ಹರಿತಲೇಖನಿ ದಿನಕ್ಕೊಂದು ಕಥೆ: ದೇವರು

ಒಂದು ಬಂದರಿನಲ್ಲಿ ದೊಡ್ಡ ಹಡಗೊಂದು ನಿಂತಿತ್ತಂತೆ. ಅದರ ಸ್ಥಂಭದ ಮೇಲೆ ಒಂದು ಹಕ್ಕಿ ಬಂದು ಕುಳಿತಿತ್ತು. ಹಡಗಿನಲ್ಲೂ ಅದಕ್ಕೆ ಕಾಳುಕಡ್ಡಿ ಸಿಗುತ್ತಿದ್ದವು. ಆನಂದವಾಗಿ ಕಾಳುಕಡ್ಡಿ ತಿನ್ನುತ್ತ ಹಡಗಿನ ಪಟಗಳ ಮಧ್ಯೆ ಹಕ್ಕಿ ಹಾರಾಡಿಕೊಂಡಿತ್ತು.

ಈ ಮಧ್ಯೆ ಹಡಗು ಯಾನಕ್ಕೆ ಹೊರಟಿದ್ದು ಅದರ ಗಮನಕ್ಕೆ ಬರಲಿಲ್ಲ. ಎಷ್ಟೋ ಹೊತ್ತಿನ ನಂತರ ಅದು ಮತ್ತೆ ಪಟಸ್ಥಂಭದ ಮೇಲೆ ಬಂದು ಕುಳಿತಾಗ ಅದಕ್ಕೆ ಎಲ್ಲೆಲ್ಲೂ ನೀರೇ ಕಾಣಿಸುತ್ತಿತ್ತು. ದಡ ಕಾಣಿಸಲಿಲ್ಲ. ಅದಕ್ಕೆ ದಡದಲ್ಲಿದ್ದರೆ ತನಗೆ ಇನ್ನೂ ಹೆಚ್ಚು ಕಾಳುಕಡ್ಡಿ ಸಿಗಬಹುದು, ಇನ್ನೂ ಆನಂದವಾಗಿರಬಹುದು ಎನಿಸಿತು.

ಹರೆಯದಲ್ಲಿರುವ ಹಕ್ಕಿಗೆ ತನ್ನ ರೆಕ್ಕೆಗಳ ಮೇಲೆ ಅತೀವ ವಿಶ್ವಾಸ. ದಡವನ್ನು ಹುಡುಕಿಕೊಂಡು ಉತ್ತರದಿಕ್ಕಿಗೆ ಹಾರಿತು.

ರೆಕ್ಕೆಗಳು ಬಳಲುವಷ್ಟು ಹಾರಿದರೂ ದಡ ಕಾಣಲಿಲ್ಲ. ಅದು ಹಿಂದಕ್ಕೆ ಹಾರಿ ಬಂದು ಮತ್ತೆ ಹಡಗಿನ ಪಟಸ್ಥಂಭದ ಮೇಲೆಯೇ ಕುಳಿತಿತು. ಸ್ವಲ್ಪ ಹೊತ್ತು ದಣಿವಾರಿಸಿಕೊಂಡ ನಂತರ ದಕ್ಷಿಣ ದಿಕ್ಕಿಗೆ ಹೋದರೆ ದಡ ಸಿಗಬಹುದು ಎಂದುಕೊಂಡು ದಕ್ಷಿಣ ದಿಕ್ಕಿಗೂ ಹೋಯಿತು. ಹಾರಿಹಾರಿ ರೆಕ್ಕೆಗಳು ಬಳಲಿದವು. ಆದರೆ ದಡ ಕಾಣಲಿಲ್ಲ.

ಅದು ಮತ್ತೆ ಹಡಗಿನ ಪಟಸ್ಥಂಭದ ಮೇಲೆಯೇ ಬಂದು ಕುಳಿತಿತು. ಆನಂತರ ಅದು ಪೂರ್ವ ದಿಕ್ಕಿಗೆ ಹೋಗಿ ಬಂತು. ಪಶ್ಚಿಮ ದಿಕ್ಕಿಗೂ ಹೋಗಿ ಬಂತು. ಎಲ್ಲಿಯೂ ದಡ ಕಾಣಲಿಲ್ಲ…!

ಕೊನೆಗೆ ಪಟಸ್ಥಂಭದ ಮೇಲೆಯೇ ಕುಳಿತು ಕೆಳಗೆ ನೋಡಿತು. ಕೆಳಗೂ ಕಾಳು ಕಡ್ಡಿಗಳು ಕಂಡವು. ನಾನು ಎಲ್ಲೆಲ್ಲಿಯೋ ಹುಡುಕಿಕೊಂಡು ಹೋಗುವ ವಸ್ತುಗಳು ಇಲ್ಲಿಯೇ ಇವೆಯಲ್ಲ ಎಂದು ಸಮಾಧಾನಪಟ್ಟುಕೊಂಡು ನಂತರದ ದಿನಗಳನ್ನು ಅಲ್ಲಿಯೇ ಆನಂದವಾಗಿ ಕಳೆಯಿತು.

