01. “ರಾಜ್ಯ ಜೀವ ವಿಮಾ ಯೋಜನೆ” ಇವರ ದಿವಾನಗಿರಿಯಲ್ಲಿ ಜಾರಿಗೆ ಬಂದಿತು.?
- ಎ) ರಂಗಾಚಾರ್ಲು
- ಬಿ) ಶೇಷಾದ್ರಿ ಅಯ್ಯರ್
- ಸಿ) ವಿಶ್ವೇಶ್ವರಯ್ಯ
- ಡಿ) ಮಿರ್ಜಾ ಇಸ್ಮಾಯಿಲ್
ಉತ್ತರ: ಬಿ) ಶೇಷಾದ್ರಿ ಅಯ್ಯರ್
02. ಬೆಂಗಳೂರನ್ನು ಮೊಘಲರಿಂದ ಕೊಂಡುಕೊಂಡ ಮೈಸೂರಿನ ದೊರೆ ಯಾರು.?
- ಎ) ರಾಜ ಒಡೆಯರ್
- ಬಿ) ಚಿಕ್ಕದೇವರಾಜ ಒಡೆಯರ್
- ಸಿ) ದೊಡ್ಡದೇವರಾಜ ಒಡೆಯರ್
- ಡಿ) 3ನೇ ಕೃಷ್ಣದೇವರಾಯ ಒಡೆಯರ್
ಉತ್ತರ: ಬಿ) ಚಿಕ್ಕದೇವರಾಜ ಒಡೆಯರ್
03. “ಮಲಗಿರುವ ಬುದ್ಧನ ಪರ್ವತ” ಇರುವ ಜಿಲ್ಲೆ ಯಾವುದು.?
ಎ) ಕಲ್ಬುರ್ಗಿ
ಬಿ) ರಾಯಚೂರು
ಸಿ) ಬಳ್ಳಾರಿ
ಡಿ) ಯಾದಗಿರಿ
ಉತ್ತರ: ಡಿ) ಯಾದಗಿರಿ
04. ” ಹಿಂದುಸ್ತಾನ್ ಸೇವಾದಳ ” ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದವರು ಯಾರು.?
- ಎ) ಕಡಪ ರಾಘವೇಂದ್ರ ರಾವ್
- ಬಿ) ಹೆಚ್ ಆರ್ ದೇಶಪಾಂಡೆ
- ಸಿ) ಗೋವಿಂದರಾವ್ ಯಾಲಗಿ
- ಡಿ) ಎನ್ ಎಸ್ ಹರ್ಡೇಕರ್
ಉತ್ತರ: ಡಿ) ಎನ್ ಎಸ್ ಹರ್ಡೇಕರ್
05. ಮೊಘಲರ ಕಾಲದಲ್ಲಿ ಕರ್ನಾಟಕದಲ್ಲಿದ್ದ ಆಡಳಿತ ಕೇಂದ್ರ ಯಾವುದು.?
- ಎ) ಶ್ರೀರಂಗಪಟ್ಟಣ
- ಬಿ) ಬಾದಾಮಿ
- ಸಿ) ಬಿಜಾಪುರ
- ಡಿ) ಶಿರಾ
ಉತ್ತರ : ಡಿ) ಶಿರಾ
06. ಭೂದಾನ ಚಳುವಳಿಯನ್ನು ಆರಂಭಿಸಿದರು ಯಾರು.?
- ಎ) ಮಹಾತ್ಮ ಗಾಂಧಿ
- ಬಿ) ಸ್ವಾಮಿ ವಿವೇಕಾನಂದ
- ಸಿ) ಜಯಪ್ರಕಾಶ ನಾರಾಯಣ
- ಡಿ) ಆಚಾರ್ಯ ವಿನೋಬಾ ಭಾವೆ
ಉತ್ತರ: ಡಿ) ಆಚಾರ್ಯ ವಿನೋಬಾ ಭಾವೆ
07. ಶರೀರದ ಯಾವ ಭಾಗಕ್ಕೆ ಗ್ಲುಕೋಮಾ ಕಾಯಿಲೆ ಬರುತ್ತದೆ.?
- ಎ) ಕಿವಿ
- ಬಿ) ಮೂಗು
- ಸಿ) ಕಣ್ಣು
- ಡಿ) ಕಿಡ್ನಿ
ಉತ್ತರ: ಸಿ) ಕಣ್ಣು
08. ಈ ಕೆಳಗಿನವುಗಳಲ್ಲಿ ಯಾವುದು ಕಾವೇರಿ ನದಿಯ ಉಪನದಿ ಅಲ್ಲ.?
- ಎ) ಹಾರಂಗಿ
- ಬಿ) ಕಬಿನಿ
- ಸಿ) ಶಿಂಷಾ
- ಡಿ) ಭೀಮಾ
ಉತ್ತರ: ಡಿ) ಭೀಮಾ ನದಿ
09. ಯಾವ ವೇದದಲ್ಲಿ ಪವಿತ್ರ ಗಾಯಿತ್ರಿ ಮಂತ್ರವಿದೆ.?
- ಎ) ಋಗ್ವೇದ
- ಬಿ) ಯಜುರ್ವೇದ
- ಸಿ) ಸಾಮವೇದ
- ಡಿ) ಅಥರ್ವವೇದ
ಉತ್ತರ: ಎ) ಋಗ್ವೇದ
10. ಭಾರತದಲ್ಲಿ ಯಾವ ದಿನದಂದು ” ಕಿಸಾನ್ ದಿವಸ್ ” (ರೈತ ದಿನ) ವನ್ನು ಆಚರಿಸಲಾಗುತ್ತದೆ.?
- ಎ) ಡಿಸೆಂಬರ್ – 21
- ಬಿ) ಡಿಸೆಂಬರ್ – 22
- ಸಿ) ಡಿಸೆಂಬರ್ – 23
- ಡಿ) ಡಿಸೆಂಬರ್ – 24
ಉತ್ತರ: ಸಿ) ಡಿಸೆಂಬರ್ – 23
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….