ಆಡಳಿತ, ವಿರೋಧ ಪಕ್ಷಗಳ ದಾರಿ ತಪ್ಪಿಸುತ್ತಿರುವ ಹೆವಿಲಿ ಫಂಡೆಡ್ ಅಭಿಯಾನಗಳು / ಬೆತ್ತಲೆ ಸತ್ಯ ಸುಳ್ಳಿನ ಸೆರಗು

ನಮ್ಮ ಪ್ರಗತಿಪರ, ಜೀವಪರ, ಚಿಂತಕ, ಸಾಕ್ಷಿಪ್ರಜ್ಞೆ, ಸಂವಿಧಾನ ರಕ್ಷಕ, ಇತ್ಯಾದಿತ್ಯಾದಿ ಸ್ವಘೋಷಿತ ಹೋರಾಟಗಾರರೆಂಬ ಟೌನ್‌ಹಾಲ್ ಗಿರಾಕಿಗಳು ಯಾವುದಾದರೊಂದು ವಿಷಯಕ್ಕೆ ಎದ್ದೂಬಿದ್ದು ಸೋಷಿಯಲ್ ಮೀಡಿಯದಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರೆ, ಅದು “ಹೆವಿಲಿ ಫಂಡೆಡ್” ಅಭಿಯಾನಗಳು ಎಂದು ಅರ್ಥ ಮಾಡಿಕೊಳ್ಳಿ. ಉದಾಹರಣೆಗೆ ನಿನ್ನೆ ದೆಹಲಿಯಲ್ಲಿ ಗಣತಂತ್ರ ಸಂಭ್ರಮದ ಜಾಗದಲ್ಲಿ  ರೈತರ ಹೆಸರಲ್ಲಿ ನಡೆದ ಹಿಂಸಾತ್ಮಕ ಹೋರಾಟ/ಪ್ರತಿಭಟನೆ. ಬೆಳಗಿನಿಂದ ಈ ಅಭಿಯಾನಕ್ಕೆ ಬಿಟ್ಟೂಬಿಡದೆ ಸೋಷಿಯಲ್ ಮೀಡಿಯಾದಲ್ಲಿ ಬೆಂಬಲಿಸುತ್ತಿರುವ ಒಂದಷ್ಟು ಜನರನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ಹೆಜ್ಜೆ ಹೆಜ್ಜೆ ಈ ಅಭಿಯಾನದ ವಿವರಗಳನ್ನು ಹಂಚಿಕೊಳ್ಳುತ್ತ ತಮ್ಮ ಅನುಯಾಯಿಗಳಿಗೆ, ಕಾಮ್ರೇಡ್‍ಗಳಿಗೆ ಸೂಚನೆ ಕೊಡುತ್ತಲೇ ಇದ್ದಾರೆ. ಅವರಷ್ಟೂ ಜನಕ್ಕೂ ಈ ಅಭಿಯಾನ ಯಾವ ದಿಕ್ಕನ್ನು ತೆಗೆದುಕೊಳ್ಳುತ್ತದೆ ಎಂಬುದು ಅತ್ಯಂತ ಸ್ಪಷ್ಟವಾಗಿ ಗೊತ್ತಿತ್ತು. ಒಂದಲ್ಲಾ ಒಂದು ರೀತಿಯಲ್ಲಿ ಪೊಲೀಸ್ ವ್ಯವಸ್ಥೆಯನ್ನೂ ಸರಕಾರವನ್ನೂ ಕೆರಳಿಸಬೇಕು ಎಂಬುದೇ “ಹೋರಾಟಗಾರ”ರ ಹಂಚಿಕೆಯಾಗಿತ್ತು. ಅದಕ್ಕಾಗಿ ಯಾವ ರಸ್ತೆಯಲ್ಲಿ ಪ್ರವೇಶವನ್ನು ಪೊಲೀಸರು ನಿರಾಕರಿಸಿದ್ದರೋ ಅಲ್ಲೇ ನುಗ್ಗಲಾಯಿತು. ರಸ್ತೆಗೆ ಅಡ್ಡಲಾಗಿಟ್ಟಿದ್ದ ಬಸ್ಸುಗಳನ್ನು ಗುದ್ದಿ ಪುಡಿಗುಟ್ಟಲಾಯಿತು. ಪೊಲೀಸರ ಮೇಲೆ ಯರ್ರಾಬಿರ್ರಿಯಾಗಿ ಟ್ರ್ಯಾಕ್ಟರುಗಳನ್ನು ಓಡಿಸಲಾಯಿತು. ಪೊಲೀಸರಿಗೆ ತಮ್ಮ ಲಾಟಿ, ಕೋಲುಗಳಿಂದ ಬಾರಿಸಲಾಯಿತು. ಆಳುದ್ದದ ಖಡ್ಗಗಳನ್ನು ಝಳಪಿಸುತ್ತ ಬ್ಯಾರಿಕೇಡುಗಳನ್ನು ಹಾರಲಾಯಿತು. ಕೊನೆಗೆ ಕೆಂಪುಕೋಟೆಗೆ ಮುತ್ತಿಗೆ ಹಾಕಿ, ಅವರ ಭಯೋತ್ಪಾದಕ ಸಂಘಟನೆಯ ಧ್ವಜವನ್ನೂ ಹಾರಿಸಲಾಯಿತು. ಈ ಪ್ರತಿಯೊಂದು ನಡೆಯೂ “ನೀ ತಾಂಟ್ರೆ ಬಾ ತಾಂಟ್” ಎಂಬ ಪಂಥಾಹ್ವಾನವೇ ಆಗಿತ್ತು ಎಂಬುದು ಈ ಇಷ್ಟೂ ಘಟನೆಗಳನ್ನು ನೋಡಿದ ಯಾರಿಗೇ ಆದರೂ ಅರ್ಥವಾಗುವ ಸಂಗತಿ.

