ದೊಡ್ಡಬಳ್ಳಾಪುರ: ಸ್ಟೇರಿಂಗ್ ಕಂಬಿ ಮುರಿದ ಕಾರಣ ನಿಯಂತ್ರಣ ತಪ್ಪಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಗುದ್ದಿದ್ದು, ಅಪಘಾತದಿಂದ ಪಾರಾಗಲು ಯತ್ನಿಸಿದ ಚಾಲಕ ಆಯ ತಪ್ಪಿ ಅದೇ ಲಾರಿಯ ಚಕ್ರಕೆ ಸಿಲುಕಿ ಸಾವನಪ್ಪಿರುವ ಘಟನೆ ತಾಲೂಕಿನ ಹೊಸಹಳ್ಳಿಯಲ್ಲಿ ಸಂಭವಿಸಿದೆ.
ಮೃತನನ್ನು ಅಲೀಪುರ ಗ್ರಾಮದ ಚಂದ್ರಶೇಖರ್ ( 28) ಎಂದು ಗುರುತಿಸಲಾಗಿದ್ದು, ಶುಕ್ರವಾರ ರಾತ್ರಿ 11.50ರ ಸುಮಾರಿಗೆ ದೊಡ್ಡಬಳ್ಳಾಪುರದ ಕಡೆಯಿಂದ ಅಲೀಪುರಕ್ಕೆ ತೆರಳುವ ವೇಳೆ ಹೊಸಹಳ್ಳಿ ಬಳಿ ಸ್ಟೇರಿಂಗ್ ಕಂಬಿ ಕಟ್ಟಾಗಿ ನಿಯಂತ್ರಣ ತಪ್ಪಿದೆ. ನಿಯಂತ್ರಣ ತಪ್ಪಿದ ಲಾರಿ ಅಪಘಾತಕ್ಕೆ ಒಳಗಾಗಲಿದೆ ಎಂದು ಪಾರಾಗಲು ಯತ್ನಿಸಿದ ಚಂದ್ರಶೇಖರ್ ಲಾರಿಯಿಂದ ಹೊರ ಜಿಗಿದಿದ್ದು, ಆಯತಪ್ಪಿ ಬಿದ್ದು, ಅದೇ ಲಾರಿಯ ಹಿಂಬದಿ ಚಕ್ರಕ್ಕೆ ಸಿಕ್ಕು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಘಟನೆಯಲ್ಲಿ ಮತ್ತೋರ್ವ ಕಾರ್ಮಿಕನಿಗೆ ಗಾಯಗಳಾಗಿದ್ದು, ಚಿಕಿತ್ಸೆ ದಾಖಲಿಸಲಾಗಿದೆ. ಈ ಕುರಿತಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ವೆತ್ಯಯ: ಅಪಘಾತದಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಕಾರಣ ಈ ವ್ಯಾಪ್ತಿಯ ಹೊಸಹಳ್ಳಿ, ಆರೂಢಿ ಸೇರಿದಂತೆ 30ಕ್ಕು ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ವೆತ್ಯಯವಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

