ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ಕ್ಷೇತ್ರದ ಪಾತ್ರ / ಬೆತ್ತಲೆ ಸತ್ಯ-ಸುಳ್ಳಿನ ಸೆರಗು

ಹೌದು…!! ಇತ್ತೀಚಿನ ಭಾರತೀಯ ಮಾಧ್ಯಮ ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಹಾಗನ್ನಿಸದೇ ಇರದು.ಹಾಗಂತ ಅದು ವಾಸ್ತವವೂ ಹೌದು ಎನ್ನುವುದು ಸುಳ್ಳಲ್ಲ.

ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ ಇಂದಿರಾ ಗಾಂಧಿಯವರು ಭಾರತದ ಪ್ರಧಾನಮಂತ್ರಿ ಆಗಿದ್ದಾಗ ಹೇರಿದ ನಿಷೇದಾಜ್ಞೆಯಿಂದ ಹಿಡಿದು ಇವತ್ತಿನ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ನಡೆಯುತ್ತಿರುವ ಕಿಸಾನ್ ಪ್ರತಿಭಟನೆವರೆಗಿನ ಘಟನಾವಳಿಗಳನ್ನು ಕೇಂದ್ರೀಕೃತಗೊಳಿಸಿ ಭಾರತೀಯ ಮಾಧ್ಯಮ ಕ್ಷೇತ್ರವನ್ನು ಅವಲೋಕಿಸಿ ನೋಡಿದರೆ ನಮಗೆ ಅದರಲ್ಲಾಗಿರುವ ಸಕಾರಾತ್ಮಕ ಬದಲಾವಣೆಗಳು ಎದ್ದು ಕಾಣುತ್ತವೆ.

ಏಕೆಂದರೆ, ಇಂದಿರಾಗಾಂಧಿಯವರ ಕಾಲದಲ್ಲಿ ಮಾಧ್ಯಮಗಳು ಅವರ ವಿರುದ್ಧವಾಗಿ ಒಂದಕ್ಷರವನ್ನೂ ಸಹ ಅಚ್ಚೊತ್ತುತ್ತಿರಲಿಲ್ಲ. ಹಾಗೇನಾದರೂ ನಿಷೇದಾಜ್ಞೆಯನ್ನು ವಿರೋಧಿಸಿ ಇಂದಿರಾಗಾಂಧಿಯವರ ವಿರುದ್ಧ ಸುದ್ದಿ ಬಿತ್ತರಿಸಿದ ಮಾಧ್ಯಮಗಳೇನಾದರೂ ಇದ್ದರೆ ಅವು ಜನಸಂಘದ ಮುಖವಾಣಿಗಳೇ ಆಗಿರುತ್ತಿದ್ದವು. 

ತದನಂತರದಲ್ಲಿ ಎಂಭತ್ತೊಂದರಲ್ಲಿ ಕೇಂದ್ರ ಸರ್ಕಾರದ ಅಧೀನದಲ್ಲಿ ಭಾರತದ ಮೊಟ್ಟಮೊದಲ ದೃಶ್ಯಮಾಧ್ಯಮವಾಗಿ ದೂರದರ್ಶನ ವಾಹಿನಿ ಕಾರ್ಯರೂಪಕ್ಕೆ ಬಂತಾದರೂ, ಅದು ಇಂದಿರಾ ರವರ ಮಟ್ಟಿಗೆ ಅವರ favour ಆಗಿಯೇ ಕಾರ್ಯನಿರ್ವಹಿಸಿದ್ದು ಸುಳ್ಳಲ್ಲ. ಮುಂದೆ ತೊಂಭತ್ತರ ದಶಕದಲ್ಲಿ ತಲೆ ಎತ್ತಿದ ಖಾಸಗಿ ಸುದ್ದಿವಾಹಿನಿಗಳೂ ಸಹ ಇದೇ ಹಾದಿಯಲ್ಲಿ ಹೆಜ್ಜೆಯಿಡತೊಡಗಿದ್ದವು. ಆದರೆ ಇತ್ತೀಚಿನ ಆರೇಳು ವರ್ಷಗಳಿಂದೀಚೆಗೆ “ಕೆಲವು” ಮಾಧ್ಯಮಗಳು ನೇರಾನೇರ ಬಹಿರಂಗ ಚರ್ಚೆಗಳಿಗೆ ಅವಕಾಶ ಕೊಟ್ಟು ಸತ್ಯಾಸತ್ಯತೆಗಳನ್ನು ನೇರವಾಗಿ ಜನರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದಂತೂ ಸುಳ್ಳಲ್ಲ.