ಸೋಷಿಯಲ್ ಮೀಡಿಯಾದಲ್ಲಿ ಒಂದು ಸುತ್ತು ಹಾಕಿ ಬನ್ನಿ. ಈ ಪರಗತಿಪರ ಜೀವಪರ ಸಾಕ್ಷಿಪ್ರಜ್ಞೆಗಳಲ್ಲಿ ಒಂದೇ ಒಂದು ಪ್ರಜ್ಞೆಯಾದರೂ ಈ ಘಟನಾವಳಿಗಳಲ್ಲಿ ಒಂದನ್ನಾದರೂ ಖಂಡಿಸಿದೆಯಾ? (1) ಸರಕಾರ ಮೇಲಿಂದ ಮೇಲೆ, ಪುನಃ ಪುನಃ, ಮತ್ತೆ ಮತ್ತೆ ಚರ್ಚೆಗೆ ಕರೆದರೂ ಈ “ರೈತರು” ಯಾಕೆ ಹೋಗಲಿಲ್ಲ – ಎಂದು ಒಬ್ಬೇ ಒಬ್ಬ ಬುದ್ಧಿಜೀವಿ ಕೇಳಿದ್ದಾನಾ? (2) ನಿಮ್ಮ ಈ ಹಿಂಸಾತ್ಮಕ ಪ್ರತಿಭಟನೆಯನ್ನು ಗಣತಂತ್ರದಿನವೇ ಯಾಕೆ ಇಟ್ಟುಕೊಳ್ತೀರಿ? ಯಾಕೆ ಸಂವಿಧಾನಕ್ಕೆ ಅವಮಾನ ಮಾಡ್ತೀರಿ? – ಎಂದು ಒಬ್ಬೇ ಒಬ್ಬ ಬುದ್ಧಿಜೀವಿ ಕೇಳಿದನಾ? (3) ಪೊಲೀಸರು ನಿಮಗೆ ರಾಜಧಾನಿ ತಲುಪುವುದಕ್ಕೆ ಒಂದು ಮಾರ್ಗ ಸೂಚಿಸಿದರೂ ನೀವು ಅದನ್ನು ಬಿಟ್ಟು ಬೇರೇ ರಸ್ತೆಗಳಲ್ಲೇ ಯಾಕೆ ನುಗ್ಗಿದಿರಿ – ಎಂದು ಒಬ್ಬೇ ಒಬ್ಬ ಎಮಿನೆಂಟ್ ಇಂಟಲೆಕ್ಚ್ಯುಯಲ್ ಕೇಳಿದನಾ? (4) ನಿಮ್ಮ ಬೇಡಿಕೆ ಕೃಷಿಕಾಯ್ದೆ ವಾಪಸ್ ಹೋಗಬೇಕು ಅನ್ನೋದೋ ಅಥವಾ ಖಾಲಿಸ್ತಾನ ಬೇಕು ಅನ್ನೋದೋ – ಎಂದು ಒಬ್ಬೇ ಒಬ್ಬ ಚಿಂತಕ ಬಾಯಿಬಿಟ್ಟು ಉಸುರಿದನಾ? (5) ನಿಮ್ಮ ಪ್ರತಿಭಟನೆಯಲ್ಲಿ ಖಡ್ಗಗಳನ್ನೇಕೆ ಝಳಪಿಸುತ್ತಿದ್ದೀರಿ? ಟ್ರ್ಯಾಕ್ಟರನ್ನೇಕೆ ಜನಸಂದಣಿಯ ಮೇಲೆ ಯದ್ವಾತದ್ವಾ ಓಡಿಸುತ್ತಿದ್ದೀರಿ? ಜೀವ ತೆಗೆಯುವ ಈ ಮಾರಣಾಂತಿಕ ಹಿಂಸಾತ್ಮಕ ಹೋರಾಟ ಯಾಕೆ – ಎಂದು ಯಾವೊಬ್ಬ ಬುದ್ಧಿಜೀವಿಯಾದರೂ ಬಾಯಿ ತೆರೆದು ಕೇಳಿದನಾ? (6) ರೆಡ್ ಫೋರ್ಟ್ ಯಾವ ಇತಿಹಾಸಪುರುಷನೇ ಕಟ್ಟಿರಲಿ, ಸದ್ಯಕ್ಕೆ ಅದು ನಮ್ಮ ಪ್ರಜಾಪ್ರಭುತ್ವದ ಪ್ರತೀಕ; ನಮ್ಮ ಗಣತಂತ್ರದ ದ್ಯೋತಕ.. ನಿಮ್ಮ ಪ್ರತಿಭಟನೆಯ ನೆಪದಲ್ಲಿ ಅದರ ಘನತೆಯನ್ನು ಮಣ್ಣುಗೂಡಿಸಬೇಡಿ – ಎಂದು ಯಾವ ಮಗನಾದರೂ ಈ ಬಗ್ಗೆ ತುಟಿಬಿಚ್ಚಿದನಾ? ಇಲ್ಲ! ಇಲ್ಲ! ಇಲ್ಲ!

