ಹರಿತಲೇಖನಿ ದಿನಕ್ಕೊಂದು ಕಥೆ: ಸಂತ ಚೋಖಾಮೇಳಾರ ವಿಠಲ ಭಕ್ತಿ!

ಮಂಗಳವೇಢಾದ ಸಂತ ಚೋಖಾಮೇಳಾರಿಗೆ ವಿಠಲನ ಮೇಲೆ ಅಪಾರ ಭಕ್ತಿಯಿತ್ತು. ಅವರು ಸತತ ವಿಠಲನ ನಾಮಸ್ಮರಣೆಯಲ್ಲಿಯೇ ಮೈ ಮರೆಯುತ್ತಿದ್ದರು. ಆದರೆ ಊರಿನ ಕೆಲವು ದುಷ್ಟರು ಅವರಿಗೆ ಬಹಳ ತೊಂದರೆ ಕೊಡುತ್ತಿದ್ದರು. ಒಂದು ದಿನ ಚೋಖಾಮೇಳಾರವರು ಈ ತೊಂದರೆಯಿಂದ ಬೇಸತ್ತು ಊರು ಬಿಟ್ಟು ತಮ್ಮ ಪತ್ನಿ ಸೋಯರಾಳೊಂದಿಗೆ ಪಂಢರಪುರಕ್ಕೆ ಬಂದರು.

ಚೋಖಾಮೇಳಾರವರು ಪಂಢರಪುರದಲ್ಲಿ ಒಂದು ಗುಡಿಸಲನ್ನು ಕಟ್ಟಿದರು. ಅವರ ವಿಠಲ-ಉಪಾಸನೆ ನಡೆಯುತ್ತಲೇ ಇತ್ತು. ವಿಠಲ ದರ್ಶನದ ಬಗ್ಗೆ ಅವರಲ್ಲಿರುವ ತೀವೃ ತಳಮಳದಿಂದ ಒಮ್ಮೆ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿದ್ದರೂ ಅವರು ತಾನಾಗಿಯೇ ವಿಠಲನ ಚರಣಗಳವರೆಗೆ ತಲುಪಿದರು.

ಅಂದಿನಿಂದ ಅಲ್ಲಿನ ಪೂಜಾರಿಗಳು ದೇವಸ್ಥಾನದಲ್ಲಿ ಕಾವಲು ಇಟ್ಟರು. ಆದರೆ ವಿಠಲನ ಭೇಟಿಯ ಅವರ ತೀವ್ರ ತಳಮಳವನ್ನು ಕಂಡು ದೇವರೇ ಅವರ ಮನೆಗೆ ಅವರನ್ನು ಭೇಟಿಯಾಗಲು ಹೋಗತೊಡಗಿದರು. ಈಗ ಚೋಖಾಮೇಳಾ ತಮ್ಮ ಮನೆಯಲ್ಲಿಯೇ ತೃಪ್ತ ಮನಸ್ಸಿನಿಂದ ವಿಠಲನ ಸೇವೆಯಲ್ಲಿ ಮಗ್ನರಾಗತೊಡಗಿದರು.

ಒಮ್ಮೆ ವಿಠಲನು ಚೋಖಾಮೇಳಾರಿಗೆ ‘ನಾನು ನಿನ್ನ ಮನೆಗೆ ಭೋಜನಕ್ಕೆ ಬರುವೆನು’, ಎಂದು ಹೇಳಿದನು. ಇದನ್ನು ತಿಳಿದು ಸೋಯರಾಗೆ ಬಹಳ ಆನಂದವಾಯಿತು. ದೇವರಿಗೆ ಭೋಜನದಲ್ಲಿ ಏನು ಮಾಡಿ ಬಡಿಸಲಿ, ಎಂಬ ವಿಚಾರದಲ್ಲಿಯೇ ನದಿಯ ದಂಡೆಯಲ್ಲಿ ಭೇಟಿಯಾದ ಓರ್ವ ಹೆಂಗಸಿನ ಬಳಿ ಕೆಲವು ಪದಾರ್ಥಗಳನ್ನು ಬೇಡಿದಳು. ಮಾತು ಮಾತಿನಲ್ಲಿಯೇ ಅವಳು ಸಾಕ್ಷಾತ ವಿಠಲನು ತಮ್ಮ ಮನೆಗೆ ಭೋಜನಕ್ಕೆ ಬರಲಿದ್ದಾನೆ ಎಂಬ ಸಂಗತಿಯನ್ನು ಹೇಳಿದಳು.

ಇದನ್ನು ಕೇಳಿದ ಆ ಹೆಂಗಸಿಗೆ ಆಶ್ಚರ್ಯವಾಯಿತು. ನೋಡುನೋಡುತ್ತಿದಂತೆಯೇ ಈ ವಾರ್ತೆ ಊರಿನಲ್ಲಿ ಹಬ್ಬಿತು. ಅನೇಕರು ಈ ಮಾತಿನ ಚೇಷ್ಟೆ ಮಾಡಿದರು. ಈ ಬಗ್ಗೆ ಯಾರೂ ನಂಬಲಿಲ್ಲ.