ಈ ಹಿಂದೆ ಮುದ್ರಣ ಮಾಧ್ಯಮಗಳು(ಸರ್ಕಾರ ಹೇಳಿಸುವ) ಏನೇ ಹೇಳಿದರೂ ಅದೇ ಸತ್ಯ ಎಂದು ಮುಗ್ಧ ಜನರು ನಂಬುತ್ತಿದ್ದರು. ಆದರೆ ದೈನಂದಿನ ಜಾಗತಿಕ ಆಗುಹೋಗುಗಳ ಬಗ್ಗೆ ಮನೆಮನೆಯಲ್ಲೂ ನೇರವಾಗಿ ತಿಳಿಯುವಂತಾಗಿದ್ದು ಈ ಕೆಲವು ಕ್ರಾಂತಿಕಾರಿ ಸುದ್ದಿವಾಹಿನಿಗಳಿಂದ ಎನ್ನುವುದು ಸಾರ್ವಕಾಲಿಕ ಬೆತ್ತಲೆ ಸತ್ಯ. 

ಇಲ್ಲದಿದ್ದರೆ, 2003 ರಲ್ಲಿ ವಾಜಪೇಯಿ ಅವರಿಗೆ ಆದ ಅನ್ಯಾಯ 2014 ಹಾಗೂ 2019 ರಲ್ಲಿ ಮೋದಿಯವರಿಗೂ ಆಗುತ್ತಿತ್ತು ಎಂಬುದು ಬಹುತೇಕರ ಅಭಿಪ್ರಾಯ ಅದು ಸತ್ಯವೂ ಹೌದು. ಹಾಗೆಯೇ ಎಲ್ಲ ಕ್ಷೇತ್ರಗಳಲ್ಲಿಯೂ ಎರಡು ವರ್ಗಗಳ ವೈರುಧ್ಯವಿರುವ ಹಾಗೆ ಮಾಧ್ಯಮ ಕ್ಷೇತ್ರದಲ್ಲೂ ಸಹ ತದ್ವಿರುದ್ಧ ಸಿದ್ಧಾಂತಗಳ ಎರಡು ವರ್ಗಗಳಿವೆ. 

ಮಾಧ್ಯಮ ಕ್ಷೇತ್ರ ಈಗಿನ ಕಾಲಮಾನದಲ್ಲಿ ಇಷ್ಟು ಸಬಲವಾಗಿಲ್ಲದಿದ್ದರೆ , ಕೆಲವೊಮ್ಮೆ ಸರ್ಕಾರದ ಶಕ್ತಿ ಕೇಂದ್ರದೊಳಗೇ ಹುದುಗಿ ಹೋಗುತ್ತಿದ್ದ ಅನೇಕ ಭ್ರಷ್ಟಾಚಾರದ ಪ್ರಕರಣಗಳು ಹೊರಗೆ ಬರುತ್ತಲೇ ಇರುತ್ತಿರಲಿಲ್ಲ..

ಆಪರೇಷನ್‌ ಕಮಲಗಳು, ಆಪರೇಷನ್ ಹಸ್ತಗಳು,ರೆಸಾರ್ಟ್ ರಾಜಕಾರಣದ ಕುದುರೆ ವ್ಯಾಪಾರಗಳು, ಆಡಳಿತ ಪಕ್ಷದ ಮೇಲೆ ಭ್ರಷ್ಟಾಚಾರದ ಗೂಬೆ ಕೂರಿಸುವ ವಿಫಲ ಯತ್ನಗಳು, ದುರ್ಬಲ ವಿರೋಧ ಪಕ್ಷಗಳ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡ ಆಡಳಿತ ಪಕ್ಷದ ಸರ್ವಾಧಿಕಾರಿ ನೀತಿಗಳು,

ರೈತರು-ಕಾರ್ಮಿಕರ ಹೆಸರುಗಳಲ್ಲಿ ನಡೆಯುವ ನಕಲಿ ಪ್ರತಿಭಟನೆಗಳು,ಆಡಳಿತ ಪಕ್ಷಗಳ ಸಮರ್ಥ ವಿದೇಶಾಂಗ ನೀತಿಗಳು, ಮೆಚ್ಚಲರ್ಹವಾದ ಸರ್ಕಾರಗಳ ಜನಪರ ಯೋಜನೆಗಳು ಇನ್ನೂ ಅನೇಕಾನೇಕ ಪ್ರಜಾತಂತ್ರದ ಸರಿ-ತಪ್ಪುಗಳು ಜನಸಾಮಾನ್ಯರ ತಿಳುವಳಿಕೆಗೆ ಎಟುಕುತ್ತಿರಲಿಲ್ಲ. ಉದಾಹರಣೆಗೆ ಪ್ರಸ್ತುತ ದೆಹಲಿಯಲ್ಲಿ ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಕೆಲವು ಮಾಧ್ಯಮಗಳು ನಿರಂತರವಾಗಿ ವರದಿ ಮಾಡಿದರೂ ಸಹ ಕೆಲವು ಮಾಧ್ಯಮಗಳು ರೈತರ ಪ್ರತಿಭಟನೆಯ ಸುದ್ದಿ ಬಿತ್ತರಿಸದೇ ಅದರ ನೈಜತೆಯನ್ನೇ ಪ್ರಶ್ನಿಸಿದವು. ಇಲ್ಲಿ ಎರಡೂ ವರ್ಗದ ಮಾಧ್ಯಮಗಳ ಧೋರಣೆಯನ್ನು ಒಪ್ಪಲೂ ಕಾರಣಗಳಿರುವ ಹಾಗೆಯೇ ತಳ್ಳಿಹಾಕಲು ಸಹ ಅಷ್ಟೇ ಕಾರಣಗಳಿವೆ. ಯಾಕೆಂದರೆ, ದೆಹಲಿಯಲ್ಲಿ ನಡೆಯುತ್ತಿರುವುದು ನಿಜವಾಗಿಯೂ ರೈತ ಪ್ರತಿಭಟನೆಯೇ ಆದರೂ ಸಹ ಅದರ ಒಳಹೊಕ್ಕು ನೋಡಿದರೆ ಇದರ ಹಿಂದಿನ ರಾಜಕೀಯ ಪಕ್ಷಗಳ ಹಿಕ್ಮತ್ತುಗಳು ಗೋಚರಿಸುತ್ತವೆ. ಹಾಗಾಗಿ ಸಾಮಾಜಿಕ ಜಾಲತಾಣಗಳು ಇಷ್ಟೊಂದು ಚುರುಕಾಗಿರುವ ಕಾಲಘಟ್ಟದಲ್ಲಿ ಮಾಧ್ಯಮಗಳೇ ಆಗಲಿ, ರಾಜಕೀಯ ಪಕ್ಷಗಳೇ ಆಗಲಿ, ಆಳುವ ಸರ್ಕಾರಗಳೇ ಆಗಲಿ ಜನರನ್ನು ಯಾಮಾರಿಸುವುದು ಅಸಾಧ್ಯದ ಮಾತೇ ಸರಿ. 