ಅದರ ಬದಲು ಈ ಬುದ್ಧಿಜೀವಿಗಳ ಬಳಗದಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಚಿತ್ರವಿಚಿತ್ರ ತರ್ಕಗಳು, ಸ್ಪಷ್ಟೀಕರಣಗಳು, ಸಮರ್ಥನೆಗಳು ಬರತೊಡಗಿವೆ. ರೈತ ಚಳುವಳಿ ಯಶಸ್ವಿಯಾಗಲಿ, ಸರಕಾರಕ್ಕೆ ಬುದ್ಧಿ ಬರಲಿ… ಒಬ್ಬ ಬುದ್ಧಿಜೀವಿ ಬೊಗಳುತ್ತಾನೆ. ಇಲ್ಲಿ ಯಾವುದನ್ನೂ ಕೆಡವಿಲ್ಲ; ಕೆಡವದೇ ಬಾವುಟ ಹಾರಿಸಿದ್ದೇವೆ – ಇನ್ನೊಬ್ಬ ಪುಡಿ ಚಿಂತಕ ಗಳಹುತ್ತಾನೆ. ಕೆಂಪುಕೋಟೆಯನ್ನು ಅದ್ಯಾರೋ ಕಂಪೆನಿಗೆ ಗುತ್ತಿಗೆ ಕೊಟ್ಟಿದಾರಂತೆ; ಅಲ್ಲಿ ನಾವು ಅತಿಕ್ರಮಣ ಮಾಡಿದರೆ ಏನು ತಪ್ಪು – ಮತ್ತೊಬ್ಬ ವಿಕೃತ ಚಿಂತಕ ತನ್ನ ನಾಲಗೆ ಹರಿಬಿಡುತ್ತಾನೆ. ಇದೇ ಹೋರಾಟವನ್ನು ಈ ಖಾಲಿಸ್ತಾನಿ ಭಯೋತ್ಪಾದಕ ರೈತರ ಬದಲು ಬೇರೆಯವರು ಮಾಡಿದ್ದರೆ ಅಂಬೇಡ್ಕರ್, ಸಂವಿಧಾನ, ಪ್ರಜಾಪ್ರಭುತ್ವ, ದೇಶದ ಮರ್ಯಾದೆ, ಗಣತಂತ್ರ, ಸರಕಾರ, ಶಾಸಕಾಂಗ, ಅಸ್ಮಿತೆ, ಪರಂಪರೆ, ಸಂಸ್ಕೃತಿ ಎಂದೆಲ್ಲ ಪುಂಖಾನುಪುಂಖವಾಗಿ ಪುಂಗುತ್ತಿದ್ದ ಮಹಾನ್ ಮಹಾನ್ ಚಿಂತಕರೆಲ್ಲ ಈಗ ಅವೆಲ್ಲ ಶಬ್ದಗಳು ತಪ್ಪಿಯೂ ಬರದಂತೆ ಬಹಳ ಎಚ್ಚರಿಕೆಯಿಂದ ತಮ್ಮ ತರ್ಕಗಳನ್ನು ವ್ಯವಸ್ಥಿತವಾಗಿ ನೇಯುತ್ತಿದ್ದಾರೆ. 