ಈ ಕತೆಯಲ್ಲಿ ದಡವನ್ನು ಅರಸಿಕೊಂಡು ನಾಲ್ಕೂ ದಿಕ್ಕಿಗೆ ಹಾರಿ ಬಳಲಿ ಮತ್ತೆ ಹಡಗಿಗೇ ಮರಳಿ ಬರುವ ಹಕ್ಕಿಯ ಪರಿಸ್ಥಿತಿ ನಮ್ಮೆಲ್ಲರದ್ದು.! 

ನಾವು ಕೂಡ ದೇವರನ್ನು ಅರಸುತ್ತ ಎಲ್ಲ ದಿಕ್ಕುಗಳಿಗೂ ಹೋಗುತ್ತೇವೆ. ಇಲ್ಲಿ ಸಿಗಲಿಲ್ಲ, ಅಲ್ಲಿ ಸಿಗಬಹುದು ಎಂದು ಅಲ್ಲಿಗೆ ಹೋಗುತ್ತೇವೆ. ಅಲ್ಲಿಯೂ ಸಿಗದಿದ್ದರೆ ಮತ್ತೆಲ್ಲಿಯೋ ಸಿಗಬಹುದೆಂದು ಮತ್ತೆಲ್ಲಿಗೋ ಹೋಗುತ್ತೇವೆ. ಆದರೆ ದೇವರು ನಾವೆಲ್ಲಿದ್ದೇವೆಯೋ, ಅಲ್ಲಿಯೇ ನಮಗೆ ಸಿಗುತ್ತಾನೆ! ದೇವರು ಬೇರೆಲ್ಲಿಯೋ ಇದ್ದಾನೆ ಎಂದು ಭಾವಿಸುವ ಮಾನವರು, ದೇವರು ನಾವೆಲ್ಲಿದ್ದೇವೆಯೋ ಅಲ್ಲಿಯೇ ಇದ್ದಾನೆಂದು ಅರಿತು ಕೊಳ್ಳೊಣ ನಾವು ದೇವರನ್ನು ಹುಡುಕುತ್ತಿಲ್ಲ.

ನಾವು ಹುಡುಕುತ್ತಿರುವುದು ಮನಃಶಾಂತಿಯನ್ನು, ತೃಪ್ತಿಯನ್ನು, ಆನಂದವನ್ನೂ ಎನ್ನುವವರು ನಾವಾದರೆ, ಅದನ್ನು ಎಲ್ಲೆಲ್ಲಿಯೋ ಹುಡುಕಿಕೊಂಡು ಹೋಗುವುದರಲ್ಲಿ ಅರ್ಥವಿದೆಯೇ? ನಾವಿರುವಲ್ಲಿಯೇ ಲಭ್ಯವಿರುವ ಅವುಗಳನ್ನು ಎಲ್ಲೆಲ್ಲಿಯೋ ಅರಸಿಕೊಂಡು ಹೋಗುವುದು ವ್ಯರ್ಥವಲ್ಲವೇ?

ಕೃಪೆ: ಸಾಮಾಜಿಕತಾಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು. (ಸಾಮಾಜಿಕ ಜಾಲತಾಣದಲ್ಲಿನ ಚಿತ್ರ ಬಳಸಲಾಗಿದೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಯುದ್ಧ ಇನ್ನೂ ಸ್ಥಗಿತಗೊಂಡಿಲ್ಲ. ಅಡುಗೆ ಅನಿಲ ಸೇರಿದಂತೆ ತೈಲ ಸಮಸ್ಯೆ ಎಲ್ಲ ದೇಶಗಳಿಗೆ ತಟ್ಟಿದೆ. ಸಹಜವಾಗಿ ಅಡುಗೆ ಅನಿಲದ ಬೆಲೆ ಏರಿಕೆಯಾಗಿದೆ: ಆರ್‌. ಅಶೋಕ (R. Ashoka)

[ccc_my_favorite_select_button post_id="121608"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಗೆ ಹುಡುಗಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ..!

ಮದುವೆಯಾಗಲು ಸೂಕ್ತ ಯುವತಿ ದೊರೆಯದ ಕಾರಣ ಮನನೊಂದ ಯುವಕನೊಬ್ಬ ಕಲ್ಯಾಣಿಗೆ ಬಿದ್ದು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ನಡೆದಿದೆ.

[ccc_my_favorite_select_button post_id="121591"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]