ಹರಿತಲೇಖನಿ ದಿನಕ್ಕೊಂದು ಕಥೆ: ಯಜಮಾನರನ್ನೇ ಸುಡುವ ಬೆಂಕಿ

ಕೆಲವರಿಗೆ ಒಂದು ರೋಗವಿರುತ್ತದೆ. ತಾವು ಎಷ್ಟೇ ದೊಡ್ಡವರಾಗಿದ್ದರೂ, ಬಹಳ ಶ್ರೇಷ್ಠ ಸ್ಥಾನದಲ್ಲಿದ್ದರೂ ಮತ್ತೊಬ್ಬರ ಬಗ್ಗೆ ಯಾರಾದರೂ ಒಳ್ಳೆಯ ಮಾತು ಹೇಳಿದರೆ ಹೊಟ್ಟೆ ಉರಿದು ಹೋಗುತ್ತದೆ, ತಳಮಳವಾ­ಗುತ್ತದೆ, ಅದನ್ನು ತಡೆದು­ಕೊಳ್ಳು­ವು­ದು ಆಗುವುದಿಲ್ಲ. ಹೀಗೆ ಇರುವವರ ಬದುಕು ಹೇಗಾ­ಗು­ತ್ತದೆ ಎಂದು ಹೇಳುವ ಸುಂದರವಾದ ಕಥೆಯನ್ನು ನೇಪಾಳದಲ್ಲಿ ಜನ ಹೇಳುತ್ತಾರೆ.

ದೇಶದ ರಾಜನಿಗೆ ಯಾರೋ ಪರದೇಶದವರು ವಿಶೇಷ ಲಕ್ಷಣದ ಆನೆಮ­ರಿ­ಯನ್ನು ಕಾಣಿಕೆಯಾಗಿ ಕೊಟ್ಟರು. ಅದು ಬೆಳೆದಂತೆಲ್ಲ ಮತ್ತಷ್ಟು ವಿಶೇಷವಾಗಿ ಕಾಣ­­­­­ತೊಡಗಿತು. ಅದರ ಮೈಕಾಂತಿ ಅಪರೂಪವಾಗಿತ್ತು. ಅದರ ದೊಡ್ಡ ಗಾತ್ರ, ಗಂಭೀರ­­­ವಾದ ನಡೆ, ಸೌಮ್ಯ ವರ್ತನೆ ಎಲ್ಲರಿಗೂ ಪ್ರಿಯ­ವಾಗಿತ್ತು. ಅದನ್ನು ನೋಡಿ­­ಕೊ­­ಳ್ಳುತ್ತಿದ್ದ ಮಾವುತನಿಗೂ ಅದು ತುಂಬ ವಿಶೇಷ ಎನ್ನಿಸಿತು.

ಅವನು ಮೆಲು­ವಾಗಿ ಏನು ಹೇಳಿದರೂ ತಕ್ಷಣವೇ ಮಾಡಿಬಿ­ಡುತ್ತಿತ್ತು. ರಾಜನಿಗೆ ಅದರ ಮೇಲೆ ಬಲು ಪ್ರೀತಿ. ಅದಕ್ಕೆ ಚೆನ್ನಾಗಿ ಅಲಂಕಾರ ಮಾಡಿಸಿ ಅದರ ಮೇಲೆ ಅಂಬಾರಿ­ಯನ್ನು ಬಿಗಿಸಿ ತಾನು ಅದರಲ್ಲಿ ಕುಳಿತು ನಗರ ಪ್ರದಕ್ಷಿಣೆಗೆ ಹೋಗು­ತ್ತಿದ್ದ. ನಗರದ ಜನರಿಗೆ ಇದೊಂದು ಸುಂದರ ದೃಶ್ಯ. ಒಂದು ತಿಂಗಳು ಈ ರೀತಿ ಮೆರವಣಿಗೆ­ಯಾದ ಮೇಲೆ ಅವ­­ನಿಗೆ ಜನರು ಮಾತನಾಡಿಕೊಳ್ಳುವುದು ಕಿವಿಗೆ ಬಿತ್ತು. ಅವರು ಸುಂದರವಾದ ಅನೆ­­ಯನ್ನು ಹೊಗಳುವಾಗ ಅವನ ಬಗ್ಗೆ ಒಳ್ಳೆಯ ಮಾತನ್ನಾಡುತ್ತಿರಲಿಲ್ಲ.

