
ಚಿಕ್ಕಬಳ್ಳಾಪುರ: ಸಮಯಕ್ಕೆ ಆಂಬುಲೆನ್ಸ್ ಬಾರದೇ ಇಬ್ಬರು ಬಾಲಕರು ದುರ್ಮರಣಕ್ಕೀಡಾದ್ದರಿಂದ ಆಕ್ರೋಶಗೊಂಡ ಪೋಷಕರು ಮತ್ತು ಮೃತ ಬಾಲಕರ ಸಂಬಂಧಿಕರು ಆಸ್ಪತ್ರೆ ದ್ವಂಸ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.(ವಿಡಿಯೋ ನೋಡಿ)
ಚಿಂತಾಮಣಿ ತಾಲ್ಲೂಕಿನ ಮೂಗಲಮರಿ ಗ್ರಾಮದ ಚರಣ್ ಹಾಗು ತೇಜಸ್ ಎಂಬ ಬಾಲಕರು ಗ್ರಾಮದ ಹೊರವಲಯದ ಕೃಷಿಹೊಂಡದಲ್ಲಿ ಕಾಲು ಜಾರಿ ಬಿದ್ದು ಈಜು ಬಾರದೆ ಪ್ರಾಣಾಪಾಯದಲ್ಲಿದರು. ತಕ್ಷಣ ಗಮನಿಸಿಕೊಂಡ ಪೋಷಕರು ಕೃಷಿಹೊಂಡದಲ್ಲಿ ಬಿದ್ದಿದ್ದ ಬಾಲಕರನ್ನು ಮೇಲೆತ್ತಿ, ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ, ಆಂಬ್ಯಲೆನ್ಸ್ ಸಮಯಕ್ಕೆ ಬಾರದ ಕಾರಣ 407 ಟೆಂಪೋದಲ್ಲಿ ಬಾಲಕರನ್ನು ಸಾಗಿಸಿದ್ದಾರೆ. ಮಾರ್ಗ ಮದ್ಯೆ ಟೆಂಪೋ ಕೆಟ್ಟು ನಿಂತಿದ್ದ ಕಾರಣ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ ಎಂಬುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೃತ ಬಾಲಕರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ತಂದಾಗ, ಮಕ್ಕಳನ್ನು ಕಳೆದುಕೊಂಡ ಪೋಷಕರು ಮೃತ ಬಾಲಕರ ಸಂಭಂಧಿಕರು ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬಂದಿದ್ದರೆ ತಮ್ಮ ಮಕ್ಕಳು ಬದುಕುತ್ತಿದ್ದರು. ಆದರೆ ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ಬಾರದಿದ್ದರಿಂದ ಆಕ್ರೋಷ ಭರಿತರಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯನ್ನು ದ್ವಂಸಗೊಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ.