ಏನೇ ಆದರೂ ‘ಕೆಲವು’ ಸುದ್ದಿ ಮಾಧ್ಯಮಗಳ ನೇರ ನಿಷ್ಠುರ ಕಾರ್ಯವೈಖರಿಯ ಕಾರಣದಿಂದ ದಿಲ್ಲಿಯ ವಿಚಾರಗಳು ಇಲ್ಲಿಯ ಹಳ್ಳಿಯ ಶ್ರೀಸಾಮಾನ್ಯನ ಬುದ್ಧಿಮತ್ತೆವರೆಗೆ ತಲುಪುತ್ತಿವೆ ಎಂದಾದರೆ ಅಂತಹ ಮಾಧ್ಯಮ ಕ್ಷೇತ್ರದ ಸಂಪರ್ಕ ಸೇತು ಕಾರ್ಯವನ್ನು ಮೆಚ್ಚಲೇಬೇಕೆಂಬ ಅಭಿಪ್ರಾಯವನ್ನು ಮಂಡಿಸುತ್ತಾ….ಇಂತಿ ನಿಮ್ಮವ ಜಿ.ಎನ್.ಪ್ರದೀಪ್

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

ರಾಜಕೀಯ

ಬಿಜೆಪಿಯಿಂದ ನಾರಿ ಶಕ್ತಿಗೆ ಗೌರವ: ಬಿ.ವೈ. ವಿಜಯೇಂದ್ರ

ಬಿಜೆಪಿಯಿಂದ ನಾರಿ ಶಕ್ತಿಗೆ ಗೌರವ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ (Congress) ಪಕ್ಷ ಮತ್ತು ಇಂಡಿ ಒಕ್ಕೂಟವು ಮಹಿಳೆಯರಿಗೆ ಮಾಡಿರುವ ಅನ್ಯಾಯವನ್ನು ಸಾರಿಸಾರಿ ಹೇಳಬೇಕೆಂದು ಶಾಸಕ ಹಾಗೂ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ಮನವಿ ಮಾಡಿದ್ದಾರೆ.

[ccc_my_favorite_select_button post_id="121644"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಹೊತ್ತಿ ಉರಿದ ಕಾರು.. ಗೃಹಿಣಿ ಭಸ್ಮ.!

ದೊಡ್ಡಬಳ್ಳಾಪುರ: ನಿರ್ಜನ ಪ್ರದೇಶದಲ್ಲಿ ಹೊತ್ತಿ ಉರಿದ ಕಾರು.. ಗೃಹಿಣಿ ಭಸ್ಮ.!

ಪರಿಚಯದವರ, ಸಂಬಂಧಿಕರ ಮಾತನ್ನು ನಂಬಿ, ವಾಹನಗಳನ್ನು ನೀಡುವುದು ಎಷ್ಟು ಸಮಸ್ಯೆ ತಂದೊಡ್ಡುತ್ತದೆ ಎಂಬುದಕ್ಕೆ ಇಂದು ದೊಡ್ಡಬಳ್ಳಾಪುರದ ಹೊರವಲಯದಲ್ಲಿರುವ ಜಿಂಕೆಬಚ್ಚಹಳ್ಳಿ ನಿರ್ಜನ ಪ್ರದೇಶದಲ್ಲಿ (Desolate area) ನಡೆದಿರುವ ಘಟನೆ ಸಾಕ್ಷಿಯಾಗಿ ನಿಂತಿದೆ.

[ccc_my_favorite_select_button post_id="121633"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]