ಇಷ್ಟು ಅದ್ಭುತ­­­­ವಾದ ಆನೆ ನಿಜವಾಗಿಯೂ ಚಕ್ರ­ವರ್ತಿಯ ಬಳಿಗೆ ಇರಬೇಕು, ನಮ್ಮ ಸಾಮಂತ ರಾಜನ ಬಳಿ ಅಲ್ಲ ಎಂದು ಕೆಲವರೆಂದರೆ ಮತ್ತೆ ಕೆಲವರು, ಅಯ್ಯೋ, ಅಷ್ಟು ದೊಡ್ಡ ಆನೆಯ ಮೇಲೆ ನಮ್ಮ ರಾಜ ಒಣಗಿದ ಮರದ ಬೊಂಬೆಯಂತೆ ಕಾಣು­­­ತ್ತಾನೆ ಎಂದರು. ತನಗಿಂತ ಹೆಚ್ಚಾಗಿ ಜನ ಆನೆ­ಯನ್ನು ಹೊಗಳಿದಾಗ ರಾಜ ಕೋಪ­­­­­ದಿಂದ ಕುದಿದು ಹೋದ.

ಒಂದು ದಿನ ಮಾವುತ­ನನ್ನು ಕರೆದು ಕೇಳಿದ, ‘ನಮ್ಮ ಪಟ್ಟದಾನೆ ನಿಜವಾಗಿ­ಯೂ ವಿಶೇಷ­ವಾಗಿ­ದೆಯೇ?’ ಆತ, ‘ಪ್ರಭೂ, ನಾವು ತಲೆ­­­­­ತಲಾಂತರದಿಂದ ಆನೆಗಳನ್ನೇ ನೋಡಿ­ಕೊಂಡ­ವರು. ಆದರೆ ಇಂಥ ಆನೆಯನ್ನು ನಾವು ಕಂಡೇ ಇಲ್ಲ.

ಇದೆಲ್ಲೋ ದೇವತೆಯೇ ಇರಬೇಕು’ ಎಂದ. ರಾಜನಿಗೆ ಮತ್ತಷ್ಟು ರೋಷ ಉಕ್ಕಿತು. ‘ಹಾಗಾದರೆ ಅದು ನೀನು ಹೇಳಿದ್ದನ್ನೆಲ್ಲ ಮಾಡು­ತ್ತ­ದೆಯೇ?’ ಎಂದು ಕೇಳಿದ. ಮಾವುತ, ‘ಸ್ವಾಮೀ, ಅದಕ್ಕೆ ನಾನು ಬಾಯಿ ಬಿಟ್ಟು ಯಾವ ಆಜ್ಞೆ­ಯನ್ನೂ ಮಾಡುವ ಕಾರಣವಿಲ್ಲ. ನನ್ನ ಮನಸ್ಸಿಗೆ ಹೊಳೆದದ್ದನ್ನೇ ತಕ್ಷಣ ಮಾಡುತ್ತದೆ’ ಎಂದ. ಹಾಗಾದರೆ ನಾಳೆ ಅದನ್ನು ಪರ್ವತದ ತುದಿಗೆ ಕರೆದು­ಕೊಂಡು ನಡೆ ಎಂದು ಆಜ್ಞೆ ಮಾಡಿದ ರಾಜ.