ಓರ್ವ ಗ್ರಹಸ್ಥನು ರಾತ್ರಿಯ ಹೊತ್ತು ಕದ್ದು ಮುಚ್ಚಿ ಚೋಖಾಮೇಳಾರ ಗುಡಿಸಲಿನ ಬಳಿ ಬಂದು ಒಳಗೆ ಇಣುಕಿ ನೋಡಿದನು, ಅದೆಂತಹ ಆಶ್ಚರ್ಯ ! ವಿಠಲ ಮೂರ್ತಿಯ ಚರಣದಲ್ಲಿ ಚೋಖಾಮೇಳಾರು ಕುಳಿತಿದ್ದರು. ಸಮೀಪದಲ್ಲಿಯೇ ಸೋಯರಾ ನಮ್ರತೆಯಿಂದ ನಿಂತುಕೊಂಡಿದ್ದಳು. ಚೋಖಾಮೇಳಾರು ‘ನೋಡಿದಿಯಾ ಸೋಯರಾ ! ಪ್ರೇಮಮಯಿ, ಭಕ್ತವತ್ಸಲನಾದ ಭಗವಂತನು ಭಕ್ತರಿಗಾಗಿ ಏನು ಮಾಡಲೂ ಸಿದ್ಧನಿದ್ದಾನೆ’ ಎಂದು ಹೇಳುತ್ತಿದ್ದರು.

ಸೋಯರಾಳು ವಿಠಲನ ಚರಣಗಳಲ್ಲಿ ನಮಸ್ಕಾರ ಮಾಡಿದಳು. ಅವಳ ಕಣ್ಣುಗಳಲ್ಲಿ ಅಶ್ರು ಹರಿಯುತ್ತಿತ್ತು. ಭಗವಂತನು ಅವಳನ್ನು ಎಬ್ಬಿಸಿ ‘ನನಗೂ ನಿಮ್ಮ ಭೇಟಿಯ ತಳಮಳವಾಗುತ್ತಿತ್ತು.’ ಎಂದು ಹೇಳಿದನು. ಆ ಗ್ರಹಸ್ಥನು ಇದೆಲ್ಲವನ್ನು ನೋಡುತ್ತಿದ್ದನು. ಅನಂತರ ಸೋಯರಾಳು ಭೋಜನಕ್ಕೆ ಎಲೆಯಿಟ್ಟು ಊಟ ಬಡಿಸಿದಳು. ವಿಠಲನು ಭೋಜನ ಪ್ರಾರಂಭಿಸಿದನು. ಆ ಗ್ರಹಸ್ಥನಿಗೆ ದೇವರ ಮೂರ್ತಿಯ ಚಲಿಸುತ್ತಿರುವ ಕೈಗಳು ಕಾಣಿಸುತ್ತಿದ್ದವು. ಅದೇ ಸಮಯಕ್ಕೆ ಚೋಖಾಮೇಳಾರ ‘ನಿಧಾನ, ನಿಧಾನ ! ಇದೇನು ! ದೇವರ ಪೀತಾಂಬರದ ಮೇಲೆ ಮಜ್ಜಿಗೆ ಚೆಲ್ಲಿದೆಯಲ್ಲ !’ ಎಂದು ಹೇಳುವುದು ಅವನ ಕಿವಿಗೆ ಬಿತ್ತು,

ಇದೆಲ್ಲಾ ನೋಡಿ ಆ ಗ್ರಹಸ್ಥನು ಅಲ್ಲಿಂದ ಹೊರಟನು. ನೋಡಿದ ನಿಜ ಸಂಗತಿಯನ್ನು ಅವನು ದಾರಿಯಲ್ಲಿ ಸಿಕ್ಕ ಎಲ್ಲರಿಗೂ ಹೇಳುತ್ತ ಹೊರಟನು. ಜನರು ಸೇರಿದರು. ಈ ಸಂಗತಿಯು ದೇವಸ್ಥಾನದ ಪೂಜಾರಿಗಳ ವರೆಗೆ ತಲುಪಿತು. ಸತ್ಯ ಸಂಗತಿಯನ್ನು ತಿಳಿಯಲು ಎಲ್ಲರೂ ದೇವಸ್ಥಾನದ ಬಾಗಿಲು ತೆರೆದು ನೋಡಿದರು ಹಾಗೂ ಅಲ್ಲಿನ ದೃಷ್ಯವನ್ನು ಕಂಡು ಆಶ್ಚರ್ಯಚಕಿತರಾದರು.

ಎಂದಿನಂತೆಯೇ ವಿಠಲನ ಮೂರ್ತಿಯು ಪೀಠದ ಮೇಲೆ ನಿಂತಿತ್ತು. ವಸ್ತ್ರ, ಆಭೂಷಣಗಳೂ ಹಾಗೆಯೇ ಇದ್ದವು; ಆದರೆ ತೊಡಸಿದ ಪೀತಾಂಬರದ ಮೇಲೆ ಮಜ್ಜಿಗೆ ಚೆಲ್ಲಿತ್ತು. ನೆಂಟನಾಗಿ ಸಾಕ್ಷಾತ ವಿಠಲನು ನಿಜಕ್ಕೂ ತನ್ನ ಸಗುಣ ರೂಪದಲ್ಲಿ ಚೋಖಾಮೇಳಾರ ಮನೆಗೆ ಹೋಗಿ ಭೋಜನ ಮಾಡಿದನು. ಇದನ್ನು ನೋಡಿ ಪೂಜಾರಿಯ ಸಹಿತ ಎಲ್ಲರೂ ಆ ಹಿರಿಯ ಸಂತ ಚೋಖಾಮೇಳಾರ ಕಾಲು ಹಿಡಿದರು.

ಬಾಲಮಿತ್ರರೇ, ನೋಡಿ! ತಮ್ಮ ಅಪಾರವಾದ ವಿಠಲಭಕ್ತಿಯಿಂದ ಚೋಖಾಮೇಳಾರು, ಸಂತ ಚೋಖಾಮೇಳಾ ಆದರು. ಅವರ ಮನೆಗೆ ಸಾಕ್ಷಾತ್ ವಿಠಲನು ಅವರನ್ನು ಭೇಟಿಯಾಗಲು ಹೋಗುತ್ತಿದ್ದನು.

ಕೃಪೆ: ಹಿಂದೂ ಜಾಗೃತಿ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!