ಇಷ್ಟೆಲ್ಲ ನಡೆಯುವಾಗ ನಾವು ಅರ್ಥಮಾಡಿಕೊಳ್ಳಬೇಕಾದ್ದು ಒಂದೇ – ಈ ಹೋರಾಟಕ್ಕೆ ಬಹಳ ಒಳ್ಳೆಯ ಪೇಮೆಂಟ್ ಆಗಿದೆ. ಕೇಂದ್ರ ಸರಕಾರವನ್ನು ಶತಾಯಗತಾಯ ಬೀಳಿಸಬೇಕೆಂದು ಟೊಂಕ ಕಟ್ಟಿ ನಿಂತಿರುವ ವ್ಯವಸ್ಥೆಗಳಿಂದ ಬಹಳ ದೊಡ್ಡ ಪ್ರಮಾಣದ ಒಳ್ಳೆಯ ಫಂಡಿಂಗ್ ಆಗಿದೆ. ಈ ನಾಟಕ ಇನ್ನೂ ಮುಗಿದಿಲ್ಲ. ಇಂದು ಒಂದಷ್ಟು ಪತ್ರಿಕಾಲಯಗಳಲ್ಲಿ ಶಬ್ದಜಾಲ ತಯಾರಾಗುತ್ತಿದೆ. ನಟ್ಟ ನಡುರಾತ್ರಿಯಲ್ಲೆ ಬಿಸಿ ಬಿಸಿ ಇಂಕಿನ ವಾಸನೆ ಹೊಡೆಸಿಕೊಂಡು ಹೊಸ ಹೊಸ ಸುಳ್ಳುಗಳು, ವರ್ಣರಂಜಿತ ಕಥೆಗಳು, ಪುಗ್ಗೆಯಂಥ ಉರುಟುರುಟು ತರ್ಕಗಳು ಪತ್ರಿಕೆಗಳ ಪುಟಪುಟಗಳಲ್ಲಿ ಬರಲಿವೆ. ಸಂಪಾದಕೀಯಗಳು ಇಂದಿನ ದಾಂಧಲೆಗೆ ಸಮರ್ಥನೆ ಬರೆಯಲಿವೆ. ಪೇಮೆಂಟ್ ಚೆನ್ನಾಗಿ ಆಗಿರುವ ಪತ್ರಿಕೆಗಳಲ್ಲಂತೂ ಇದೊಂದು ಬೃಹತ್ ಜನಹೋರಾಟ ಎಂಬ ರೀತಿಯಲ್ಲಿ, ಇಂದಿನ ಪುಡಿಗಲಾಟೆಯ ಚಿತ್ರಗಳೇ ದೊಡ್ಡದಾಗಿ ಮುಖಪುಟವನ್ನು ಅಲಂಕರಿಸಲಿವೆ.

ವೈದ್ಯ, ಇಂಜಿನಿಯರ್, ಲಾಯರ್ ಇತ್ಯಾದಿ ಆಗುವುದಕ್ಕಿಂತ “ಮೋಟಿವೇಶನಲ್ ಗುರು” ಆಗುವುದು ಅತ್ಯುತ್ತಮ ಕೆರಿಯರ್ ಆಪ್ಷನ್ ಎಂದು ಗುರು ಗೋಪಾಲ್ ದಾಸರು ಹೇಳುತ್ತಿದ್ದರು. “ಇಲ್ಲ ಸ್ವಾಮೀ, ಕಾಮ್ರೇಡ್ ಹೋರಾಟಗಾರ ಆಗುವುದು ಅಂತ ತಿದ್ದಿಕೊಳ್ಳಿ” ಎಂದು ಅವರಿಗೆ ಹೇಳಬೇಕು…(ಕೃಪೆ: ರೋಹಿತ್ ಚಕ್ರತೀರ್ಥ FB)

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ

ರಾಜಕೀಯ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಬಿಜೆಪಿಯ (BJP) ಗತವೈಭವದ ದಿನಗಳು ದಾವಣಗೆರೆಯಲ್ಲಿ ಮರುಕಳಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

[ccc_my_favorite_select_button post_id="121758"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]