ಅವನ ಬುದ್ಧಿವಂತನಾದ ಮಂತ್ರಿಗೆ ರಾಜನ ಕುತಂತ್ರ ಹೊಳೆಯಿತು. ಮರುದಿನ ರಾಜ ಮತ್ತು ಮಂತ್ರಿ ಕೂಡ ಪರ್ವತದ ಕೋಡಿಗೆ ನಡೆದರು. ಆನೆ ಅಲ್ಲಿಗೆ ಸರಾಗ­ವಾಗಿ ನಡೆದುಬಂತು. ಅದು ಪ್ರಪಾತಕ್ಕೆ ಎದುರಾಗಿ ಅಂಚಿಗೇ ನಿಲ್ಲುವಂತೆ ರಾಜ ಹೇಳಿದ. ಅದು ತೀರ ಅಂಚಿಗೇ ಹೋಗಿ ನಿಂತಿತು. ನಂತರ ಮುಂದಿನ ಎರಡು ಕಾಲು­­ಗ­­­ಳನ್ನು ಎತ್ತಿ ಹಿಂಗಾಲುಗಳ ಮೇಲೆ ನಿಲ್ಲುವಂತೆ ಹೇಳಿದ. ಅದು ಹಾಗೆ ಮಾಡಿತು. ಆಮೇಲೆ ಒಂದೇ ಕಾಲಿನ ಮೇಲೆ ನಿಲ್ಲು ಎಂದ. ಅದು ಅಂತೆಯೇ ನಿಂತಿತು.

ಈರ್ಷೆಯಿಂದ ರಾಜ ಹೇಳಿದ, ಪ್ರಪಾತದಲ್ಲಿ ಹಾರಿಕೋ. ಆನೆ ತಕ್ಷಣ ತಿರುಗಿ ಅವನಿ­ದ್ದ­ಲ್ಲಿಗೆ ಬಂದು ಆತನನ್ನು ಸೊಂಡಿಲಿನಲ್ಲಿ ಹಿಡಿದು ಗರ­­­ಗರನೇ ತಿರು­ಗಿಸಿ ಪ್ರಪಾತಕ್ಕೆ ಎಸೆದು­­ಬಿಟ್ಟಿತು. ನಂತರ ಜ್ಞಾನಿ ಮಂತ್ರಿಯನ್ನು ಬೆನ್ನ­ಮೇಲೆ ಕೂಡ್ರಿಸಿಕೊಂಡು ನಗರಕ್ಕೆ ಬಂದು ಸಿಂಹಾಸನದ ಮೇಲೆ ಕೂಡ್ರಿಸಿತು. ಜನರೂ ಆನೆಯ ತೀರ್ಮಾನ­ವನ್ನು ಒಪ್ಪಿದರು. ಈರ್ಷೆ, ದ್ವೇಷಗಳು ಬೆಂಕಿ ಇದ್ದಂತೆ. ಅದನ್ನು ಹೊಟ್ಟೆ­­­ಯಲ್ಲಿ ತುಂಬಿಕೊಂಡ ಯಜಮಾನರನ್ನೇ ಮೊದಲು ಬಲಿ ತೆಗೆದು­ಕೊಳ್ಳು­ತ್ತವೆ.

ಕೃಪೆ: ಮುಖ ಪುಸ್ತಕ. ಸಂಗ್ರಹ: ನರಸಿಂಹಮೂರ್ತಿ ಬರಗೂರು‌.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

“ಕೇಂದ್ರ ಪರಿಸರ ಇಲಾಖೆಯವರು ದಂಡ ಹಾಗೂ ಮಿಟಿಗೇಷನ್ ಪ್ಲಾನ್ ಸೇರಿ 257 ಕೋಟಿ ರೂಪಾಯಿ ಹಣ ಸಂದಾಯ ಮಾಡಬೇಕು ಎಂದು ಸೂಚಿಸಿದ್ದಾರೆ. ಇಂದೇ ಈ ಹಣ ಪಾವತಿ ಮಾಡಿ ಎಂದು ಮಾರ್ಗದರ್ಶನ ನೀಡಿದ್ದೇನೆ. ಕಟ್ಟಿದ

[ccc_my_favorite_select_button post_id="121560"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ ಭೀತಿ.!| Video ನೋಡಿ

ಏನಾಗುತ್ತಿದೆ IPLನಲ್ಲಿ? ಕ್ರಿಕೆಟ್ ಮೈದಾನದಲ್ಲೇ ವೇಪ್ ಸೇವನೆ.. ರಿಯಾನ್ ಪರಾಗ್ ಗೆ ಬಂಧನ

ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಪಂದ್ಯದ ವೇಳೆ ನಿಷೇಧಿತ 'ಇ-ಸಿಗರೇಟ್' (Vape) ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

[ccc_my_favorite_select_button post_id="121495"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]