯ ಮಟ್ಟ ಗ್ರಾಮಾಂತರ ಜಿಲ್ಲೆಯಲ್ಲಿ 77.93 ಇದೆ. 2018-19 ನೇ ಸಾಲಿನಲ್ಲಿ 5966 ಜನ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿದಾರೆ, 2019-20 ನೇ ಸಾಲಿನಲ್ಲಿ ಗ್ರಾಮೀಣ ಭಾಗದಲ್ಲಿ ಸ್ತೀಶಕ್ತಿ,ಸ್ವಸಹಾಯ ಸಂಘ, ನಗರದ ಕೋಳಚೆ ಪ್ರದೇಶದ ಒಟ್ಟು 5906 ಜನರನ್ನು ಸಾಕ್ಷರತಾ ಕಲಿಕೆಗೆ ಒಳಪಡಿಸುವ ಗುರಿ ಇತ್ತು ಮಹಾಮಾರಿ ಕರೊನಾ ಕಾಯಿಲೆ ಇಂದ ಕಲಿಕೆ ಸ್ಥಗಿತಗೊಂಡಿತು ಎಂದು ತಿಳಿಸಿದರು.
ಬಿಇಒ ಬೈಯಪ್ಪರೆಡ್ಡಿ ಮಾತನಾಡಿ, ರಾಷ್ಟ್ರ, ರಾಜ್ಯಮಟ್ಟದಿಂದ ಹಿಡಿದು ಗ್ರಾಮ ಪಂಚಾಯಿತಿ ಮಟ್ಟದವರೆಗೆ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಪರಿವರ್ತಿಸುವ ಕಾರ್ಯಕ್ರಮ. ಗ್ರಾಮೀಣ ಮಟ್ಟದಲ್ಲಿನ ಅಲ್ಪಸಂಖ್ಯಾತರ, ಪರಿಶಿಷ್ಟ ವರ್ಗಗಳ ಮಹಿಳೆಯರ ಮತ್ತು ಪುರುಷರ ಶೈಕ್ಷ ಣಿಕ ಮಟ್ಟ ಸುಧಾರಣೆಗಾಗಿ ಸಾಕ್ಷರತಾ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರದಲ್ಲಿ ತಾಲ್ಲೂಕು ಸಂಯೋಜಕ ರವೀಂದ್ರ, ದೊಡ್ಡನಂಜಪ್ಪ ಗ್ರಾಪಂ ಮಾಜಿ ಅದ್ಯಕ್ಷ ಪ್ರಸನ್ನಕುಮಾರ್ ಮತ್ತಿತರಿದ್ದರು.
